AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ! ಈ 7 ವರ್ಷಗಳಲ್ಲಿ ಪ್ರಮುಖ 6 ಐಸಿಸಿ ಟ್ರೋಫಿ ಭಾರತದ ಕೈತಪ್ಪಿದೆ

Team India: 2014 ರಿಂದ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದವರೆಗೆ, ಐಸಿಸಿ ಈವೆಂಟ್‌ಗಳ ನಾಕೌಟ್ ಪಂದ್ಯಗಳಲ್ಲಿ ಭಾರತ ಆರು ಬಾರಿ ಸೋತಿದೆ.

ಪೃಥ್ವಿಶಂಕರ
| Updated By: shruti hegde|

Updated on: Jun 24, 2021 | 9:34 AM

Share
2021 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಪಂದ್ಯದ ಆರನೇ ದಿನದವರೆಗೂ ನಡೆದ ಪಂದ್ಯದಲ್ಲಿ ಕಿವಿ ತಂಡವು ಎಂಟು ವಿಕೆಟ್‌ಗಳಿಂದ ಜಯಗಳಿಸಿತು. ಭಾರತ 139 ರನ್‌ಗಳ ಗುರಿ ನೀಡಿತ್ತು. ಈ ರೀತಿಯಾಗಿ, ಐಸಿಸಿ ಪಂದ್ಯಾವಳಿಯ ನಾಕೌಟ್ ಪಂದ್ಯಗಳಲ್ಲಿ ಭಾರತದ ಸೋಲಿನ ಹಾದಿ ಮುಂದುವರೆದಿದೆ. 2013 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ನಂತರ, ಭಾರತೀಯ ತಂಡವು ಪ್ರತಿ ಬಾರಿಯೂ ಐಸಿಸಿ ಪಂದ್ಯಾವಳಿಗಳ ಸೆಮಿಫೈನಲ್ ಅಥವಾ ಫೈನಲ್ ತಲುಪಿದೆ ಆದರೆ ಅವರಿಗೆ ಟ್ರೋಫಿ ಪಡೆಯಲು ಸಾಧ್ಯವಾಗಲಿಲ್ಲ. 2014 ರಿಂದ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದವರೆಗೆ, ಐಸಿಸಿ ಈವೆಂಟ್‌ಗಳ ನಾಕೌಟ್ ಪಂದ್ಯಗಳಲ್ಲಿ ಭಾರತ ಆರು ಬಾರಿ ಸೋತಿದೆ.

2021 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಪಂದ್ಯದ ಆರನೇ ದಿನದವರೆಗೂ ನಡೆದ ಪಂದ್ಯದಲ್ಲಿ ಕಿವಿ ತಂಡವು ಎಂಟು ವಿಕೆಟ್‌ಗಳಿಂದ ಜಯಗಳಿಸಿತು. ಭಾರತ 139 ರನ್‌ಗಳ ಗುರಿ ನೀಡಿತ್ತು. ಈ ರೀತಿಯಾಗಿ, ಐಸಿಸಿ ಪಂದ್ಯಾವಳಿಯ ನಾಕೌಟ್ ಪಂದ್ಯಗಳಲ್ಲಿ ಭಾರತದ ಸೋಲಿನ ಹಾದಿ ಮುಂದುವರೆದಿದೆ. 2013 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ನಂತರ, ಭಾರತೀಯ ತಂಡವು ಪ್ರತಿ ಬಾರಿಯೂ ಐಸಿಸಿ ಪಂದ್ಯಾವಳಿಗಳ ಸೆಮಿಫೈನಲ್ ಅಥವಾ ಫೈನಲ್ ತಲುಪಿದೆ ಆದರೆ ಅವರಿಗೆ ಟ್ರೋಫಿ ಪಡೆಯಲು ಸಾಧ್ಯವಾಗಲಿಲ್ಲ. 2014 ರಿಂದ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದವರೆಗೆ, ಐಸಿಸಿ ಈವೆಂಟ್‌ಗಳ ನಾಕೌಟ್ ಪಂದ್ಯಗಳಲ್ಲಿ ಭಾರತ ಆರು ಬಾರಿ ಸೋತಿದೆ.

1 / 6
2014 ರ ವಿಶ್ವ ಟಿ 20 ಫೈನಲ್ - ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಫೈನಲ್ ತಲುಪಿತು. ಆದರೆ ಶ್ರೀಲಂಕಾ, ಭಾರತವನ್ನು ಚಾಂಪಿಯನ್ ಆಗುವುದನ್ನು ತಡೆಯಿತು. ಈ ಪಂದ್ಯದ ವೇಳೆ ಲಸಿತ್ ಮಾಲಿಂಗ ಅದ್ಭುತ ಬೌಲಿಂಗ್ ಮಾಡಿದರು ಮತ್ತು ಕೊನೆಯ ಓವರ್‌ನಲ್ಲಿ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಮಲಿಂಗ ಎದುರು ರನ್ ಗಳಿಸಲು ಕಷ್ಟಪಟ್ಟರು. ಇದು ಮಹೇಲ ಜಯವರ್ಧನೆ ಮತ್ತು ಕುಮಾರ್ ಸಂಗಕ್ಕಾರ ಅವರ ಕೊನೆಯ ಪಂದ್ಯವಾಗಿತ್ತು. ಮೊದಲು ಆಡಿದ ಭಾರತ ನಾಲ್ಕು ವಿಕೆಟ್‌ಗಳಿಗೆ 130 ರನ್ ಗಳಿಸಿತು. ಇದನ್ನು ಶ್ರೀಲಂಕಾ 17.5 ಓವರ್‌ಗಳಲ್ಲಿ ಬೆನ್ನಟ್ಟಿತು.

2014 ರ ವಿಶ್ವ ಟಿ 20 ಫೈನಲ್ - ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಫೈನಲ್ ತಲುಪಿತು. ಆದರೆ ಶ್ರೀಲಂಕಾ, ಭಾರತವನ್ನು ಚಾಂಪಿಯನ್ ಆಗುವುದನ್ನು ತಡೆಯಿತು. ಈ ಪಂದ್ಯದ ವೇಳೆ ಲಸಿತ್ ಮಾಲಿಂಗ ಅದ್ಭುತ ಬೌಲಿಂಗ್ ಮಾಡಿದರು ಮತ್ತು ಕೊನೆಯ ಓವರ್‌ನಲ್ಲಿ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಮಲಿಂಗ ಎದುರು ರನ್ ಗಳಿಸಲು ಕಷ್ಟಪಟ್ಟರು. ಇದು ಮಹೇಲ ಜಯವರ್ಧನೆ ಮತ್ತು ಕುಮಾರ್ ಸಂಗಕ್ಕಾರ ಅವರ ಕೊನೆಯ ಪಂದ್ಯವಾಗಿತ್ತು. ಮೊದಲು ಆಡಿದ ಭಾರತ ನಾಲ್ಕು ವಿಕೆಟ್‌ಗಳಿಗೆ 130 ರನ್ ಗಳಿಸಿತು. ಇದನ್ನು ಶ್ರೀಲಂಕಾ 17.5 ಓವರ್‌ಗಳಲ್ಲಿ ಬೆನ್ನಟ್ಟಿತು.

2 / 6
2015 ರ ವಿಶ್ವಕಪ್ ಸೆಮಿಫೈನಲ್ - ಹಾಲಿ ಚಾಂಪಿಯನ್‌ನಂತೆ ಭಾರತ ಪಂದ್ಯಾವಳಿಯನ್ನು ಪ್ರವೇಶಿಸಿತು. ನಂತರ ಇಡೀ ಪಂದ್ಯಾವಳಿಯಲ್ಲಿ ಅದ್ಭುತ ಆಟವನ್ನು ಆಡಿತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿದರು. ಇಲ್ಲಿ ಭಾರತ ತಂಡ 95 ರನ್‌ಗಳಿಂದ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಏಳು ವಿಕೆಟ್‌ಗಳಿಗೆ 328 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತವನ್ನು 233 ರನ್‌ಗಳಿಗೆ ಆಲ್​ಔಟಾಯಿತು. ಆಸ್ಟ್ರೇಲಿಯಾ ಅಂತಿಮ ಪಂದ್ಯವನ್ನು ಗೆದ್ದು ಐದನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು.

2015 ರ ವಿಶ್ವಕಪ್ ಸೆಮಿಫೈನಲ್ - ಹಾಲಿ ಚಾಂಪಿಯನ್‌ನಂತೆ ಭಾರತ ಪಂದ್ಯಾವಳಿಯನ್ನು ಪ್ರವೇಶಿಸಿತು. ನಂತರ ಇಡೀ ಪಂದ್ಯಾವಳಿಯಲ್ಲಿ ಅದ್ಭುತ ಆಟವನ್ನು ಆಡಿತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿದರು. ಇಲ್ಲಿ ಭಾರತ ತಂಡ 95 ರನ್‌ಗಳಿಂದ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಏಳು ವಿಕೆಟ್‌ಗಳಿಗೆ 328 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತವನ್ನು 233 ರನ್‌ಗಳಿಗೆ ಆಲ್​ಔಟಾಯಿತು. ಆಸ್ಟ್ರೇಲಿಯಾ ಅಂತಿಮ ಪಂದ್ಯವನ್ನು ಗೆದ್ದು ಐದನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು.

3 / 6
2016 ವಿಶ್ವ ಟಿ 20 ಸೆಮಿ ಫೈನಲ್- ಈ ಪಂದ್ಯಾವಳಿಯನ್ನು ಭಾರತದಲ್ಲಿ ಆಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎರಡು ವಿಕೆಟ್‌ಗಳಿಗೆ 192 ರನ್ ಗಳಿಸಿದರು. ಆದರೆ ವೆಸ್ಟ್ ಇಂಡೀಸ್ ಭಾರತದ ಗೆಲುವಿನ ಭರವಸೆಯನ್ನು ಮುರಿಯಿತು. ವಿಂಡೀಸ್ ತಂಡವು ಎರಡು ಎಸೆತಗಳನ್ನು ಉಳಿಸಿಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ನಂತರ, ವೆಸ್ಟ್ ಇಂಡೀಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

2016 ವಿಶ್ವ ಟಿ 20 ಸೆಮಿ ಫೈನಲ್- ಈ ಪಂದ್ಯಾವಳಿಯನ್ನು ಭಾರತದಲ್ಲಿ ಆಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎರಡು ವಿಕೆಟ್‌ಗಳಿಗೆ 192 ರನ್ ಗಳಿಸಿದರು. ಆದರೆ ವೆಸ್ಟ್ ಇಂಡೀಸ್ ಭಾರತದ ಗೆಲುವಿನ ಭರವಸೆಯನ್ನು ಮುರಿಯಿತು. ವಿಂಡೀಸ್ ತಂಡವು ಎರಡು ಎಸೆತಗಳನ್ನು ಉಳಿಸಿಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ನಂತರ, ವೆಸ್ಟ್ ಇಂಡೀಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

4 / 6
2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ - ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ, ಭಾರತ ತಂಡವು ಮೊದಲ ಬಾರಿಗೆ ಐಸಿಸಿ ಪಂದ್ಯಾವಳಿಯ ಫೈನಲ್ ತಲುಪಿತು. ಆದರೆ ಪಾಕಿಸ್ತಾನದ ಎದುರು ಸೋಲೊಪ್ಪಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಾಲ್ಕು ವಿಕೆಟ್‌ಗೆ 338 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ತಂಡ 158 ರನ್‌ಗಳಿಗೆ ಆಲ್​ಔಟಾಯಿತು.

2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ - ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ, ಭಾರತ ತಂಡವು ಮೊದಲ ಬಾರಿಗೆ ಐಸಿಸಿ ಪಂದ್ಯಾವಳಿಯ ಫೈನಲ್ ತಲುಪಿತು. ಆದರೆ ಪಾಕಿಸ್ತಾನದ ಎದುರು ಸೋಲೊಪ್ಪಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಾಲ್ಕು ವಿಕೆಟ್‌ಗೆ 338 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ತಂಡ 158 ರನ್‌ಗಳಿಗೆ ಆಲ್​ಔಟಾಯಿತು.

5 / 6
2019 ರ ವಿಶ್ವಕಪ್ ಸೆಮಿಫೈನಲ್ - ಮತ್ತೊಮ್ಮೆ ಭಾರತೀಯ ತಂಡ ಐಸಿಸಿ ಪಂದ್ಯಾವಳಿಯ ನಾಕೌಟ್ ಹಂತವನ್ನು ತಲುಪಿತು. ಈ ಬಾರಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ನ್ನು ಎದುರಿಸಿತು. ಕೇನ್ ವಿಲಿಯಮ್ಸನ್ ನಾಯಕತ್ವ ವಹಿಸಿದ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಎಂಟು ವಿಕೆಟ್‌ಗಳಿಗೆ 239 ರನ್ ಗಳಿಸಿತು. ಈ ಪಂದ್ಯದಲ್ಲಿ ಮಳೆಯ ನೆರಳು ಇತ್ತು. ಅಂತಹ ಪರಿಸ್ಥಿತಿಯಲ್ಲಿ, ಭಾರತ ಮೀಸಲು ದಿನದಂದು ಬ್ಯಾಟಿಂಗ್ ಮಾಡಿತು ಮತ್ತು ಕೇವಲ 221 ರನ್ ಗಳಿಸಲು ಸಾಧ್ಯವಾಯಿತು. ಹೀಗಾಗಿ ಭಾರತ 18 ರನ್‌ಗಳಿಂದ ಸೋಲಬೇಕಾಯಿತು.

2019 ರ ವಿಶ್ವಕಪ್ ಸೆಮಿಫೈನಲ್ - ಮತ್ತೊಮ್ಮೆ ಭಾರತೀಯ ತಂಡ ಐಸಿಸಿ ಪಂದ್ಯಾವಳಿಯ ನಾಕೌಟ್ ಹಂತವನ್ನು ತಲುಪಿತು. ಈ ಬಾರಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ನ್ನು ಎದುರಿಸಿತು. ಕೇನ್ ವಿಲಿಯಮ್ಸನ್ ನಾಯಕತ್ವ ವಹಿಸಿದ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಎಂಟು ವಿಕೆಟ್‌ಗಳಿಗೆ 239 ರನ್ ಗಳಿಸಿತು. ಈ ಪಂದ್ಯದಲ್ಲಿ ಮಳೆಯ ನೆರಳು ಇತ್ತು. ಅಂತಹ ಪರಿಸ್ಥಿತಿಯಲ್ಲಿ, ಭಾರತ ಮೀಸಲು ದಿನದಂದು ಬ್ಯಾಟಿಂಗ್ ಮಾಡಿತು ಮತ್ತು ಕೇವಲ 221 ರನ್ ಗಳಿಸಲು ಸಾಧ್ಯವಾಯಿತು. ಹೀಗಾಗಿ ಭಾರತ 18 ರನ್‌ಗಳಿಂದ ಸೋಲಬೇಕಾಯಿತು.

6 / 6