AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ರವಿಶಾಸ್ತ್ರಿ ಕೊಹ್ಲಿಗೆ ಐಪಿಎಲ್​ನಿಂದ ಹೊರ ಬಾ ಅಂತ ಹೇಳಿದ್ದು ಯಾಕೆ?

ವಿರಾಟ್ ಕೊಹ್ಲಿ ಶತಕ ಬಾರಿಸಿ 3 ವರ್ಷಗಳೇ ಕಳೆದಿವೆ. ಕೊಹ್ಲಿಯ ಬ್ಯಾಟ್​ನಿಂದ ಕೊನೆಯ ಶತಕ ಮೂಡಿಬಂದಿದ್ದು 2019 ರಲ್ಲಿ. ಬಾಂಗ್ಲಾದೇಶದ ವಿರುದ್ಧ ಡೇ-ನೈಟ್ ಟೆಸ್ಟ್‌ನಲ್ಲಿ ಕೊಹ್ಲಿಯ ಕೊನೆಯ ಅಂತರಾಷ್ಟ್ರೀಯ ಶತಕ ಬಾರಿಸಿದ್ದರು.

Virat Kohli: ರವಿಶಾಸ್ತ್ರಿ ಕೊಹ್ಲಿಗೆ ಐಪಿಎಲ್​ನಿಂದ ಹೊರ ಬಾ ಅಂತ ಹೇಳಿದ್ದು ಯಾಕೆ?
Ravi Shastri-Virat Kohli
TV9 Web
| Updated By: Vinay Bhat|

Updated on:Apr 28, 2022 | 12:04 PM

Share

0,0,9…ಇದು ಈ ಬಾರಿಯ ಐಪಿಎಲ್​ನ ಕೊನೆಯ ಮೂರು ಇನಿಂಗ್ಸ್​ನಲ್ಲಿನ ವಿರಾಟ್ ಕೊಹ್ಲಿಯ ಸ್ಕೋರ್​. ಅಂದರೆ ಈ ಬಾರಿ 9 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಕಲೆಹಾಕಿದ್ದು ಕೇವಲ 128 ರನ್​ ಮಾತ್ರ. ಹೀಗಾಗಿಯೇ ಆರ್​ಸಿಬಿಗೆ ಸೋಲಿನ ಜೊತೆಗೆ ಕೊಹ್ಲಿಯ ಕಳಪೆ ಫಾರ್ಮ್​ ಚಿಂತೆ ಕೂಡ ಶುರುವಾಗಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ನೀಡಿರುವ ಹೇಳಿಕೆಯೊಂದು ಎಲ್ಲರ ಗಮನ ಸೆಳೆದಿದೆ. ಹೌದು, ವಿರಾಟ್ ಕೊಹ್ಲಿ ಐಪಿಎಲ್​ನಿಂದ ಹೊರಗುಳಿಯುವುದು ಉತ್ತಮ ಎಂದಿದ್ದಾರೆ ಶಾಸ್ತ್ರಿ. ಏಕೆಂದರೆ ಕೊಹ್ಲಿಗೆ ಸದ್ಯ ಬಿಡುವಿನ ಅಗತ್ಯವಿದೆ. ಹೀಗಾಗಿ ಅವರು ಐಪಿಎಲ್​ನಿಂದ ಹೊರಗುಳಿದು ಮನಸ್ಸನ್ನು ರಿಫ್ರೆಶ್ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ತಡೆರಹಿತ ಕ್ರಿಕೆಟ್ ಆಡಿದ್ದಾರೆ. ಅವರು ಎಲ್ಲಾ ಸ್ವರೂಪಗಳಲ್ಲಿ ತಂಡದ ನಾಯಕತ್ವ ವಹಿಸಿರುವುದರಿಂದ ಅವರಿಗೆ ಈಗ ವಿರಾಮವು ಸೂಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ. ವಿರಾಮ ತೆಗೆದುಕೊಳ್ಳುವುದು ಬುದ್ದಿವಂತಿಕೆ. ಇಂತಹ ಸಂಕಷ್ಟದ ಸಮಯದಲ್ಲಿ ನೀವು ಟೂರ್ನಿಯಿಂದ ಹೊರಗುಳಿದರೆ, ಅದು ನಿಮ್ಮ ಕ್ರಿಕೆಟ್​ ಕೆರಿಯರ್​ಗೆ ಪ್ಲಸ್ ಪಾಯಿಂಟ್ ಆಗಲಿದೆ. ಅಲ್ಲದೆ ನಿಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ವಿಸ್ತರಿಸಲು ಮತ್ತು 6-7 ವರ್ಷಗಳ ಕಾಲ ಛಾಪು ಮೂಡಿಸಲು ಬಯಸಿದರೆ, ಐಪಿಎಲ್‌ನಿಂದ ಹೊರಗುಳಿಯಿರಿ. ನಿಮ್ಮ ಕಾಳಜಿಗಾಗಿ ನಾನು ಈ ಸಲಹೆ ನೀಡುತ್ತಿದ್ದೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ .

ನೀವು ಈಗಾಗಲೇ 14-15 ವರ್ಷಗಳ ಕಾಲ ಆಡಿದ್ದೀರಿ, ನೀವು ಮಾತ್ರವಲ್ಲ, ಬೇರೆ ಯಾವುದೇ ಆಟಗಾರನಿಗೆ ನಾನು ಇದನ್ನೇ ಹೇಳುತ್ತೇನೆ. ನೀವು ಭಾರತಕ್ಕಾಗಿ ಆಡಬೇಕು. ಉತ್ತಮ ಪ್ರದರ್ಶನ ನೀಡಬೇಕಾದರೆ, ನೀವು ಕೆಲ ಮಿತಿಗಳನ್ನು ಇಡಬೇಕಾಗುತ್ತದೆ. ನೀವು ವಿರಾಮವನ್ನು ತೆಗೆದುಕೊಳ್ಳಲು ಬಯಸಿದರೆ, ಭಾರತ ಕ್ರಿಕೆಟ್​ನ ಆಫ್ ಸೀಸನ್​ನಲ್ಲಿ ತೆಗೆದುಕೊಳ್ಳಿ. ಸದ್ಯ ಭಾರತ ಆಡದಿರುವ ಆಫ್​ ಸೀಸನ್​ ಐಪಿಎಲ್ ಆಗಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅಥವಾ ಫ್ರಾಂಚೈಸಿಗೆ ನಾನು ಅರ್ಧ ಸೀಸನ್ ಮಾತ್ರ ಆಡುತ್ತೇನೆ ಎಂದು ತಿಳಿಸಬೇಕು. ನೀವು ಅಂತರಾಷ್ಟ್ರೀಯ ಆಟಗಾರನಾಗಿ ನಿಮ್ಮ ವೃತ್ತಿಯ ಉತ್ತುಂಗವನ್ನು ತಲುಪಲು ಬಯಸಿದರೆ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ವಿರಾಟ್ ಇನ್ನೂ ಚಿಕ್ಕವ. ಅವನ ಮುಂದೆ 5-6 ವರ್ಷಗಳ ಕ್ರಿಕೆಟ್ ಉಳಿದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಅವರು ಏನನ್ನು ಅನುಭವಿಸಿದ್ದಾರೆಂದು ಅವರು ಅರಿತುಕೊಂಡಿದ್ದಾರೆ. ಹೀಗಾಗಿ ಅವರು ಮೊದಲಿನಿಂದಲೇ ಆರಂಭಿಸಬೇಕಿದೆ. ಇದಕ್ಕಾಗಿ ಮೊದಲು ಮಾಡಬೇಕಿರುವುದು ವಿಶ್ರಾಂತಿ ಪಡೆಯುವುದು. ಹಾಗಾಗಿ ವಿರಾಟ್ ಕೊಹ್ಲಿ ಐಪಿಎಲ್​ನಿಂದ ಹೊರಗುಳಿಯುವುದು ಉತ್ತಮ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಅಂದಹಾಗೆ ವಿರಾಟ್ ಕೊಹ್ಲಿ ಶತಕ ಬಾರಿಸಿ 3 ವರ್ಷಗಳೇ ಕಳೆದಿವೆ. ಕೊಹ್ಲಿಯ ಬ್ಯಾಟ್​ನಿಂದ ಕೊನೆಯ ಶತಕ ಮೂಡಿಬಂದಿದ್ದು 2019 ರಲ್ಲಿ. ಬಾಂಗ್ಲಾದೇಶದ ವಿರುದ್ಧ ಡೇ-ನೈಟ್ ಟೆಸ್ಟ್‌ನಲ್ಲಿ ಕೊಹ್ಲಿಯ ಕೊನೆಯ ಅಂತರಾಷ್ಟ್ರೀಯ ಶತಕ ಬಾರಿಸಿದ್ದರು. ಇದಾದ ಬಳಿಕ ಅವರು ಐಪಿಎಲ್​ನಲ್ಲಾಗಲಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಾಗಲಿ ಒಂದೇ ಒಂದು ಶತಕ ಬಾರಿಸಿಲ್ಲ ಎಂಬುದೇ ಅಚ್ಚರಿ.

ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

Published On - 11:47 am, Wed, 27 April 22

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್