Sign In

By signing in or creating an account, you agree with Associated Broadcasting Company's Terms & Conditions and Privacy Policy.

Masa Shivaratri: ಪ್ರತಿ ತಿಂಗಳು ಶಿವರಾತ್ರಿ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಹತ್ವದ ನಾನಾ ಕತೆಗಳು

ಶಿವ ಒಮ್ಮೆ ಕೋಪಗೊಂಡನು. ಅದರಿಂದ ಲೋಕ ನಾಶವಾಗುವ ಅಪಾಯವಿತ್ತು. ಆಗ ಪಾರ್ವತಿಯು ಶಿವನನ್ನು ಸ್ತುತಿಸಿ ಸಂತುಷ್ಟಳಾದಳು. ಇದರಿಂದ ಶಿವನ ಕೋಪ ಶಮನವಾಯಿತು. ಈ ನಂಬಿಕೆಯಿಂದಾಗಿ ಪ್ರತಿ ತಿಂಗಳು ಕೃಷ್ಣ ಪಕ್ಷ ಚತುರ್ಥಿಯಂದು ಮಾಸ ಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ.

Masa Shivaratri: ಪ್ರತಿ ತಿಂಗಳು ಶಿವರಾತ್ರಿ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಹತ್ವದ ನಾನಾ ಕತೆಗಳು
ಪಾರ್ವತಿ ದೇವಿಯು ಶಿವ ಸ್ತೋತ್ರವನ್ನು ಪಠಿಸಿದ ದಿನ
Follow us
ಸಾಧು ಶ್ರೀನಾಥ್​
|

Updated on: Jul 03, 2024 | 6:06 AM

ಹಿಂದೂ ಧರ್ಮದಲ್ಲಿ ಮಾಸ ಶಿವರಾತ್ರಿ ಹಬ್ಬವನ್ನು ಪ್ರತಿ ತಿಂಗಳು ಕೃಷ್ಣ ಪಕ್ಷ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಶಿವರಾತ್ರಿಯ ಹಬ್ಬವು ಶಿವ ಪಾರ್ವತಿಯರಿಗೆ ಸಮರ್ಪಿತವಾಗಿದೆ. ಭಗವಾನ್ ಶಿವ ಮತ್ತು ಪಾರ್ವತಿಯ ಆಶೀರ್ವಾದವನ್ನು ಪಡೆಯಲು ಭಕ್ತರು ಈ ದಿನದಂದು ಪೂರ್ಣ ವಿಧಿವಿಧಾನಗಳು ಮತ್ತು ಭಕ್ತಿಪೂರ್ವಕ ಉಪವಾಸದಿಂದ ಆದಿ ದಂಪತಿಗಳನ್ನು ಪೂಜಿಸುತ್ತಾರೆ. ಮಾಸ ಶಿವರಾತ್ರಿಯನ್ನು ಗುರುವಾರ 4ನೇ ಜುಲೈ 2024 ರಂದು ಜೇಷ್ಠ ಮಾಸದಲ್ಲಿ ಆಚರಿಸಲಾಗುತ್ತದೆ. ಆದರೆ ಮಾಸ ಶಿವರಾತ್ರಿಯನ್ನು ಏಕೆ ಆಚರಿಸಲಾಗುತ್ತದೆ ಎಂಬುದಕ್ಕೆ ಅನೇಕ ದಂತಕಥೆಗಳು ಪ್ರಚಲಿತದಲ್ಲಿವೆ. ಅವು ಯಾವುವು ಎಂಬುದನ್ನು ಇಂದು ತಿಳಿದುಕೊಳ್ಳೋಣ.

ಮಾಸ ಶಿವರಾತ್ರಿ ಹಬ್ಬವನ್ನು ಆಚರಿಸುವುದರ ಹಿಂದೆ ಕೆಲವು ಪೌರಾಣಿಕ ಕಥೆಗಳು

ಶಿವನ ಮದುವೆ ಪುರಾಣಗಳ ಪ್ರಕಾರ ಶಿವ ಪಾರ್ವತಿಯರ ವಿವಾಹವನ್ನು ಸಂಕೇತಿಸಲು ಮಾಸ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಶಿವನು ಪಾರ್ವತಿಯನ್ನು ತನ್ನ ಹೆಂಡತಿಯಾಗಿ ವರಿಸಿದನು ಎಂಬುದು ನಂಬಿಕೆ.

Also Read: Maa Durga Gupt Navratri -ಆಷಾಢದಲ್ಲಿ ಗುಪ್ತ ನವರಾತ್ರಿ- ದುರ್ಗಾ ದೇವಿ ಪೂಜೆಗೆ ಮುಹೂರ್ತ ಯಾವಾಗ?

ಸಮುದ್ರ ಮಂಥನ ಇನ್ನೊಂದು ದಂತಕಥೆಯ ಪ್ರಕಾರ ಸಮುದ್ರ ಮಂಥನವು ಚತುರ್ಥಿ ತಿಥಿಯ ದಿನದಂದು ಅಂದರೆ ಮಾಸ ಶಿವರಾತ್ರಿಯ ದಿನದಂದು ಪ್ರಾರಂಭವಾಯಿತು. ಇಂದಿನಿಂದ ದೇವತೆಗಳು ಮತ್ತು ರಾಕ್ಷಸರು ಒಟ್ಟಾಗಿ ಸಮುದ್ರದಿಂದ ಅಮೃತಕ್ಕಾಗಿ ಮಂಥನ ಮಾಡಲು ಪ್ರಾರಂಭಿಸಿದರು ಎಂದು ನಂಬಲಾಗಿದೆ.

ಪಾರ್ವತಿ ದೇವಿಯು ಶಿವ ಸ್ತೋತ್ರವನ್ನು ಪಠಿಸಿದ ದಿನ ಮತ್ತೊಂದು ಪೌರಾಣಿಕ ಕಥೆಯೆಂದರೆ ಶಿವನು ಒಮ್ಮೆ ಕೋಪಗೊಂಡನು. ಆಗ ಶಿವನ ಕ್ರೋಧದಿಂದ ಲೋಕ ನಾಶವಾಗುವ ಅಪಾಯವಿತ್ತು. ಆಗ ಪಾರ್ವತಿ ದೇವಿಯು ಶಿವನನ್ನು ಸ್ತುತಿಸಿ ಸಂತುಷ್ಟಳಾದಳು. ಇದರಿಂದ ಶಿವನ ಕೋಪ ಶಮನವಾಯಿತು. ಈ ನಂಬಿಕೆಯಿಂದಾಗಿ ಪ್ರತಿ ತಿಂಗಳು ಕೃಷ್ಣ ಪಕ್ಷ ಚತುರ್ಥಿಯಂದು ಮಾಸ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.

Also Read: ಬುಧವಾರ ಪ್ರದೋಷ ವ್ರತ – ಈ 5 ವಸ್ತುಗಳ ದಾನ ಮಾಡಿ.. ಶಿವ ಪಾರ್ವತಿಯರ ಕೃಪೆ ನಿಮಗೆ ಲಭಿಸುತ್ತದೆ

ಶಿವನ ತಾಂಡವ ನೃತ್ಯ ಶಿವರಾತ್ರಿಯ ಮಾಸವನ್ನು ಶಿವನ ತಾಂಡವ ನೃತ್ಯದ ಸಂಕೇತವೆಂದು ಪರಿಗಣಿಸಲಾಗಿದೆ ಎಂದು ಕೆಲವು ದಂತಕಥೆಗಳು ಹೇಳುತ್ತವೆ. ಈ ದಿನದಂದು ಶಿವನು ವಿಶ್ವವನ್ನು ನಾಶಪಡಿಸುತ್ತಾನೆ ಮತ್ತು ಅದನ್ನು ಮರುಸೃಷ್ಟಿಸುತ್ತಾನೆ ಎಂದು ನಂಬಲಾಗಿದೆ.

ಮೋಕ್ಷದ ಸಾಧನೆ ಮಾಸ ಶಿವರಾತ್ರಿಯು ಮೋಕ್ಷವನ್ನು ಪಡೆಯುವ ಅವಕಾಶವೆಂದು ಪರಿಗಣಿಸಲಾಗಿದೆ. ಈ ದಿನ ಶಿವನನ್ನು ಪೂಜಿಸುವ ಭಕ್ತರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.

ಅಹಂಕಾರದ ವಿನಾಶ ಮತ್ತೊಂದು ದಂತಕಥೆಯ ಪ್ರಕಾರ ಒಮ್ಮೆ ವಿಷ್ಣು ಮತ್ತು ಬ್ರಹ್ಮನ ನಡುವೆ ಯಾರು ಶ್ರೇಷ್ಠರು ಎಂಬ ವಿವಾದವಿತ್ತು. ಅವರ ವಿವಾದ ಉಲ್ಬಣಗೊಳ್ಳಲು ಪ್ರಾರಂಭಿಸಿದಾಗ.. ಶಿವನು ಅಗ್ನಿಸ್ತಂಭದ ರೂಪದಲ್ಲಿ ಕಾಣಿಸಿಕೊಂಡನು.. ಬ್ರಹ್ಮ ವಿಷ್ಣುವನ್ನು ಈ ಕಂಬದ ಅಂತ್ಯವನ್ನು ಹುಡುಕಲು ಕೇಳಿದನು. ಆಗ ಇಬ್ಬರಿಗೂ ತಮ್ಮ ತಪ್ಪಿನ ಅರಿವಾಯಿತು. ಅಂದಿನಿಂದ ಮಾಸ ಶಿವರಾತ್ರಿಯ ದಿನ ಶಿವನನ್ನು ಪೂಜಿಸಲು ಆರಂಭಿಸಿದರು. ಇದನ್ನು ಮಾಡುವುದರಿಂದ ಮನುಷ್ಯನ ಅಹಂಕಾರವು ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಪ್ರತಿ ತಿಂಗಳು ಶಿವರಾತ್ರಿಯ ಹಬ್ಬವನ್ನು ಆಚರಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !