AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs PBKS: ಆರ್​ಸಿಬಿಗೆ ಕಂಟಕವಾದ ಪಂಜಾಬ್ ಗೆಲುವು: ಫಾಫ್ ಪಡೆಗೆ ಮಯಾಂಕ್​ನಿಂದ ದೊಡ್ಡ ಪೆಟ್ಟು

Royal Challengers Bangalore, IPL 2022: ಗುಜರಾತ್ ಟೈಟಾನ್ಸ್​ ವಿರುದ್ಧದ ಪಂಜಾಬ್ ಕಿಂಗ್ಸ್ ತಂಡದ ಈ ಅಮೋಘ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದರಿಂದ ಫಾಫ್ ಪಡೆಯ ಮುಂದಿನ ಹಾದಿ ಸಂಕಷ್ಟದಲ್ಲಿದೆ.

GT vs PBKS: ಆರ್​ಸಿಬಿಗೆ ಕಂಟಕವಾದ ಪಂಜಾಬ್ ಗೆಲುವು: ಫಾಫ್ ಪಡೆಗೆ ಮಯಾಂಕ್​ನಿಂದ ದೊಡ್ಡ ಪೆಟ್ಟು
RCB and GT vs PBKS
TV9 Web
| Updated By: Vinay Bhat|

Updated on:May 04, 2022 | 7:45 AM

Share

ಸತತವಾಗಿ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ 2022 ರಲ್ಲಿ ಎರಡನೇ ಸೋಲು ಕಂಡಿದೆ. ಮಂಗಳವಾರ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ (Punjab Kings)​ ವಿರುದ್ಧದ ಪಂದ್ಯದಲ್ಲಿ ಜಿಟಿ ತಂಡ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಪಂಜಾಬ್ ಕಿಂಗ್ಸ್​ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮೂರೂ ವಿಭಾಗದಿಂದ ಶ್ರೇಷ್ಠ ಪ್ರದರ್ಶನ ನೀಡಿತು. ಕಗಿಸೊ ರಬಾಡ ಬೌಲಿಂಗ್​ನಲ್ಲಿ ಮಾರಕ ದಾಳಿ ಸಂಘಟಿಸಿದರೆ ಬ್ಯಾಟಿಂಗ್​ನಲ್ಲಿ ಶಿಖರ್ ಧವನ್, ಭನುಕಾ ರಾಜಪಕ್ಷ ಹಾಗೂ ಲಿಯಾಮ್ ಲಿವಿಂಗ್​ಸ್ಟೋನ್ ಸ್ಫೋಟಕ ಆಟವಾಡಿ ತಂಡಕ್ಕೆ  8 ವಿಕೆಟ್​ಗಳ ಜಯ ತಂದಿಟ್ಟರು. ಇದೀಗ ಮಯಾಂಕ್ ಪಡೆಯ ಈ ಅಮೋಘ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದರಿಂದ ಫಾಫ್ ಪಡೆಯ ಮುಂದಿನ ಹಾದಿ ಸಂಕಷ್ಟದಲ್ಲಿದೆ.

ಗುಜರಾತ್ ವಿರುದ್ಧದ ಗೆಲುವಿನ ಬಳಿಕ ಪಂಜಾಬ್ ಕಿಂಗ್ಸ್​​ ಆಡಿದ 10 ಪಂದ್ಯಗಳಲ್ಲಿ ತಲಾ ಐದರಲ್ಲಿ ಗೆಲುವು ಹಾಗೂ ಸೋಲು ಕಂಡು 10 ಅಂಕದೊಂದಿಗೆ ಐದನೇ ಸ್ಥಾನದಲ್ಲಿದೆ. -0229 ರನ್​ರೇಟ್ ಹೊಂದಿದೆ. ಇತ್ತ ಆರ್​ಸಿಬಿ ಕೂಡ ಇದೇ ಸ್ಥಿತಿಯಲ್ಲಿದ್ದು -0.558 ರನ್​ರೇಟ್ ಹೊಂದಿ ಆರನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೆ ಉಳಿದಿರುವುದು ನಾಲ್ಕು ಪಂದ್ಯ. ಆರ್​ಸಿಬಿ ಮೇಲೇರಲು ಈ ನಾಲ್ಕು ಪಂದ್ಯವನ್ನು ಕೇವಲ ಗೆದ್ದರೆ ಸಾಲದು. ದೊಡ್ಡ ಅಂತರದ ಗೆಲುವಿನ ಅಗತ್ಯವಿದೆ. ಯಾಕೆಂದರೆ ಅತ್ತ ಪಂಜಾಬ್ ಕೂಡ ಉಳಿದ ಎಲ್ಲ ಪಂದ್ಯ ಗೆದ್ದರೆ ಆರ್​​ಸಿಬಿ ಪ್ಲೇ ಆಫ್ ಹಾದಿ ಮುಚ್ಚಿದಂತೆ. ಹೀಗಾಗಿ ಬೆಂಗಳೂರು ತಂಡದ ಮುಂದಿನ ಹಾದಿ ಕಬ್ಬಿಣಡ ಕಡಲೆಯಂತಾಗಿದೆ. ಇದರ ನಡುವೆ ಆರ್​​ಸಿಬಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಜಿಟಿ ಹಾಗೂ ಪಂಜಾಬ್ ನಡುವಣ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ಪಂಜಾಬ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್‌ಗಳನ್ನು ಮಾತ್ರವೇ ಗಳಿಸಲು ಯಶಸ್ವಿಯಾಯಿತು. ಆರಂಭಿಕರಾದ ಶುಭ್ಮನ್ ಗಿಲ್‌ ಮತ್ತು ವೃದ್ಧಿಮಾನ್‌ ಸಾಹಾ 4 ಓವರ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ನಾಯಕ ಹಾರ್ದಿಕ್‌ ಪಾಂಡ್ಯ ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ. 7 ಎಸೆತಗಳಿಂದ ಕೇವಲ ಒಂದು ರನ್‌ ಮಾಡಿ ಧವನ್‌ಗೆ ವಿಕೆಟ್‌ ಒಪ್ಪಿಸಿದರು. ಡೆವೀಡ್‌ ಮಿಲ್ಲರ್‌ ಮೇಲಿನ ನಿರೀಕ್ಷೆಯೂ ಹುಸಿಯಾಯಿತು. 14 ಎಸೆತ ಎದುರಿಸಿದ ಅವರು 11 ರನ್‌ ಮಾಡಿ ಲಿವಿಂಗ್‌ಸ್ಟೋನ್‌ ಎಸೆತದಲ್ಲಿ ಔಟಾದರು.

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಚಾಂಪಿಯನ್​ಶಿಪ್ ಗೆದ್ದುಕೊಂಡ ಜೈನ್​ ವಿವಿ; ಅತಿ ಹೆಚ್ಚು ಪದಕ ಗೆದ್ದ ಶಿವ ಶ್ರೀಧರ್

ಆದರೆ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಸಾಯಿ ಸುದರ್ಶನ್‌ ಗುಜರಾತ್‌ ಇನ್ನಿಂಗ್ಸ್‌ ಬೆಳೆಸಲು ಗರಿಷ್ಠ ಪ್ರಯತ್ನ ಮಾಡುತ್ತ ಉಳಿದರು. ಜತೆಯಲ್ಲಿ ಬಿಗ್‌ ಹಿಟ್ಟರ್‌ ರಾಹುಲ್‌ ತೆವಾಟಿಯ ಇದ್ದರು. ಆದರೆ ಈ ಕಾಂಬಿನೇಶನ್‌ ಯಶಸ್ಸು ಕಾಣಲಿಲ್ಲ. ರಬಾಡ ಎಸೆತಗಳಿಗೆ ತೆವಾಟಿಯ ಮತ್ತು ರಶೀದ್‌ ಖಾನ್‌ ಔಟಾದರು. ಇತ್ತ ಸುದರ್ಶನ್‌ ಅರ್ಧ ಶತಕ ತಂಡಕ್ಕೆ ಸಹಕಾರಿ ಆಯಿತು. ರಬಾಡ 4 ವಿಕೆಟ್ ಕಿತ್ತು ಮಿಂಚಿದರು. 144 ರನ್​ಗಳ ಟಾರ್ಗೆಟ್ ಬೆನ್ನಟ್ಟಲು ಆರಂಭಿಸಿದ ಪಂಜಾಬ್ ಕಿಂಗ್ಸ್ ಪರವಾಗಿ ಜಾನಿ ಬೈರ್‌ಸ್ಟೋವ್ 1 ರನ್‌ಗೆ ವಿಕೆಟ್ ಕಳೆದುಕೊಂಡರು.

ಆದರೆ ಎರಡನೇ ವಿಕೆಟ್‌ಗೆ ಶಿಖರ್ ಧವನ್ ಹಾಗೂ ರಾಜಪಕ್ಷ 87 ರನ್‌ಗಳ ಜೊತೆಯಾಟ ನಿಡುವ ಮೂಲಕ ಗೆಲುವಿನ ಸನಿಹ ತಂದಿಟ್ಟರು. 40 ರನ್‌ಗಳಿಸಿ ರಾಜಪಕ್ಷೆ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ಲಿಯಾಮ್ ಲಿವಿಂಗ್​ಸ್ಟೋನ್ ಸ್ಫೋಟಕ ಆಟವಾಡಿ ಕೇವಲ 10 ಎಸೆತಗಳಲ್ಲಿ 30 ರನ್ ಸಿಡಿಸಿದರು. ಅದರಲ್ಲೂ ಶಮಿ ಅವರ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಚಚ್ಚಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ ಇನ್ನೂ 4 ಓವರ್‌ಗಳು ಬಾಕಿಯಿರುವಂತೆಯೇ 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಲು ಸಾಧ್ಯವಾಯಿತು. ಆರಂಭಿಕ ಆಟಗಾರ ಶಿಖರ್ ಧವನ್ ಅಜೇಯ 62 ರನ್‌ಗಳಿಸಿ ಮಿಂಚಿದರು.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:45 am, Wed, 4 May 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ