Spiritual: ಸತ್ತವರ ಬಾಯಿಗೆ ಗಂಗಾಜಲ ಮತ್ತು ತುಳಸಿ ಎಲೆ ಏಕೆ ಹಾಕುತ್ತಾರೆ?

ಹಿಂದೂ ಧರ್ಮದಲ್ಲಿ, ಅಂತ್ಯಕ್ರಿಯೆಯ ಸಮಯದಲ್ಲಿ ಕೆಲವು ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಮೃತದೇಹದ ಬಾಯಿಗೆ ತುಳಸಿ ಎಲೆ ಮತ್ತು ಗಂಗಾಜಲವನ್ನು ಹಾಕುವುದು ಒಂದು ಆಚರಣೆಯಾಗಿದೆ. ಸತ್ತವರ ಬಾಯಿಗೆ ತುಳಸಿ ಎಲೆ ಮತ್ತು ಗಂಗಾಜಲವನ್ನು ಹಾಕುವುದರ ಹಿಂದೆ ವಿಶೇಷ ಕಾರಣಗಳಿವೆ. ಈ ರೀತಿಯ ಆಚರಣೆ ಏಕೆ ಮಾಡುತ್ತಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Spiritual: ಸತ್ತವರ ಬಾಯಿಗೆ ಗಂಗಾಜಲ ಮತ್ತು ತುಳಸಿ ಎಲೆ ಏಕೆ ಹಾಕುತ್ತಾರೆ?
Spiritual
Image Credit source: Pinterest

Updated on: Dec 23, 2023 | 2:28 PM

ಹಿಂದೂ ಧರ್ಮದಲ್ಲಿ, ಯಾರಾದರೂ ಸತ್ತಾಗ, ಅಂತ್ಯ ಸಂಸ್ಕಾರದ ವೇಳೆಯಲ್ಲಿ ವಿವಿಧ ರೀತಿಯ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಗರುಡ ಪುರಾಣವು ಆಚರಣೆಯಲ್ಲಿರುವ ಮರಣಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳನ್ನು ಉಲ್ಲೇಖಿಸುತ್ತದೆ. ಸತ್ತ ನಂತರ ತುಳಸಿ ಎಲೆಗಳು ಮತ್ತು ಗಂಗಾಜಲವನ್ನು ಸತ್ತವರ ಬಾಯಿಯಲ್ಲಿ ಹಾಕುವುದನ್ನು ನೀವು ಆಗಾಗ್ಗೆ ನೋಡಿದ್ದೀರಿ, ಜೊತೆಗೆ ಸತ್ತವರ ಕಿವಿಯಲ್ಲಿ ರಾಮ್ ರಾಮ್ ಎಂದು ಜಪಿಸುತ್ತಾರೆ. ಆದರೆ ಇದನ್ನು ಏಕೆ ಮಾಡಲಾಗುತ್ತದೆ ಎಂದು ನೀವು ಯೋಚಿಸಿದ್ದೀರಾ?

ಮೃತದೇಹದ ಬಾಯಿಗೆ ಗಂಗಾಜಲವನ್ನು ಏಕೆ ಹಾಕುತ್ತಾರೆ?

ಹಿಂದೂ ಧರ್ಮದಲ್ಲಿ, ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೆ ಜೀವನದ ಪ್ರತಿಯೊಂದು ತಿರುವಿಗೆ ಕೆಲವು ವಿಧಿಗಳು ಅಥವಾ ಆಚರಣೆಗಳಿವೆ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಗಳ ಹಿಂದೆ ಬೇರೆ ಬೇರೆ ಕಾರಣಗಳಿವೆ. ಅಂತೆಯೇ, ಒಬ್ಬ ವ್ಯಕ್ತಿಯ ಮರಣದ ನಂತರ, ಒಂದು ವಿಧಿವಿಧಾನವನ್ನು ನಡೆಸಲಾಗುತ್ತದೆ, ಇದನ್ನು ಅಂತ್ಯಕ್ರಿಯೆ ಎಂದು ಕರೆಯಲಾಗುತ್ತದೆ. ಈ ಆಚರಣೆಯ ಆಧಾರದಲ್ಲಿ ತುಳಸಿ ಎಲೆಗಳು ಮತ್ತು ಗಂಗಾಜಲವನ್ನು ಸತ್ತ ವ್ಯಕ್ತಿಯ ಬಾಯಿಗೆ ಹಾಕುವ ಸಂಪ್ರದಾಯವಿದೆ.

ಇದನ್ನೂ ಓದಿ: ಅಂಜನಾದ್ರಿಗೆ ಬರ್ತಿದ್ದೀರಾ? ಹಾಗಾದ್ರೆ ಕ್ಯೂಆರ್ ಕೋಡ್ ಬಳಸಿ ನಾನಾ ಸೌಕರ್ಯದ ಸ್ಥಳಗಳನ್ನು ಸುಲಭವಾಗಿ ಹುಡುಕಿ

ಗಂಗಾಜಲವನ್ನು ಪವಿತ್ರವೆಂದು ಪರಿಗಣಿಸಲಾಗಿದೆ:

ನಂಬಿಕೆಯ ಪ್ರಕಾರ, ಗಂಗಾಜಲ ಮತ್ತು ತುಳಸಿಯನ್ನು ಬಾಯಿಯಲ್ಲಿ ಇಡುವುದರಿಂದ ಯಮ ದೂತನು ಸತ್ತವರ ಆತ್ಮಕ್ಕೆ ಕಿರುಕುಳ ನೀಡುವುದಿಲ್ಲ ಮತ್ತು ನೇರ ಸ್ವರ್ಗವೇ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಗಂಗಾಜಲವನ್ನು ಪವಿತ್ರ ಮತ್ತು ಮಕರಂದ ಎಂದು ಪರಿಗಣಿಸಲಾಗುತ್ತದೆ. ಗಂಗಾಜಲದಲ್ಲಿ ಸ್ನಾನ ಮಾಡುವ ವ್ಯಕ್ತಿಯ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ ಎಂದು ನಂಬಲಾಗಿದೆ, ಆದ್ದರಿಂದ ಒಬ್ಬ ವ್ಯಕ್ತಿಯು ಸತ್ತಾಗ, ಗಂಗಾಜಲವನ್ನು ಅವನ ಬಾಯಿಗೆ ಹಾಕಲಾಗುತ್ತದೆ. ಇದರಿಂದಾಗಿ ಅವನ ಪಾಪಗಳು ದೂರವಾಗುತ್ತವೆ.

ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:27 pm, Sat, 23 December 23

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us