
ಹಿಂದೂ ಧರ್ಮದ ಪ್ರಕಾರ ಕಾಲಿಗೆ ಚಿನ್ನದ ಆಭರಣ ಹಾಕುವುದು ಅಶುಭ ಎಂಬ ನಿಯಮ ಇದೆ. ಇದರ ಹಿಂದೆ ಧಾರ್ಮಿಕ ಕಾರಣದ ಜತೆಗೆ ವೈಜ್ಞಾನಿಕ ಕಾರಣ ಕೂಡಾ ಇದೆ. ಹೀಗಾಗಿ, ಮಹಿಳೆಯರು ಹೆಚ್ಚಾಗಿ ಬೆಳ್ಳಿ ಕಾಲುಂಗುರ, ಕಾಲ್ಗೆಜ್ಜೆಗಳನ್ನೇ ಧರಿಸುವುದು. ಚಿನ್ನವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ಅದನ್ನು ಸೊಂಟದ ಕೆಳಗೆ ಧರಿಸುವುದು ಸೂಕ್ತವಲ್ಲ. ಪಾದಗಳಿಗೆ ಚಿನ್ನ ಧರಿಸುವುದು ಲಕ್ಷ್ಮಿಗೆ ಅಗೌರವ ಎಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ಪಾದಗಳಿಗೆ ಚಿನ್ನದ ಕಾಲ್ಗೆಜ್ಜೆ ಅಥವಾ ಬೆರಳಿನ ಉಂಗುರಗಳನ್ನು ಧರಿಸುವುದು ಅಶುಭ. ಇವುಗಳನ್ನು ಧರಿಸುವುದರಿಂದ ಸಂಪತ್ತು ನಷ್ಟ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಉಂಟಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಇದಲ್ಲದೇ ಕಾಲಿಗೆ ಚಿನ್ನದ ಆಭರಣಗಳನ್ನು ಧರಿಸುವುದು ನಕಾರಾತ್ಮಕತೆಯ ಸಂಕೇತ. ಸಾಕಷ್ಟು ಜನರು ಕಾಲಿಗೆ ಚಿನ್ನದ ಆಭರಣಗಳನ್ನು ಧರಿಸುವುದರಿಂದ ದುಷ್ಟ ಶಕ್ತಿಗಳಿಂದ ತೊಂದರೆ ಉಂಟಾಗುತ್ತದೆ ಎಂದು ನಂಬುತ್ತಾರೆ.
ಇದನ್ನೂ ಓದಿ: ಮದುವೆಯಲ್ಲಿ ಹೆಚ್ಚಾಗಿ ವಧು ಕೆಂಪು ಬಣ್ಣದ ಸೀರೆ ಉಡೋದು ಯಾಕೆ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಕೆಲವು ಯುವತಿಯರು ಫ್ಯಾಷನ್ ಗಾಗಿ ಚಿನ್ನದ ಕಾಲ್ಗೆಜ್ಜೆಗಳನ್ನು ಧರಿಸುತ್ತಾರೆಯಾದರೂ, ಜ್ಯೋತಿಷ್ಯರು ಸೊಂಟದಿಂದ ಕೆಳಗೆ ಚಿನ್ನ ಧರಿಸುವುದು ಅಶುಭದ ಸೂಚನೆ ಎಂದು ಸಲಹೆ ನೀಡುತ್ತಾರೆ. ಆದ್ದರಿಂದ ಕಾಲಿಗೆ ಚಿನ್ನದ ಆಭರಣಗಳ ಬದಲಾಗಿ ಬೆಳ್ಳಿಯ ಆಭರಣಗಳನ್ನು ಧರಿಸುವುದು ಉತ್ತಮ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 am, Wed, 17 December 25