AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Vs Australia Test Cricket 2020 | ಮೆಲ್ಬರ್ನ್ ಟೆಸ್ಟ್​ಗೆ ಹನುಮ ವಿಹಾರಿ ಸ್ಥಾನದಲ್ಲಿ ರವೀಂದ್ರ ಜಡೇಜಾ?

ಮೊದಲ ಟೆಸ್ಟ್​ನ ಶೋಚನೀಯ ಸೋಲಿನಿಂದ ಕಂಗೆಟ್ಟಿರುವ ಟೀಮ್ ಇಂಡಿಯ ಮೆಲ್ಬರ್ನ್ ಟೆಸ್ಟ್​ಗೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ನಿರ್ಧರಿಸಿದೆ. ಅವುಗಳಲ್ಲಿ ಮುಖ್ಯವಾದದ್ದು ಹನುಮ ವಿಹಾರಿ ಸ್ಥಾನದಲ್ಲಿ ರವೀಂದ್ರ ಜಡೇಜಾ ಅವರನ್ನು ಆಡಿಸುವುದು.

India Vs Australia Test Cricket 2020 | ಮೆಲ್ಬರ್ನ್ ಟೆಸ್ಟ್​ಗೆ ಹನುಮ ವಿಹಾರಿ ಸ್ಥಾನದಲ್ಲಿ ರವೀಂದ್ರ ಜಡೇಜಾ?
ರವೀಂದ್ರ ಜಡೇಜಾ
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 21, 2020 | 9:30 PM

Share

ಅಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ತಲೆಗೆ ಪೆಟ್ಟು ತಿಂದು ಕನ್ಕಶನ್​ಗೊಳಗಾಗಿದ್ದ ಭಾರತದ ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನು ಮೆಲ್ಬರ್ನ್​ನಲ್ಲಿ ನಡೆಯುವ ಎರಡನೆ ಟೆಸ್ಟ್​ನಲ್ಲಿ ಆಡಿಸುವ ಬಗ್ಗೆ ಟೀಮ್ ಇಂಡಿಯಾದ ಥಿಂಕ್ ಟ್ಯಾಂಕ್ ಗಂಭೀರ ಚಿಂತನೆ ನಡೆಸಿದೆ. ತೊಡೆನೋವಿನ ಸಮಸ್ಯೆಯನ್ನೂ ಅನುಭವಿಸುತ್ತಿದ್ದ ಜಡೇಜಾ ನೆಟ್ಸ್​​ನಲ್ಲಿ ಭಾಗಿಯಾಗುತ್ತಿರುವರಾದರೂ ಶೇಕಡಾ ನೂರರಷ್ಟು ಫಿಟ್ ಆದಲ್ಲಿ ಮಾತ್ರ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕ್ರಿಸ್​ಮಸ್​ಗೆ ಮೊದಲು ಜಡೇಜಾ ಸಂಪೂರ್ಣವಾಗಿ ಚೇತರಿಸಿಕೊಂಡರೆ ಅವರನ್ನು ಹನುಮ ವಿಹಾರಿ ಸ್ಥಾನದಲ್ಲಿ ಆಡಿಸಲಾಗುವುದು. ಒಬ್ಬ ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​ನನ್ನು ಆಲ್​ರೌಂಡರ್ ರಿಪ್ಲೇಸ್ ಮಾಡುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಟೀಮಿನ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ಕೈ ಮೂಳೆ ಮುರಿದುಕೊಂಡು ಸರಣಿಯಿಂದ ಹೊರಬಿದ್ದಿರುವುದರಿಂದ ಭಾರತ ತನ್ನ ನಾಲ್ಕು ಬೌಲರ್​ಗಳ ಪಾಲಿಸಿಯನ್ನು ಬದಲಾಯಿಸಿ ಐದು ಬೌಲರ್​ಗಳನ್ನು ಆಡಿಸುವ ನಿರ್ಧಾರಕ್ಕೆ ಬಂದಿದೆ.

ಹಾಗೆ ನೋಡಿದರೆ, ಟೆಸ್ಟ್​ಗಳಲ್ಲಿ ಜಡೇಜಾ ಅವರ ಬ್ಯಾಟಿಂಗ್ ಪ್ರದರ್ಶನ ವಿಹಾರಿಗಿಂತ ಸ್ವಲ್ಪ ಚೆನ್ನಾಗಿದೆ. ಇದುವರೆಗೆ 49 ಟೆಸ್ಟ್​ಗಳನ್ನಾಡಿರುವ ಜದ್ದು, 35ರ ಸರಾಸರಿಯಲ್ಲಿ 1,869 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 14 ಅರ್ಧ ಶತಕಗಳು ಸೇರಿವೆ. ಗಮನಿಸಬೇಕಿರುವ ಅಂಶವೇನೆಂದರೆ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್​ ನೆಲೆಗಳ ಮೇಲೆ ಅವರು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಹನುಮ ವಿಹಾರಿ

10 ಟೆಸ್ಟ್​ಗಳನ್ನಾಡಿರುವ ವಿಹಾರಿ ಒಂದು ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 33ರ ಸರಾಸರಿಯಲ್ಲಿ 576 ರನ್ ಶೇಖರಿಸಿದ್ದಾರೆ.

‘ಜಡೇಜಾ ಸುದೀರ್ಘ ಸ್ಪೆಲ್​ಗಳನ್ನು ಬೌಲ್ ಮಾಡುವಷ್ಟು ಫಿಟ್ ಆದರೆ, ಚರ್ಚೆಯೇ ಉದ್ಭವಿಸುವುದಿಲ್ಲ. ನಿಶ್ಚಿತವಾಗಿಯೂ ವಿಹಾರಿ ಸ್ಥಾನದಲ್ಲಿ ಜಡೇಜಾ ಆಡುತ್ತಾರೆ. ಮೆಲ್ಬರ್ನ್ ಮೈದಾನದಲ್ಲಿ ಐವರು ಬೌಲರ್​ಗಳನ್ನು ಆಡಿಸುವ ಅವಕಾಶ ನಮಗೆ ಲಭ್ಯವಾಗುತ್ತದೆ’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಡಿಲೇಡ್ ಮೈದಾನದಲ್ಲಿ ಟೀಮ್ ಇಂಡಿಯಾ

ಏತನ್ಮಧ್ಯೆ, ಮಂಗಳವಾರದಂದು ಭಾರತಕ್ಕೆ ವಾಪಸ್ಸಾಗಲಿರುವ ವಿರಾಟ್ ಕೊಹ್ಲಿ ಇಂದು ಭಾರತೀಯ ಆಟಗಾರರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದರೆಂದು ಗೊತ್ತಾಗಿದೆ. ಮಳೆಯ ಕಾರಣ ಭಾರತದ ಆಟಗಾರರು ಅಭ್ಯಾಸಕ್ಕಾಗಿ ತೆರಳದೆ ತಮ್ಮ ರೂಮುಗಳಲ್ಲಿ ಉಳಿದುಬಿಟ್ಟಿದ್ದರು.

Published On - 9:06 pm, Mon, 21 December 20

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು