AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budha Dosha: ಬುಧ ದೋಷ ಎಂದರೇನು? ಜಾತಕದಲ್ಲಿ ಬುಧ ದುರ್ಬಲ ಸ್ಥಾನದಲ್ಲಿದ್ದರೆ ತಿಳಿಯುವುದು ಹೇಗೆ?

ಬುಧ ಗ್ರಹವು ಬುದ್ಧಿಮತ್ತೆ, ತರ್ಕ ಮತ್ತು ಸಂವಹನಕ್ಕೆ ಸಂಬಂಧಿಸಿದೆ. ಜಾತಕದಲ್ಲಿ ಬುಧ ದೋಷವು ತಪ್ಪು ನಿರ್ಧಾರಗಳು, ಸಂವಹನದ ತೊಂದರೆಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬುಧವಾರ ಉಪವಾಸ, ತುಳಸಿ ಪೂಜೆ, ಮತ್ತು ಬುಧ ಮಂತ್ರ ಪಠಣೆ ಮುಂತಾದ ಪರಿಹಾರಗಳು ಈ ದೋಷದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜ್ಯೋತಿಷ್ಯ ಸಲಹೆಯನ್ನು ಪಡೆಯುವುದು ಸಹ ಮುಖ್ಯ.

Budha Dosha: ಬುಧ ದೋಷ ಎಂದರೇನು? ಜಾತಕದಲ್ಲಿ ಬುಧ ದುರ್ಬಲ ಸ್ಥಾನದಲ್ಲಿದ್ದರೆ ತಿಳಿಯುವುದು ಹೇಗೆ?
ಬುಧ ದೋಷ
ಅಕ್ಷತಾ ವರ್ಕಾಡಿ
|

Updated on: Jul 30, 2025 | 9:31 AM

Share

ಬುಧ ಗ್ರಹವನ್ನು ಸಾಮಾನ್ಯವಾಗಿ ಬುದ್ಧಿವಂತಿಕೆ, ತರ್ಕ, ಗಣಿತ, ಸಂವಹನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಅದು ಶುಭ ಸ್ಥಾನದಲ್ಲಿದ್ದಾಗ, ಅದು ವ್ಯಕ್ತಿಗೆ ವಾಗ್ಮಿ ಕೌಶಲ್ಯ, ತೀಕ್ಷ್ಣ ಮನಸ್ಸು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಒದಗಿಸುತ್ತದೆ, ಆದರೆ ಅದೇ ಬುಧವು ಪಾಪ ಗ್ರಹದ ಪ್ರಭಾವಕ್ಕೆ ಒಳಗಾದಾಗ ಅಥವಾ ಜಾತಕದಲ್ಲಿ ದುರ್ಬಲ ಸ್ಥಾನದಲ್ಲಿದ್ದಾಗ, ಬುಧ ದೋಷ ಉಂಟಾಗುತ್ತದೆ.

ಅನೇಕ ಜನರಿಗೆ ಈ ದೋಷದ ಬಗ್ಗೆ ತಿಳಿದಿಲ್ಲ, ಆದರೆ ಜೀವನದಲ್ಲಿ ಪದೇ ಪದೇ ತಪ್ಪು ನಿರ್ಧಾರಗಳು, ಸಂವಹನ ವೈಫಲ್ಯ, ಚರ್ಮದ ಅಸ್ವಸ್ಥತೆಗಳು ಮತ್ತು ಮಾನಸಿಕ ಚಡಪಡಿಕೆಗಳು ಈ ಗ್ರಹದ ದುಷ್ಪರಿಣಾಮಗಳಾಗಿರಬಹುದು. ಬುಧ ದೋಷವು ಜ್ಯೋತಿಷ್ಯ ಸಂಯೋಜನೆಯಾಗಿದ್ದು ಅದು ವ್ಯಕ್ತಿಯ ಬುದ್ಧಿಶಕ್ತಿಯನ್ನು ಗೊಂದಲಗೊಳಿಸುತ್ತದೆ. ಜೊತೆಗೆ ಅವನ ವ್ಯವಹಾರವನ್ನು ವೈಫಲ್ಯದತ್ತ ತಳ್ಳುತ್ತದೆ.

ಜಾತಕದಲ್ಲಿ ಬುಧ ದೋಷ ಎಂದರೇನು?

ಶತ್ರು ಗ್ರಹಗಳೊಂದಿಗೆ (ಮಂಗಳ, ರಾಹು, ಶನಿ ಮುಂತಾದವು) ಸಂಯೋಗ. ದುಷ್ಟ ಗ್ರಹಗಳ ದೃಷ್ಟಿಗೆ ಒಳಗಾಗುವುದು. ರಾಹು ಅಥವಾ ಕೇತುವಿನ ಸಂಯೋಗವಿದ್ದರೆ ಆ ವ್ಯಕ್ತಿಯು ಬುಧ ದೋಷವನ್ನು ಎದುರಿಸಬೇಕಾಗುತ್ತದೆ.

ಬುಧ ದೋಷದ ಲಕ್ಷಣಗಳು:

  • ಆಗಾಗ್ಗೆ ಸುಳ್ಳು ಹೇಳುವುದು, ಅಸಭ್ಯ ಭಾಷೆ, ಸಂವಹನದಲ್ಲಿ ಗೊಂದಲ.
  • ಮಾನಸಿಕ ಅಸ್ಥಿರತೆ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆ, ಆಲೋಚನೆಗಳ ಗೊಂದಲ.
  • ಚರ್ಮ ಮತ್ತು ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳು.
  • ವ್ಯವಹಾರದಲ್ಲಿ ನಿರಂತರ ವೈಫಲ್ಯ.
  • ಶಿಕ್ಷಣದಲ್ಲಿ ಅಡಚಣೆ, ಸ್ಮರಣಶಕ್ತಿ ದುರ್ಬಲ.
  • ಖಿನ್ನತೆ ಮತ್ತು ಕಿರಿಕಿರಿ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಬೆಳ್ಳಿ ನಾಗ ಅರ್ಪಿಸುವುದರಿಂದಾಗುವ ಪ್ರಯೋಜನಗಳಿವು

ಬುದ್ಧ ದೋಷವನ್ನು ತಪ್ಪಿಸುವ ಮಾರ್ಗಗಳು:

  • ಬುಧವಾರ ಉಪವಾಸ ಮಾಡಿ.
  • ಹಸಿರು ಬಟ್ಟೆಗಳ ಬಳಕೆಯನ್ನು ಹೆಚ್ಚಿಸಿ.
  • ತುಳಸಿ ಮತ್ತು ಗಣೇಶನನ್ನು ಪೂಜಿಸಿ.
  • ಪ್ರತಿದಿನ 108 ಬಾರಿ ಬುಧ ಮಂತ್ರವನ್ನು ಪಠಿಸಿ, ವಿಶೇಷವಾಗಿ ಬುಧವಾರದಂದು. ಇದಲ್ಲದೇ ವಿಶೇಷ ಶುಭ ಸಮಯದಲ್ಲಿ ಬುಧ ಬೀಜ ಮಂತ್ರಗಳನ್ನು ಪಠಿಸಿ.ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರ, ವಿಶೇಷ ಬುದ್ಧ ಶಾಂತಿ ಪೂಜೆಯನ್ನು ಮಾಡಿಸಿ.

ಜ್ಯೋತಿಷ್ಯ ಪರಿಹಾರಗಳು:

  • ಬುಧವಾರ ಗಣೇಶ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮಾಡಿ.
  • ಬುಧ ಗ್ರಹದ ದಶಾ-ಮಹಾದಶದ ಸಮಯದಲ್ಲಿ ವಿಶೇಷ ಕಾಳಜಿ ವಹಿಸಿ.
  • ಬುಧ ದೋಷವನ್ನು ಶಮನಗೊಳಿಸಲು ರುದ್ರಭಿಷೇಕ ಮಾಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ