AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಕ ಬಲಕ್ಕಾಗಿ ವಾರದ ಏಳು ದಿನಗಳಲ್ಲಿ- ಯಾವ ದಿನ ಯಾವ ಗ್ರಹ ಮತ್ತು ದೇವತೆಯನ್ನು ಪೂಜಿಸಬೇಕು? ಇಲ್ಲಿದೆ ವಿವರ

ಭಾನುವಾರ ಸೂರ್ಯ, ಸೋಮವಾರ ಚಂದ್ರ, ಮಂಗಳವಾರ ಮಂಗಳ, ಬುಧವಾರ ಬುಧ, ಗುರುವಾರ ಗುರು, ಶುಕ್ರವಾರ ಶುಕ್ರ ಹಾಗೂ ಶನಿವಾರ ಶನಿ ಗ್ರಹದ ಪೂಜೆ ಮಾಡುವುದು ಉತ್ತಮ. ವಾರಕ್ಕೊಮ್ಮೆ ದೇವತೆಗಳನ್ನು ಪೂಜಿಸುವುದರಿಂದ ಲಾಭವಾಗುತ್ತದೆ.

ಜಾತಕ ಬಲಕ್ಕಾಗಿ ವಾರದ ಏಳು ದಿನಗಳಲ್ಲಿ- ಯಾವ ದಿನ ಯಾವ ಗ್ರಹ ಮತ್ತು ದೇವತೆಯನ್ನು ಪೂಜಿಸಬೇಕು? ಇಲ್ಲಿದೆ ವಿವರ
ವಾರದ ಏಳು ದಿನಗಳಲ್ಲಿ ಯಾವ ದಿನ ಯಾವ ಗ್ರಹ ಮತ್ತು ದೇವತೆಯನ್ನು ಪೂಜಿಸಬೇಕು?
ಸಾಧು ಶ್ರೀನಾಥ್​
|

Updated on:Oct 13, 2023 | 12:58 PM

Share

ಭಾನುವಾರ ಸೂರ್ಯ, ಸೋಮವಾರ ಚಂದ್ರ, ಮಂಗಳವಾರ ಮಂಗಳ, ಬುಧವಾರ ಬುಧ, ಗುರುವಾರ ಗುರು, ಶುಕ್ರವಾರ ಶುಕ್ರ ಹಾಗೂ ಶನಿವಾರ ಶನಿ ಗ್ರಹದ ಪೂಜೆ ಮಾಡುವುದು ಉತ್ತಮ. ವಾರಕ್ಕೊಮ್ಮೆ ದೇವತೆಗಳನ್ನು ಪೂಜಿಸುವುದರಿಂದ ಲಾಭವಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಸೂರ್ಯನು ಆರೋಗ್ಯವನ್ನು ನೀಡುತ್ತಾನೆ. ಚಂದ್ರನು ಸಂಪತ್ತನ್ನು ನೀಡುತ್ತಾನೆ. ಮಂಗಳವು ರೋಗಗಳನ್ನು ನಿವಾರಿಸುತ್ತದೆ. ಬುಧ ಶಕ್ತಿ ನೀಡುತ್ತದೆ. ಗುರುವು ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಶುಕ್ರನು ಭೌತಿಕ ಸುಖವನ್ನು ನೀಡುತ್ತಾನೆ. ಶನಿಯು ಸಾವಿನ ಭಯವನ್ನು ಹೋಗಲಾಡಿಸುತ್ತದೆ.

ಭಾನುವಾರ ಸೂರ್ಯ ಪೂಜೆ: ಸೂರ್ಯ ನಾರಾಯಣ ಜೀವಂತ ದೇವರು, ಅಪಾರ ಶಕ್ತಿ ಮತ್ತು ತೇಜಸ್ಸನ್ನು ಹೊಂದಿದೆ. ಸೂರ್ಯನಿಂದ ಹೊರಹೊಮ್ಮುವ ಬೆಳಕು ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಆತ್ಮದಲ್ಲಿನ ಬೆಳಕು ಕೂಡ ಸೂರ್ಯನ ಪ್ರತಿಬಿಂಬವಾಗಿದೆ. ಸೂರ್ಯ ಭಗವಂತನ ಆಶೀರ್ವಾದ ಪಡೆಯಲು ಪ್ರತಿದಿನ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಭಾನುವಾರದಂದು ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಹೂವು ಮತ್ತು ಅಕ್ಷತೆಗಳನ್ನು ಸೇರಿಸಿ ಸೂರ್ಯನಿಗೆ ಅರ್ಪಿಸಬೇಕು.

ಸೋಮವಾರ ಚಂದ್ರನ ಆರಾಧನೆ: ಸೋಮವಾರದಂದು ಶಂಕರನ ಆರಾಧನೆಯಿಂದ, ಎಲ್ಲಾ ಗ್ರಹಗಳು ಶಾಂತವಾಗಿ ಮತ್ತು ಸಂತೋಷದಿಂದ ಇರುತ್ತವೆ, ಆದರೆ ಸೋಮವಾರದ ಚಂದ್ರನ ಆರಾಧನೆಯು ವಿಶಿಷ್ಟ ಫಲಿತಾಂಶಗಳನ್ನು ನೀಡುತ್ತದೆ. ಶಿವನ ದೇಹದಲ್ಲಿ ಚಂದ್ರನಿದ್ದು ಪೂಜೆಯನ್ನು ಸ್ವೀಕರಿಸುತ್ತಿದ್ದಾನೆ. ಆದ್ದರಿಂದ ಚಂದ್ರನ ಸೋಮವಾರದಂದು ಶಿವನನ್ನು ಪೂಜಿಸಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಸಮೃದ್ಧಿ ಲಭಿಸುತ್ತದೆ.

ಮಂಗಳವಾರದಂದು ಕುಜುವಿನ ಆರಾಧನೆ: ಮಂಗಳದೋಷ ಅಥವಾ ಕುಜ ದೋಷದ ಪರಿಣಾಮಗಳನ್ನು ಕಡಿಮೆ ಮಾಡಲು ಮಂಗಳವಾರದಂದು ಹನುಮಂತನನ್ನು ಆರಾಧಿಸಿ. ಈ ದಿನ ಗಣೇಶನ ಪೂಜೆ ಮಾಡುವುದರಿಂದ ಕುಜ ದೋಷವೂ ಕಡಿಮೆಯಾಗುತ್ತದೆ. ಮಂಗಳವಾರ ಶಿವಲಿಂಗಕ್ಕೆ ಕೆಂಪು ಹೂವುಗಳನ್ನು ಅರ್ಪಿಸಿ. ಮಂಗಳವನ್ನು ಶಿವಲಿಂಗ ರೂಪದಲ್ಲಿ ಮಾತ್ರ ಪೂಜಿಸಲಾಗುತ್ತದೆ. ಮಂಗಳವಾರ ಶಿವಲಿಂಗಕ್ಕೆ ಕೆಂಪು ಗುಲಾಬಿ ಅಥವಾ ದಾಸವಾಳದ ಹೂಗಳನ್ನು ಅರ್ಪಿಸಿ.

ಬುಧವಾರದಂದು ಬುಧದ ಆರಾಧನೆ: ವೈದಿಕ ನಂಬಿಕೆಗಳ ಪ್ರಕಾರ ಬುಧವಾರವು ಗಣೇಶನಿಗೆ ಸಮರ್ಪಿತವಾದ ದಿನವಾಗಿದೆ. ಅಂದು ಗಣಪತಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇದರೊಂದಿಗೆ ಈ ದಿನ ಸುಖವಾಗಿ ಇರಲು ಬುಧನನ್ನು ಪೂಜಿಸಲಾಗುತ್ತದೆ. ಏಕೆಂದರೆ ಬುಧವಾರದ ಅಧಿಪತಿ ಬುಧ. ಗಣೇಶ ಮತ್ತು ಬುಧ ಎರಡನ್ನೂ ಬುದ್ಧಿವಂತಿಕೆಯ ಅಂಶಗಳೆಂದು ಪರಿಗಣಿಸಲಾಗುತ್ತದೆ. ಆದುದರಿಂದ ಈ ದಿನದಂದು ಗಣಪತಿಯನ್ನು ನೈವೇದ್ಯ ಮಾಡಿ ಪೂಜಿಸುವುದರಿಂದ ಜ್ಞಾನದ ವರದಾನವಾಗುತ್ತದೆ. ಬುಧನೂ ಸಮಾಧಾನಗೊಳ್ಳುವನು. ಪ್ರತಿ ಬುಧವಾರ ಬುಧನಿಗೆ ಹೆಸರುಕಾಳು ಉಸಲಿ ದಾನ ಮಾಡಿ. ಗಣೇಶನಿಗೆ ದರ್ಭೆಗಳನ್ನು ಅರ್ಪಿಸಿ.

ಗುರುವಾರ ಗುರುವಿನ ಪೂಜೆ: ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಗುರುವಾರವು ದೇವರ ದೇವರಾದ ಗುರುವಿಗೆ ಸಮರ್ಪಿತವಾಗಿದೆ. ಈ ದಿನದಂದು ಭಗವಾನ್ ವಿಷ್ಣುವನ್ನು ಆರಾಧಿಸುವುದರಿಂದ ಮತ್ತು ಉಪವಾಸ ಮಾಡುವುದರಿಂದ ವಿಷ್ಣುವು ಶೀಘ್ರವಾಗಿ ಪ್ರಸನ್ನನಾಗುತ್ತಾನೆ. ಗುರುವಿನ ಕೃಪೆಯಿಂದ ಕೈಗೆತ್ತಿಕೊಂಡ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ. ದೇವಗುರು ಬೃಹಸ್ಪತಿಯನ್ನೂ ಶಿವಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಪ್ರತಿ ಗುರುವಾರ ಶಿವಲಿಂಗಕ್ಕೆ ಕಡಲೆಕಾಳು ಮತ್ತು ಕಡಲೆಹಿಟ್ಟಿನ ಲಡ್ಡುಗಳನ್ನು ಅರ್ಪಿಸಿ.

ಶುಕ್ರವಾರದಂದು ಶುಕ್ರನ ಆರಾಧನೆ: ಜಾತಕದಲ್ಲಿ ಶುಕ್ರನು ಬಲಿಷ್ಠನಾಗಿದ್ದರೆ ಸಾಂಸಾರಿಕ ಸುಖ, ಕೀರ್ತಿ, ಸಂಪತ್ತು, ಸುಖೀ ದಾಂಪತ್ಯ ಜೀವನ ದೊರೆಯುತ್ತದೆ. ಶುಕ್ರವಾರದಂದು ಶುಕ್ರನನ್ನು ಆರಾಧಿಸಿ. ಈ ದಿನ ಮುಂಜಾನೆ ಬೇಗ ಎದ್ದು ಶುಭ್ರವಾದ ಬಟ್ಟೆಗಳನ್ನು ಧರಿಸಿ ಶುಕ್ರನ ರೂಪದಲ್ಲಿರುವ ಶಿವನನ್ನು ಪೂಜಿಸಿ ಬಿಳಿ ಸಿಹಿ ಮತ್ತು ಬಿಳಿ ಹೂವುಗಳನ್ನು ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಶುಕ್ರನು ಶಾಂತನಾಗುತ್ತಾನೆ.

ಶನಿವಾರ ಶನಿ ಪೂಜೆ: ಪ್ರತಿ ಶನಿವಾರ ಗ್ರಹಗಳ ಅಧಿಪತಿ.. ಕರ್ಮದ ಅಧಿಪತಿಯನ್ನು ಆರಾಧಿಸಿ. ಶನೀಶ್ವರನಿಗೆ ಎಣ್ಣೆಯನ್ನು ಅರ್ಪಿಸಿ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಿ. ಹನುಮಂತನನ್ನು ಪೂಜಿಸುವುದರಿಂದ ಶನಿಯು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯಿದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Fri, 13 October 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ