Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ಮೊಟೆರಾದ ಪಿಚ್ ಅನ್ನು ಅಕ್ಷರ್ ಪಟೇಲ್​ರಂತೆ ಇಂಗ್ಲೆಂಡ್​ನ ಜ್ಯಾಕ್ ಲೀಚ್ ಅರ್ಥ ಮಾಡಿಕೊಳ್ಳಲಿಲ್ಲ: ತೆಂಡೂಲ್ಕರ್

ಇಂಗ್ಲೆಂಡ್​ನ ಥಿಂಕ್ ಟ್ಯಾಂಕ್ ತಾವು ಭಾರತದಲ್ಲಿ ಆಡುತ್ತಿರುವ ಅಂಶವನ್ನೇ ಮರೆತು ಕೇವಲ ಒಬ್ಬ ರೆಗ್ಯುಲರ್ ಸ್ಪಿನ್ನರ್​ನೊಂದಿಗೆ (ಜ್ಯಾಕ್ ಲೀಚ್) ಆಡುವ ನಿರ್ಧಾರ ತೆಗೆದುಕೊಂಡಿತು. ಹಾಗೆ ನೋಡಿದರೆ, ರೂಟ್ ಅವರು ಯಶ ಕಂಡಿದ್ದು ಅವರ ಮತ್ತು ಇಂಗ್ಲೆಂಡ್ ಟೀಮಿನ ಅದೃಷ್ಟವೆಂದೇ ಹೇಳಬೇಕು.

India vs England Test Series: ಮೊಟೆರಾದ ಪಿಚ್ ಅನ್ನು ಅಕ್ಷರ್ ಪಟೇಲ್​ರಂತೆ ಇಂಗ್ಲೆಂಡ್​ನ ಜ್ಯಾಕ್ ಲೀಚ್ ಅರ್ಥ ಮಾಡಿಕೊಳ್ಳಲಿಲ್ಲ: ತೆಂಡೂಲ್ಕರ್
ಅಕ್ಷರ್ ಪಟೇಲ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 27, 2021 | 7:11 PM

ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಕುರಿತು ಮಾತಾಡುತ್ತಿದ್ದರೆ ಉಳಿದವರು ನಿಶ್ಶಬ್ದವಾಗಿ ಕೇಳಿಸಿಕೊಳ್ಳುತ್ತಾರೆ. ಯಾಕೆಂದರೆ ಅವರಾಡುವ ಮಾತು, ಮಾಡುವ ಟೀಕೆ ಹಾಗೂ ಕಾಮೆಂಟ್​ಗಿರುವ ತೂಕವೇ ಬೇರೆ. ಮಾಜಿ ಮತ್ತು ಹಾಲಿ ಆಟಗಾರರೆಲ್ಲ ಮೊಟೆರಾದ ಪಿಚ್​ ಬಗ್ಗೆ ಮಾತಾಡುತ್ತಿದ್ದರೆ ಸಚಿನ್ ಮಾತ್ರ, ಭಾರತದ ಸ್ಪಿನ್ ಬೌಲರ್​ಗಳು ಮತ್ತು ಇಂಗ್ಲೆಂಡ್ ಸ್ಕಿಪ್ಪರ್ ಜೋ ರೂಟ್ ಆ ಪಿಚ್​​ನಲ್ಲಿ ಯಾಕೆ ಯಶ ಕಂಡರು ಅನ್ನುವುದನ್ನು ವಿಶ್ಲೇಷಿಸಿದ್ದಾರೆ. ಭಾರತದ ಸ್ಪಿನ್ ತ್ರಿವಳಿ- ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಮೂರನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್​ನ 20 ವಿಕೆಟ್​ಗಳ ಪೈಕಿ 19 ವಿಕೆಟ್​ಗಳನ್ನು ಕಬಳಿಸಿದರು. ಒಂದು ವಿಕೆಟ್​ ಮಾತ್ರ ವೇಗದ ಬೌಲರ್ ಇಶಾಂತ್ ಶರ್ಮ ಅವರ ಪಾಲಾಯಿತು. ಸಚಿನ್ ಅವರ ಅಭಿಪ್ರಾಯದ ಪ್ರಕಾರ ಇಂಗ್ಲೆಂಡ್ ಕೇವಲ ಒಬ್ಬ ಸ್ಪಿನ್ನರ್​ನೊಂದಿಗೆ ಕಣಕ್ಕಿಳಿದಿದ್ದು ದೊಡ್ಡ ಪ್ರಮಾದ. ಮೋಯಿನ್ ಅಲಿ ಇಲ್ಲವೇ ಡಾಮ್ ಬೆಸ್ ಅವರನ್ನು ಆಡಿಸಬೇಕಿತ್ತು ಅಂತ ಅವರು ಹೇಳಿದ್ದಾರೆ.

ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ ಮೊಟೆರಾ ಟೆಸ್ಟ್ ಪಂದ್ಯದಲ್ಲಿ ಪಟೇಲ್ 11, ಅಶ್ವಿನ್ 7 ಮತ್ತು ಸುಂದರ್ 1 ವಿಕೆಟ್ ಪಡೆದರು. ಭಾರತದ ಟೀಮ್ ಮ್ಯಾನೇಜ್ಮೆಂಟ್​ಗೆ ಮೊದಲ ದಿನದಿಂದಲೇ ಪಿಚ್ ಸ್ಪಿನ್ನರ್​ಗಳಿಗೆ ನೆರವಾಗುವ ಅಂಶ ಗೊತ್ತಿತ್ತು. ಆದರೆ, ಇಂಗ್ಲೆಂಡ್​ನ ಥಿಂಕ್ ಟ್ಯಾಂಕ್ ತಾವು ಭಾರತದಲ್ಲಿ ಆಡುತ್ತಿರುವ ಅಂಶವನ್ನೇ ಮರೆತು ಕೇವಲ ಒಬ್ಬ ರೆಗ್ಯುಲರ್ ಸ್ಪಿನ್ನರ್​ನೊಂದಿಗೆ (ಜ್ಯಾಕ್ ಲೀಚ್) ಆಡುವ ನಿರ್ಧಾರ ತೆಗೆದುಕೊಂಡಿತು. ಹಾಗೆ ನೋಡಿದರೆ, ರೂಟ್ ಅವರು ಯಶ ಕಂಡಿದ್ದು ಅವರ ಮತ್ತು ಇಂಗ್ಲೆಂಡ್ ಟೀಮಿನ ಅದೃಷ್ಟವೆಂದೇ ಹೇಳಬೇಕು.

2004ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯ ಕ್ರಿಕೆಟ್​ ಪ್ರೇಮಿಗಳಿಗೆ ನೆನೆಪಿರಬಹುದು. ಆ ಪಂದ್ಯದಲ್ಲಿ ಪ್ರವಾಸಿ ತಂಡದ ಮತ್ತು ರೆಗ್ಯುಲರ್ ಬೌಲರ್ ಅಗಿರದ ಮೈಕೆಲ್ ಕ್ಲಾರ್ಕ್​ ಭಾರತದ ಎರಡನೇ ಇನ್ನಿಂಗ್ಸ್​ನಲ್ಲಿ 9ರನ್​ಗಳಿಗೆ 6 ವಿಕೆಟ್​ ಪಡೆದರು. ಈ ಅಂಶವನ್ನು ಉಲ್ಲೇಖಿಸುವ ಕಾರಣವೆಂದರೆ ಇಂಥ ಪವಾಡಗಳು ಕ್ರಿಕೆಟ್​ ಮೈದಾನದಲ್ಲಿ ಅಗಾಗ ಸಂಭವಿಸುತ್ತಿರುತ್ತವೆ.

ಅಕ್ಸರ್ ಪಟೇಲ್ ಮೊಟೆರಾ ಮೈದಾನದಲ್ಲಿ ಆ ಪರಿ ಯಶಕಾಣಲು ಕಾರಣವೇನು ಅನ್ನುವುದನ್ನು ಸಚಿನ್ ವಿವರಿಸಿದ್ದಾರೆ. ಪಟೇಲ್, ಸಾಮಾನ್ಯವಾಗಿ ಎಡಗೈ ಸ್ಪಿನ್ನರ್​ಗಳು ಮಾಡುವ ಹಾಗೆ ಚೆಂಡನ್ನು ಗಾಳಿಯಲ್ಲಿ ತೂರಿ ಓವರ್​ಪಿಚ್​ ಎಸೆತ ಬೌಲ್ ಮಾಡುವ ಬದಲು ಅದಕ್ಕೆ ತದ್ವಿರುದ್ಧವಾದ ಎಸೆತಗಳನ್ನು ಬೌಲ್ ಮಾಡಿದ್ದು ಅವರ ಪ್ರಚಂಡ ಯಶಸ್ಸಿಗೆ ಕಾರಣವಾಯಿತು ಅಂತ ಸಚಿನ್ ತಮ್ಮ ಯೂಟ್ಯೂಬ್ ಚ್ಯಾನಲ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊವೊಂದರಲ್ಲಿ ಹೇಳಿದ್ದಾರೆ.

Jack Leach and Joe Root

ಜ್ಯಾಕ್ ಲೀಚ್ ಮತ್ತು ಜೋ ರೂಟ್

‘ಒಬ್ಬ ಎಡಗೈ ಸ್ಪಿನ್ನರ್ ಬಲಗೈ ಬ್ಯಾಟ್ಸ್​ಮನ್​ಗೆ ಬೌಲ್ ಮಾಡುವಾಗ ಸಾಮನ್ಯವಾಗಿ ಅವನು ಆಫ್​ ಸ್ಟಂಪ್​ನಾಚೆ ಚೆಂಡನ್ನು ಪಿಚ್​ ಮಾಡುವುದಿಲ್ಲ. ಅವನಿಗೆ ಎಸೆತದ ಲೆಂಗ್ತ್ ಮುಖ್ಯವಾಗಿರುತ್ತದೆ ನಿಜ ಆದರೆ ಅದಕ್ಕಿಂತಲೂ ಮುಖ್ಯವಾದದ್ದು ಅವನು ಎಸೆಯಯವ ಲೈನ್. ಹಾಗಾಗಿ, ಎಡಗೈ ಸ್ಪಿನ್ನರ್ ಒಬ್ಬ ಬಲಗೈ ಬ್ಯಾಟ್ಸ್​ಮನ್​ಗೆ ಅಫ್ ಇಲ್ಲವೇ ಮಿಡ್ಲ್​ ಸ್ಟಂಪ್ ಲೈನ್​ನಲ್ಲಿ ಬೌಲ್ ಮಾಡುತ್ತಾನೆ. ಎಸೆತಗಳನ್ನು ಆಡಲೇಬಾಕಾದ ಅನಿವಾರ್ಯತೆಯನ್ನು ಬ್ಯಾಟ್ಸ್​ಮನ್​ಗೆ ಸೃಷ್ಟಿಸುತ್ತಾನೆ,’ ಎಂದು ಸಚಿನ್ ಹೇಳಿದ್ದಾರೆ.

ಒಂದು ಪಕ್ಷ ಬಾಲು ತಿರುವು ತೆಗೆದುಕೊಳ್ಳತ್ತಿದ್ದರೂ ಬ್ಯಾಟ್ಸ್​ಮನ್ ಆ ಎಸೆತಗಳನ್ನು ಆಡಲೇಬೇಕಾಗುತ್ತದೆ. ಯಾಕೆಂದರೆ ಕೆಲ ಎಸೆತಗಳು ಒಳಕ್ಕೆ ತಿರುಗಿಬಿಡುತ್ತವೆ ಇಲ್ಲವೇ ನೇರವಾಗಿ ಬಂದುಬಿಡುತ್ತವೆ. ಇಂಗ್ಲೆಂಡ್​ನ ಕೆಲ ಬ್ಯಾಟ್ಸ್​ಮನ್​ಗಳು ಪಟೇಲ ಅವರ ಎಸೆತಗಳನ್ನು ಲೈನ್​ನಿಂದ ಕೊಂಚ ಆಚೆ ಆಡಲು ಪ್ರಯತ್ನಿಸಿದರು ಇನ್ನೂ ಕೆಲವರು ಸ್ಪಿನ್ ಕವರ್​ಮಾಡಲು ಪ್ರಯತ್ನಿಸಿದರು. ಹಾಗೆ ಕವರ್ ಮಾಡಲು ಪ್ರಯತ್ನಿದವರು ಎಲ್​ ಬಿ ಬಲೆಗೆ ಬಿದ್ದರು ಇಲ್ಲವೆ ಬೌಲ್ಡ್​ ಅದರು,’ ಎಂದು ಸಚಿನ್ ಹೇಳಿದ್ದಾರೆ.

ರೂಟ್ ಪ್ರವಾಸಿ ತಂಡದ ಪರ ಅನಿರೀಕ್ಷಿತ ಹಿರೋ ಆಗಿದ್ದು ಅವರು ಪಟೇಲ್ ವಿಧಾನವನ್ನು ಅನುಸರಿಸಿದ್ದರಿಂದ ಎಂದು ಸಚಿನ್ ಹೇಳುತ್ತಾರೆ. ನಿಮಗೆ ಆಶ್ಚರ್ಯವಾಗಬಹುದು. ಪ್ರಥಮ ದರ್ಜೆ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಅವರು 5 ವಿಕೆಟ್​ ಪಡೆಯುವ ಸಾಧನೆ ಮಾಡಿದ್ದು. ರೂಟ್​ ಅನುಸರಿಸಿದ ಮಾರ್ಗ ಲೀಚ್​ ಬೌಲಂಗ್​ನಲ್ಲಿ ಕಾಣಲಿಲ್ಲ ಎಂದು ಲಿಟ್ಲ್ ಮಾಸ್ಟರ್ ಹೇಳುತ್ತಾರೆ.

‘ಒಬ್ಬ ಎಡಗೈ ಸ್ಪಿನ್ನರ್​ಗೆ ವೇಗ, ಪಥ ಮತ್ತು ಕೋನ ಬಹಳ ಮುಖ್ಯವಾಗುತ್ತವೆ. ಮೊಟೆರಾದ ಅಂಕಣ ಚೆಂಡನ್ನು ಗಾಳಿಯಲ್ಲಿ ತೂರಿಬಿಟ್ಟು ಬ್ಯಾಟ್ಸ್​ಮನ್​ನನ್ನು ವಂಚಿಸಿ ವಿಕೆಟ್ ಪಡೆಯುವಂಥದ್ದಾಗಿರಲಿಲ್ಲ. ಪಿಚ್ ಸ್ಪಿನ್​ ಬೌಲಿಂಗ್​ಗೆ ನೆರವಾಗುತ್ತಿದ್ದರೆ, ಬ್ಯಾಟ್ಸ್​ಮನ್​ಗೆ ಸೆಟ್ಲ್​ ಅಗಲು ಸಮಯ ಮತ್ತು ಅವಕಾಶವನ್ನು ನೀಡಬಾರದು,’ ಎಂದು ಸಚಿನ್ ಹೇಳಿದ್ದಾರೆ.

‘ಮೊಟೆರಾ ಪಿಚ್​ ಕಂಡೀಷನ್​ ಅನ್ನು ಪಟೇಲ್ ಅದ್ಭುತವಾಗಿ ಉಪಯೋಗಿಸಿಕೊಂಡರು. ನಾನಿಲ್ಲಿ ಎಡಗೈ ಸ್ಪಿನ್ನರ್​ಗಳ ಬಗ್ಗೆ ಮಾತಾಡುತ್ತಿರುವುದರಿಂದ, ಜ್ಯಾಕ್ ಲೀಚ್ ಅವರಲ್ಲಿ ಅಂಥ ಪ್ರಯತ್ನ ಕಂಡುಬರಲಿಲ್ಲ. ಅವರು ಚೆಂಡಿಗೆ ಫ್ಲೈಟ್​ ನೀಡುವ ಪ್ರಯತ್ನ ಮಾಡಿದರು. ಆದರೆ ಮೊಟೆರಾದಂಥ ಪಿಚ್​ನಲ್ಲಿ ಬಾಲನ್ನು ಗಾಳಿಯಲ್ಲಿ ತೂರಿಬಿಟ್ಟರೆ ಯಶ ಸಿಗುವುದಿಲ್ಲ,’ ಎಂದು ಸಚಿನ್ ಹೇಳಿದ್ದಾರೆ.

ಇದನ್ನೂ ಓದಿIndia vs England Test Series | ಪಿಚ್​ ನಿರ್ದಿಷ್ಟವಾಗಿ ಹೀಗೆಯೇ ತಯಾರಿಸಬೇಕೆಂಬ ನಿಯಮ ಎಲ್ಲಿದೆ: ಜೆಫ್ರಿ ಬಾಯ್ಕಾಟ್

Published On - 4:32 pm, Sat, 27 February 21

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ