
ಯಾವುದೇ ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ಪಾದರಕ್ಷೆಗಳನ್ನು ಹೊರಗಿಡುವುದು, ಕೈಕಾಲುಗಳನ್ನು ತೊಳೆದುಕೊಳ್ಳುವುದು ಮತ್ತು ಕೆಲವು ಕಡೆಗಳಲ್ಲಿ ತಲೆಯನ್ನು ಶಾಲಿನಿಂದ ಮುಚ್ಚಿಕೊಳ್ಳುವುದನ್ನು ಕಾಣಬಹುದು. ಆದರೆ, ಈ ಎಲ್ಲಾ ನಿಯಮಗಳ ಜೊತೆಗೆ, ಭಕ್ತರು ದೇವಸ್ಥಾನದ ಒಳಗೆ ಹೋಗುವಾಗ ಮೊದಲು ಅಲ್ಲಿನ ಮೊದಲನೇ ಮೆಟ್ಟಿಲನ್ನು ಕೈಯಿಂದ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ದೇವಸ್ಥಾನಕ್ಕೆ ಹೋಗುವ ಮುನ್ನ ಮೆಟ್ಟಿಲುಗಳನ್ನು ಮುಟ್ಟುವುದು ಕೇವಲ ಒಂದು ಆಚರಣೆಯಷ್ಟೇ ಅಲ್ಲ, ಅದರ ಹಿಂದೆ ಆಳವಾದ ನಂಬಿಕೆ ಮತ್ತು ಆಧ್ಯಾತ್ಮಿಕ ರಹಸ್ಯ ಅಡಗಿದೆ. ಈ ಸಂಪ್ರದಾಯದ ಹಿಂದಿನ ನಿಜವಾದ ಕಾರಣ ಮತ್ತು ಅದರ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹಿಂದೂ ಧರ್ಮದ ಪ್ರಕಾರ, ದೇವಸ್ಥಾನವು ಕೇವಲ ಕಲ್ಲಿನ ಕಟ್ಟಡವಲ್ಲ; ಅದು ದೈವಿಕ ಮತ್ತು ಧನಾತ್ಮಕ ಶಕ್ತಿ (Positive Energy) ತುಂಬಿರುವ ಪವಿತ್ರ ಸ್ಥಳ. ದೇವಸ್ಥಾನಕ್ಕೆ ಪ್ರವೇಶಿಸುವಾಗ ನಮ್ಮ ಶರೀರ, ಮನಸ್ಸು ಮತ್ತು ಭಾವನೆಗಳು ಸಂಪೂರ್ಣವಾಗಿ ಶುದ್ಧವಾಗಿರಬೇಕು ಹಾಗೂ ಭಕ್ತಿಭಾವದಿಂದ ಕೂಡಿರಬೇಕು ಎಂಬುದು ಮುಖ್ಯ ನಿಯಮ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಪ್ರಾಚೀನ ಪರಂಪರೆಯಲ್ಲಿ ಮತ್ತೊಂದು ಪ್ರಮುಖ ಆಚರಣೆಯನ್ನು ನಾವು ಕಾಣಬಹುದು. ಭಕ್ತರು ದೇವರ ದರ್ಶನ ಮುಗಿಸಿ ಹೊರಬಂದ ನಂತರ, ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕೆಲಕಾಲ ಕುಳಿತುಕೊಳ್ಳುತ್ತಾರೆ. ಇದು ನೋಡಲು ಸಾಮಾನ್ಯ ಪ್ರಕ್ರಿಯೆಯಂತೆ ಕಂಡರೂ, ಇದರ ಹಿಂದೆ ಒಂದು ವಿಶೇಷವಾದ ರಹಸ್ಯವಿದೆ.
ದೇವಸ್ಥಾನದ ಗೋಪುರ ಅಥವಾ ಶಿಖರವನ್ನು ದೇವರ ಮುಖ ಭಾಗವೆಂದೂ ಮತ್ತು ಅದರ ಮೆಟ್ಟಿಲುಗಳನ್ನು ದೇವರ ಚರಣ (ಪಾದ) ಕಮಲಗಳೆಂದೂ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ, ಭಕ್ತರು ಶಿಖರದ ದರ್ಶನ ಪಡೆದ ನಂತರ ಭಗವಂತನ ಪಾದದಂತಿರುವ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಾರೆ. ಹೀಗೆ ಕುಳಿತುಕೊಳ್ಳುವುದರಿಂದ ದೇವಸ್ಥಾನದ ಗರ್ಭಗುಡಿಯಿಂದ ಹೊರಹೊಮ್ಮುವ ದೈವಿಕ ತರಂಗಗಳು ಮತ್ತು ಧನಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸಿ, ಮನಸ್ಸಿಗೆ ಅಪಾರ ಶಾಂತಿ ಹಾಗೂ ನೆಮ್ಮದಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ