
ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ 196 ರನ್ಗಳ ಗುರಿಯನ್ನು ನೀಡಿತು. ಜೇಸನ್ ಹೋಲ್ಡರ್ ಅಜೇಯ 37 ಮತ್ತು ರೋವ್ಮನ್ ಪೊವೆಲ್ ಅಜೇಯ 34 ರನ್ ಗಳಿಸಿ ವೆಸ್ಟ್ ಇಂಡೀಸ್ ತಂಡವನ್ನು ದೊಡ್ಡ ಮೊತ್ತಕ್ಕೆ ಮುನ್ನಡೆಸಿದರು. ಮೊದಲ 10 ಓವರ್ಗಳಲ್ಲಿ ಕೇವಲ 82 ರನ್ಗಳು ಮಾತ್ರ ಗಳಿಸಿತು, ಮತ್ತು ವೆಸ್ಟ್ ಇಂಡೀಸ್ ಕೊನೆಯ 10 ಓವರ್ಗಳಲ್ಲಿ 113 ರನ್ಗಳನ್ನು ಗಳಿಸಿತು.
19ನೇ ಓವರ್ನಲ್ಲಿ ಅಭಿಷೇಕ್ ಶರ್ಮಾ ಮತ್ತೊಂದು ಕ್ಯಾಚ್ ಕೈಚೆಲ್ಲಿದರು. 19ನೇ ಓವರ್ನ ಮೂರನೇ ಎಸೆತದಲ್ಲಿ ಪೊವೆಲ್ ಅವರ ಸರಳ ಕ್ಯಾಚ್ ಅನ್ನು ಅಭಿ ಕೈಚೆಲ್ಲಿದರು, ಈ ಟೂರ್ನಮೆಂಟ್ನಲ್ಲಿ ಭಾರತ ಕೈಬಿಟ್ಟ ಒಟ್ಟು ಕ್ಯಾಚ್ಗಳ ಸಂಖ್ಯೆ 13 ಕ್ಕೆ ತಲುಪಿತು.
ಅರ್ಶ್ದೀಪ್ ಸಿಂಗ್ ಅವರ ಒಂದೇ ಓವರ್ ನಲ್ಲಿ ರೋವ್ಮನ್ ಪೊವೆಲ್ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ 24 ರನ್ ಕಲೆಹಾಕಿದರು. ವೆಸ್ಟ್ ಇಂಡೀಸ್ ಸ್ಕೋರ್ 150 ದಾಟಿತು.
ವರುಣ್ ಚಕ್ರವರ್ತಿ ತಮ್ಮ ಮೂರನೇ ಓವರ್ನಲ್ಲಿ ಕೇವಲ 6 ರನ್ಗಳನ್ನು ಬಿಟ್ಟುಕೊಟ್ಟರು. ವೆಸ್ಟ್ ಇಂಡೀಸ್ 14 ಓವರ್ಗಳಲ್ಲಿ ಕೇವಲ 119 ರನ್ಗಳನ್ನು ಗಳಿಸಿದೆ. ಈಗ ಈ ತಂಡವು ದೊಡ್ಡ ಹೊಡೆತಗಳನ್ನು ಆಡಬೇಕಾಗಿದೆ.
12ನೇ ಓವರ್ನ ಮೂರನೇ ಎಸೆತದಲ್ಲಿ ಬುಮ್ರಾ ಭಾರತಕ್ಕೆ ಎರಡನೇ ಬ್ರೇಕ್ಥ್ರೂ ನೀಡಿದರು. ಹೆಟ್ಮೈಯರ್ 27 ರನ್ಗಳಿಗೆ ಔಟಾದರು. ಸಂಜು ಸ್ಯಾಮ್ಸನ್ ಕ್ಯಾಚ್ ಪಡೆದರು. ಎಂಟು ಟಿ20 ಪಂದ್ಯಗಳಲ್ಲಿ ಬುಮ್ರಾ ಹೆಟ್ಮೈಯರ್ ಅವರನ್ನು ಐದನೇ ಬಾರಿಗೆ ಔಟ್ ಮಾಡಿದರು.
ವರುಣ್ ಚಕ್ರವರ್ತಿ ದಾಳಿಗೆ ಇಳಿದು ವಿಕೆಟ್ ಪಡೆದರು. ಅವರು ತಮ್ಮ ಐದನೇ ಎಸೆತದಲ್ಲಿ ವೆಸ್ಟ್ ಇಂಡೀಸ್ ನಾಯಕ ಶೈ ಹೋಪ್ ಅವರನ್ನು ಬೌಲ್ಡ್ ಮಾಡಿದರು.
ಪವರ್ಪ್ಲೇನಲ್ಲಿ ವೆಸ್ಟ್ ಇಂಡೀಸ್ 45 ರನ್ ಗಳಿಸಿತು, ಯಾವುದೇ ವಿಕೆಟ್ ಬೀಳಲಿಲ್ಲ. ಟೀಮ್ ಇಂಡಿಯಾ ಎರಡು ಅವಕಾಶಗಳನ್ನು ಕಳೆದುಕೊಂಡಿತು. ರೋಸ್ಟನ್ ಚೇಸ್ ಅವರನ್ನು ರನ್ ಔಟ್ ಮಾಡುವ ಅವಕಾಶವನ್ನು ತಪ್ಪಿಸಿಕೊಂಡರು ಮತ್ತು ಒಂದು ಕ್ಯಾಚ್ ಅನ್ನು ಸಹ ಕೈಬಿಡಲಾಯಿತು. ಕಳಪೆ ಫೀಲ್ಡಿಂಗ್ ಟೀಮ್ ಇಂಡಿಯಾಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು.
ಅರ್ಶ್ದೀಪ್ ಸಿಂಗ್ ಅವರ ಓವರ್ನಲ್ಲಿ 10 ರನ್ ಬಂತು. ರೋಸ್ಟನ್ ಚೇಸ್ ಎರಡು ಬೌಂಡರಿಗಳನ್ನು ಬಾರಿಸಿದರು.
ಶೈ ಹೋಪ್ (ನಾಯಕ), ಶಿಮ್ರಾನ್ ಹೆಟ್ಮೈರ್, ರೋವ್ಮನ್ ಪೊವೆಲ್, ರೋಸ್ಟನ್ ಚೇಸ್, ಶೆರ್ಫೇನ್ ರುದರ್ಫೋರ್ಡ್, ಜೇಸನ್ ಹೋಲ್ಡರ್, ಮ್ಯಾಥ್ಯೂ ಫೋರ್ಡ್, ರೊಮಾರಿಯೊ ಶೆಫರ್ಡ್, ಗುಡಕೇಶ್ ಮೋತಿ, ಶಮರ್ ಜೋಸೆಫ್, ಅಕಿಲ್ ಹೊಸೈನ್.
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿದೆ. ಈ ಪಂದ್ಯವು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ ಏಕೆಂದರೆ ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸುತ್ತದೋ ಆ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಸೋತ ತಂಡದ ಪ್ರಯಾಣ ಇಲ್ಲಿಗೆ ಅಂತ್ಯವಾಗುತ್ತದೆ. ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನೀಡುವುದನ್ನು ನಿರೀಕ್ಷಿಸಲಾಗಿದೆ.
Published On - 6:34 pm, Sun, 1 March 26