Sign In

By signing in or creating an account, you agree with Associated Broadcasting Company's Terms & Conditions and Privacy Policy.

Varalakshmivrath 2023 : ವರಮಹಾಲಕ್ಷ್ಮೀ ಹಬ್ಬ: ಮುತ್ತೈದೆಯರು ಯಾವ ರೀತಿಯ ಸೀರೆ, ಬಳೆ ಧರಿಸಿದರೆ ಸೂಕ್ತ? ಇಲ್ಲಿದೆ ಮಾಹಿತಿ

ಈ ವ್ರತವನ್ನು ಮುತ್ತೈದೆಯರೇ ಆಚರಿಸುವುದರಿಂದ ಅವರೇ ಪ್ರಧಾನ. ಹಾಗಾಗಿ ಪೂಜೆ ಕುಳಿತುಕೊಳ್ಳುವಾಗ ಸ್ವಚ್ಛತೆ ಮುಖ್ಯವಾಗುತ್ತದೆ. ಜೊತೆಗೆ ಸಿಂಗಾರವೂ ಅಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ಕೆಲವು ಸೀರೆ ಬಳೆಗಳನ್ನು ಪೂಜಾ ಸಮಯದಲ್ಲಿ ತೊಡಬಾರದು. ಅದು ಶುಭವಲ್ಲ ಎಂದು ಬಲ್ಲವರು ಹೇಳುತ್ತಾರೆ. ಹಾಗಾದರೆ ಆ ದಿನ ಯಾವ ಸೀರೆ, ಬಳೆ ತೊಟ್ಟುಕೊಳ್ಳಬೇಕು? ಇಲ್ಲಿದೆ ಮಾಹಿತಿ.

Varalakshmivrath 2023 : ವರಮಹಾಲಕ್ಷ್ಮೀ ಹಬ್ಬ: ಮುತ್ತೈದೆಯರು ಯಾವ ರೀತಿಯ ಸೀರೆ, ಬಳೆ ಧರಿಸಿದರೆ ಸೂಕ್ತ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:Aug 24, 2023 | 9:47 AM

ಶ್ರಾವಣ ಪೌರ್ಣಮಿಗೆ ಅಥವಾ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ, ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ಹಬ್ಬವೇ ವರಮಹಾಲಕ್ಷ್ಮೀ ವ್ರತ (Varalakshmi Vratham). ಇದನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದೊಂದು ಪವಿತ್ರವಾದ ದಿನ. ಹಾಗಾಗಿ ಈ ಆಚರಣೆಯೂ ಕೂಡ ಶಾಸ್ತ್ರ ಬದ್ಧವಾಗಿರಬೇಕು. ಈ ವ್ರತವನ್ನು ಮುತ್ತೈದೆಯರೇ ಆಚರಿಸುವುದರಿಂದ ಅವರೇ ಪ್ರಧಾನ. ಹಾಗಾಗಿ ಪೂಜೆ ಕುಳಿತುಕೊಳ್ಳುವಾಗ ಸ್ವಚ್ಛತೆ ಮುಖ್ಯವಾಗುತ್ತದೆ. ಜೊತೆಗೆ ಸಿಂಗಾರವೂ ಅಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ಕೆಲವು ಸೀರೆ ಬಳೆಗಳನ್ನು ಪೂಜಾ ಸಮಯದಲ್ಲಿ ತೊಡಬಾರದು. ಅದು ಶುಭವಲ್ಲ ಎಂದು ಬಲ್ಲವರು ಹೇಳುತ್ತಾರೆ. ಹಾಗಾದರೆ ಆ ದಿನ ಯಾವ ಸೀರೆ ತೊಟ್ಟುಕೊಳ್ಳಬೇಕು? ಯಾವ ಸೀರೆ ಶ್ರೇಷ್ಠ ಎಂದು ಕೇಳುವುದಾದರೆ, ರೇಷ್ಮೆ ಸೀರೆ ಉಡುವುದು ಅತ್ಯಂತ ಶ್ರೇಷ್ಠ. ಇನ್ನು ಅಶಕ್ತರು ಅಥವಾ ಅದನ್ನು ತೆಗೆದುಕೊಳ್ಳಲು ಆಗದಿದ್ದವರು ಮಾತ್ರ ಯಾವುದಾದರೂ ಹೊಸ ಸೀರೆ ಉಡುವುದು ಉತ್ತಮ.

ಯಾವ ಬಣ್ಣದ ಸೀರೆ ಉಡಬೇಕು?

ವರಮಹಾಲಕ್ಷ್ಮೀ ವ್ರತ ಮಾತ್ರವಲ್ಲ ಯಾವುದೇ ಶುಭ ಕಾರ್ಯಕ್ಕೆ ಆಗಲಿ ಕಪ್ಪು ಅಥವಾ ಕಡು ನೀಲಿ ಬಣ್ಣದ ಸೀರೆಯನ್ನು ಉಡಬಾರದು. ಹಾಗಾದರೆ ಯಾವ ಬಣ್ಣದ ಸೀರೆ ಅತ್ಯಂತ ಶ್ರೇಷ್ಠ? ಸಾಮಾನ್ಯವಾಗಿ ಶುಕ್ರವಾರ ಬಿಳಿ, ಕೆಂಪು ಬಣ್ಣದ ಉಡುಗೆಯನ್ನು ತೊಡುತ್ತಾರೆ. ಅಲ್ಲದೆ ಪೂಜೆಯಲ್ಲಿ ಕಪ್ಪು ಬಣ್ಣವನ್ನು ಹೊರತು ಪಡಿಸಿ ಯಾವ ಬಣ್ಣದ ಸೀರೆಯನ್ನಾದರೂ ಉಡಬಹುದು. ಆದರೆ ಋತುಚಕ್ರದ ಸಮಯದಲ್ಲಿ ಉಟ್ಟುಕೊಂಡ ಸೀರೆಯನ್ನು ಮಾತ್ರ ಉಡಬಾರದು. ಇನ್ನು ಪೂಜೆಗೆ ಕುಳಿತುಕೊಳ್ಳುವಾಗ ಕೂದಲು ಬಿಚ್ಚಿ ಹರಡಿಕೊಳ್ಳಬಾರದು. ಜೊತೆಗೆ ಕೂದಲು ಒದ್ದೆ ಇರಬಾರದು. ಜಡೆಯಲ್ಲಿ ಹೂವು, ಹಣೆಯಲ್ಲಿ ಕುಂಕುಮ ಇರಲೇಬೇಕು. ಇವೆಲ್ಲವೂ ಅವಳ ಮುತ್ತೈದೆ ತನವನ್ನು ಹೆಚ್ಚಿಸುತ್ತದೆ. ಮತ್ತು ಕಾಪಾಡುತ್ತದೆ ಎಂಬುದು ಹಿಂದಿನಿಂದಲೂ ಬಂದ ನಂಬಿಕೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ಈ ವಿಶೇಷ ನೈವೇದ್ಯ ಮಾಡಿ

ಯಾವ ಬಣ್ಣದ ಬಳೆ ಶ್ರೇಷ್ಠ?

ಮಹಿಳೆಯರಿಗೆ ಸಾಮಾನ್ಯವಾಗಿ ಹಸಿರು, ಕೆಂಪು ಬಳೆ ಶ್ರೇಷ್ಠ ಎನ್ನಲಾಗುತ್ತದೆ. ಪೂಜೆಯ ಸಮಯದಲ್ಲಿ ಬರಿ ಕೈಯಲ್ಲಿ ಇರದೇ ಗಾಜಿನ ಬಳೆಗಳನ್ನು ತೊಟ್ಟಕೊಳ್ಳಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳೆ, ಲೆದರ್ ಬೆಲ್ಟ್, ವಾಚ್ ನಂತಹ ಸಾಮಗ್ರಿಗಳನ್ನು ಬಳಸುವುದನ್ನು ಕಡಿಮೆ ಮಾಡಿ. ಎಲ್ಲ ಬಳೆಗಳಿಗಿಂತ ಗಾಜಿನ ಬಳೆ ಮುತ್ತೈದೆಯರಿಗೆ ಶುಭ ತರುತ್ತದೆ ಎನ್ನಲಾಗುತ್ತದೆ. ಇನ್ನು ಹಬ್ಬ ಅಥವಾ ಇತರ ಸಮಯದಲ್ಲಿ ಎಂದಿಗೂ ಬಂಗಾರದ ಕಾಲ್ಗೆಜ್ಜೆ ತೊಡಬಾರದು. ಇದು ನಿಮ್ಮನ್ನು ಅವನತಿಯೆಡೆಗೆ ಕೊಂಡೊಯ್ಯುತ್ತದೆ. ಸೊಂಟಕ್ಕಿಂತ ಕೆಳಭಾಗದಲ್ಲಿ ಬಂಗಾರವನ್ನು ಎಂದಿಗೂ ಧರಿಸಬಾರದು. ಇದನ್ನು ಎಂದಿಗೂ ಮರೆಯದೆಯೇ ನೆನಪಿನಲ್ಲಿಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:56 am, Fri, 18 August 23

ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು