AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC ODI World Cup Final: ಪಿಚ್-ಸ್ವಾಪಿಂಗ್​ನಿಂದ ಕೋಪಗೊಂಡು ಭಾರತ ತೊರೆದ ಪಿಚ್ ಸಲಹೆಗಾರ?: ಐಸಿಸಿಯಿಂದ ಬಂತು ಸ್ಪಷ್ಟನೆ

India vs Australia Pitch Report: ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಸೆಮಿಫೈನಲ್‌ಗೆ ಆತಿಥೇಯ ರಾಷ್ಟ್ರವು ಹೊಸ ಟ್ರ್ಯಾಕ್ ಅನ್ನು ಉಪಯೋಗಿಸದೆ ಹಳೆಯ ಪಿಚ್​ನಲ್ಲೇ ಆಡಿದೆ ಎಂದು ಅಟ್ಕಿನ್ಸನ್ ಆರೋಪಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ನಂತರ ಐಸಿಸಿ, ''ನಾಕ್-ಔಟ್ ಪಂದ್ಯಗಳನ್ನು ತಾಜಾ ಟ್ರ್ಯಾಕ್‌ನಲ್ಲೇ ನಡೆಸ ಬೇಕು ಎಂಬ ಯಾವುದೇ ನಿಯಮವಿಲ್ಲ. ಅಟ್ಕಿನ್ಸನ್​ಗೆ ಬೆಳವಣಿಗೆಯ ಬಗ್ಗೆ ತಿಳಿಸಲಾಗಿದೆ'', ಎಂದು ಹೇಳಿತು.

ICC ODI World Cup Final: ಪಿಚ್-ಸ್ವಾಪಿಂಗ್​ನಿಂದ ಕೋಪಗೊಂಡು ಭಾರತ ತೊರೆದ ಪಿಚ್ ಸಲಹೆಗಾರ?: ಐಸಿಸಿಯಿಂದ ಬಂತು ಸ್ಪಷ್ಟನೆ
Rohit Sharma
Vinay Bhat
|

Updated on:Nov 18, 2023 | 12:02 PM

Share

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ (ICC ODI World Cup) ಭಾರತ ತಂಡ ತನಗೆ ಬೇಕಾದಂತೆ ಪಿಚ್ ಅನ್ನು ತಯಾರು ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ನಡುವೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ವಿಶ್ವಕಪ್ ಫೈನಲ್‌ಗೆ ಕೆಲವೇ ಗಂಟೆಗಳ ಮೊದಲು ಐಸಿಸಿ ಪಿಚ್ ಸಲಹೆಗಾರ ಆಂಡಿ ಅಟ್ಕಿನ್ಸನ್ ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಭಾರತ ಮತ್ತು ನ್ಯೂಝಿಲೆಂಡ್ ಸೆಮಿಫೈನಲ್‌ಗೆ ಬಿಸಿಸಿಐ ಪಿಚ್ ಅನ್ನು ಬದಲಾಯಿಸಿದೆ ಎಂದು ಆರೋಪಿಸಿ ಆಂಡಿ ತವರಿಗೆ ಮರಳಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಐಸಿಸಿ ಈ ಬಗ್ಗೆ ಸ್ಪಷ್ಟನೆ ನೀಡಿದೆ.

”ಐಸಿಸಿ ಪಿಚ್ ಸಲಹೆಗಾರ ಆಂಡಿ ಅಟ್ಕಿನ್ಸನ್ ಅಹ್ಮದಾಬಾದ್​ಗೆ ಶುಕ್ರವಾರ ಸಂಜೆಯಷ್ಟೇ ಆಗಮಿಸಿದ್ದು, ಶನಿವಾರದಂದು ಪಿಚ್ ಅನ್ನು ಗಮನಿಸಲಿದ್ದಾರೆ. ಆಂಡಿ ಮನೆಗೆ ಹಿಂತಿರುಗಿಲ್ಲ. ಅವರು ಶುಕ್ರವಾರ ಮಧ್ಯಾಹ್ನ ಐಸಿಸಿ ನಿಯೋಗದೊಂದಿಗೆ ಬಂದಿದ್ದಾರೆ. ಹೀಗಾಗಿ ಮೈದಾನಕ್ಕೆ ಭೇಟಿ ನೀಡಿಲ್ಲ. ಟ್ರ್ಯಾಕ್‌ನ ಸಿದ್ಧತೆಯನ್ನು ಪರಿಶೀಲಿಸಲು ಅವರು ಶನಿವಾರ ಲಭ್ಯವಿರುತ್ತಾರೆ, ”ಎಂದು ಪಿಟಿಐಗೆ ಐಸಿಸಿ ಮೂಲಗಳು ತಿಳಿಸಿದೆ.

‘ನಮ್ಮಲ್ಲೇ ತಪ್ಪಿದೆ’; ರಣತುಂಗ ಆರೋಪಕ್ಕೆ ಜಯ್ ಶಾ ಬಳಿ ಕ್ಷಮೆಯಾಚಿಸಿದ ಶ್ರೀಲಂಕಾ ಸರ್ಕಾರ

ಇದನ್ನೂ ಓದಿ
Image
ಭಾರತ ವಿಶ್ವಕಪ್ ಗೆದ್ದರೆ, ಬಿಸಿಸಿಐಗೆ ಹಣದ ಸುರಿಮಳೆ: ಆಟಗಾರರಿಗೆ ಎಷ್ಟು?
Image
ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಆಸೀಸ್ ಎದುರು ಭಾರತದ್ದೇ ಪಾರುಪತ್ಯ
Image
ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ 9 ಆಟಗಾರರ ನಾಮನಿರ್ದೇಶನ
Image
ಇಂದು ಸಂಜೆ ರೋಹಿತ್ ಸುದ್ದಿಗೋಷ್ಠಿ: ಫೈನಲ್​ಗು ಮುನ್ನ ಮಹತ್ವದ ಹೇಳಿಕೆ?

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಸೆಮಿಫೈನಲ್‌ಗೆ ಆತಿಥೇಯ ರಾಷ್ಟ್ರವು ಹೊಸ ಟ್ರ್ಯಾಕ್ ಅನ್ನು ಉಪಯೋಗಿಸದೆ ಹಳೆಯ ಪಿಚ್​ನಲ್ಲೇ ಆಡಿದೆ ಎಂದು ಅಟ್ಕಿನ್ಸನ್ ಆರೋಪಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ನಂತರ ಐಸಿಸಿ, ”ನಾಕ್-ಔಟ್ ಪಂದ್ಯಗಳನ್ನು ತಾಜಾ ಟ್ರ್ಯಾಕ್‌ನಲ್ಲೇ ನಡೆಸ ಬೇಕು ಎಂಬ ಯಾವುದೇ ನಿಯಮವಿಲ್ಲ. ಅಟ್ಕಿನ್ಸನ್​ಗೆ ಬೆಳವಣಿಗೆಯ ಬಗ್ಗೆ ತಿಳಿಸಲಾಗಿದೆ”, ಎಂದು ಹೇಳಿತು.

ಸದ್ಯ ಅಹ್ಮದಾಬಾದ್ ಪಿಚ್ ಅನ್ನು ಸಿದ್ಧಪಡಿಸುವ ಜವಾಬ್ದಾರಿ ಭಾರತೀಯ ಕ್ಯುರೇಟರ್​ಗೆ ವಹಿಸಲಾಗಿದೆ. ಬಿಸಿಸಿಐನ ಗ್ರೌಂಡ್ ಸ್ಟಾಫ್ ಮುಖ್ಯಸ್ಥ ಆಶಿಶ್ ಭೌಮಿಕ್ ಮತ್ತು ಅವರ ಸಹವರ್ತಿ ತಪೋಶ್ ಚಟರ್ಜಿ ಜೊತೆಗೆ ಬಿಸಿಸಿಐನ ದೇಶೀಯ ಕ್ರಿಕೆಟ್‌ನ ಪ್ರಧಾನ ವ್ಯವಸ್ಥಾಪಕ ಅಬ್ಬೆ ಕುರುವಿಲ್ಲಾ ಅವರು ಪಿಚ್ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ.

ನಿಧಾನಗತಿಯ ಅಹ್ಮಮದಾಬಾದ್ ಪಿಚ್?

ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌ಗಾಗಿ ಅಹ್ಮದಾಬಾದ್ ಪಿಚ್‌ನಲ್ಲಿ ರೋಲರ್‌ ಹರಿಸಲಾಗಿದೆ. ಹೀಗೆ ಮಾಡುವುದರಿಂದ ಪಿಚ್ ನಿಧಾನವಾಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ, ಅಹ್ಮದಾಬಾದ್ ಪಿಚ್ ಚೇಸಿಂಗ್​ಗೆ ಹೆಚ್ಚು ಹೆಸರುವಾಸಿಯಾಗಿದೆ. ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮಾತ್ರ ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿತ್ತು.

  • ಪಂದ್ಯ 1: ಇಂಗ್ಲೆಂಡ್ 282/9 (50)- ನ್ಯೂಜಿಲೆಂಡ್ 283/1 (36.2)
  • ಪಂದ್ಯ 2: ಪಾಕಿಸ್ತಾನ 191 (42.5)- ಭಾರತ 192/3 (30.3)
  • ಪಂದ್ಯ 3: ಆಸ್ಟ್ರೇಲಿಯಾ 286 (49.3) – ಇಂಗ್ಲೆಂಡ್ 253 (48.1)
  • ಪಂದ್ಯ 4: ಅಫ್ಘಾನಿಸ್ತಾನ 244 (50) – ದಕ್ಷಿಣ ಆಫ್ರಿಕಾ 247/5 (47.3)

ಗುಜರಾತ್ ರಾಜ್ಯ ಕ್ಯುರೇಟರ್ ಪ್ರಕಾರ, ”ಹೆವಿ ರೋಲರ್ ಬಳಸಿದರೆ ಅಹ್ಮದಾಬಾದ್ ಪಿಚ್ ನಿಧಾನವಾಗುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡವು 300 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್ ಮಾಡಿದರೆ, ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಕಪ್ಪು ಮಣ್ಣಿನ ಪಟ್ಟಿಯ ಮೇಲೆ ರೋಲರ್ ಅನ್ನು ಬಳಸುತ್ತಿದ್ದೇವೆ. ನಿಧಾನಗತಿಯ ಬ್ಯಾಟಿಂಗ್ ಟ್ರ್ಯಾಕ್ ರಚಿಸುವುದು ಇದರ ಉದ್ದೇಶ. ಹೀಗೆ ಮಾಡಿದರೆ ನೀವು ದೊಡ್ಡ ಸ್ಕೋರ್ ಮಾಡಬಹುದು. 315 ಕಠಿಣ ಸ್ಕೋರ್. ಇಲ್ಲಿ ಎರಡನೇ ಬ್ಯಾಟಿಂಗ್​ಗೆ ಕಷ್ಟಕರವಾಗಿರುತ್ತದೆ,” ಎಂದು ಪಿಟಿಐಗೆ ತಿಳಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Sat, 18 November 23

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್