AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಫೀಲ್ಡಿಂಗ್ ಸೆಟ್ಟಿಂಗ್​ನಲ್ಲಿ ಟೀಮ್ ಇಂಡಿಯಾಗೆ ಮೋಸ ಮಾಡಿದ ಇಂಗ್ಲೆಂಡ್..!

India vs England Test: ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 387 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ 387 ರನ್​ಗಳಿಸಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 2 ರನ್​ ಕಲೆಹಾಕಿದೆ.

IND vs ENG: ಫೀಲ್ಡಿಂಗ್ ಸೆಟ್ಟಿಂಗ್​ನಲ್ಲಿ ಟೀಮ್ ಇಂಡಿಯಾಗೆ ಮೋಸ ಮಾಡಿದ ಇಂಗ್ಲೆಂಡ್..!
Ind Vs Eng
ಝಾಹಿರ್ ಯೂಸುಫ್
|

Updated on: Jul 13, 2025 | 11:59 AM

Share

ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ವೇಳೆ ಬೆನ್ ಸ್ಟೋಕ್ಸ್ ಪಡೆ ಮೋಸದಿಂದ ಟೀಮ್ ಇಂಡಿಯಾವನ್ನು ಕಟ್ಟಿ ಹಾಕಿದ್ರಾ? ಭಾರತದ ಲೆಜೆಂಡ್ ಸುನಿಲ್ ಗವಾಸ್ಕರ್ ಎತ್ತಿರುವ ಪ್ರಶ್ನೆಗಳಿಂದ ಇಂತಹದೊಂದು ಅನುಮಾನ ಹುಟ್ಟಿಕೊಂಡಿದೆ. ಏಕೆಂದರೆ ಇಂಗ್ಲೆಂಡ್ ತಂಡವು ರಿಷಭ್ ಪಂತ್ ವಿಕೆಟ್ ಪಡೆಯಲು ಲೆಗ್​ ಸೈಡ್​ನಲ್ಲಿ ಹೆಚ್ಚುವರಿ ಫೀಲ್ಡರ್​ಗಳನ್ನು ಬಳಸಿಕೊಂಡಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ  ಲೆಗ್ ಸೈಡ್​ನಲ್ಲಿ ಗರಿಷ್ಠ ಐವರು ಫೀಲ್ಡರ್​ಗಳನ್ನು ಮಾತ್ರ ನಿಲ್ಲಿಸಲು ಅನುಮತಿಸಲಾಗಿದೆ. ಆದರೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ರಿಷಭ್ ಪಂತ್​ ವಿಕೆಟ್​ಗಾಗಿ ಡೀಪ್ ಫೈನ್ ಲೆಗ್‌ನಿಂದ ಲಾಂಗ್ ಆನ್‌ವರೆಗೆ ವಿವಿಧ ಸ್ಥಾನಗಳಲ್ಲಿ ಸುಮಾರು 7-8 ಫೀಲ್ಡರ್‌ಗಳನ್ನು ನಿಯೋಜಿಸಿದ್ದರು. ಇದು ಕ್ರಿಕೆಟ್ ನಿಯಮದ ಉಲ್ಲಂಘನೆ ಎಂದು ಸುನಿಲ್ ಗವಾಸ್ಕರ್ ಆರೋಪಿಸಿದ್ದಾರೆ.

ರಿಷಭ್ ಪಂತ್ ಅವರ ವಿಕೆಟ್ ಪಡೆಯಲು ಬೆನ್ ಸ್ಟೋಕ್ಸ್​ ಡೀಪ್ ಫೈನ್ ಲೆಗ್‌ನಿಂದ ಲಾಂಗ್ ಆನ್‌ವರೆಗೆ ವಿವಿಧ ಭಾಗಗಳಲ್ಲಿ ಸುಮಾರು 7-8 ಫೀಲ್ಡರ್‌ಗಳನ್ನು ನಿಯೋಜಿಸಿದ್ದರು. ಅಲ್ಲದೆ ವೇಗದ ಬೌಲರ್​ಗಳಿಗೆ ಬೌನ್ಸರ್ ಹಾಗೂ ಶಾರ್ಟ್ ಪಿಚ್ ಎಸೆತಗಳನ್ನು ಎಸೆಯುವಂತೆ ಸೂಚಿಸಿದ್ದರು. ಈ ಮೂಲಕ ಪಂತ್ ವಿಕೆಟ್ ಪಡೆಯಲು ಇಂಗ್ಲೆಂಡ್ ಪ್ಲ್ಯಾನ್ ರೂಪಿಸಿದ್ದರು.

ಆದರೆ ಹೀಗೆ ಒಂದೇ ಬದಿಯಲ್ಲಿ 7 ರಿಂದ 8 ಫೀಲ್ಡರ್​ಗಳನ್ನು ಬಳಸಿಕೊಂಡಿರುವುದು ಅಚ್ಚರಿ. ಅದರಲ್ಲೂ ಲೆಗ್ ಸೈಡ್​ನಲ್ಲಿ ಕೇವಲ 5 ಐವರು ಫೀಲ್ಡರ್​ಗಳನ್ನು ಮಾತ್ರ ನಿಲ್ಲಿಸಲು ಅವಕಾಶವಿದ್ದರೂ, ಇಂಗ್ಲೆಂಡ್​ಗೆ ಅದೇಗೆ ಹೆಚ್ಚುವರಿ ಫೀಲ್ಡರ್​ಗಳನ್ನು ನಿಲ್ಲಿಸಲು ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಸುನಿಲ್ ಗವಾಸ್ಕರ್ ಹೇಳಿದ್ದೇನು?

ಈ ಬಗ್ಗೆ ಕಾಮೆಂಟ್ರಿ ಬಾಕ್ಸ್​ನಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಇದನ್ನು ಕ್ರಿಕೆಟ್ ಎಂದು ಕರೆಯಲಾಗುವುದಿಲ್ಲ. ಏಕೆಂದರೆ ಇದು ಕ್ರಿಕೆಟ್‌ಗೆ ವಿರುದ್ಧವಾಗಿದೆ. ಒಂದು ಸಮಯದಲ್ಲೇ ಲೆಗ್ ಸೈಡ್‌ನಲ್ಲಿ 6 ಕ್ಕಿಂತ ಹೆಚ್ಚು ಫೀಲ್ಡರ್‌ಗಳು ಇರಬಾರದು. ನಮ್ಮ ಕಾಲದಲ್ಲಿ ಒಂದೇ ಓವರ್​ನಲ್ಲಿ ಎಷ್ಟು ಬೌನ್ಸರ್​ಗಳನ್ನು ಎಸೆಯಲು ಅವಕಾಶವಿತ್ತು. ವೆಸ್ಟ್ ಇಂಡೀಸ್ ಬೌಲರ್​ಗಳು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದರು. ಈ ಮೂಲಕ ಅನೇಕ ಬ್ಯಾಟ್ಸ್​ಮನ್​ಗಳ ಗಾಯಗೊಳಿಸಿದ್ದರು.

ಆ ಬಳಿಕ ಈ ಬಗ್ಗೆ ಇಂಗ್ಲೆಂಡ್ ಚಕಾರವೆತ್ತಿ ಈ ಬೌನ್ಸರ್​ಗಳ ಸಂಖ್ಯೆಯನ್ನು ಓವರ್​ಗೆ 2 ಕ್ಕೆ ಇಳಿಸಿದ್ದರು. ಇದೀಗ ಅದೇ ಇಂಗ್ಲೆಂಡ್ ಗಾಯಗೊಂಡಿದ್ದ ರಿಷಭ್ ಪಂತ್ ಅವರನ್ನು ಶಾರ್ಟ್ ಎಸೆತಗಳ ಮೂಲಕ ಗುರಿಯಾಗಿಸಿದ್ದಾರೆ. ಲೆಗ್ ಸೈಡ್​ನಲ್ಲಿ ಹೆಚ್ಚು ಫೀಲ್ಡರ್​ಗಳನ್ನು ನಿಲ್ಲಿಸಿ ಶಾರ್ಟ್ ಬಾಲ್​ನಿಂದ ದಾಳಿ ಸಂಘಟಿಸಿರುವುದು ನನ್ನ ಪ್ರಕಾರ ತಪ್ಪು ಎಂದಿದ್ದಾರೆ.

ಇದನ್ನೂ ಓದಿ: ಒಂದು ಸೆಂಚುರಿಯೊಂದಿಗೆ 6 ಭರ್ಜರಿ ದಾಖಲೆ ಬರೆದ ಕೆಎಲ್ ರಾಹುಲ್

ಅಷ್ಟೇ ಅಲ್ಲದೆ ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ. ಗಂಗೂಲಿ ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಯಮಗಳು ಮತ್ತು ಆಟದ ಪರಿಸ್ಥಿತಿಗಳಲ್ಲಿ ಬದಲಾವಣೆಗಳು  ಅಥವಾ ತಿದ್ದುಪಡಿಗಳಿಗೆ ಸಲಹೆಗಳನ್ನು ನೀಡುತ್ತದೆ. ಹೀಗಾಗಿ ಫೀಲ್ಡರ್​ಗಳ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲು ಸೌರವ್ ಗಂಗೂಲಿ ನೇತೃತ್ವ ಸಮಿತಿ ಮುಂದಾಗಬೇಕೆಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು