AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಿಂಗ್ ಎಕ್ಸ್​ಪ್ರೆಸ್ ಹಿಮಾ ದಾಸ್​ಗೆ ಒಲಿಯಿತು ಪೊಲೀಸ್ ಉಪ ಅಧೀಕ್ಷಕಿ ಪಟ್ಟ: ತಾಯಿಯ ಕನಸು ನನಸಾಯಿತು ಎಂದ ಹಿಮಾ

ಸ್ಟಾರ್ ಅಥ್ಲೀಟ್ ಹಿಮಾ ದಾಸ್ ಅವರನ್ನು ಶುಕ್ರವಾರ ಅಸ್ಸಾಂ ಸರ್ಕಾರ ಪೊಲೀಸ್ ಉಪ ಅಧೀಕ್ಷಕಿಯನ್ನಾಗಿ ನೇಮಕ ಮಾಡಿದೆ. ಪೊಲೀಸ್ ಉಪ ಅಧೀಕ್ಷಕಿಯಾಗಿ ನೇಮಕಗೊಂಡ ಹಿಮಾ ದಾಸ್ ಇಂದು ನನ್ನ ಬಾಲ್ಯದ ಕನಸು ನನಸಾಗಿದೆ ಎಂದು ಬಣ್ಣಿಸಿದರು.

ಧಿಂಗ್ ಎಕ್ಸ್​ಪ್ರೆಸ್ ಹಿಮಾ ದಾಸ್​ಗೆ ಒಲಿಯಿತು ಪೊಲೀಸ್ ಉಪ ಅಧೀಕ್ಷಕಿ ಪಟ್ಟ: ತಾಯಿಯ ಕನಸು ನನಸಾಯಿತು ಎಂದ ಹಿಮಾ
ಹಿಮಾ ದಾಸ್
ಪೃಥ್ವಿಶಂಕರ
| Edited By: |

Updated on:Mar 01, 2021 | 9:39 PM

Share

ಸ್ಟಾರ್ ಅಥ್ಲೀಟ್ ಹಿಮಾ ದಾಸ್ ಅವರನ್ನು ಅಸ್ಸಾಂ ಸರ್ಕಾರವು ಇತ್ತೀಚೆಗೆ ಪೊಲೀಸ್ ಉಪ ಅಧೀಕ್ಷಕಿಯನ್ನಾಗಿ ನೇಮಕ ಮಾಡಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ​ ಸೊನೊವಾಲ್​ ಹಾಗೂ ಕೇಂದ್ರದಲ್ಲಿ ಕ್ರೀಡಾ ಸಚಿವರಾಗಿರುವ ಕಿರಣ್ ರಿಜಿಜು ಅವರು ನೇಮಕಾತಿ ಪತ್ರವನ್ನು ಹಿಮಾ ಅವರಿಗೆ ಹಸ್ತಾಂತರಿಸಿದರು. ಗುವಾಹಟಿಯಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯ ಸರ್ಕಾರ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸ್ ಉಪ ಅಧೀಕ್ಷಕಿಯಾಗಿ ನೇಮಕಗೊಂಡ ಹಿಮಾ ದಾಸ್ ಇದರಿಂದ ನನ್ನ ಬಾಲ್ಯದ ಕನಸು ನನಸಾಗಿದೆ ಎಂದು ಬಣ್ಣಿಸಿದ್ದಾರೆ.

ಅಧಿಕಾರ ಸ್ವೀಕರಿಸಿ ಮಾತನಾಡಿದ ಹಿಮಾ, ಬಾಲ್ಯದಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿದ್ದೆ. ಶಾಲಾ ದಿನಗಳಿಂದಲೂ ನಾನು ಪೊಲೀಸ್ ಅಧಿಕಾರಿಯಾಗಲು ಬಯಸಿದ್ದೆ ಮತ್ತು ಅದು ನನ್ನ ತಾಯಿಯ ಕನಸಾಗಿತ್ತು. ದುರ್ಗಾ ಪೂಜೆಯ ಸಮಯದಲ್ಲಿ ನನ್ನ ತಾಯಿ ನನಗೆ ಆಟಿಕೆಯ ಗನ್ ನೀಡುತ್ತಿದ್ದರು. ನಾನು ಅಸ್ಸಾಂ ಪೊಲೀಸ್​ ವಿಭಾಗದಲ್ಲಿ ಸೇವೆ ಸಲ್ಲಿಸಬೇಕು ಮತ್ತು ಒಳ್ಳೆಯ ವ್ಯಕ್ತಿಯಾಗಬೇಕು ಎಂಬುದು ನನ್ನ ತಾಯಿಯ ಕನಸಾಗಿತ್ತು ಎಂದು ಹಿಮಾ ಹೇಳಿಕೊಂಡರು.

ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ವಿಜೇತೆ​ ಹಿಮಾ ಅವರು ಪೊಲೀಸ್ ಕರ್ತವ್ಯದ ಜೊತೆಗೆ ಕ್ರೀಡೆಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುವುದಾಗಿ ಹೇಳಿದರು. ಕ್ರೀಡೆಯಿಂದಾಗಿ ನನಗೆ ಎಲ್ಲವೂ ಸಿಕ್ಕಿದೆ. ನಾನು ರಾಜ್ಯದ ಕ್ರೀಡೆಗಳ ಸುಧಾರಣೆಗಾಗಿ ಕೆಲಸ ಮಾಡುತ್ತೇನೆ ಮತ್ತು ಅಸ್ಸಾಂ ರಾಜ್ಯವನ್ನು ಹರಿಯಾಣದಂತೆ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ಎಂದರು.

ಇದೇ ಸಮಯದಲ್ಲಿ ಮಾತಾನಾಡಿದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಹಿಮಾ ಅವರನ್ನು ಡಿಎಸ್ಪಿಯಾಗಿ ನೇಮಕ ಮಾಡುವುದರಿಂದ ಯುವಜನರು ಕ್ರೀಡೆಗಳತ್ತ ಬರಲು ಉತ್ತೇಜನ ನೀಡಿದಂತ್ತಾಗುತ್ತದೆ ಎಂದರು. ಇದು ಅಸ್ಸಾಂಗೆ ಹೆಮ್ಮೆಯ ದಿನ. ಹಿಮಾ ದಾಸ್ ಉಪ ಎಸ್‌ಪಿ ಆಗಿ ನೇಮಕಗೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಅವರ ಸಾಧನೆಗಳನ್ನು ಕ್ರೀಡಾ ನೀತಿಯಡಿಯಲ್ಲಿ ಗೌರವಿಸಲಾಗಿದೆ ಎಂದರು.

ಹಿಮಾ ದಾಸ್ ಧಿಂಗ್ ಎಕ್ಸ್ ಪ್ರೆಸ್.. ಟೋಕಿಯೊ ಒಲಿಂಪಿಕ್ಸ್​ನತ್ತ ದೃಢ ಹೆಜ್ಜೆ  ಹಿಮಾ ಅಸ್ಸಾಂನ ಧಿಂಗ್ ಪಟ್ಟಣದಿಂದ ಬಂದವರು. ಈ ಕಾರಣದಿಂದಾಗಿ ಅವರನ್ನು ಧಿಂಗ್ ಎಕ್ಸ್‌ಪ್ರೆಸ್ ಎಂದು ಕರೆಯುತ್ತಾರೆ. ಅಂದಹಾಗೆ, ಅವರನ್ನು ಫೆಬ್ರವರಿ 11 ರಂದು ಉಪ ಎಸ್‌ಪಿ ಆಗಿ ನೇಮಿಸಲಾಯಿತು. 2018 ರಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಹಿಮಾ 400 ಮೀಟರ್ ಓಟದಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು.

ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದರು. ಈ ಪಂದ್ಯಗಳಲ್ಲಿ ಮಹಿಳೆಯರ 400 ಮೀಟರ್ ರಿಲೇ ಮತ್ತು 400 ಮೀಟರ್ ರಿಲೇ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗವೂ ಆಗಿದ್ದರು. ಅವರು ಪ್ರಸ್ತುತ ಎನ್ಐಎಸ್ ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವರು ಶ್ರಮಿಸುತ್ತಿದ್ದಾರೆ.

Published On - 1:11 pm, Sat, 27 February 21

ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಸವದತ್ತಿ ಯಲ್ಲಮ್ಮನ ಜಾತ್ರೆಗೆ ಜನಸ್ತೋಮ!
ಸವದತ್ತಿ ಯಲ್ಲಮ್ಮನ ಜಾತ್ರೆಗೆ ಜನಸ್ತೋಮ!
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ