AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Varalakshmivrath 2023 : ವರಮಹಾಲಕ್ಷ್ಮೀ ಹಬ್ಬ: ಮುತ್ತೈದೆಯರು ಯಾವ ರೀತಿಯ ಸೀರೆ, ಬಳೆ ಧರಿಸಿದರೆ ಸೂಕ್ತ? ಇಲ್ಲಿದೆ ಮಾಹಿತಿ

ಈ ವ್ರತವನ್ನು ಮುತ್ತೈದೆಯರೇ ಆಚರಿಸುವುದರಿಂದ ಅವರೇ ಪ್ರಧಾನ. ಹಾಗಾಗಿ ಪೂಜೆ ಕುಳಿತುಕೊಳ್ಳುವಾಗ ಸ್ವಚ್ಛತೆ ಮುಖ್ಯವಾಗುತ್ತದೆ. ಜೊತೆಗೆ ಸಿಂಗಾರವೂ ಅಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ಕೆಲವು ಸೀರೆ ಬಳೆಗಳನ್ನು ಪೂಜಾ ಸಮಯದಲ್ಲಿ ತೊಡಬಾರದು. ಅದು ಶುಭವಲ್ಲ ಎಂದು ಬಲ್ಲವರು ಹೇಳುತ್ತಾರೆ. ಹಾಗಾದರೆ ಆ ದಿನ ಯಾವ ಸೀರೆ, ಬಳೆ ತೊಟ್ಟುಕೊಳ್ಳಬೇಕು? ಇಲ್ಲಿದೆ ಮಾಹಿತಿ.

Varalakshmivrath 2023 : ವರಮಹಾಲಕ್ಷ್ಮೀ ಹಬ್ಬ: ಮುತ್ತೈದೆಯರು ಯಾವ ರೀತಿಯ ಸೀರೆ, ಬಳೆ ಧರಿಸಿದರೆ ಸೂಕ್ತ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Aug 24, 2023 | 9:47 AM

Share

ಶ್ರಾವಣ ಪೌರ್ಣಮಿಗೆ ಅಥವಾ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ, ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ಹಬ್ಬವೇ ವರಮಹಾಲಕ್ಷ್ಮೀ ವ್ರತ (Varalakshmi Vratham). ಇದನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದೊಂದು ಪವಿತ್ರವಾದ ದಿನ. ಹಾಗಾಗಿ ಈ ಆಚರಣೆಯೂ ಕೂಡ ಶಾಸ್ತ್ರ ಬದ್ಧವಾಗಿರಬೇಕು. ಈ ವ್ರತವನ್ನು ಮುತ್ತೈದೆಯರೇ ಆಚರಿಸುವುದರಿಂದ ಅವರೇ ಪ್ರಧಾನ. ಹಾಗಾಗಿ ಪೂಜೆ ಕುಳಿತುಕೊಳ್ಳುವಾಗ ಸ್ವಚ್ಛತೆ ಮುಖ್ಯವಾಗುತ್ತದೆ. ಜೊತೆಗೆ ಸಿಂಗಾರವೂ ಅಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ಕೆಲವು ಸೀರೆ ಬಳೆಗಳನ್ನು ಪೂಜಾ ಸಮಯದಲ್ಲಿ ತೊಡಬಾರದು. ಅದು ಶುಭವಲ್ಲ ಎಂದು ಬಲ್ಲವರು ಹೇಳುತ್ತಾರೆ. ಹಾಗಾದರೆ ಆ ದಿನ ಯಾವ ಸೀರೆ ತೊಟ್ಟುಕೊಳ್ಳಬೇಕು? ಯಾವ ಸೀರೆ ಶ್ರೇಷ್ಠ ಎಂದು ಕೇಳುವುದಾದರೆ, ರೇಷ್ಮೆ ಸೀರೆ ಉಡುವುದು ಅತ್ಯಂತ ಶ್ರೇಷ್ಠ. ಇನ್ನು ಅಶಕ್ತರು ಅಥವಾ ಅದನ್ನು ತೆಗೆದುಕೊಳ್ಳಲು ಆಗದಿದ್ದವರು ಮಾತ್ರ ಯಾವುದಾದರೂ ಹೊಸ ಸೀರೆ ಉಡುವುದು ಉತ್ತಮ.

ಯಾವ ಬಣ್ಣದ ಸೀರೆ ಉಡಬೇಕು?

ವರಮಹಾಲಕ್ಷ್ಮೀ ವ್ರತ ಮಾತ್ರವಲ್ಲ ಯಾವುದೇ ಶುಭ ಕಾರ್ಯಕ್ಕೆ ಆಗಲಿ ಕಪ್ಪು ಅಥವಾ ಕಡು ನೀಲಿ ಬಣ್ಣದ ಸೀರೆಯನ್ನು ಉಡಬಾರದು. ಹಾಗಾದರೆ ಯಾವ ಬಣ್ಣದ ಸೀರೆ ಅತ್ಯಂತ ಶ್ರೇಷ್ಠ? ಸಾಮಾನ್ಯವಾಗಿ ಶುಕ್ರವಾರ ಬಿಳಿ, ಕೆಂಪು ಬಣ್ಣದ ಉಡುಗೆಯನ್ನು ತೊಡುತ್ತಾರೆ. ಅಲ್ಲದೆ ಪೂಜೆಯಲ್ಲಿ ಕಪ್ಪು ಬಣ್ಣವನ್ನು ಹೊರತು ಪಡಿಸಿ ಯಾವ ಬಣ್ಣದ ಸೀರೆಯನ್ನಾದರೂ ಉಡಬಹುದು. ಆದರೆ ಋತುಚಕ್ರದ ಸಮಯದಲ್ಲಿ ಉಟ್ಟುಕೊಂಡ ಸೀರೆಯನ್ನು ಮಾತ್ರ ಉಡಬಾರದು. ಇನ್ನು ಪೂಜೆಗೆ ಕುಳಿತುಕೊಳ್ಳುವಾಗ ಕೂದಲು ಬಿಚ್ಚಿ ಹರಡಿಕೊಳ್ಳಬಾರದು. ಜೊತೆಗೆ ಕೂದಲು ಒದ್ದೆ ಇರಬಾರದು. ಜಡೆಯಲ್ಲಿ ಹೂವು, ಹಣೆಯಲ್ಲಿ ಕುಂಕುಮ ಇರಲೇಬೇಕು. ಇವೆಲ್ಲವೂ ಅವಳ ಮುತ್ತೈದೆ ತನವನ್ನು ಹೆಚ್ಚಿಸುತ್ತದೆ. ಮತ್ತು ಕಾಪಾಡುತ್ತದೆ ಎಂಬುದು ಹಿಂದಿನಿಂದಲೂ ಬಂದ ನಂಬಿಕೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ಈ ವಿಶೇಷ ನೈವೇದ್ಯ ಮಾಡಿ

ಯಾವ ಬಣ್ಣದ ಬಳೆ ಶ್ರೇಷ್ಠ?

ಮಹಿಳೆಯರಿಗೆ ಸಾಮಾನ್ಯವಾಗಿ ಹಸಿರು, ಕೆಂಪು ಬಳೆ ಶ್ರೇಷ್ಠ ಎನ್ನಲಾಗುತ್ತದೆ. ಪೂಜೆಯ ಸಮಯದಲ್ಲಿ ಬರಿ ಕೈಯಲ್ಲಿ ಇರದೇ ಗಾಜಿನ ಬಳೆಗಳನ್ನು ತೊಟ್ಟಕೊಳ್ಳಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳೆ, ಲೆದರ್ ಬೆಲ್ಟ್, ವಾಚ್ ನಂತಹ ಸಾಮಗ್ರಿಗಳನ್ನು ಬಳಸುವುದನ್ನು ಕಡಿಮೆ ಮಾಡಿ. ಎಲ್ಲ ಬಳೆಗಳಿಗಿಂತ ಗಾಜಿನ ಬಳೆ ಮುತ್ತೈದೆಯರಿಗೆ ಶುಭ ತರುತ್ತದೆ ಎನ್ನಲಾಗುತ್ತದೆ. ಇನ್ನು ಹಬ್ಬ ಅಥವಾ ಇತರ ಸಮಯದಲ್ಲಿ ಎಂದಿಗೂ ಬಂಗಾರದ ಕಾಲ್ಗೆಜ್ಜೆ ತೊಡಬಾರದು. ಇದು ನಿಮ್ಮನ್ನು ಅವನತಿಯೆಡೆಗೆ ಕೊಂಡೊಯ್ಯುತ್ತದೆ. ಸೊಂಟಕ್ಕಿಂತ ಕೆಳಭಾಗದಲ್ಲಿ ಬಂಗಾರವನ್ನು ಎಂದಿಗೂ ಧರಿಸಬಾರದು. ಇದನ್ನು ಎಂದಿಗೂ ಮರೆಯದೆಯೇ ನೆನಪಿನಲ್ಲಿಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:56 am, Fri, 18 August 23

Follow Us
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು