Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರಾವಣ ಮಾಸ ಶುರುವಾಗಿದೆ, ಹಿಂದೂ ಧರ್ಮದಲ್ಲಿ ಕಲಶಕ್ಕೆ ವಿಶೇಷ ಸ್ಥಾನವಿದೆ: ವಾಸ್ತು ದೋಷ ತಡೆಯಲು ಕಲಶ ಎಲ್ಲಿಡಬೇಕು? ತಿಳಿದುಕೊಳ್ಳಿ

Kalash Puja: ಹಿಂದೂ ಧರ್ಮದಲ್ಲಿ ಕಲಶವನ್ನು ಗಣಪತಿಯ ರೂಪವೆಂದು ಪರಿಗಣಿಸಲಾಗಿದೆ. ಸಂಪ್ರದಾಯದಲ್ಲಿ ಇದನ್ನು ಮಂಗಳದ ಸಂಕೇತವಾಗಿ ಬಳಸುತ್ತಾರೆ. ಮಂಗಳಕರ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಕಲಶವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಗೆ ಸಂಬಂಧಿಸಿದ ಎಲ್ಲಾ ರೀತಿಯ ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.

ಶ್ರಾವಣ ಮಾಸ ಶುರುವಾಗಿದೆ, ಹಿಂದೂ ಧರ್ಮದಲ್ಲಿ ಕಲಶಕ್ಕೆ ವಿಶೇಷ ಸ್ಥಾನವಿದೆ: ವಾಸ್ತು ದೋಷ ತಡೆಯಲು ಕಲಶ ಎಲ್ಲಿಡಬೇಕು? ತಿಳಿದುಕೊಳ್ಳಿ
ಹಿಂದೂ ಧರ್ಮದಲ್ಲಿ ಕಲಶಕ್ಕೆ ವಿಶೇಷ ಸ್ಥಾನವಿದೆ
Follow us
ಸಾಧು ಶ್ರೀನಾಥ್​
|

Updated on: Aug 18, 2023 | 1:32 PM

ಇಂದು ಮಾನವನ ಜೀವನ ಪಯಣ ಬಹಳಷ್ಟು ಬಾರಿ ಜೀವನಪರ್ಯಂತ ಸುಖ ದುಃಖಗಳಿಂದ ಕೂಡಿರುತ್ತದೆ. ಕೆಲವೊಮ್ಮೆ ಯಾರ ಜೀವನದಲ್ಲೂ ಕೆಲವೊಂದು ಸಮಸ್ಯೆಗಳು ದಿಢೀರನೆ ಉದ್ಭವಿಸಿಬಿಡುತ್ತವೆ. ಅವು ದೂರವಾಗುವ ಲಕ್ಷಣಗಳೇ ಇರುವುದಿಲ್ಲ. ಅಂತಹಯ ಸಂದರ್ಭಗಳಲ್ಲಿ ಹಿಂದೂ ಧರ್ಮದಲ್ಲಿ (Hindu) ಕಲಶವನ್ನು ಪೂಜಿಸುವುದು (Kalash Puja) ಜೀವನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ತೊಂದರೆಗಳನ್ನು ತೊಡೆದುಹಾಕಿ, ಸಂತೋಷ ಮತ್ತು ಅದೃಷ್ಟವನ್ನು ಪಡೆಯಲು ಉತ್ತಮ ಮಾರ್ಗವಾಗಿದೆ ಎಂದು ನಂಬಲಾಗಿದೆ. ಎಲ್ಲಾ ದೇವರುಗಳು ಮತ್ತು ಗ್ರಹಗಳು ಕಲಶದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಲಶವು ಬ್ರಹ್ಮಾಂಡದ ಸಂಕೇತವಾಗಿದೆ ಮತ್ತು ಅದು ಇಲ್ಲದೆ ಯಾವುದೇ ಪೂಜೆ ಪೂರ್ಣಗೊಳ್ಳುವುದಿಲ್ಲ. ಕುಂಭ ಅಥವಾ ಕಲಶಕ್ಕೆ ಸಂಬಂಧಿಸಿದ ದೋಷ ಪರಿಹಾರದ ಬಗ್ಗೆ ವಿವರವಾಗಿ ತಿಳಿಯೋಣ (Spiritual).

 ಕಲಶ ಪೂಜೆ: ವೃತ್ತಿ ಮತ್ತು ವ್ಯಾಪಾರ ಅಭಿವೃದ್ಧಿಗಾಗಿ..

ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಿಮ್ಮ ವೃತ್ತಿಜೀವನದಲ್ಲಿ ನೀವು ಬಯಸಿದ ಯಶಸ್ಸನ್ನು ಪಡೆಯದಿದ್ದರೆ ಅಥವಾ ನಿಮ್ಮ ವ್ಯವಹಾರದಲ್ಲಿ ಲಾಭದ ಬದಲು ನೀವು ನಷ್ಟವನ್ನು ಎದುರಿಸುತ್ತಿದ್ದರೆ.. ಎರಡರಲ್ಲೂ ಪ್ರಗತಿ ಸಾಧಿಸಲು ನೀವು ಕಲಶದ ಜ್ಯೋತಿಷ್ಯ ಪರಿಹಾರವನ್ನು ಪ್ರಯತ್ನಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೂಜಾ ಕೋಣೆಯಲ್ಲಿ ಅಕ್ಷತೆ ತುಂಬಿದ ಹೊಸ ತಾಮ್ರದ ಪಾತ್ರೆ ಇಡುವುದರಿಂದ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಇಷ್ಟಾರ್ಥಗಳು ಈಡೇರುತ್ತವೆ. ಆದರೆ ಕಲಶಕ್ಕೆ ಸಂಬಂಧಿಸಿದ ಈ ಪರಿಹಾರವನ್ನು ಯಾರಿಗೂ ಹೇಳದೆ.. ಯಾರೂ ನೋಡದಹಾಗೆ ಮಾಡಬೇಕು ಎಂಬುದು ನೆನಪಿಡಿ.

ಕೆಲವರು ಜೀವನದಲ್ಲಿ ಎಷ್ಟೇ ಕಷ್ಟಪಟ್ಟರೂ, ಎಷ್ಟೇ ದುಡಿದರೂ ಹಣ ಉಳಿಯುವುದಿಲ್ಲ ಎಂದು ದೂರುತ್ತಾರೆ. ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ.. ಕಲಶಕ್ಕೆ ಸಂಬಂಧಿಸಿ ಪರಿಹಾರ ಕಂಡುಕೊಳ್ಳಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಅಕ್ಷತೆ ಪಾತ್ರೆಯಲ್ಲಿ ಅಕ್ಕಿ ಮತ್ತು ಗೋಧಿಯೊಂದಿಗೆ ಐದು ನಾಣ್ಯಗಳನ್ನು ಹಾಕಿದ ನಂತರ, ಕಲಶವನ್ನು ಕೆಂಪು ಬಟ್ಟೆಯಿಂದ ಮುಚ್ಚಬೇಕು. ಅದರ ನಂತರ ಈ ಕಲಶವನ್ನು ಹಣದ ಸ್ಥಳದಲ್ಲಿ ಇರಿಸಿ. ಈ ಪರಿಹಾರವನ್ನು ಶುದ್ಧತೆ ಮತ್ತು ನಂಬಿಕೆಯೊಂದಿಗೆ ಮಾಡುವುದರಿಂದ ಅದ್ಭುತವಾದ ಪ್ರಯೋಜನಗಳನ್ನು ತರುತ್ತದೆ ಎಂದು ನಂಬಲಾಗಿದೆ.

 ಕಲಶ ಪೂಜೆ: ವಾಸ್ತು ದೋಷ ನಿವಾರಣೆಗಾಗಿ

ಹಿಂದೂ ಧರ್ಮದಲ್ಲಿ ಕಲಶವನ್ನು ಗಣಪತಿಯ ರೂಪವೆಂದು ಪರಿಗಣಿಸಲಾಗಿದೆ. ಸಂಪ್ರದಾಯದಲ್ಲಿ ಇದನ್ನು ಮಂಗಳದ ಸಂಕೇತವಾಗಿ ಬಳಸುತ್ತಾರೆ. ಮಂಗಳಕರ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಕಲಶವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಗೆ ಸಂಬಂಧಿಸಿದ ಎಲ್ಲಾ ರೀತಿಯ ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಮನೆಯ ಈಶಾನ್ಯ ಮೂಲೆಯಲ್ಲಿರುವ ಕಮಲದ ಮೇಲೆ ಕಲಶ, ಮಾವಿನ ಎಲೆಗಳು, ಹೂವುಗಳು ಮತ್ತು ನಾಣ್ಯಗಳನ್ನು ಇಡಬೇಕು.

 ಕಲಶ ಪೂಜೆ: ಮನೆಯಲ್ಲಿ ಕಲಶವನ್ನು ಎಲ್ಲಿ ಇಡಬೇಕು

ವಾಸ್ತು ಪ್ರಕಾರ ಕಲಶವನ್ನು ಮನೆಯಲ್ಲಿ ಇರಿಸಲು ಕೆಲವು ಸ್ಥಳಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಲಶವನ್ನು ಮನೆಯ ಪ್ರವೇಶ ದ್ವಾರದಲ್ಲಿ ಇಡುವುದರಿಂದ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಅದೇ ರೀತಿ ಗಂಗಾಜಲ ತುಂಬಿದ ಕಲಶವನ್ನು ಪೂಜಾ ಮಂದಿರದಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಹೆಚ್ಚಿನ ಆಧ್ಯಾತ್ಮಿಕ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

(ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಜನರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಮಾಹಿತಿ ಒದಗಿಸಿದ್ದೇವೆ)

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ