Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಧೋನಿನ ಪ್ರೀತಿಯಿಂದ ಹಗ್ ಮಾಡಿದ ಗೌತಮ್ ಗಂಭೀರ್; ವಿಡಿಯೋ ವೈರಲ್

ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದವರು ಬಂದು ಶೇಕ್​ ಹ್ಯಾಂಡ್ ಮಾಡಿದರು. ಈ ವೇಳೆ ಗಂಭೀರ್ ಹಾಗೂ ಧೋನಿ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಗೌತಮ್ ಅವರು ಖುಷಿ ಖುಷಿಯಿಂದ ಧೋನಿಯನ್ನು ಅಪ್ಪಿದ್ದಾರೆ. ಈ ವಿಡಿಯೋ ಫ್ಯಾನ್ಸ್ ಪೇಜ್​ಗಳಲ್ಲಿ ವೈರಲ್ ಆಗುತ್ತಿದೆ.

MS Dhoni: ಧೋನಿನ ಪ್ರೀತಿಯಿಂದ ಹಗ್ ಮಾಡಿದ ಗೌತಮ್ ಗಂಭೀರ್; ವಿಡಿಯೋ ವೈರಲ್
ಧೋನಿ-ಗಂಭೀರ್
Follow us
ರಾಜೇಶ್ ದುಗ್ಗುಮನೆ
|

Updated on:Apr 09, 2024 | 9:59 AM

2011ರ ವರ್ಲ್ಡ್​​ಕಪ್ ಗೆಲುವಿನ ಪ್ರಮುಖ ರುವಾರಿ ಎಂಎಸ್​ ಧೋನಿ (MS Dhoni) ಹಾಗೂ ಗೌತಮ್ ಗಂಭೀರ್ ಚಪಾಕ್ ಸ್ಟೇಡಿಯಂನಲ್ಲಿ ಪ್ರೀತಿಯಿಂದ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಧೋನಿ ಬಳಗ ಗೆದ್ದು ಬೀಗಿದೆ. ಪಂದ್ಯ ಮುಗಿದ ಬಳಿಕ ಒಬ್ಬರನ್ನೊಬ್ಬರನ್ನು ಹಗ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್ ಖಷಿಪಟ್ಟಿದ್ದಾರೆ.

ಚೆನ್ನೈನ ಚಿದಂಬರಮ್ ಸ್ಟೇಡಿಯಂನಲ್ಲಿ ಸಿಎಸ್​ಕೆ ಹಾಗೂ ಕೆಕೆಆರ್ ಪಂದ್ಯ ನಡೆದಿದೆ. ಟಾಸ್ ಗೆದ್ದ ಚೆನ್ನೈ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ ತಂಡ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 137 ರನ್​ ಟಾರ್ಗೆಟ್ ನೀಡಿತು. ಓಪನರ್ ಸಾಲ್ಟ್ ಸೊನ್ನೆ ಸುತ್ತಿದರು. ಶ್ರೇಯಸ್ ಅಯ್ಯರ್ ಅವರು ಬಾರಿಸಿದ 34 ರನ್ ತಂಡಕ್ಕೆ ಆಸರೆ ಆಯಿತು. ಸುಲಭ ಮೊತ್ತ ಬೆನ್ನು ಹತ್ತಿದ ಚೆನ್ನೈ ಉತ್ತಮ ಆರಂಭ ಕಾಣಲಿಲ್ಲ. ರಚಿನ್ ರವಿಂದ್ರ 15 ರನ್​ಗೆ ಔಟ್ ಆದರು. ನಾಯಕ ರುತುರಾಜ್ ಗಾಯಕ್​ವಾಡ್ ಅವರು 67 ರನ್ ಬಾರಿಸಿದರು. ಮಿಚೆಲ್ ಅವರು 25 ರನ್​, ಶಿವಮ್ ದೂಬೆ 28 ರನ್ ಗಳಿಸಿದರು. ಕೊನೆಯಲ್ಲಿ ಬಂದ ಧೋನಿ ಅವರು 3 ಬಾಲ್​ಗೆ 1 ರನ್ ಬಾರಿಸಿದರು.

ಇದನ್ನೂ ಓದಿ: MS Dhoni: ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಧೋನಿ? ಶೀಘ್ರವೇ ಘೋಷಣೆ

ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದವರು ಬಂದು ಶೇಕ್​ ಹ್ಯಾಂಡ್ ಮಾಡಿದರು. ಈ ವೇಳೆ ಗಂಭೀರ್ ಹಾಗೂ ಧೋನಿ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಗೌತಮ್ ಅವರು ಖುಷಿ ಖುಷಿಯಿಂದ ಧೋನಿಯನ್ನು ಅಪ್ಪಿದ್ದಾರೆ. ಈ ವಿಡಿಯೋ ಫ್ಯಾನ್ಸ್ ಪೇಜ್​ಗಳಲ್ಲಿ ವೈರಲ್ ಆಗುತ್ತಿದೆ.

View this post on Instagram

A post shared by IPL (@iplt20)

ಧೋನಿ ಬಗ್ಗೆ ಗಂಭೀರ್​ಗೆ ಈ ಮೊದಲು ಅಸಮಾಧಾನ ಇತ್ತು. 2011ರ ವರ್ಲ್ಡ್​ ಕಪ್​ನಲ್ಲಿ ತಾವು ಸ್ಕೋರ್ ಮಾಡಿದ 97 ರನ್​ನ ಪರಿಗಣನೆಗೆ ತೆಗೆದುಕೊಳ್ಳದೆ ಧೋನಿ ಬಾರಿಸಿದ 91 ರನ್​ಗಳನ್ನು ಮಾತ್ರ ವೈಭವೀಕರಿಸಲಾಯಿತು ಎನ್ನುವ ಬೇಸರ ಅವರಿಗೆ ಇದೆ. ಈ ಕಾರಣಕ್ಕೆ ಅವರು ಧೋನಿ ವಿರುದ್ಧ ಆಗಾಗ ಕಿಡಿಕಾರಿದ್ದು ಇದೆ. ಈಗ ಅದೆಲ್ಲವನ್ನೂ ಮರೆತು ಒಂದಾಗಿದ್ದಾರೆ. ಗೌತಮ್ ಅವರು ಕೆಕೆಆರ್​ ತಂಡದ ಮೆಂಟರ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:59 am, Tue, 9 April 24

ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ