AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ನಿಂದ ಹಾರ್ದಿಕ್ ಔಟ್! ಪ್ಲೇಯಿಂಗ್ 11ನಲ್ಲಿ ಯಾರಿಗೆ ಸಿಗಲಿದೆ ಅವಕಾಶ?

Hardik Pandya Ruled Out: ವಾಸ್ತವವಾಗಿ ಟೀಂ ಇಂಡಿಯಾದ ಉಪನಾಯಕನ ಜವಬ್ದಾರಿ ಹೊತ್ತಿದ್ದ ಹಾರ್ದಿಕ್ ಪಾಂಡ್ಯ, ತಂಡ ಸಂಕಷ್ಟದಲ್ಲಿದ್ದಾಗ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ತಂಡಕ್ಕೆ ನೆರವಾಗುವಂತಹ ಆಟಗಾರನಾಗಿದ್ದರು. ಆದರೀಗ ಪಾಂಡ್ಯ ತಂಡದಿಂದ ಹೊರಬಿದ್ದಿರುವುದು ತಂಡದಲ್ಲಿ ಬೌಲಿಂಗ್ ಆಲ್​ರೌಂಡರ್ ಕೊರೆತಯನ್ನು ಮತ್ತಷ್ಟು ಉಲ್ಭಣಗೊಳಿಸಿದೆ.

ವಿಶ್ವಕಪ್​ನಿಂದ ಹಾರ್ದಿಕ್ ಔಟ್! ಪ್ಲೇಯಿಂಗ್ 11ನಲ್ಲಿ ಯಾರಿಗೆ ಸಿಗಲಿದೆ ಅವಕಾಶ?
ಹಾರ್ದಿಕ್ ಪಾಂಡ್ಯ
ಪೃಥ್ವಿಶಂಕರ
|

Updated on: Nov 04, 2023 | 10:28 AM

Share

2023 ರ ವಿಶ್ವಕಪ್​ನಲ್ಲಿ (ICC World Cup 2023) ತನ್ನ ಅಜೇಯ ಓಟ ಮುಂದುವರೆಸಿರುವ ಟೀಂ ಇಂಡಿಯಾ ತನ್ನ ಮುಂದಿನ ಲೀಗ್ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ದಕ್ಷಿಣ ಆಫ್ರಿಕಾ ತಂಡವನ್ನು (India vs South Africa)ಅ ಎದುರಿಸುತ್ತಿದೆ. ಉಭಯ ತಂಡಗಳ ಈ ಕದನ ನಾಳೆ ಅಂದರೆ, ನವೆಂಬರ್ 5 ರಂದು ನಡೆಯಲ್ಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ. ಆದರೆ ಈ ನಡುವೆ ಟೀಂ ಇಂಡಿಯಾ (Team India) ಪಾಳಯದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಗಾಯದ ಸಮಸ್ಯೆಯಿಂದ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ವೇಗದ ಬೌಲರ್ ಕನ್ನಡಿಗೆ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ವಾಸ್ತವವಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಹಾರ್ದಿಕ್ ಗಾಯಗೊಂಡಿದ್ದರು. ಈ ಇಂಜುರಿಯಿಂದಾಗಿ ಹಾರ್ದಿಕ್​ಗೆ ತಮ್ಮ ಓವರ್‌ ಅನ್ನು ಸಹ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹಾರ್ದಿಕ್ ಓವರ್​ ಅನ್ನು ಕೊಹ್ಲಿ ಪೂರ್ಣಗೊಳಿಸಿದ್ದರು. ತೀವ್ರ ನೋವಿನಿಂದ ಬಳಲುತ್ತಿದ್ದ ಪಾಂಡ್ಯರನ್ನು ಸ್ಕ್ಯಾನ್ನಿಂಗ್ ಒಳಪಡಿಸಲಾಗಿತ್ತು. ಅಲ್ಲದೆ ಗಾಯದಿಂದ ಚೇತರಿಸಿಕೊಳ್ಳಲು ಬೆಂಗಳೂರಿನಲ್ಲಿರುವ ಎನ್​ಸಿಎಗೆ ಕಳುಹಿಸಿಕೊಡಲಾಗಿತ್ತು.

Hardik Pandya Ruled Out: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಹಾರ್ದಿಕ್: ಪಾಂಡ್ಯ ಬದಲಿಗೆ ಕನ್ನಡಿಗ ಪ್ರಸಿದ್ಧ್​ಗೆ ಆಯ್ಕೆ

ವಿಶ್ವಕಪ್​ನಿಂದ ಹಾರ್ದಿಕ್ ಔಟ್!

ಪ್ರಸ್ತುತ ಎನ್​ಸಿಎನಲ್ಲಿ ರಿಹ್ಯಾಬ್​ನಲ್ಲಿರುವ ಹಾರ್ದಿಕ್ ಪಾಂಡ್ಯ ಇಂಜುರಿಯಿಂದ ಚೇತರಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈನಲ್ಲಿ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಇದೀಗ ಹಾರ್ದಿಕ್ ಇಂಜುರಿಯಿಂದ ಚೇತರಿಸಿಕೊಳ್ಳಲು ಇನ್ನು ಕಾಲಾವಕಾಶ ಬೇಕಾಗಿರುವುದರಿಂದ ಅವರನ್ನು ವಿಶ್ವಕಪ್​ನಿಂದ ಹೊರಗಿಡಲಾಗಿದೆ ಎಂದು ತಿಳಿದುಬಂದಿದೆ. ಸೆಮಿಫೈನಲ್‌ ಸಮೀಪಿಸುತ್ತಿರುವ ಸಮಯದಲ್ಲಿ ಹಾರ್ದಿಕ್ ಅಲಭ್ಯತೆ ಟೀಂ ಇಂಡಿಯಾಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

ವಾಸ್ತವವಾಗಿ ಟೀಂ ಇಂಡಿಯಾದ ಉಪನಾಯಕನ ಜವಬ್ದಾರಿ ಹೊತ್ತಿದ್ದ ಹಾರ್ದಿಕ್ ಪಾಂಡ್ಯ, ತಂಡ ಸಂಕಷ್ಟದಲ್ಲಿದ್ದಾಗ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ತಂಡಕ್ಕೆ ನೆರವಾಗುವಂತಹ ಆಟಗಾರನಾಗಿದ್ದರು. ಆದರೀಗ ಪಾಂಡ್ಯ ತಂಡದಿಂದ ಹೊರಬಿದ್ದಿರುವುದು ತಂಡದಲ್ಲಿ ಬೌಲಿಂಗ್ ಆಲ್​ರೌಂಡರ್ ಕೊರೆತಯನ್ನು ಮತ್ತಷ್ಟು ಉಲ್ಭಣಗೊಳಿಸಿದೆ.

ಸೂರ್ಯಕುಮಾರ್​ಗೆ ಅವಕಾಶ

ಹಾರ್ದಿಕ್ ಪಾಂಡ್ಯ ವಿಶ್ವಕಪ್​ನಿಂದ ಹೊರಬಿದ್ದಿರುವುದರಿಂದ ಅವರ ಜಾಗದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ. ಆದರೆ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಗುವುದು ತೀರ ಕಡಿಮೆ. ಏಕೆಂದರೆ ಬೌಲಿಂಗ್ ವಿಭಾಗದಲ್ಲಿ ಭಾರತ ಬಲಿಷ್ಠವಾಗಿ ಕಾಣುತ್ತಿದೆ. ಹೀಗಾಗಿ ಪ್ರಸಿದ್ಧ್ ಬೆಂಚ್ ಕಾಯುವುದು ಖಚಿತ. ಇನ್ನು ಹಾರ್ದಿಕ್ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದ ಬಳಿಕ ಅವರ ಜಾಗದಲ್ಲಿ ಸೂರ್ಯಕುಮಾರ್ ಯಾದವ್​ರನ್ನು ಆಡಿಸಲಾಗುತ್ತಿದೆ. ಸೂರ್ಯಕುಮಾರ್ ಸಹ ತನ್ನ ಆಯ್ಕೆಗೆ ನ್ಯಾಯ ಒದಗಿಸಿದ್ದು, ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದರು.

ಇಶಾನ್​ ಕಿಶನ್​ ಆಡ್ತಾರಾ?

ಅಲ್ಲದೆ ಕೆಳಕ್ರಮಾಂಕದಲ್ಲಿ ಒಬ್ಬ ಗೇಮ್ ಫಿನಿಶರ್ ಅಗತ್ಯವಿದ್ದು, ಸೂರ್ಯಕುಮಾರ್ ಈ ಸ್ಥಾನ ತುಂಬುವ ಅರ್ಹ ಆಟಗಾರನಾಗಿದ್ದಾರೆ. ಹೀಗಾಗಿ ಹಾರ್ದಿಕ್ ಅನುಪಸ್ಥಿತಿಯಲ್ಲಿ ಇನ್ನು ಮುಂದೆಯೂ ಸೂರ್ಯಕುಮಾರ್ ಅವರೇ ಕಣಕ್ಕಿಳಿಯವುದು ಖಚಿತ. ಒಂದು ವೇಳೆ ಆಡಳಿತ ಮಂಡಳಿ ಸೂರ್ಯನ ಬದಲು ಬೇರೆ ಆಟಗಾರನನ್ನು ಆಡಿಸಲು ಚಿಂತಿಸಿದರೆ, ತಂಡಕ್ಕಿರುವ ಏಕೈಕ ಆಯ್ಕೆಯೆಂದರೆ ಅದು ಇಶಾನ್ ಕಿಶನ್. ಆದರೆ ವಿಕೆಟ್‌ ಕೀಪರ್ ಬ್ಯಾಟರ್ ಆಗಿ ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡುತ್ತಿರುವುದರಿಂದ ಕಿಶನ್​ಗೆ ಸ್ಥಾನ ಸಿಗುವುದು ಅನುಮಾನ.

ಹಾರ್ದಿಕ್ ಬದಲು ಶಾರ್ದೂಲ್?

ಹಾಗೆಯೇ ಹಾರ್ದಿಕ್ ಬದಲು ಇನ್ನೊಬ್ಬ ಬೌಲಿಂಗ್ ಆಲ್​ರೌಂಡರ್​​ಗೆ ಆಯ್ಕೆ ಮಂಡಳಿ ಚಿಂತಿಸಿದರೆ, ಈ ಜಾಗಕ್ಕೆ ಶಾರ್ದೂಲ್ ಠಾಕೂರ್ ಆಯ್ಕೆಯಾಗುವುದು ಖಚಿತ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಭಾರತದ ಬೌಲಿಂಗ್ ವಿಭಾಗ ಅದ್ಭುತ ಫಾರ್ಮ್​ನಲ್ಲಿದೆ. ಆದ್ದರಿಂದ ಈಗಿರುವ ಐದು ಬೌಲರ್​ಗಳ ಸಂಯೋಜನೆಯಲ್ಲೇ ತಂಡ ಕಣಕ್ಕಿಳಿಯಲ್ಲಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ವಿಶ್ವಕಪ್​ನಿಂದ ಹೊರಬಿದ್ದಿದ್ದರೂ, ಈಗಿರುವ ತಂಡವೇ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ