AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

R Ashwin: ಐಪಿಎಲ್​ನಲ್ಲಿ ಶಾಹಿನ್ ಅಫ್ರಿದಿ ಬೆಲೆ ಎಷ್ಟು? ಕೇಳಿದ್ದಕ್ಕೆ ಅಶ್ವಿನ್ ಕೊಟ್ಟ ಉತ್ತರವೇನು ಗೊತ್ತೇ?

Shaheen Shah Afridi: ಪಾಕ್ ತಂಡದ ಸ್ಟಾರ್ ವೇಗಿ ಶಾಹಿನ್ ಅಫ್ರಿದಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾಗವಹಿಸುತ್ತಿದ್ದರೆ ಎಷ್ಟು ಮೊತ್ತಕ್ಕೆ ಸೇಲ್ ಆಗುತ್ತಿದ್ದರು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

R Ashwin: ಐಪಿಎಲ್​ನಲ್ಲಿ ಶಾಹಿನ್ ಅಫ್ರಿದಿ ಬೆಲೆ ಎಷ್ಟು? ಕೇಳಿದ್ದಕ್ಕೆ ಅಶ್ವಿನ್ ಕೊಟ್ಟ ಉತ್ತರವೇನು ಗೊತ್ತೇ?
Shaheen Afridi and R Ashwin
TV9 Web
| Edited By: |

Updated on:Sep 02, 2022 | 12:17 PM

Share

ಭಾರತ ಕ್ರಿಕೆಟ್ ತಂಡ ಸದ್ಯ ಯುಎಇನಲ್ಲಿ ಬೀಡುಬಿಟ್ಟಿದ್ದು ಏಷ್ಯಾಕಪ್ ಟೂರ್ನಿ (Asia Cup 2022) ಆಡುತ್ತಿದೆ. ಪಾಕಿಸ್ತಾನ ತಂಡ ಕೂಡ ಇದರಲ್ಲಿ ಭಾಗವಹಿಸುತ್ತಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಇದೀಗ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. ಪಾಕಿಸ್ತಾನ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಹಾಂಗ್ ಕಾಂಗ್ ವಿರುದ್ಧ ಗೆದ್ದರೆ ಭಾನುವಾರ ಭಾರತ ವಿರುದ್ಧ ಮತ್ತೆ ಮುಖಾಮುಖಿ ಆಗಲಿದೆ. ಹೀಗಿರುವಾಗ ಭಾರತ ತಂಡದ ಮುಖ್ಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಪಾಕಿಸ್ತಾನ ತಂಡದ ಬಗ್ಗೆ ಮಾತನಾಡಿದ್ದಾರೆ. ಪಾಕ್ ತಂಡದ ಸ್ಟಾರ್ ವೇಗಿ ಶಾಹಿನ್ ಅಫ್ರಿದಿ (Shaheen Afridi) ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾಗವಹಿಸುತ್ತಿದ್ದರೆ ಎಷ್ಟು ಮೊತ್ತಕ್ಕೆ ಸೇಲ್ ಆಗುತ್ತಿದ್ದರು ಎಂದು ಅಶ್ವಿನ್ ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್ ಒಂದರಲ್ಲಿ ಈ ಬಗ್ಗೆ ಮಾತನಾಡಿದ ಅಶ್ವಿನ್, ”ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಶಾಹಿನ್ ಅಫ್ರಿದಿ ಇದ್ದಿದ್ದರೆ ಎಷ್ಟು ರೋಮಾಂಚನಕಾರಿ ಆಗಿರುತ್ತಿತ್ತು ಎಂದು ನಾನು ಸಾಕಷ್ಟು ಸಮಯ ಯೋಚಿಸಿದ್ದೇನೆ. ಇವರು ಐಪಿಲ್​ನಲ್ಲಿ 14-15 ಕೋಟಿಗೆ ಸೇಲ್ ಆಗುತ್ತಿದ್ದರು. ಅಫ್ರಿದಿ ಪಂದ್ಯವನ್ನು ಟರ್ನ್ ಮಾಡುವಂತಹ ಬೌಲರ್. ಡೆತ್ ಓವರ್​ನಲ್ಲಿ ಯಾರ್ಕರ್ ಎಸೆಯುವುದರಲ್ಲಿ ಇವರು ನಿಸ್ಸೀಮರು. ಹೀಗಾಗಿ ಐಪಿಎಲ್ ಹರಾಜಿನಲ್ಲಿ ಇವರು ದೊಡ್ಡ ಮೊತ್ತಕ್ಕೆ ಸೇಲ್ ಆಗುತ್ತಾರೆ,” ಎಂದು ಅಶ್ವಿನ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರಿಗೆ ಆಡಲು ಅವಕಾಶವಿಲ್ಲ. 2008ರ ಮೊದಲ ಆವೃತ್ತಿಯಲ್ಲಷ್ಟೆ ಪಾಕ್ ಆಟಗಾರರು ಐಪಿಎಲ್​ನಲ್ಲಿ ಆಡಿದ್ದರು. ನಂತರ ರಾಜಕೀಯ ವಿಚಾರದಿಂದ ಪಾಕ್ ಆಟಗಾರರಿಗೆ ಐಪಿಎಲ್​ನಲ್ಲಿ ಆಡಲು ಅವಕಾಶ ನೀಡಲಿಲ್ಲ. ಸದ್ಯ ಶಾಹಿನ್ ಆಫ್ರಿದಿ ಕೂಡ ಏಷ್ಯಾಕಪ್​ನಲ್ಲಿ ಭಾಗವಹಿಸುತ್ತಿಲ್ಲ. ಇಂಜುರಿಗೆ ತುತ್ತಾಗಿರುವುದರಿಂದ ಇವರು ತಂಡದಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ
Image
Shakib Al Hasan: ವಿಶ್ವದ ಎರಡನೇ ಆಟಗಾರ: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಶಕಿಬ್ ಅಹ್ ಹಸನ್
Image
Asia Cup 2022: ಭಾನುವಾರ ಭಾರತ-ಪಾಕಿಸ್ತಾನ ಮತ್ತೆ ಮುಖಾಮುಖಿ?: ಭಾರತದ ಸೂಪರ್ 4 ವೇಳಾಪಟ್ಟಿ ಇಲ್ಲಿದೆ
Image
Sri Lanka vs Bangladesh: 4 ವರ್ಷಗಳ ಹಿಂದಿನ ಅವಮಾನಕ್ಕೆ ಪ್ರತೀಕಾರ: ಬಾಂಗ್ಲಾ ಆಟಗಾರರ ಹೊಟ್ಟೆ ಉರಿಸಿದ ಲಂಕಾ ಪ್ಲೇಯರ್ಸ್
Image
PAK vs HK: ಏಷ್ಯಾಕಪ್​ನಲ್ಲಿಂದು ಪಾಕಿಸ್ತಾನ- ಹಾಂಗ್​ ಕಾಂಗ್ ಮುಖಾಮುಖಿ: ಗೆದ್ದ ತಂಡ ಭಾರತ ವಿರುದ್ಧ ಸೆಣೆಸಾಟ

”ಹಿಂದಿನ ಬಾರಿ ನಾವು ಪಾಕಿಸ್ತಾನ ವಿರುದ್ಧ ಆಡಿದಾಗ ಶಹ್ದಾಬ್ ಖಾನ್ ಮತ್ತು ಹ್ಯಾರಿಸ್ ರೌಫ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆದರೆ, ಶಾಹಿನ್ ಅಫ್ರಿದಿ ಬೌಲಿಂಗ್ ಗೇಮ್ ಚೇಂಜಿಂಗ್ ಆಗಿತ್ತು. ಈ ಬಾರಿ ಇಂಜುರಿಯಿಂದ ಆಫ್ರಿದಿ ತಂಡದಲ್ಲಿ ಇರದಿರುವುದು ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆ,” ಎಂಬುದು ಅಶ್ವಿನ್ ಅಭಿಪ್ರಾಯ.

ಮಾತು ಮುಂದುವರೆಸಿದ ಅಶ್ವಿನ್, ”ಪಾಕಿಸ್ತಾನ ತಂಡದಲ್ಲಿರುವ ಎಲ್ಲ ಬೌಲರ್​ಗಳು 140-142kmph ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ವಿಶ್ವದ ಯಾವುದೇ ತಂಡ ಇಷ್ಟೊಂದು ಶ್ರೇಷ್ಠ ಬ್ಯಾಕಪ್ ಬೌಲರ್​ಗಳನ್ನು ಇಟ್ಟುಕೊಂಡಿದೆ ಎಂದು ನನಗೆ ಅನಿಸುವುದಿಲ್ಲ. ಪಾಕ್ ತಂಡದಲ್ಲಿ ಇಮಾದ್ ವಾಸೀಂ ಅದ್ಭುತ ಆಟಗಾರ. ಟಿ20 ಕ್ರಿಕೆಟ್​ನಲ್ಲಿ ಆತ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾನೆ. ಆದರೆ, ಈ ಬಾರಿ ಪಾಕ್ ಮೊಹಮ್ಮದ್ ನವಾಜ್ ಮೊರೆ ಹೋಗಿದೆ. ನಮ್ಮ ತಂಡದಲ್ಲಿ ರವೀಂದ್ರ ಜಡೇಜಾ ಇರುವ ರೀತಿ,” ಎಂದು ಹೇಳಿದ್ದಾರೆ.

Published On - 12:17 pm, Fri, 2 September 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ