ವಿಶ್ವಕಪ್​ನಲ್ಲಿ ಕ್ರಿಕೆಟ್ ಲೋಕದ ಅತ್ಯಂತ ನತದೃಷ್ಟ ಆಟಗಾರ ರೋಹಿತ್ ಶರ್ಮಾ..!

Rohit Sharma, ICC World Cup: ರೋಹಿತ್ ಶರ್ಮಾ ವಿಷಯ ಬಂದಾಗಲೆಲ್ಲಾ, ಅವರು ಸೀಮಿತ ಓವರ್​ಗಳ ಕ್ರಿಕೆಟ್‌ನ ಯಶಸ್ವಿ ಬ್ಯಾಟ್ಸ್‌ಮನ್ ಮತ್ತು ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ಮಾತು ಇಡೀ ಕ್ರಿಕೆಟ್​ ಜಗತ್ತಿನಿಂದಲೇ ಕೇಳಿಬರುವ ಮಾತಾಗಿದೆ. ಆದಾಗ್ಯೂ, ವಿಶ್ವಕಪ್ ವಿಷಯದಲ್ಲಿ ಮಾತ್ರ ರೋಹಿತ್ ಅವರಷ್ಟು ದುರದೃಷ್ಟಕರ ಆಟಗಾರ ಜಗತ್ತಿನಲ್ಲಿ ಇನ್ನೊಬ್ಬನಿರಲಾರ ಎಂಬ ಮಾತು ಕೂಡ ಅಷ್ಟೇ ಸತ್ಯ.

ವಿಶ್ವಕಪ್​ನಲ್ಲಿ ಕ್ರಿಕೆಟ್ ಲೋಕದ ಅತ್ಯಂತ ನತದೃಷ್ಟ ಆಟಗಾರ ರೋಹಿತ್ ಶರ್ಮಾ..!
ರೋಹಿತ್ ಶರ್ಮಾ
Follow us
|

Updated on:Nov 20, 2023 | 10:39 AM

ರೋಹಿತ್ ಶರ್ಮಾ (Rohit Sharma) ವಿಷಯ ಬಂದಾಗಲೆಲ್ಲಾ, ಅವರು ಸೀಮಿತ ಓವರ್​ಗಳ ಕ್ರಿಕೆಟ್‌ನ ಯಶಸ್ವಿ ಬ್ಯಾಟ್ಸ್‌ಮನ್ ಮತ್ತು ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ಮಾತು ಇಡೀ ಕ್ರಿಕೆಟ್​ ಜಗತ್ತಿನಿಂದಲೇ ಕೇಳಿಬರುವ ಮಾತಾಗಿದೆ. ಆದಾಗ್ಯೂ, ವಿಶ್ವಕಪ್ (ICC World Cup) ವಿಷಯದಲ್ಲಿ ಮಾತ್ರ ರೋಹಿತ್ ಅವರಷ್ಟು ದುರದೃಷ್ಟಕರ ಆಟಗಾರ ಜಗತ್ತಿನಲ್ಲಿ ಇನ್ನೊಬ್ಬನಿರಲಾರ ಎಂಬ ಮಾತು ಕೂಡ ಅಷ್ಟೇ ಸತ್ಯ. ನಿನ್ನೆ ನಡೆದ ವಿಶ್ವಕಪ್ ಫೈನಲ್ ಪಂದ್ಯವೇ ಇದಕ್ಕೆ ಸಾಕ್ಷಿಯಾಗಿದೆ. ನವೆಂಬರ್ 19ರ ಭಾನುವಾರದಂದು ನಡೆದ ವಿಶ್ವಕಪ್ ಫೈನಲ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾದ (India Vs Australia) ಎದುರು ಸೋಲಿಗೆ ಶರಣಾಯಿತು. ಇದರೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಎಂತಹ ದುರದೃಷ್ಟಕರ ಆಟಗಾರ ಎನ್ನುವುದಕ್ಕೆ ಈ ಪಂದ್ಯವೂ ಸಾಕ್ಷಿಯಾಯಿತು. ಹಾಗಿದ್ದರೆ ರೋಹಿತ್​ರನ್ನು ಏಕೆ ವಿಶ್ವಕಪ್ ವಿಷಯದಲ್ಲಿ ಕ್ರಿಕೆಟ್ ಲೋಕದ ಅತ್ಯಂತ ನತದೃಷ್ಟ ಆಟಗಾರ ಎನ್ನಲಾಗುತ್ತದೆ? ಇದರ ಹಿಂದಿನ ಕಾರಣಗಳೇನು ಎಂಬುದನ್ನು ನೋಡುವುದಾದರೆ..

ಮೊದಲ ವಿಶ್ವಕಪ್

2007 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರೋಹಿತ್ ಶರ್ಮಾ 2011 ರ ಏಕದಿನ ವಿಶ್ವಕಪ್ ಆಡಲು ಸಿದ್ಧರಾಗಿದ್ದರು. ಅವರನ್ನು ಸಂಭಾವ್ಯ ಆಟಗಾರರ ಪಟ್ಟಿಯಲ್ಲಿಯೂ ಸೇರಿಸಲಾಗಿತ್ತು. ಆದರೆ ಮುಖ್ಯ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ ಮತ್ತು ನಾಯಕ ಎಂಎಸ್ ಧೋನಿ, ರೋಹಿತ್ ಅವರ ಸ್ಥಾನಕ್ಕೆ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರನ್ನು ಆಯ್ಕೆ ಮಾಡಿದರು. ಈ ರೀತಿಯಾಗಿ, ರೋಹಿತ್ ತಮ್ಮ ಮೊದಲ ವಿಶ್ವಕಪ್ ಆಡುವ ಅವಕಾಶವನ್ನು ತಪ್ಪಿಸಿಕೊಂಡರು. ಆದರೆ ರೋಹಿತ್​ ನಂತರ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಕ್ಕಿತು. ಈ ಮೂಲಕ ರೋಹಿತ್ ಶರ್ಮಾ ಮೊದಲ ವಿಶ್ವಕಪ್​ನಿಂದ ವಂಚಿತರಾದರು.

‘ಕೋಚ್ ಆಗಿ ಅವರನ್ನು ಹೀಗೆ ನೋಡಲಾಗುತ್ತಿಲ್ಲ’; ಸೋಲಿನ ನಂತರ ದ್ರಾವಿಡ್ ಹೇಳಿದ್ದೇನು?

ಎರಡನೇ ವಿಶ್ವಕಪ್

ರೋಹಿತ್ ಶರ್ಮಾ ತಮ್ಮ ಮೊದಲ ವಿಶ್ವಕಪ್ ಆಡಲು ಬರೋಬ್ಬರಿ 8 ವರ್ಷಗಳು ಬೇಕಾಯಿತು. 2015 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ರೋಹಿತ್​ಗೆ ಚೊಚ್ಚಲ ವಿಶ್ವಕಪ್ ಆಡುವ ಅವಕಾಶ ಸಿಕ್ಕಿತು. ಆದರೆ ಸೆಮಿ-ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲುವುದರೊಂದಿಗೆ ತಂಡದ ವಿಶ್ವಕಪ್ ಪ್ರಯಾಣ ಅಂತ್ಯಗೊಂಡಿತ್ತು. ಈ ಪಂದ್ಯದಲ್ಲಿ ಆರಂಭಿಕರಾಗಿ ರೋಹಿತ್ ಉತ್ತಮ ಆರಂಭ ನೀಡಿದರಾದರೂ, ಮಧ್ಯಮ ಕ್ರಮಾಂಕವು ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ತಂಡವು ಸೆಮಿ ಫೈನಲ್​ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತು. ಆ ಟೂರ್ನಿಯಲ್ಲಿ ರೋಹಿತ್ ಶರ್ಮಾ ಒಂದು ಶತಕ ಹಾಗೂ ಎರಡು ಅರ್ಧ ಶತಕ ಸೇರಿದಂತೆ ಒಟ್ಟು 330 ರನ್ ಗಳಿಸಿದ್ದರು.

ಮೂರನೇ ವಿಶ್ವಕಪ್

2019 ರಲ್ಲಿ ರೋಹಿತ್​ಗೆ ಎರಡನೇ ಬಾರಿಗೆ ವಿಶ್ವಕಪ್ ಆಡುವ ಅವಕಾಶ ಸಿಕ್ಕಿತು. ಈ ಆವೃತ್ತಿಯಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಒಂದು ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಬಾರಿಸಿದರು. ಇದರೊಂದಿಗೆ ತಂಡವನ್ನು ಸೆಮಿಫೈನಲ್‌ಗೆ ನಂಬರ್ ಒನ್ ಆಗಿ ಕೊಂಡೊಯ್ದರು. ಆದಾಗ್ಯೂ, ಐದು ಶತಕಗಳನ್ನು ಗಳಿಸಿದ ರೋಹಿತ್, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಬೇಗನೆ ಔಟಾದರು. ಅವರ ವಿಕೆಟ್ ಪತನದ ಬಳಿಕ ಇಡೀ ತಂಡ ಒತ್ತಡಕ್ಕೆ ಸಿಲುಕಿತು. ಮತ್ತು ಆ ಸೆಮಿಫೈನಲ್ ಪಂದ್ಯದಲ್ಲೂ ಭಾರತ ಸೋತಿತು.

ನಾಲ್ಕನೇ ವಿಶ್ವಕಪ್

ಈ ಬಾರಿ ರೋಹಿತ್ ಶರ್ಮಾ ಅವರೇ ತಂಡದ ನಾಯಕರಾಗಿದ್ದು, ತಂಡಕ್ಕಾಗಿ ಸರ್ವಸ್ವನ್ನು ಧಾರೆ ಎರೆದಿದ್ದರು. ಇಡೀ ಟೂರ್ನಿಯಲ್ಲಿ ರೋಹಿತ್ ತಮ್ಮ ಅರ್ಧಶತಕಗಳ ಬಗ್ಗೆಯಾಗಲೀ, ತಮ್ಮ ಶತಕದ ಬಗ್ಗೆಯಾಗಲೀ ಹೆಚ್ಚು ಚಿಂತಿಸಲಿಲ್ಲ. ಕೇವಲ ತಂಡಕ್ಕಾಗಿ ಆಡಿದ ರೋಹಿತ್ ಪ್ರತಿ ಬಾರಿಯೂ ತಂಡಕ್ಕೆ ವೇಗದ ಆರಂಭವನ್ನು ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇಲ್ಲಿಯೂ ವಿಶ್ವಕಪ್ ಎತ್ತುವ ಅವಕಾಶವನ್ನು ಕಳೆದುಕೊಂಡರು. ಈ ಟೂರ್ನಿಯಲ್ಲಿ 597 ರನ್ ಕಲೆಹಾಕಿದ ರೋಹಿತ್, ಟ್ರೋಫಿ ಗೆಲ್ಲಲು ವಿಫಲರಾದರು. ಪಂದ್ಯದ ಬಳಿಕ ಮಾತನಾಡಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಕೂಡ ರೋಹಿತ್ ಶರ್ಮಾ ದುರದೃಷ್ಟಕರ ಆಟಗಾರ ಎಂಬುದನ್ನು ಬಹಿರಂಗವಾಗಿಯೇ ಹೇಳಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:34 am, Mon, 20 November 23

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್