AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasant Panchami 2024: ವಸಂತ ಪಂಚಮಿ ಮದುವೆಗೆ ಶುಭ ದಿನ

ಬಸಂತ್ ಅಥವಾ ವಸಂತ ಪಂಚಮಿಯ ದಿನವು ಮದುವೆಗೆ ಅತ್ಯುತ್ತಮ ಶುಭ ಸಮಯ ಎಂದು ಹೇಳಲಾಗುತ್ತದೆ, ಅಂದರೆ, ಮದುವೆಗೆ ಶುಭ ಸಮಯವನ್ನು ನೋಡಲು ಸಾಧ್ಯವಾಗದ ದಂಪತಿಗಳು ಬಸಂತ್ ಅಥವಾ ವಸಂತ ಪಂಚಮಿಯ ದಿನದಂದು ಮದುವೆಯಾಗಬಹುದು. ಹಾಗಾದರೆ ಈ ದಿನ ಮದುವೆಯಾಗುವುದು ಏಕೆ ಶುಭ? ವಸಂತ ಪಂಚಮಿಯಂದು ಯಾರು ಮದುವೆಯಾಗಬಹುದು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Vasant Panchami 2024: ವಸಂತ ಪಂಚಮಿ ಮದುವೆಗೆ ಶುಭ ದಿನ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 06, 2024 | 4:09 PM

Share

ಹಿಂದೂ ಧರ್ಮದಲ್ಲಿ ವಸಂತ ಪಂಚಮಿಗೆ ವಿಶೇಷ ಮಹತ್ವವಿದೆ. ಈ ದಿನ, ತಾಯಿ ಸರಸ್ವತಿಯನ್ನು ಪೂಜಿಸುವುದರ ಜೊತೆಗೆ, ಕಾಮದೇನುವನ್ನು ಸಹ ಪೂಜಿಸಲಾಗುತ್ತದೆ. ಈ ದಿನವು ಮದುವೆ ಸಮಾರಂಭಗಳನ್ನು ಮಾಡಲು ಶುಭ ದಿನ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ವಸಂತ ಪಂಚಮಿಯಂದು ಲಕ್ಷಾಂತರ ಜೋಡಿಗಳು ಮದುವೆಯಾಗುತ್ತಾರೆ. ಏಕೆಂದರೆ ಬಸಂತ್ ಅಥವಾ ವಸಂತ ಪಂಚಮಿಯ ದಿನವು ಮದುವೆಗೆ ಅತ್ಯುತ್ತಮ ಶುಭ ಸಮಯ ಎಂದು ಹೇಳಲಾಗುತ್ತದೆ, ಅಂದರೆ, ಮದುವೆಗೆ ಶುಭ ಸಮಯವನ್ನು ನೋಡಲು ಸಾಧ್ಯವಾಗದ ದಂಪತಿಗಳು ಬಸಂತ್ ಅಥವಾ ವಸಂತ ಪಂಚಮಿಯ ದಿನದಂದು ಮದುವೆಯಾಗಬಹುದು. ಹಾಗಾದರೆ ಈ ದಿನ ಮದುವೆಯಾಗುವುದು ಏಕೆ ಶುಭ? ವಸಂತ ಪಂಚಮಿಯಂದು ಯಾರು ಮದುವೆಯಾಗಬಹುದು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ವಸಂತ ಪಂಚಮಿ ಮದುವೆಗೆ ಶುಭ ಏಕೆ?

ಈ ವರ್ಷ ವಸಂತ ಪಂಚಮಿಯನ್ನು ಫೆ. 14 ರಂದು ಆಚರಣೆ ಮಾಡಲಾಗುತ್ತದೆ. ಈ ದಿನ, ಜ್ಞಾನದ ದೇವತೆಯಾದ ತಾಯಿ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಈ ದಿನ ಮದುವೆಯಾಗುವುದು ಶುಭ ಎನ್ನಲಾಗುತ್ತದೆ. ಇನ್ನು ಜ್ಯೋತಿಷ್ಯದ ಪ್ರಕಾರ, ವಸಂತ ಪಂಚಮಿಯ ದಿನವಿಡೀ ದೋಷರಹಿತ ಮತ್ತು ಅತ್ಯುತ್ತಮ ಯೋಗವಿದೆ. ಇದಲ್ಲದೆ, ಈ ದಿನದಂದು ರವಿ ಯೋಗವೂ ಇದೆ. ಇನ್ನು ಧರ್ಮಗ್ರಂಥಗಳ ಪ್ರಕಾರ, ವಸಂತ ಪಂಚಮಿಯ ದಿನ ಶಿವ ಮತ್ತು ಪಾರ್ವತಿಯ ತಿಲಕೋತ್ಸವ ನಡೆಯಿತು ಮತ್ತು ಅವರ ವಿವಾಹ ಆಚರಣೆಗಳು ಪ್ರಾರಂಭವಾದವು. ಈ ಎಲ್ಲಾ ದೃಷ್ಟಿಕೋನದಿಂದ, ವಸಂತ ಪಂಚಮಿಯ ದಿನವನ್ನು ಮದುವೆಗೆ ಶುಭವೆಂದು ಪರಿಗಣಿಸಲಾಗುತ್ತದೆ.

ಹಾಗಾದರೆ ವಸಂತ ಪಂಚಮಿಯಂದು ಯಾರು ಮದುವೆಯಾಗಬಹುದು?

-ವಸಂತ ಪಂಚಮಿಯ ದಿನದಂದು, ಮದುವೆಯಾಗದೆ ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮದುವೆಯಾಗಿ ಹೊಸ ಜೀವನ ಆರಂಭಿಸಬಹುದು.

-ಎರಡೂ ಮನೆಯವರು ಒಪ್ಪಿ ಗುಣಗಳು ಹೊಂದಿಕೆಯಾಗದವರು ಕೂಡ ಮದುವೆಯಾಗಬಹುದು.

-ಮದುವೆಗೆ ಎಲ್ಲವೂ ಫಿಕ್ಸ್ ಆಗಿದೆ ಆದರೆ ಶುಭ ಸಮಯ ಸಿಗುತ್ತಿಲ್ಲ ಎನ್ನುವವರು ಮದುವೆಯಾಗಬಹುದು.

-ಯಾವುದೇ ಸಿದ್ಧತೆಯಿಲ್ಲದೆ ತಕ್ಷಣ ಮದುವೆಯಾಗಲು ಬಯಸುವವರಿಗೆ ವಸಂತ ಪಂಚಮಿ ಅತ್ಯುತ್ತಮ ದಿನ.

ಇದನ್ನೂ ಓದಿ: ಈ ದೇವಾಲಯದಲ್ಲಿ ಶಿವನು ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತಾನೆ!

ವಸಂತ ಪಂಚಮಿಯಂದು ಏನು ಮಾಡಿದರೆ ಶುಭವಾಗುತ್ತೆ?

ಜ್ಞಾನ ಮತ್ತು ಬುದ್ಧಿವಂತಿಕೆಯ ದೇವತೆಯಾದ ಸರಸ್ವತಿ ಮತ್ತು ಕಾಮದೇನುವನ್ನು ವಸಂತ ಪಂಚಮಿಯಂದು ಪೂಜಿಸಬೇಕು. ಹಾಗಾಗಿ ಶಾರದಾ ದೇವಿಯನ್ನು ಪೂಜಿಸಲು ಮತ್ತು ಅವಳ ಆಶೀರ್ವಾದವನ್ನು ಪಡೆಯಲು ಹಾಗೂ ಯಾವುದೇ ಕೆಲಸವನ್ನು ಪ್ರಾರಂಭಿಸಲು ಈ ದಿನವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಮದುವೆಯ ಹೊರತಾಗಿಯೂ, ಈ ದಿನ ಗೃಹಪ್ರವೇಶ, ಹೊಸ ಉದ್ಯೋಗ, ಹೊಸ ಅಂಗಡಿಯನ್ನು ಪ್ರಾರಂಭಿಸುವುದು, ಭೂಮಿ ಪೂಜೆ, ಮಕ್ಕಳ ಶಿಕ್ಷಣವನ್ನು ಪ್ರಾರಂಭಿಸುವುದು ಮುಂತಾದ ಶುಭ ಕಾರ್ಯಗಳಿಗೆ ಈ ದಿನ ಉತ್ತಮವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ