AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2023: ಏಷ್ಯಾಕಪ್​ನಲ್ಲಿ ಯಾರೆಲ್ಲ ವೀಕ್ಷಕ ವಿವರಣೆ ನೀಡಲಿದ್ದಾರೆ ಗೊತ್ತಾ? ಈ ಪಟ್ಟಿ ನೋಡಿ

Asia Cup 2023: ಆಗಸ್ಟ್ 30 ರಿಂದ ಆರಂಭವಾಗಲಿರುವ 2023ರ ಏಷ್ಯಾಕಪ್​ಗೆ 12 ಸದಸ್ಯರ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದೆ. 5 ದೇಶಗಳಿಂದ ಒಟ್ಟು 12 ಕಾಮೆಂಟೇಟರ್‌ಗಳು ಈ ಇವೆಂಟ್​ನಲ್ಲಿ ಆಡದ ನಡುವೆ ತಮ್ಮ ಮಾತಿನಿಂದ ಪಂದ್ಯಕ್ಕೆ ಮತ್ತಷ್ಟು ರಂಗು ತರಲಿದ್ದಾರೆ.

Asia Cup 2023: ಏಷ್ಯಾಕಪ್​ನಲ್ಲಿ ಯಾರೆಲ್ಲ ವೀಕ್ಷಕ ವಿವರಣೆ ನೀಡಲಿದ್ದಾರೆ ಗೊತ್ತಾ? ಈ ಪಟ್ಟಿ ನೋಡಿ
ಏಷ್ಯಾಕಪ್ ವೀಕ್ಷಕ ವಿವರಣೆಗಾರರುImage Credit source: insidesport
ಪೃಥ್ವಿಶಂಕರ
|

Updated on:Aug 13, 2023 | 9:31 AM

Share

ಆಗಸ್ಟ್ 30 ರಿಂದ ಆರಂಭವಾಗಲಿರುವ 2023ರ ಏಷ್ಯಾಕಪ್​ಗೆ (Asia Cup 2023) 12 ಸದಸ್ಯರ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು (Commentators List) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಬಿಡುಗಡೆ ಮಾಡಿದೆ. 5 ದೇಶಗಳಿಂದ ಒಟ್ಟು 12 ಕಾಮೆಂಟೇಟರ್‌ಗಳು ಈ ಇವೆಂಟ್​ನಲ್ಲಿ ಆಡದ ನಡುವೆ ತಮ್ಮ ಮಾತಿನಿಂದ ಪಂದ್ಯಕ್ಕೆ ಮತ್ತಷ್ಟು ರಂಗು ತರಲಿದ್ದಾರೆ. ಅದಾಗ್ಯೂ, ಈ ಕಾಮೆಂಟೇಟರ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ಓಪನರ್ ಆಕಾಶ್ ಚೋಪ್ರಾ (Aakash Chopra) ಅವರ ಹೆಸರಿಲ್ಲದೆ ಇರುವುದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಏಕದಿನ ವಿಶ್ವಕಪ್‌ಗೆ ತಯಾರಿಯಾಗಿ ಈ ಪಂದ್ಯಾವಳಿಯನ್ನು ಆಡಲಾಗುತ್ತಿದ್ದು, ಈ ಪಂದ್ಯಾವಳಿಯಲ್ಲಿ 6 ತಂಡಗಳು ಕಣಕ್ಕಿಳಿಯಲಿವೆ. ಹೈಬ್ರಿಡ್ ಮಾದರಿಯಲ್ಲಿ ಈ ಟೂರ್ನಿ ನಡೆಯುತ್ತಿದ್ದು, ಪಂದ್ಯಾವಳಿಯ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಸೆಪ್ಟೆಂಬರ್ 2 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲ್ಲಿದೆ.

27 ಎಸೆತಗಳಲ್ಲಿ 60 ರನ್! ಏಷ್ಯಾಕಪ್​ ತಂಡದಲ್ಲಿರುವ ಪಾಕ್ ಬೌಲರ್​ಗೆ ಬೆವರಿಳಿಸಿದ ಕ್ಲಾಸೆನ್

ವೀಕ್ಷಕ ವಿವರಣೆಗಾರರ ಪಟ್ಟಿ

ಈ ಏಷ್ಯಾಕಪ್​ಗೆ ಯಾವ ದೇಶದಿಂದ ಎಷ್ಟು ವೀಕ್ಷಕ ವಿವರಣೆಗಾರರು ಆಯ್ಕೆಯಾಗಿದ್ದಾರೆ ಎಂಬುದನ್ನು ನೋಡುವುದಾದರೆ..

ಭಾರತ: ಗೌತಮ್ ಗಂಭೀರ್, ರವಿಶಾಸ್ತ್ರಿ, ಸಂಜಯ್ ಮಂಜ್ರೇಕರ್, ಇರ್ಫಾನ್ ಪಠಾಣ್ ಮತ್ತು ದೀಪ್ ದಾಸ್‌ಗುಪ್ತಾ.

ಪಾಕಿಸ್ತಾನ: ವಾಸೀಂ ಅಕ್ರಮ್, ವಕಾರ್ ಯೂನಿಸ್, ಬಾಜಿದ್ ಖಾನ್ ಮತ್ತು ರಮೀಜ್ ರಾಜಾ

ಬಾಂಗ್ಲಾದೇಶ; ಅಥರ್ ಅಲಿ ಖಾನ್

ಶ್ರೀಲಂಕಾ: ರಸೆಲ್ ಅರ್ನಾಲ್ಡ್

-ಇನ್ನು ನ್ಯೂಜಿಲೆಂಡ್​ನ ಸ್ಕಾಟ್ ಸ್ಟೈರಿಸ್ ತಟಸ್ಥ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಏಷ್ಯಾಕಪ್ ವೇಳಾಪಟ್ಟಿ

ದಿನಾಂಕ

ಸ್ಥಳ ಪಂದ್ಯ ಹಂತ

ಸಮಯ

30 ಆಗಸ್ಟ್

ಮುಲ್ತಾನ್ ಪಾಕಿಸ್ತಾನ vs ನೇಪಾಳ ಗುಂಪು ಹಂತ

ಮಧ್ಯಾಹ್ನ 3 ಗಂಟೆ

31 ಆಗಸ್ಟ್

ಕ್ಯಾಂಡಿ ಬಾಂಗ್ಲಾದೇಶ vs ಶ್ರೀಲಂಕಾ ಗುಂಪು ಹಂತ ಮಧ್ಯಾಹ್ನ 3 ಗಂಟೆ
2 ಸೆಪ್ಟೆಂಬರ್ ಕ್ಯಾಂಡಿ ಪಾಕಿಸ್ತಾನ vs ಭಾರತ ಗುಂಪು ಹಂತ

ಮಧ್ಯಾಹ್ನ 3 ಗಂಟೆ

3 ಸೆಪ್ಟೆಂಬರ್

ಲಾಹೋರ್ ಬಾಂಗ್ಲಾದೇಶ vs ಅಫ್ಘಾನಿಸ್ತಾನ ಗುಂಪು ಹಂತ ಮಧ್ಯಾಹ್ನ 3 ಗಂಟೆ
4 ಸೆಪ್ಟೆಂಬರ್ ಕ್ಯಾಂಡಿ ಇಂಡಿಯಾ vs ನೇಪಾಳ ಗುಂಪು ಹಂತ

ಮಧ್ಯಾಹ್ನ 3 ಗಂಟೆ

5 ಸೆಪ್ಟೆಂಬರ್

ಲಾಹೋರ್ ಅಫ್ಘಾನಿಸ್ತಾನ vs ಶ್ರೀಲಂಕಾ ಗುಂಪು ಹಂತ ಮಧ್ಯಾಹ್ನ 3 ಗಂಟೆ
6 ಸೆಪ್ಟೆಂಬರ್ ಲಾಹೋರ್ ಎ ಗುಂಪಿನ ಮೊದಲ ತಂಡ vs ಬಿ ಗುಂಪಿನ 2ನೇ ತಂಡ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

9 ಸೆಪ್ಟೆಂಬರ್

ಕೊಲಂಬೊ ಬಿ ಗುಂಪಿನ ಮೊದಲ ತಂಡ vs ಬಿ ಗುಂಪಿನ 2ನೇ ತಂಡ ಸೂಪರ್ 4 ಹಂತ ಮಧ್ಯಾಹ್ನ 3 ಗಂಟೆ
10 ಸೆಪ್ಟೆಂಬರ್ ಕೊಲಂಬೊ ಎ ಗುಂಪಿನ ಮೊದಲ ತಂಡ vs ಎ ಗುಂಪಿನ 2ನೇ ತಂಡ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

12 ಸೆಪ್ಟೆಂಬರ್

ಕೊಲಂಬೊ ಎ ಗುಂಪಿನ 2ನೇ ತಂಡ vs ಬಿ ಗುಂಪಿನ ಮೊದಲನೇ ತಂಡ ಸೂಪರ್ 4 ಹಂತ ಮಧ್ಯಾಹ್ನ 3 ಗಂಟೆ
14 ಸೆಪ್ಟೆಂಬರ್ ಕೊಲಂಬೊ ಎ ಗುಂಪಿನ ಮೊದಲ ತಂಡ vs ಬಿ ಗುಂಪಿನ ಮೊದಲ ತಂಡ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

15 ಸೆಪ್ಟೆಂಬರ್

ಕೊಲಂಬೊ ಎ ಗುಂಪಿನ ಎರಡನೇ ತಂಡ vs ಬಿ ಗುಂಪಿನ ಎರಡನೇ ತಂಡ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

17 ಸೆಪ್ಟೆಂಬರ್ ಕೊಲಂಬೊ ಫೈನಲ್ ಸೂಪರ್ 4 ಹಂತ

ಮಧ್ಯಾಹ್ನ 3 ಗಂಟೆ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:28 am, Sun, 13 August 23

Follow Us
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ