AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2023: ಏಷ್ಯಾಕಪ್​ನಲ್ಲಿ ಯಾರೆಲ್ಲ ವೀಕ್ಷಕ ವಿವರಣೆ ನೀಡಲಿದ್ದಾರೆ ಗೊತ್ತಾ? ಈ ಪಟ್ಟಿ ನೋಡಿ

Asia Cup 2023: ಆಗಸ್ಟ್ 30 ರಿಂದ ಆರಂಭವಾಗಲಿರುವ 2023ರ ಏಷ್ಯಾಕಪ್​ಗೆ 12 ಸದಸ್ಯರ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದೆ. 5 ದೇಶಗಳಿಂದ ಒಟ್ಟು 12 ಕಾಮೆಂಟೇಟರ್‌ಗಳು ಈ ಇವೆಂಟ್​ನಲ್ಲಿ ಆಡದ ನಡುವೆ ತಮ್ಮ ಮಾತಿನಿಂದ ಪಂದ್ಯಕ್ಕೆ ಮತ್ತಷ್ಟು ರಂಗು ತರಲಿದ್ದಾರೆ.

Asia Cup 2023: ಏಷ್ಯಾಕಪ್​ನಲ್ಲಿ ಯಾರೆಲ್ಲ ವೀಕ್ಷಕ ವಿವರಣೆ ನೀಡಲಿದ್ದಾರೆ ಗೊತ್ತಾ? ಈ ಪಟ್ಟಿ ನೋಡಿ
ಏಷ್ಯಾಕಪ್ ವೀಕ್ಷಕ ವಿವರಣೆಗಾರರುImage Credit source: insidesport
ಪೃಥ್ವಿಶಂಕರ
|

Updated on:Aug 13, 2023 | 9:31 AM

Share

ಆಗಸ್ಟ್ 30 ರಿಂದ ಆರಂಭವಾಗಲಿರುವ 2023ರ ಏಷ್ಯಾಕಪ್​ಗೆ (Asia Cup 2023) 12 ಸದಸ್ಯರ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು (Commentators List) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಬಿಡುಗಡೆ ಮಾಡಿದೆ. 5 ದೇಶಗಳಿಂದ ಒಟ್ಟು 12 ಕಾಮೆಂಟೇಟರ್‌ಗಳು ಈ ಇವೆಂಟ್​ನಲ್ಲಿ ಆಡದ ನಡುವೆ ತಮ್ಮ ಮಾತಿನಿಂದ ಪಂದ್ಯಕ್ಕೆ ಮತ್ತಷ್ಟು ರಂಗು ತರಲಿದ್ದಾರೆ. ಅದಾಗ್ಯೂ, ಈ ಕಾಮೆಂಟೇಟರ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ಓಪನರ್ ಆಕಾಶ್ ಚೋಪ್ರಾ (Aakash Chopra) ಅವರ ಹೆಸರಿಲ್ಲದೆ ಇರುವುದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಏಕದಿನ ವಿಶ್ವಕಪ್‌ಗೆ ತಯಾರಿಯಾಗಿ ಈ ಪಂದ್ಯಾವಳಿಯನ್ನು ಆಡಲಾಗುತ್ತಿದ್ದು, ಈ ಪಂದ್ಯಾವಳಿಯಲ್ಲಿ 6 ತಂಡಗಳು ಕಣಕ್ಕಿಳಿಯಲಿವೆ. ಹೈಬ್ರಿಡ್ ಮಾದರಿಯಲ್ಲಿ ಈ ಟೂರ್ನಿ ನಡೆಯುತ್ತಿದ್ದು, ಪಂದ್ಯಾವಳಿಯ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಸೆಪ್ಟೆಂಬರ್ 2 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲ್ಲಿದೆ.

27 ಎಸೆತಗಳಲ್ಲಿ 60 ರನ್! ಏಷ್ಯಾಕಪ್​ ತಂಡದಲ್ಲಿರುವ ಪಾಕ್ ಬೌಲರ್​ಗೆ ಬೆವರಿಳಿಸಿದ ಕ್ಲಾಸೆನ್

ವೀಕ್ಷಕ ವಿವರಣೆಗಾರರ ಪಟ್ಟಿ

ಈ ಏಷ್ಯಾಕಪ್​ಗೆ ಯಾವ ದೇಶದಿಂದ ಎಷ್ಟು ವೀಕ್ಷಕ ವಿವರಣೆಗಾರರು ಆಯ್ಕೆಯಾಗಿದ್ದಾರೆ ಎಂಬುದನ್ನು ನೋಡುವುದಾದರೆ..

ಭಾರತ: ಗೌತಮ್ ಗಂಭೀರ್, ರವಿಶಾಸ್ತ್ರಿ, ಸಂಜಯ್ ಮಂಜ್ರೇಕರ್, ಇರ್ಫಾನ್ ಪಠಾಣ್ ಮತ್ತು ದೀಪ್ ದಾಸ್‌ಗುಪ್ತಾ.

ಪಾಕಿಸ್ತಾನ: ವಾಸೀಂ ಅಕ್ರಮ್, ವಕಾರ್ ಯೂನಿಸ್, ಬಾಜಿದ್ ಖಾನ್ ಮತ್ತು ರಮೀಜ್ ರಾಜಾ

ಬಾಂಗ್ಲಾದೇಶ; ಅಥರ್ ಅಲಿ ಖಾನ್

ಶ್ರೀಲಂಕಾ: ರಸೆಲ್ ಅರ್ನಾಲ್ಡ್

-ಇನ್ನು ನ್ಯೂಜಿಲೆಂಡ್​ನ ಸ್ಕಾಟ್ ಸ್ಟೈರಿಸ್ ತಟಸ್ಥ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಏಷ್ಯಾಕಪ್ ವೇಳಾಪಟ್ಟಿ

ದಿನಾಂಕ

ಸ್ಥಳ ಪಂದ್ಯ ಹಂತ

ಸಮಯ

30 ಆಗಸ್ಟ್

ಮುಲ್ತಾನ್ ಪಾಕಿಸ್ತಾನ vs ನೇಪಾಳ ಗುಂಪು ಹಂತ

ಮಧ್ಯಾಹ್ನ 3 ಗಂಟೆ

31 ಆಗಸ್ಟ್

ಕ್ಯಾಂಡಿ ಬಾಂಗ್ಲಾದೇಶ vs ಶ್ರೀಲಂಕಾ ಗುಂಪು ಹಂತ ಮಧ್ಯಾಹ್ನ 3 ಗಂಟೆ
2 ಸೆಪ್ಟೆಂಬರ್ ಕ್ಯಾಂಡಿ ಪಾಕಿಸ್ತಾನ vs ಭಾರತ ಗುಂಪು ಹಂತ

ಮಧ್ಯಾಹ್ನ 3 ಗಂಟೆ

3 ಸೆಪ್ಟೆಂಬರ್

ಲಾಹೋರ್ ಬಾಂಗ್ಲಾದೇಶ vs ಅಫ್ಘಾನಿಸ್ತಾನ ಗುಂಪು ಹಂತ ಮಧ್ಯಾಹ್ನ 3 ಗಂಟೆ
4 ಸೆಪ್ಟೆಂಬರ್ ಕ್ಯಾಂಡಿ ಇಂಡಿಯಾ vs ನೇಪಾಳ ಗುಂಪು ಹಂತ

ಮಧ್ಯಾಹ್ನ 3 ಗಂಟೆ

5 ಸೆಪ್ಟೆಂಬರ್

ಲಾಹೋರ್ ಅಫ್ಘಾನಿಸ್ತಾನ vs ಶ್ರೀಲಂಕಾ ಗುಂಪು ಹಂತ ಮಧ್ಯಾಹ್ನ 3 ಗಂಟೆ
6 ಸೆಪ್ಟೆಂಬರ್ ಲಾಹೋರ್ ಎ ಗುಂಪಿನ ಮೊದಲ ತಂಡ vs ಬಿ ಗುಂಪಿನ 2ನೇ ತಂಡ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

9 ಸೆಪ್ಟೆಂಬರ್

ಕೊಲಂಬೊ ಬಿ ಗುಂಪಿನ ಮೊದಲ ತಂಡ vs ಬಿ ಗುಂಪಿನ 2ನೇ ತಂಡ ಸೂಪರ್ 4 ಹಂತ ಮಧ್ಯಾಹ್ನ 3 ಗಂಟೆ
10 ಸೆಪ್ಟೆಂಬರ್ ಕೊಲಂಬೊ ಎ ಗುಂಪಿನ ಮೊದಲ ತಂಡ vs ಎ ಗುಂಪಿನ 2ನೇ ತಂಡ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

12 ಸೆಪ್ಟೆಂಬರ್

ಕೊಲಂಬೊ ಎ ಗುಂಪಿನ 2ನೇ ತಂಡ vs ಬಿ ಗುಂಪಿನ ಮೊದಲನೇ ತಂಡ ಸೂಪರ್ 4 ಹಂತ ಮಧ್ಯಾಹ್ನ 3 ಗಂಟೆ
14 ಸೆಪ್ಟೆಂಬರ್ ಕೊಲಂಬೊ ಎ ಗುಂಪಿನ ಮೊದಲ ತಂಡ vs ಬಿ ಗುಂಪಿನ ಮೊದಲ ತಂಡ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

15 ಸೆಪ್ಟೆಂಬರ್

ಕೊಲಂಬೊ ಎ ಗುಂಪಿನ ಎರಡನೇ ತಂಡ vs ಬಿ ಗುಂಪಿನ ಎರಡನೇ ತಂಡ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

17 ಸೆಪ್ಟೆಂಬರ್ ಕೊಲಂಬೊ ಫೈನಲ್ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:28 am, Sun, 13 August 23

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ