AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: 44 ಎಸೆತಗಳಲ್ಲಿ 194 ರನ್ ದೋಚಿದ್ದ ಬ್ಯಾಟರ್ ಈ ಐಪಿಎಲ್‌ನಿಂದ ಔಟ್! ತಂಡದ ಕೋಚ್ ಹೇಳುವುದೇನು?

IPL 2022: ಗುಂಪು ಹಂತದ ಉಳಿದ ಎರಡು ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಜೊತೆ ಡೆಲ್ಲಿ ಆಡಬೇಕಿದೆ. ಆದರೆ ಶೇನ್ ವ್ಯಾಟ್ಸನ್ ಪ್ರಕಾರ, ಪೃಥ್ವಿ ಶಾ ಈ ಎರಡು ಲೀಗ್ ಪಂದ್ಯಗಳಲ್ಲಿ ಆಡುವುದಿಲ್ಲ.

IPL 2022: 44 ಎಸೆತಗಳಲ್ಲಿ 194 ರನ್ ದೋಚಿದ್ದ ಬ್ಯಾಟರ್ ಈ ಐಪಿಎಲ್‌ನಿಂದ ಔಟ್! ತಂಡದ ಕೋಚ್ ಹೇಳುವುದೇನು?
ಪೃಥ್ವಿ ಶಾ
TV9 Web
| Updated By: ಪೃಥ್ವಿಶಂಕರ|

Updated on: May 13, 2022 | 4:41 PM

Share

15ನೇ ಆವೃತ್ತಿಯ ಐಪಿಎಲ್​ (IPL 2022)ಗೆ ಖ್ಯಾತ ಕ್ರಿಕೆಟಿಗರ ಇಂಜುರಿ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಟೂರ್ನಿಯ ಆರಂಭಕ್ಕೂ ಮುನ್ನವೇ ಅನೇಕ ಆಟಗಾರರು ಇಂಜುರಿಯಿಂದ ಪಂದ್ಯಾವಳಿಯಿಂದ ದೂರ ಉಳಿದರು. ಜೊತೆಗೆ ಟೂರ್ನಿ ಆರಂಭದ ನಂತರವೂ ಕೆಲವು ಆಟಗಾರರು ಇಂಜುರಿಯಿಂದ ಟೂರ್ನಿ ತೊರೆಯಬೇಕಾಯಿತು. ಈ ಇಂಜುರಿ ಸರಣಿ ಆಯಾ ತಂಡಗಳ ಪ್ರದರ್ಶನದ ಮೇಲೆ ಗಾಡ ಪರಿಣಾಮ ಬೀರಿದವು. ಜೊತೆಗೆ ಪಂದ್ಯಾವಳಿಯ ಮಧ್ಯಭಾಗದಿಂದಲೂ ಅನೇಕ ಆಟಗಾರರು ಪಂದ್ಯಾವಳಿಯನ್ನು ತೊರೆದಿದ್ದಾರೆ. ಈಗ ಅದಕ್ಕೆ ಇನ್ನೊಂದು ಹೆಸರನ್ನು ಸೇರಿಸಬಹುದು. ವಾಸ್ತವವಾಗಿ, ಅಂತಹ ಸೂಚನೆಗಳು ದೆಹಲಿ ಕ್ಯಾಪಿಟಲ್ಸ್ (Delhi Capitals) ಶಿಬಿರದಿಂದ ಬಂದಿವೆ. ಆದರೆ, ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ. ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ನೀಡಿರುವ ಹೇಳಿಕೆಯ ಪ್ರಕಾರ, ಅನಾರೋಗ್ಯದಿಂದ ಬಳಲುತ್ತಿರುವ ಪೃಥ್ವಿ ಶಾ (Prithvi Shaw) ಗ್ರೂಪ್ ಹಂತದ ಉಳಿದ ಪಂದ್ಯಗಳಿಂದ ಹೊರಗುಳಿಯಬಹುದು. ಐಪಿಎಲ್ 2022 ರಲ್ಲಿ, ಪೃಥ್ವಿ ಶಾ ತಮ್ಮ ಕೊನೆಯ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೇ 1 ರಂದು ಆಡಿದರು. ಅಂದಿನಿಂದ ಅವರು ದೆಹಲಿಯ ಪ್ಲೇಯಿಂಗ್ XI ನ ಭಾಗವಾಗಿಲ್ಲ. ಡೆಲ್ಲಿಯ ಆರಂಭಿಕ ಪಂದ್ಯದಲ್ಲೂ ಶಾ ಅನುಪಸ್ಥಿತಿಯ ಪರಿಣಾಮವು ಪಂದ್ಯದ ಸಮಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಹೀಗಿರುವಾಗ ಇದೀಗ ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಅವರಿಂದ ಕೇಳಿ ಬಂದಿರುವ ಮಾತು ದೆಹಲಿಯ ಚಿಂತೆಯನ್ನು ಹೆಚ್ಚಿಸಲಿದೆ. ಗುಂಪು ಹಂತದ ಉಳಿದ ಎರಡು ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಜೊತೆ ಡೆಲ್ಲಿ ಆಡಬೇಕಿದೆ. ಆದರೆ ಶೇನ್ ವ್ಯಾಟ್ಸನ್ ಪ್ರಕಾರ, ಪೃಥ್ವಿ ಶಾ ಈ ಎರಡು ಲೀಗ್ ಪಂದ್ಯಗಳಲ್ಲಿ ಆಡುವುದಿಲ್ಲ. ಅನಾರೋಗ್ಯದ ಕಾರಣ, ಪೃಥ್ವಿ ಶಾ ಇಲ್ಲಿಯವರೆಗೆ ದೆಹಲಿ ಪರ 3 ಪಂದ್ಯಗಳಿಗೆ ಗೈರಾಗಿದ್ದರು.

ಶಾ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ – ವ್ಯಾಟ್ಸನ್ ಗ್ರೇಡ್ ಕ್ರಿಕೆಟಿಗನೊಂದಿಗಿನ ಸಂಭಾಷಣೆಯಲ್ಲಿ ವ್ಯಾಟ್ಸನ್, ಪೃಥ್ವಿ ಶಾ ಅವರ ಅನಾರೋಗ್ಯದ ಬಗ್ಗೆ ಮಾತನಾಡಿದರು. ಕಳೆದ ಎರಡು ವಾರಗಳಿಂದ ಅವರಿಗೆ ಜ್ವರ ಇತ್ತು. ಆದರೆ ಇಲ್ಲಿಯವರೆಗಿನ ಚಿಕಿತ್ಸೆಯ ನಂತರವೂ ಅವರ ಆರೋಗ್ಯದಲ್ಲಿ ಸುದಾರಣೆ ಕಂಡುಬಂದಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅವರು ಗುಂಪು ಹಂತದ ಉಳಿದ 2 ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತದೆ ಎಂಬುದನ್ನು ಹೇಳುವುದು ಕಷ್ಟ ಎಂದು ವಾಟ್ಸನ್ ತಿಳಿಸಿದ್ದಾರೆ. ಗ್ರೂಪ್ ಹಂತದ ಪಂದ್ಯದಲ್ಲಿ ಶಾ ಆಡುವುದಿಲ್ಲ ಎಂಬುದು ಖಚಿತವಾಗಿದ್ದರೂ ಡೆಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದರೂ ಪೃಥ್ವಿ ಶಾ ಆಟದ ಬಗ್ಗೆ ಸಸ್ಪೆನ್ಸ್ ಇರಲಿದೆ.

ಇದನ್ನೂ ಓದಿ
Image
IPL 2022: ಧೋನಿ ನಿರ್ಧಾರವೇ ಅಂತಿಮ; ಮಹೀ ಮನವಿ ನೋಡಿ ನಿರ್ಧಾರ ಬದಲಿಸಿದ ಅಂಪೈರ್! ವಿಡಿಯೋ ವೈರಲ್
Image
IPL 2022: ಮುಂಬೈ ಮುಂದೆ ಮಂಕಾದ ಚೆನ್ನೈ; ಐಪಿಎಲ್ ಇತಿಹಾಸದಲ್ಲಿ 2ನೇ ಬಾರಿಗೆ ಕೆಟ್ಟ ದಾಖಲೆ ಬರೆದ ಧೋನಿ ಬಳಗ
Image
CSK vs MI IPL Match Result: ಹಳೆ ಸೋಲಿಗೆ ಸೇಡು ತೀರಿಸಿಕೊಂಡ ಮುಂಬೈ! ಚೆನ್ನೈ ಪ್ಲೇಆಫ್ ಆಸೆಗೆ ಬಿತ್ತು ಬ್ರೇಕ್
Image
CSK vs MI Highlights, IPL 2022: ಸೋಲಿನೊಂದಿಗೆ ಪ್ಲೇ ಆಫ್​ನಿಂದ ಹೊರಬಿದ್ದ ಚೆನ್ನೈ

ಶಾ 44 ಎಸೆತಗಳಲ್ಲಿ 194 ರನ್! ಐಪಿಎಲ್ 2022 ರಲ್ಲಿ, ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ಪರ 9 ಪಂದ್ಯಗಳನ್ನು ಆಡಿದ್ದಾರೆ. ಆ 9 ಪಂದ್ಯಗಳಲ್ಲಿ, ಅವರು 160 ರ ಸರಾಸರಿಯಲ್ಲಿ 2 ಅರ್ಧ ಶತಕಗಳೊಂದಿಗೆ 259 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು 35 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅಂದರೆ ಪೃಥ್ವಿ ಶಾ ಕೇವಲ 44 ಎಸೆತಗಳಲ್ಲಿ 194 ರನ್ ಗಳಿಸಿದ್ದಾರೆ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್