AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC World Cup 2023: ಝಿಂಬಾಬ್ವೆಗೆ ಸೋಲುಣಿಸಿದ ಸ್ಕಾಟ್​ಲ್ಯಾಂಡ್

ICC World Cup Qualifiers 2023: ನಿರ್ಣಾಯಕ ಪಂದ್ಯದಲ್ಲಿ ಸೋತಿರುವ ಝಿಂಬಾಬ್ವೆ ಇನ್ನು ಸ್ಕಾಟ್​ಲ್ಯಾಂಡ್​ ತಂಡದ ಮುಂದಿನ ಫಲಿತಾಂಶವನ್ನು ಎದುರು ನೋಡಬೇಕಿದೆ.

ICC World Cup 2023: ಝಿಂಬಾಬ್ವೆಗೆ ಸೋಲುಣಿಸಿದ ಸ್ಕಾಟ್​ಲ್ಯಾಂಡ್
Scotland
TV9 Web
| Edited By: |

Updated on: Jul 04, 2023 | 7:58 PM

Share

ICC World Cup Qualifiers 2023: ಬುಲವಾಯೊದಲ್ಲಿ ನಡೆದ ಏಕದಿನ ವಿಶ್ವಕಪ್​ನ  ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಸ್ಕಾಟ್​ಲ್ಯಾಂಡ್ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಏಕದಿನ ವಿಶ್ವಕಪ್​ ಆಸೆಯನ್ನು ಸ್ಕಾಟ್​ಲ್ಯಾಂಟ್ ತಂಡವು ಜೀವಂತವಿರಿಸಿಕೊಂಡಿದೆ. ಇತ್ತ ನಿರ್ಣಾಯಕ ಪಂದ್ಯದಲ್ಲಿ ಸೋತಿರುವ ಝಿಂಬಾಬ್ವೆ ಇನ್ನು ಸ್ಕಾಟ್​ಲ್ಯಾಂಡ್​ ತಂಡದ ಮುಂದಿನ ಫಲಿತಾಂಶವನ್ನು ಎದುರು ನೋಡಬೇಕಿದೆ. ಒಂದು ವೇಳೆ ನೆದರ್​ಲ್ಯಾಂಡ್ಸ್​ ವಿರುದ್ಧದ ಕೊನೆಯ ಪಂದ್ಯದಲ್ಲಿ ಸ್ಕಾಟ್​ಲ್ಯಾಂಡ್ ಗೆದ್ದರೆ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ.

ಇನ್ನು ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸ್ಕಾಟ್​​ಲ್ಯಾಂಡ್ ತಂಡಕ್ಕೆ ಆರಂಭಿಕರಾದ ಕ್ರಿಸ್ಟೋಫರ್ (28) ಹಾಗೂ ಮ್ಯಾಥ್ಯೂ ಕ್ರಾಸ್ (38) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೆಕ್​ಮುಲ್ಲೆನ್ 34 ರನ್ ಬಾರಿಸಿದರೆ, ಮುನ್ಸಿ 31 ರನ್​ಗಳ ಕೊಡುಗೆ ನೀಡಿದರು. ಪರಿಣಾಮ 25 ಓವರ್​ಗಳಲ್ಲಿ ಸ್ಕಾಟ್​ಲ್ಯಾಂಡ್ ತಂಡದ ಮೊತ್ತ 100ರ ಗಡಿದಾಟಿತು.

ಈ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿದ ಶಾನ್ ವಿಲಿಯಮ್ಸ್ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮೈಕಲ್ ಲೀಸ್ಕ್​ 34 ಎಸೆತಗಳಲ್ಲಿ 48 ರನ್​ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದರೊಂದಿಗೆ ಸ್ಕಾಟ್​ಲ್ಯಾಂಡ್ ತಂಡವು ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 234 ರನ್​ ಪೇರಿಸಿತು.

235 ರನ್​ಗಳ ಗುರಿ ಪಡೆದ ಝಿಂಬಾಬ್ವೆ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇನಿಂಗ್ಸ್​ನ ಮೊದಲ ಎಸೆತದಲ್ಲೇ ಜಾಯ್ಲಾರ್ಡ್ ಗುಂಬಿ (0) ಕ್ರಿಸ್ ಸೋಲ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಾಯಕ ಕ್ರೇಗ್ ಇರ್ವಿನ್ (2) ಕೂಡ ಸೋಲ್ ಎಸೆತದಲ್ಲಿ ಬೌಲ್ಡ್​ ಆದರು.

ಇನ್ನು ಇನ್ನೊಸೆಂಟ್ ಕೈಯ (12) ಬಂದ ವೇಗದಲ್ಲೇ ಹಿಂತಿರುಗಿದರೆ, ಶಾನ್ ವಿಲಿಯಮ್ಸ್ 12 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಕೇವಲ 37 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಸಿಕಂದರ್ ರಾಝ ಹಾಗೂ ರಯಾನ್ ಬರ್ಲ್ ಆಸರೆಯಾದರು.

ಉತ್ತಮ ಜೊತೆಯಾಟ ಪ್ರದರ್ಶಿಸಿದ ಈ ಜೋಡಿ 5ನೇ ವಿಕೆಟ್​ಗೆ 54 ರನ್ ಪೇರಿಸಿದರು. ಆದರೆ ಈ ಹಂತದಲ್ಲಿ 34 ರನ್​ಗಳಿಸಿದ್ದ ಸಿಕಂದರ್ ರಾಝ ಕ್ರಿಸ್ ಗ್ರೀವ್ಸ್​​ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ರಯಾನ್ ಬರ್ಲ್ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಅಲ್ಲದೆ​ ವೆಸ್ಲಿ ಮಾಧೆವೆರೆ (40) ಜೊತೆಗೂಡಿ 73 ರನ್​ಗಳ ಜೊತೆಯಾಟವಾಡಿದರು.

ಈ ಹಂತದಲ್ಲಿ ದಾಳಿಗಿಳಿದ ಮಾರ್ಕ್​ ವ್ಯಾಟ್ ಎಸೆತದಲ್ಲಿ ಮಾಧೆವೆರೆ ಎಲ್​ಬಿಡಬ್ಲ್ಯೂ ಆದರು. ಇದರ ಬೆನ್ನಲ್ಲೇ ವೆಲ್ಲಿಂಗ್ಟನ್ ಮಸಕಡ್ಝ (5) ಕೂಡ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ರಯಾನ್ ಬರ್ಲ್ ಅರ್ಧಶತಕ ಪೂರೈಸಿದರು.

ಕೊನೆಯ 15 ಓವರ್​ಗಳಲ್ಲಿ ಝಿಂಬಾಬ್ವೆಗೆ ಗೆಲ್ಲಲು 58 ರನ್​ಗಳ ಅವಶ್ಯಕತೆಯಿತ್ತು. ಅತ್ತ ಸ್ಕಾಟ್​ಲ್ಯಾಂಡ್​ ತಂಡಕ್ಕೆ 3 ವಿಕೆಟ್​ಗಳ ಅಗತ್ಯತೆಯಿತ್ತು. ಈ ಹಂತದಲ್ಲಿ ರಿಚರ್ಡ್ (2) ಔಟಾದರು. ಇದರ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್​ ಮೂಲಕ 83 ರನ್​ಗಳಿಸಿದ್ದ ರಯಾನ್ ಬರ್ಲ್​ ಕೂಡ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಝಿಂಬಾಬ್ವೆ ತಂಡವು 203 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಸ್ಕಾಟ್​ಲ್ಯಾಂಡ್ ತಂಡವು 31 ರನ್​ಗಳ ಜಯ ಸಾಧಿಸಿತು.

ಝಿಂಬಾಬ್ವೆ ಪ್ಲೇಯಿಂಗ್ 11: ಜಾಯ್ಲಾರ್ಡ್ ಗುಂಬಿ (ವಿಕೆಟ್ ಕೀಪರ್) , ಕ್ರೇಗ್ ಇರ್ವಿನ್ (ನಾಯಕ) , ಇನೋಸೆಂಟ್ ಕೈಯಾ , ಶಾನ್ ವಿಲಿಯಮ್ಸ್ , ಸಿಕಂದರ್ ರಾಝ , ರಯಾನ್ ಬರ್ಲ್ , ವೆಸ್ಲಿ ಮಾಧೆವೆರೆ , ವೆಲ್ಲಿಂಗ್ಟನ್ ಮಸಕಡ್ಝ , ರಿಚರ್ಡ್ ನಾಗರವಾ , ಟೆಂಡೈ ಚಟಾರಾ , ಬ್ಲೆಸ್ಸಿಂಗ್ ಮುಜರಬಾನಿ.

ಇದನ್ನೂ ಓದಿ: IND vs AUS: ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್​ ಪ್ಲ್ಯಾನ್..!

ಸ್ಕಾಟ್​ಲ್ಯಾಂಡ್​ ಪ್ಲೇಯಿಂಗ್ 11: ಕ್ರಿಸ್ಟೋಫರ್ ಮೆಕ್‌ಬ್ರೈಡ್ , ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್) , ಬ್ರಾಂಡನ್ ಮೆಕ್‌ಮುಲ್ಲೆನ್ , ಜಾರ್ಜ್ ಮುನ್ಸಿ , ರಿಚಿ ಬೆರಿಂಗ್ಟನ್ (ನಾಯಕ) , ತೋಮಸ್ ಮ್ಯಾಕಿಂತೋಷ್ , ಮೈಕೆಲ್ ಲೀಸ್ಕ್ , ಕ್ರಿಸ್ ಗ್ರೀವ್ಸ್ , ಮಾರ್ಕ್ ವ್ಯಾಟ್ , ಸಫ್ಯಾನ್ ಷರೀಫ್ , ಕ್ರಿಸ್ ಸೋಲ್.

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?