AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನೂನಿನ ಆಟದಲ್ಲಿ ಮೊನ್ನೆ ಗೆದ್ದು, ಇಂದು ಸೋತ BCCI ಕಳಕೊಂಡಿದ್ದೆಷ್ಟು ಗೊತ್ತಾ?

ಮುಂಬೈ: ಭಾರತೀಯ ಕ್ರಿಕೆಟ್‌ ಬೋರ್ಡ್‌ ಅಂದ್ರೆ ಬಿಸಿಸಿಐಗೆ ಕಳೆದ ಕೆಲ ದಿನಗಳಲ್ಲಿ ಬೇವು ಬೆಲ್ಲದ ಅನುಭವಾಗ್ತಿದೆ. ಯಾಕಂದ್ರೆ ಕೆಲ ದಿನಗಳ ಹಿಂದೆ ವರ್ಲ್ಡ್‌ ಸ್ಪೋರ್ಟ್ಸ್‌ ಗ್ರೂಪ್‌ ವಿರುದ್ಧದ ಕಾನೂನು ಸಮರದಲ್ಲಿ ಗೆದ್ದು ಬೀಗಿದ್ದ ಬಿಸಿಸಿಐಗೆ ಈಗ ಶಾಕ್‌ ಹೊಡೆದಿದೆ. ಐಪಿಎಲ್‌ನ ಮಾಜಿ ಫ್ರಾಂಚೈಸಿ ಡೆಕ್ಕನ್‌ ಚಾರ್ಜರ್‌ ವಿರುದ್ಧದ ಕಾನೂನು ಸಮರದಲ್ಲಿ ಹಿನ್ನಡೆಯಾಗಿ ಮುಖಭಂಗ ಅನುಭವಿಸಿದೆ. ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ದೊರೆ ಬಿಸಿಸಿಐಗೆ ಬಾಂಬೆ ಹೈಕೋರ್ಟ್‌ ನೇಮಿಸಿದ್ದ ಆರ್ಬಿಟ್ರೇಟರ್‌ ಅಂದ್ರೆ ಮಧ್ಯಸ್ತಿಕೆದಾರ ನೀಡಿದ ತೀರ್ಪು ಕಪಾಳ ಮೋಕ್ಷ ಮಾಡಿದಂತಾಗಿದೆ. […]

ಕಾನೂನಿನ ಆಟದಲ್ಲಿ ಮೊನ್ನೆ ಗೆದ್ದು, ಇಂದು ಸೋತ BCCI ಕಳಕೊಂಡಿದ್ದೆಷ್ಟು ಗೊತ್ತಾ?
Guru
| Edited By: |

Updated on: Jul 18, 2020 | 3:35 PM

Share

ಮುಂಬೈ: ಭಾರತೀಯ ಕ್ರಿಕೆಟ್‌ ಬೋರ್ಡ್‌ ಅಂದ್ರೆ ಬಿಸಿಸಿಐಗೆ ಕಳೆದ ಕೆಲ ದಿನಗಳಲ್ಲಿ ಬೇವು ಬೆಲ್ಲದ ಅನುಭವಾಗ್ತಿದೆ. ಯಾಕಂದ್ರೆ ಕೆಲ ದಿನಗಳ ಹಿಂದೆ ವರ್ಲ್ಡ್‌ ಸ್ಪೋರ್ಟ್ಸ್‌ ಗ್ರೂಪ್‌ ವಿರುದ್ಧದ ಕಾನೂನು ಸಮರದಲ್ಲಿ ಗೆದ್ದು ಬೀಗಿದ್ದ ಬಿಸಿಸಿಐಗೆ ಈಗ ಶಾಕ್‌ ಹೊಡೆದಿದೆ. ಐಪಿಎಲ್‌ನ ಮಾಜಿ ಫ್ರಾಂಚೈಸಿ ಡೆಕ್ಕನ್‌ ಚಾರ್ಜರ್‌ ವಿರುದ್ಧದ ಕಾನೂನು ಸಮರದಲ್ಲಿ ಹಿನ್ನಡೆಯಾಗಿ ಮುಖಭಂಗ ಅನುಭವಿಸಿದೆ. ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ದೊರೆ ಬಿಸಿಸಿಐಗೆ ಬಾಂಬೆ ಹೈಕೋರ್ಟ್‌ ನೇಮಿಸಿದ್ದ ಆರ್ಬಿಟ್ರೇಟರ್‌ ಅಂದ್ರೆ ಮಧ್ಯಸ್ತಿಕೆದಾರ ನೀಡಿದ ತೀರ್ಪು ಕಪಾಳ ಮೋಕ್ಷ ಮಾಡಿದಂತಾಗಿದೆ.

ಹೌದು ವಿಶ್ವ ಕ್ರಿಕೆಟ್‌ ದೊಡ್ಡಣ್ಣ ಬಿಸಿಸಿಐಗೆ ಬಾಂಬೆ ಹೈಕೋರ್ಟ್‌ ನೇಮಿಸಿದ್ದ ಆರ್ಬಿಟ್ರೇಟರ್‌ ಅಂದ್ರೆ ಮಧ್ಯಸ್ತಿಕೆದಾರ ನೀಡಿದ ತೀರ್ಪಿನಿಂದ ಭಾರೀ ಮುಖಭಂಗವಾಗದೆ. ಈ ತೀರ್ಪಿನ ಪ್ರಕಾರ ಬಿಸಿಸಿಐ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮಾಜಿ ಫ್ರಾಂಚೈಸಿ ಡೆಕ್ಕನ್‌ ಚಾರ್ಜರ್ಸ್‌ಗೆ 4,800 ಕೋಟಿ ರೂ.ಗಳನ್ನು ನೀಡಬೇಕು. ಇದು ಮೊದಲೇ ಈ ವರ್ಷ ಐಪಿಎಲ್‌ ನಡೆಸಲು ಸಾಧ್ಯವಾಗದೇ ಭಾರೀ ನಷ್ಟದಲ್ಲಿರುವ BCCIಗೆ ಬರಸಿಡಿಲಿನಂತಾಗಿದೆ.

2012ರಲ್ಲಿ ಲಲೀತ್‌ ಮೋದಿ ವಿವಾದ ಶುರವಾದ ನಂತರ ಬಿಸಿಸಿಐ ಅವರಿಗೆ ಗೇಟ್‌ ಪಾಸ್‌ ನೀಡಿತ್ತು. ಆ ನಂತರ ಶುರುವಾದ ಬೆಳವಣಿಗಗಳಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಫ್ರಾಂಚೈಸಿಗೆ ಟರ್ಮಿನೇಶನ್‌ ನೋಟಿಸ್‌ ಕಳಿಸಿದ್ದ ಬಿಸಿಸಿಸಿ 30 ದಿನಗಳ ಗಡುವು ನೀಡಿತ್ತು. ಆದ್ರೆ 29ನೇ ದಿನವೇ ಡೆಕ್ಕನ್‌ ಚಾರ್ಜರ್ಸ್‌ ಫ್ರಾಸಂಚೈಸಿಯನ್ನ ಟರ್ಮಿನೇಟ್‌ ಮಾಡಿತ್ತು. ಬಿಸಿಸಿಐನ ಈ ಕ್ರಮ ಪ್ರಶ್ನಿಸಿ ಡೆಕ್ಕನ್‌ ಚಾರ್ಜರ್ಸ್‌ ಬಾಂಬೈ ಹೈಕೋರ್ಟ್‌ ಮೇಟ್ಟಿಲೇರಿತ್ತು.

ವಿಚಾರಣೆ ನಡೆಸಿದ ಬಾಂಬೈ ಹೈಕೋರ್ಟ್‌ 2012ರಲ್ಲಿ ಸುಪ್ರೀಮ್‌ ಕೋರ್ಟ್‌ನ ನೀವೃತ್ತ ನ್ಯಾಯಮೂರ್ತಿ ಎಸ್‌ ಎಸ್‌ ಠಕ್ಕರ್‌ ಅವರನ್ನು ಆರ್ಬಿಟ್ರೇಟರ್‌ ಆಗಿ ನೇಮಿಸಿತ್ತು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಎಸ್‌ ಠಕ್ಕರ್‌ ಡೆಕ್ಕನ್‌ ಚಾರ್ಜರ್ಸ್‌ ಪರ ತೀರ್ಪು ನೀಡಿದ್ದಾರೆ. ಡೆಕ್ಕನ್‌ ಚಾರ್ಜರ್ಸ್‌ ಫ್ರಾಂಚೈಸಿಯನ್ನ ರದ್ದು ಮಾಡಿದ ಬಿಸಿಸಿಐ ಕ್ರಮ ಏಕಪಕ್ಷಿಯ ಮತ್ತು ಕಾನೂನುಬಾಹಿರ ಎಂದು ತೀರ್ಪು ನೀಡಿದೆ.

ಈ ತೀರ್ಪಿನ ಪ್ರಕಾರ ಬಿಸಿಸಿಐ ಡೆಕ್ಕನ್‌ ಚಾರ್ಚರ್ಸ್‌ಗೆ ನಷ್ಟವಾಗಿದ್ದಕ್ಕೆ 630 ಕೋಟಿ ರೂ, ಕಾನೂನುಬಾಹಿರವಾಗಿ ಫ್ರಾಂಚೈಸಿ ಟರ್ಮಿನೇಟ್‌ ಮಾಡಿದ್ದಕ್ಕೆ ಪರಿಹಾರವಾಗಿ 4,160 ಕೋಟಿ ಮತ್ತು ಅಗ್ರಿಮೆಂಟ್‌ ನಲ್ಲಿರುವಂತೆ 36 ಕೋಟಿ ರೂ.ಗಳನ್ನು ನೀಡಲು ಆದೇಶಿಸಿದೆ.

Follow Us
‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು
‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ಬಸ್ ಸೀಟ್ ಹಿಡಿಯುವ ಆತುರ ತಂದ ಆಪತ್ತು!
ಬಸ್ ಸೀಟ್ ಹಿಡಿಯುವ ಆತುರ ತಂದ ಆಪತ್ತು!
ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ
ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ