AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishabh Pant: ನಮೀಬಿಯಾ ಬ್ಯಾಟರ್​ನ ಬ್ಯಾಟ್​ಗೆ ಮೆಟ್ಟಿದ ರಿಷಭ್ ಪಂತ್: ತಪ್ಪು ಗೊತ್ತಾಗಿ ತಕ್ಷಣ ಮಾಡಿದ್ದೇನು ನೋಡಿ

Rishabh Pant respects bat, IND vs NAM: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತೀಯರು ಹೆಮ್ಮೆ ಪಡುವಂತಹ ಕೆಲಸವೊಂದನ್ನು ರಿಷಭ್ ಪಂತ್ ಮಾಡಿದ್ದಾರೆ. ರನೌಟ್ ಮಾಡುವ ಭರದಲ್ಲಿ ಡೈವ್ ಹೊಡೆದಿದ್ದ ಎದುರಾಳಿಯ ಬ್ಯಾರ್​ನ ಬ್ಯಾಟ್​ ಮೇಲೆ ಅರಿವಿಲ್ಲದೆ ಪಂತ್ ಮೆಟ್ಟಿದ್ದಾರೆ. ಆಗ ಅವು ಏನು ಮಾಡಿದರು ನೋಡಿ.

Rishabh Pant: ನಮೀಬಿಯಾ ಬ್ಯಾಟರ್​ನ ಬ್ಯಾಟ್​ಗೆ ಮೆಟ್ಟಿದ ರಿಷಭ್ ಪಂತ್: ತಪ್ಪು ಗೊತ್ತಾಗಿ ತಕ್ಷಣ ಮಾಡಿದ್ದೇನು ನೋಡಿ
Rishabh Pant steps on bat
TV9 Web
| Edited By: |

Updated on: Nov 09, 2021 | 11:22 AM

Share

ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯಿಂದ ಭಾರತ ಕ್ರಿಕೆಟ್ ತಂಡ (Team India) ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದರೂ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ. ಕೊನೇ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಫ್ಯಾನ್ಸ್​ಗೆ ಸಾಕಷ್ಟು ಮನರಂಜನೆ ನೀಡಿತು. ಟ್ರೋಫಿ ಗೆದ್ದಿಲ್ಲ ಎಂಬುದೊಂದು ಬಿಟ್ಟರೆ ಅನೇಕ ವಿಚಾರಗಳಿಂದ ವಿರಾಟ್ ಕೊಹ್ಲಿ (Virat Kohli) ಪಡೆ ಭಾರತೀಯ ಕ್ರಿಕೆಟ್ ಪ್ರಿಯರು ಹೆಮ್ಮೆ ಪಡುವಂತೆ ಮಾಡಿದೆ. ಮೊನ್ನೆಯಷ್ಟೆ ಸ್ಕಾಟ್ಲೆಂಡ್ (India vs Scotland) ವಿರುದ್ಧ ಗೆದ್ದ ಬಳಿಕ ಅವರ ಡ್ರೆಸ್ಸಿಂಗ್ ರೂಮ್​ಗೆ (Dressing Room) ತೆರಳಿ ಎದುರಾಳಿ ನಾಯಕನ ಆಸೆಯನ್ನು ಕೊಹ್ಲಿ ಈಡೇರಿಸಿದ್ದರು. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸದ್ಯ ನಮೀಬಿಯಾ (India vs Namibia) ವಿರುದ್ಧದ ಪಂದ್ಯದಲ್ಲೂ ಭಾರತೀಯರು ಹೆಮ್ಮೆ ಪಡುವಂತಹ ಕೆಲಸವೊಂದನ್ನು ರಿಷಭ್ ಪಂತ್ (Rishabh Pant) ಮಾಡಿದ್ದಾರೆ.

9ನೇ ಓವರ್ ಬೌಲಿಂಗ್ ಮಾಡಲು ಬಂದ ರಾಹುಲ್ ಚಹಾರ್ ಅವರ ಎಸೆತದಲ್ಲಿ ನಮೀಬಿಯಾ ನಾಯಕ ಗೆರ್​ಹಾರ್ಡ್ ಎರಾಸ್ಮಾಸ್ ಸಿಂಗಲ್ ರನ್​ಗೆಂದು ಓಡಿದರು. ಈ ಸಂದರ್ಭ ನಾನ್ ಸ್ಟ್ರೈಕ್​ನಲ್ಲಿದ್ದ ಲೊಫ್ಟೀ ಎಟಾನ್ ರನೌಟ್​ನಿಂದ ಪಾರಾಗಲು ಕೀಪರ್ ಪಡೆ ಓಡಿ ಬಂದು ಡೈವ್ ಹೊಡೆದರು. ಇತ್ತ ರನೌಟ್ ಮಾಡುವ ಯೋಜನೆಯಲ್ಲಿದ್ದ ರಿಷಭ್ ಪಂತ್ ಚೆಂಡನ್ನು ವಿಕೆಟ್​ಗೆ ತಾಗಿಸುವ ಭರದಲ್ಲಿ ಡೈವ್ ಹೊಡೆದಿದ್ದ ಲೊಫ್ಟೀ ಎಟಾನ್ ಅವರ ಬ್ಯಾಟ್​ ಮೇಲೆ ಅರಿವಿಲ್ಲದೆ ಕಾಲಿಟ್ಟರು.

ನಮೀಬಿಯಾ ಬ್ಯಾಟರ್​ನ ಬ್ಯಾಟ್ ಮೇಲೆ ಕಾಲಿಟ್ಟಿದ್ದು ತಿಳಿದಾಗ ಪಂತ್ ಅವರು ತಕ್ಷಣವೇ ಹಿಂದೆ ಸರಿದು ಬ್ಯಾಟ್​ಗೆ ನಮಸ್ಕರಿಸಿದರು. ಎದುರಾಳಿಯ ಬ್ಯಾಟನ್ನು ಕೈಯಿಂದ ಮುಟ್ಟಿ ಎದೆಗೆ ಮತ್ತು ಹಣೆಗೆ ನಮಸ್ಕರಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಇದು ಭಾರತೀಯರ ಸಂಸ್ಕೃತಿ ಎಂದು ಟೀಮ್ ಇಂಡಿಯಾ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.

ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ಟ್ರೋಫಿ ಇಲ್ಲದೆ ತವರಿಗೆ ಹಿಂತಿರುಗಿದೆ ನಿಜ. ಆದರೆ, ಟೀಮ್ ಇಂಡಿಯಾ ಅನೇಕ ಬಾರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ. ಕೇವಲ ಫ್ಯಾನ್ಸ್​ ಮಾತ್ರವಲ್ಲದೆ ಇತರೆ ತಂಡಗಳು ಕೂಡ ಭಾರತವನ್ನು ಕೊಂಡಾಡಿದೆ.

ಇತ್ತೀಚೆಗಷ್ಟೆ ಸ್ಟಾಟ್ಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಎದುರಾಳಿಯ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಸರ್​ಪ್ರೈಸ್ ನೀಡಿದ್ದರು. ಇದು ಸ್ಕಾಟ್ಲೆಂಡ್ ನಾಯಕನ ಆಸೆ ಕೂಡ ಆಗಿತ್ತು. ಕೊಹ್ಲಿಯನ್ನು ನಮ್ಮ ಡ್ರೆಸ್ಸಿಂಗ್ ರೂಮ್​ಗೆ ಆಹ್ವಾನಿಸುತ್ತೇನೆ ಎಂದು ಸ್ಕಾಟ್ಲೆಂಡ್ ನಾಯಕ ಪಂದ್ಯಕ್ಕು ಮುನ್ನ ಹೇಳಿದ್ದರು. ಇದಕ್ಕಾಗಿ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ ಮತ್ತು ಕೆ. ಎಲ್ ರಾಹುಲ್ ಸ್ಕಾಟ್ಲೆಂಡ್ ಆಟಗಾರರಿದ್ದ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಕೆಲವೊಂದು ಕ್ರಿಕೆಟ್ ಟಿಪ್ಸ್ ನೀಡಿ ಕೆಲ ಸಮಯ ಮಾತುಕತೆ ನಡೆಸಿದ್ದರು.

Virat Kohli-Ravi Shastri: ಪಂದ್ಯ ಮುಗಿದ ತಕ್ಷಣ ಕೋಚ್ ರವಿಶಾಸ್ತ್ರಿ ಅವರನ್ನು ತಬ್ಬಿಕೊಂಡು ಭಾವುಕರಾದ ವಿರಾಟ್ ಕೊಹ್ಲಿ

Virat Kohli: ನಮೀಬಿಯಾ ವಿರುದ್ಧ ಗೆದ್ದ ಬಳಿಕ ವಿರಾಟ್ ಕೊಹ್ಲಿ ಆಡಿದ ಒಂದೊಂದು ಮಾತು ನೀವೇ ಕೇಳಿ

(India Batter Rishabh Pant accidentally steps on bat of Namibia batter immediately pays his respect viral news)

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು