AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy 2025: ದುಲೀಪ್ ಟ್ರೋಫಿ ಎಂದರೇನು?

ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ. ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

Duleep Trophy 2025: ದುಲೀಪ್ ಟ್ರೋಫಿ ಎಂದರೇನು?
Duleep Trophy
ಝಾಹಿರ್ ಯೂಸುಫ್
|

Updated on: Aug 17, 2025 | 2:07 PM

Share

Duleep Trophy 2025: ದುಲೀಪ್ ಟ್ರೋಫಿ 2025 ಆಗಸ್ಟ್ 28 ರಿಂದ ಶುರುವಾಗಲಿದೆ. ಈ ಬಾರಿಯ ಟೂರ್ನಿಯು ಎಲ್ಲಾ ಪಂದ್ಯಗಳು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿದೆ. ವಿಶೇಷ ಎಂದರೆ ಈ ಬಾರಿ ಕಣಕ್ಕಿಳಿಯಲಿರುವ 6 ತಂಡಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ 2025ರ ದುಲೀಪ್ ಟ್ರೋಫಿಯಲ್ಲಿ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

ಏನಿದು ದುಲೀಪ್ ಟ್ರೋಫಿ?

ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ.

ದುಲೀಪ್ ಟ್ರೋಫಿ ಯಾವಾಗ ಶುರುವಾಯಿತು?

ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.

ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?

ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

  • ಕೇಂದ್ರ ವಲಯ
  • ದಕ್ಷಿಣ ವಲಯ
  • ಪೂರ್ವ ವಲಯ
  • ಪಶ್ಚಿಮ ವಲಯ
  • ಉತ್ತರ ವಲಯ
  • ಈಶಾನ್ಯ ವಲಯ

ದುಲೀಪ್ ಟ್ರೋಫಿಯ ವಲಯ ರಾಜ್ಯಗಳಾವುವು?

  • ಉತ್ತರ ವಲಯ : ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಸರ್ವೀಸಸ್ ತಂಡಗಳು.
  • ದಕ್ಷಿಣ ವಲಯ : ಆಂಧ್ರಪ್ರದೇಶ, ಗೋವಾ, ಹೈದರಾಬಾದ್ ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.
  • ಕೇಂದ್ರ ವಲಯ : ಛತ್ತೀಸ್‌ಗಢ, ಮಧ್ಯಪ್ರದೇಶ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ವಿದರ್ಭ.
  • ಪೂರ್ವ ವಲಯ : ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ.
  • ಈಶಾನ್ಯ ವಲಯ : ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
  • ಪಶ್ಚಿಮ ವಲಯ : ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು ಸೌರಾಷ್ಟ್ರ.

ಈ ರಾಜ್ಯಗಳ ಆಟಗಾರರು ಆಯಾ ವಲಯಗಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆ ಈ ವಲಯಗಳ ತಂಡಗಳನ್ನು ಎಲೈಟ್​​ ಹಾಗೂ ಇಂಡಿಯಾ ರೆಡ್, ಬ್ಲೂ, ಗ್ರೀನ್… ಹೆಸರಿನಲ್ಲಿ ಕಣಕ್ಕಿಳಿಸಲಾಗಿತ್ತು. ಹಾಗೆಯೇ ಇಂಡಿಯಾ A,B,C,D,E,F  ಎಂದು ಹೆಸರಿನೊಂದಿಗೆ ಸಹ ಆಡಲಾಗಿತ್ತು. ಆದರೆ ಈ ಬಾರಿ ಮತ್ತೆ ವಲಯ ತಂಡಗಳಾಗಿ ಟೂರ್ನಿಯನ್ನು ಆಡಲಾಗುತ್ತದೆ.

ಇದನ್ನೂ ಓದಿ: IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು

ದುಲೀಪ್ ಟ್ರೋಫಿಯ ಹಿಂದಿನ ವಿಜೇತರು ಯಾರು?

  • 196162 – ಪಶ್ಚಿಮ ವಲಯ
  • 1962–63 – ಪಶ್ಚಿಮ ವಲಯ
  • 1963–64 – ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ (ಜಂಟಿ ವಿಜೇತರು)
  • 196465 – ಪಶ್ಚಿಮ ವಲಯ
  • 1965–66 – ದಕ್ಷಿಣ ವಲಯ
  • 1966–67 – ದಕ್ಷಿಣ ವಲಯ
  • 1967–68 – ದಕ್ಷಿಣ ವಲಯ
  • 1968–69 – ಪಶ್ಚಿಮ ವಲಯ
  • 1969–70 – ಪಶ್ಚಿಮ ವಲಯ
  • 1970–71 – ದಕ್ಷಿಣ ವಲಯ
  • 1971–72 – ಕೇಂದ್ರ ವಲಯ
  • 1972–73 – ಪಶ್ಚಿಮ ವಲಯ
  • 1973–74 – ಕೇಂದ್ರ ವಲಯ
  • 1974–75 – ದಕ್ಷಿಣ ವಲಯ
  • 1975–76 – ದಕ್ಷಿಣ ವಲಯ
  • 1976–77 – ಪಶ್ಚಿಮ ವಲಯ
  • 1977–78 – ಪಶ್ಚಿಮ ವಲಯ
  • 1978–79 – ಉತ್ತರ ವಲಯ
  • 1979–80 – ಉತ್ತರ ವಲಯ
  • 1980–81 – ಪಶ್ಚಿಮ ವಲಯ
  • 1981–82 – ಪಶ್ಚಿಮ ವಲಯ
  • 1982–83 – ಉತ್ತರ ವಲಯ
  • 1983–84 – ಉತ್ತರ ವಲಯ
  • 1984–85 – ದಕ್ಷಿಣ ವಲಯ
  • 1985–86 – ಪಶ್ಚಿಮ ವಲಯ
  • 1986–87 – ದಕ್ಷಿಣ ವಲಯ
  • 1987–88 – ಉತ್ತರ ವಲಯ
  • 1988–89 – ಉತ್ತರ ವಲಯ ಮತ್ತು ಪಶ್ಚಿಮ ವಲಯ (ಜಂಟಿ ವಿಜೇತರು)
  • 198990 – ದಕ್ಷಿಣ ವಲಯ
  • 1990–91 – ಉತ್ತರ ವಲಯ
  • 1991–92 – ಉತ್ತರ ವಲಯ
  • 1992–93 – ಉತ್ತರ ವಲಯ
  • 1993–94 – ಉತ್ತರ ವಲಯ
  • 1994–95 – ಉತ್ತರ ವಲಯ
  • 1995–96 – ದಕ್ಷಿಣ ವಲಯ
  • 1996–97 – ಕೇಂದ್ರ ವಲಯ
  • 1997–98 – ಕೇಂದ್ರ ವಲಯ ಮತ್ತು ಪಶ್ಚಿಮ ವಲಯ (ಜಂಟಿ ವಿಜೇತರು)
  • 199899 – ಕೇಂದ್ರ ವಲಯ
  • 1999–2000 – ಉತ್ತರ ವಲಯ
  • 2000–01 – ಉತ್ತರ ವಲಯ
  • 2001–02 – ಪಶ್ಚಿಮ ವಲಯ
  • 2002–03 – ಎಲೈಟ್ ಸಿ
  • 2003–04 – ಉತ್ತರ ವಲಯ
  • 2004–05 – ಕೇಂದ್ರ ವಲಯ
  • 2005–06 – ಪಶ್ಚಿಮ ವಲಯ
  • 2006–07 – ಉತ್ತರ ವಲಯ
  • 2007–08 – ಉತ್ತರ ವಲಯ
  • 2008–09 – ಪಶ್ಚಿಮ ವಲಯ
  • 2009–10 – ಪಶ್ಚಿಮ ವಲಯ
  • 2010–11 – ದಕ್ಷಿಣ ವಲಯ
  • 2011–12 – ಪೂರ್ವ ವಲಯ
  • 2012–13 – ಪೂರ್ವ ವಲಯ
  • 2013–14 – ಉತ್ತರ ವಲಯ ಮತ್ತು ದಕ್ಷಿಣ ವಲಯ (ಜಂಟಿ ವಿಜೇತರು)
  • 201415 – ಕೇಂದ್ರ ವಲಯ
  • 2016–17 – ಇಂಡಿಯಾ ಬ್ಲೂ
  • 2017–18 – ಇಂಡಿಯಾ ರೆಡ್
  • 2018–19 – ಇಂಡಿಯಾ ಬ್ಲೂ
  • 2019–20 – ಇಂಡಿಯಾ ರೆಡ್
  • 2022–23 – ಪಶ್ಚಿಮ ವಲಯ
  • 2023 – ದಕ್ಷಿಣ ವಲಯ
  • 2024- ಇಂಡಿಯಾ ಸಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!