AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನೂನಿನ ಆಟದಲ್ಲಿ ಮೊನ್ನೆ ಗೆದ್ದು, ಇಂದು ಸೋತ BCCI ಕಳಕೊಂಡಿದ್ದೆಷ್ಟು ಗೊತ್ತಾ?

ಮುಂಬೈ: ಭಾರತೀಯ ಕ್ರಿಕೆಟ್‌ ಬೋರ್ಡ್‌ ಅಂದ್ರೆ ಬಿಸಿಸಿಐಗೆ ಕಳೆದ ಕೆಲ ದಿನಗಳಲ್ಲಿ ಬೇವು ಬೆಲ್ಲದ ಅನುಭವಾಗ್ತಿದೆ. ಯಾಕಂದ್ರೆ ಕೆಲ ದಿನಗಳ ಹಿಂದೆ ವರ್ಲ್ಡ್‌ ಸ್ಪೋರ್ಟ್ಸ್‌ ಗ್ರೂಪ್‌ ವಿರುದ್ಧದ ಕಾನೂನು ಸಮರದಲ್ಲಿ ಗೆದ್ದು ಬೀಗಿದ್ದ ಬಿಸಿಸಿಐಗೆ ಈಗ ಶಾಕ್‌ ಹೊಡೆದಿದೆ. ಐಪಿಎಲ್‌ನ ಮಾಜಿ ಫ್ರಾಂಚೈಸಿ ಡೆಕ್ಕನ್‌ ಚಾರ್ಜರ್‌ ವಿರುದ್ಧದ ಕಾನೂನು ಸಮರದಲ್ಲಿ ಹಿನ್ನಡೆಯಾಗಿ ಮುಖಭಂಗ ಅನುಭವಿಸಿದೆ. ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ದೊರೆ ಬಿಸಿಸಿಐಗೆ ಬಾಂಬೆ ಹೈಕೋರ್ಟ್‌ ನೇಮಿಸಿದ್ದ ಆರ್ಬಿಟ್ರೇಟರ್‌ ಅಂದ್ರೆ ಮಧ್ಯಸ್ತಿಕೆದಾರ ನೀಡಿದ ತೀರ್ಪು ಕಪಾಳ ಮೋಕ್ಷ ಮಾಡಿದಂತಾಗಿದೆ. […]

ಕಾನೂನಿನ ಆಟದಲ್ಲಿ ಮೊನ್ನೆ ಗೆದ್ದು, ಇಂದು ಸೋತ BCCI ಕಳಕೊಂಡಿದ್ದೆಷ್ಟು ಗೊತ್ತಾ?
Guru
| Edited By: |

Updated on: Jul 18, 2020 | 3:35 PM

Share

ಮುಂಬೈ: ಭಾರತೀಯ ಕ್ರಿಕೆಟ್‌ ಬೋರ್ಡ್‌ ಅಂದ್ರೆ ಬಿಸಿಸಿಐಗೆ ಕಳೆದ ಕೆಲ ದಿನಗಳಲ್ಲಿ ಬೇವು ಬೆಲ್ಲದ ಅನುಭವಾಗ್ತಿದೆ. ಯಾಕಂದ್ರೆ ಕೆಲ ದಿನಗಳ ಹಿಂದೆ ವರ್ಲ್ಡ್‌ ಸ್ಪೋರ್ಟ್ಸ್‌ ಗ್ರೂಪ್‌ ವಿರುದ್ಧದ ಕಾನೂನು ಸಮರದಲ್ಲಿ ಗೆದ್ದು ಬೀಗಿದ್ದ ಬಿಸಿಸಿಐಗೆ ಈಗ ಶಾಕ್‌ ಹೊಡೆದಿದೆ. ಐಪಿಎಲ್‌ನ ಮಾಜಿ ಫ್ರಾಂಚೈಸಿ ಡೆಕ್ಕನ್‌ ಚಾರ್ಜರ್‌ ವಿರುದ್ಧದ ಕಾನೂನು ಸಮರದಲ್ಲಿ ಹಿನ್ನಡೆಯಾಗಿ ಮುಖಭಂಗ ಅನುಭವಿಸಿದೆ. ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ದೊರೆ ಬಿಸಿಸಿಐಗೆ ಬಾಂಬೆ ಹೈಕೋರ್ಟ್‌ ನೇಮಿಸಿದ್ದ ಆರ್ಬಿಟ್ರೇಟರ್‌ ಅಂದ್ರೆ ಮಧ್ಯಸ್ತಿಕೆದಾರ ನೀಡಿದ ತೀರ್ಪು ಕಪಾಳ ಮೋಕ್ಷ ಮಾಡಿದಂತಾಗಿದೆ.

ಹೌದು ವಿಶ್ವ ಕ್ರಿಕೆಟ್‌ ದೊಡ್ಡಣ್ಣ ಬಿಸಿಸಿಐಗೆ ಬಾಂಬೆ ಹೈಕೋರ್ಟ್‌ ನೇಮಿಸಿದ್ದ ಆರ್ಬಿಟ್ರೇಟರ್‌ ಅಂದ್ರೆ ಮಧ್ಯಸ್ತಿಕೆದಾರ ನೀಡಿದ ತೀರ್ಪಿನಿಂದ ಭಾರೀ ಮುಖಭಂಗವಾಗದೆ. ಈ ತೀರ್ಪಿನ ಪ್ರಕಾರ ಬಿಸಿಸಿಐ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮಾಜಿ ಫ್ರಾಂಚೈಸಿ ಡೆಕ್ಕನ್‌ ಚಾರ್ಜರ್ಸ್‌ಗೆ 4,800 ಕೋಟಿ ರೂ.ಗಳನ್ನು ನೀಡಬೇಕು. ಇದು ಮೊದಲೇ ಈ ವರ್ಷ ಐಪಿಎಲ್‌ ನಡೆಸಲು ಸಾಧ್ಯವಾಗದೇ ಭಾರೀ ನಷ್ಟದಲ್ಲಿರುವ BCCIಗೆ ಬರಸಿಡಿಲಿನಂತಾಗಿದೆ.

2012ರಲ್ಲಿ ಲಲೀತ್‌ ಮೋದಿ ವಿವಾದ ಶುರವಾದ ನಂತರ ಬಿಸಿಸಿಐ ಅವರಿಗೆ ಗೇಟ್‌ ಪಾಸ್‌ ನೀಡಿತ್ತು. ಆ ನಂತರ ಶುರುವಾದ ಬೆಳವಣಿಗಗಳಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಫ್ರಾಂಚೈಸಿಗೆ ಟರ್ಮಿನೇಶನ್‌ ನೋಟಿಸ್‌ ಕಳಿಸಿದ್ದ ಬಿಸಿಸಿಸಿ 30 ದಿನಗಳ ಗಡುವು ನೀಡಿತ್ತು. ಆದ್ರೆ 29ನೇ ದಿನವೇ ಡೆಕ್ಕನ್‌ ಚಾರ್ಜರ್ಸ್‌ ಫ್ರಾಸಂಚೈಸಿಯನ್ನ ಟರ್ಮಿನೇಟ್‌ ಮಾಡಿತ್ತು. ಬಿಸಿಸಿಐನ ಈ ಕ್ರಮ ಪ್ರಶ್ನಿಸಿ ಡೆಕ್ಕನ್‌ ಚಾರ್ಜರ್ಸ್‌ ಬಾಂಬೈ ಹೈಕೋರ್ಟ್‌ ಮೇಟ್ಟಿಲೇರಿತ್ತು.

ವಿಚಾರಣೆ ನಡೆಸಿದ ಬಾಂಬೈ ಹೈಕೋರ್ಟ್‌ 2012ರಲ್ಲಿ ಸುಪ್ರೀಮ್‌ ಕೋರ್ಟ್‌ನ ನೀವೃತ್ತ ನ್ಯಾಯಮೂರ್ತಿ ಎಸ್‌ ಎಸ್‌ ಠಕ್ಕರ್‌ ಅವರನ್ನು ಆರ್ಬಿಟ್ರೇಟರ್‌ ಆಗಿ ನೇಮಿಸಿತ್ತು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಎಸ್‌ ಠಕ್ಕರ್‌ ಡೆಕ್ಕನ್‌ ಚಾರ್ಜರ್ಸ್‌ ಪರ ತೀರ್ಪು ನೀಡಿದ್ದಾರೆ. ಡೆಕ್ಕನ್‌ ಚಾರ್ಜರ್ಸ್‌ ಫ್ರಾಂಚೈಸಿಯನ್ನ ರದ್ದು ಮಾಡಿದ ಬಿಸಿಸಿಐ ಕ್ರಮ ಏಕಪಕ್ಷಿಯ ಮತ್ತು ಕಾನೂನುಬಾಹಿರ ಎಂದು ತೀರ್ಪು ನೀಡಿದೆ.

ಈ ತೀರ್ಪಿನ ಪ್ರಕಾರ ಬಿಸಿಸಿಐ ಡೆಕ್ಕನ್‌ ಚಾರ್ಚರ್ಸ್‌ಗೆ ನಷ್ಟವಾಗಿದ್ದಕ್ಕೆ 630 ಕೋಟಿ ರೂ, ಕಾನೂನುಬಾಹಿರವಾಗಿ ಫ್ರಾಂಚೈಸಿ ಟರ್ಮಿನೇಟ್‌ ಮಾಡಿದ್ದಕ್ಕೆ ಪರಿಹಾರವಾಗಿ 4,160 ಕೋಟಿ ಮತ್ತು ಅಗ್ರಿಮೆಂಟ್‌ ನಲ್ಲಿರುವಂತೆ 36 ಕೋಟಿ ರೂ.ಗಳನ್ನು ನೀಡಲು ಆದೇಶಿಸಿದೆ.

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​