AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs PBKS: ಇಂದು ಆರ್​ಸಿಬಿ ಗೆದ್ದರೆ ಪಾಯಿಂಟ್ ಟೇಬಲ್​ನಲ್ಲಿ ಏನಾಗಲಿದೆ?: ಇಲ್ಲಿದೆ ನೋಡಿ

Royal Challengers Bangalore: ಆರ್​ಸಿಬಿ-ಪಂಜಾಬ್ ನಡುವಣ ಕದನದಲ್ಲಿ ಮಯಾಂಕ್ ಪಡೆ ಗೆದ್ದರೆ ಪಾಯಿಂಟ್ ಟೇಬಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ರಥಮ ಅಥವಾ ದ್ವಿತೀಯ ಸ್ಥಾನ ಖಚಿತವಾಗಲಿದೆ.

RCB vs PBKS: ಇಂದು ಆರ್​ಸಿಬಿ ಗೆದ್ದರೆ ಪಾಯಿಂಟ್ ಟೇಬಲ್​ನಲ್ಲಿ ಏನಾಗಲಿದೆ?: ಇಲ್ಲಿದೆ ನೋಡಿ
RCB IPL 2022Image Credit source: ಫೋಟೋ ಕೃಪೆ: RCB Twitter
TV9 Web
| Updated By: Vinay Bhat|

Updated on: May 13, 2022 | 12:35 PM

Share

ಐಪಿಎಲ್ 2022 (IPL 2022) ರಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ (RCB vs PBKS) ಅನ್ನು ಎದುರಿಸಲಿದೆ. ಮುಂದಿನ ಹಂತಕ್ಕೆ ಕಾಲಿಡುವ ದೃಷ್ಟಿಯಿಂದ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಕೇವಲ ಆರ್​ಸಿಬಿ ಪಂಜಾಬ್ ಮತ್ರವಲ್ಲದೆ ಇತರೆ ತಂಡಗಳ ಭವಿಷ್ಯ ಕೂಡ ಇಂದಿನ ಈ ಪಂದ್ಯದ ಫಲಿತಾಂಶದ ಮೇಲೆ ನಿತ್ತಿದೆ. ಫಾಫ್ (Faf Duplessis) ಪಡೆಯ ಸೋಲು-ಗೆಲುವು ಇತರೆ ತಂಡಗಳಿಗೆ ದೊಡ್ಡ ಲಾಭ ತಂದುಕೊಡಲಿದೆ. ಟೂರ್ನಿಯಲ್ಲಿ ಆರ್​ಸಿಬಿ ಒಟ್ಟು 12 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಪಂಜಾಬ್ 11 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು, ಉಳಿದ 6 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಂಡು ಎಂಟನೇ ಸ್ಥಾನದಲ್ಲಿದೆ. ಹಾಗಾದ್ರೆ ಇಂದಿನ ಪಂದ್ಯದಲ್ಲಿ ಯಾರು ಗೆದ್ದರೆ ಯಾರಿಗೆ ಸಹಕಾರಿ ಎಂಬುದನ್ನು ನೋಡೋಣ.

ಆರ್​ಸಿಬಿ-ಪಂಜಾಬ್ ನಡುವಣ ಕದನದಲ್ಲಿ ಮಯಾಂಕ್ ಪಡೆ ಗೆದ್ದರೆ ಪಾಯಿಂಟ್ ಟೇಬಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ರಥಮ ಅಥವಾ ದ್ವಿತೀಯ ಸ್ಥಾನ ಖಚಿತವಾಗಲಿದೆ. ಲಖನೌ ಸೂಪರ್ ಜೇಂಟ್ಸ್ ತಂಡಕ್ಕೆ ಕೂಡ ಮೊದಲ ಎರಡು ಸ್ಥಾನಕ್ಕಾಗಿ ಪೈಪೋಟಿ ನಡೆಸಬಹುದು. ರಾಜಸ್ಥಾನ್ ರಾಯಲ್​, ಸನ್​ರೈಸರ್ಸ್​ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ಲೇ ಆಫ್ ಅವಕಾಶ ಹೆಚ್ಚುತ್ತದೆ. ಹಾಗೆಯೆ ಆರ್​ಸಿಬಿ ತಂಡ ಗೆದ್ದಿತು ಎಂದಾದರೆ ಇಷ್ಟೂ ತಂಡಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಜೊತೆಗೆ ಆರ್​​ಸಿಬಿ ಪ್ಲೇ ಆಫ್​​ ಟಿಕೆಟ್ ಅನ್ನು ಬಹುತೇಕ ಖಚಿತ ಪಡಿಸಿದಂತೆ.

ಆರ್​ಸಿಬಿ ಬ್ಯಾಟಿಂಗ್ ಬಲಿಷ್ಠ:

ಇದನ್ನೂ ಓದಿ
Image
RCB vs PBKS: ಒಂದು ಮಹತ್ವದ ಬದಲಾವಣೆಗೆ ಮುಂದಾದ ಆರ್​ಸಿಬಿ: ಇಂದಿನ ಪಂದ್ಯದಿಂದ ಈ ಪ್ಲೇಯರ್ ಔಟ್
Image
Devon Conway: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ನಲ್ಲಿ ನಡೆಯಿತು ನಾಚಿಕೆಗೇಡಿನ ಸಂಗತಿ: ಹೀಗಾಗ ಬಾರದಿತ್ತು
Image
IPL 2022: ಮುಂಬೈ ಮುಂದೆ ಮಂಕಾದ ಚೆನ್ನೈ; ಐಪಿಎಲ್ ಇತಿಹಾಸದಲ್ಲಿ 2ನೇ ಬಾರಿಗೆ ಕೆಟ್ಟ ದಾಖಲೆ ಬರೆದ ಧೋನಿ ಬಳಗ
Image
CSK vs MI IPL Match Result: ಹಳೆ ಸೋಲಿಗೆ ಸೇಡು ತೀರಿಸಿಕೊಂಡ ಮುಂಬೈ! ಚೆನ್ನೈ ಪ್ಲೇಆಫ್ ಆಸೆಗೆ ಬಿತ್ತು ಬ್ರೇಕ್

ಆರ್​ಸಿಬಿ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಬೇಗನೆ ಔಟ್ ಆಗುತ್ತಿದ್ದಾರೆ ಆದರೂ ಅದು ದೊಡ್ಡ ಹೊಡೆತ ನೀಡುತ್ತಿಲ್ಲ. ನಾಯಕ ಫಾ ಡು ಪ್ಲೆಸಿಸ್‌, ಯಂಗ್‌ ಗನ್‌ ರಜತ್‌ ಪಾಟೀದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌ ಸಿಡಿದು ನಿಂತು ಮೂರೇ ವಿಕೆಟಿಗೆ 192 ರನ್‌ ಪೇರಿಸುವ ಮೂಲಕ ಹೈದರಾಬಾದ್‌ ವೇಗಕ್ಕೆ ಸಡ್ಡು ಹೊಡೆದಿದ್ದರು. ಇವರ ಜೊತೆಗೆ ಕೊಹ್ಲಿಯೂ ಕೈ ಜೋಡಿಸಿದರೆ ತಂಡದ ಮೊತ್ತ 200ರ ಗಡಿ ದಾಟುವುದು ಖಚಿತ ಅಥವಾ ಸುಲಭ ಗೆಲುವು ಪಡೆದುಕೊಳ್ಳಬಹುದು. ದಿನೇಶ್ ಕಾರ್ತಿಕ್ ಅಂತೂ ಪ್ರತಿ ಪಂದ್ಯದಲ್ಲಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಬೌಲಿಂಗ್​​ನಲ್ಲಿ ಜೋಶ್​​ ಹ್ಯಾಜಲ್​ ವುಡ್​​ ಹೊಸ ಆಯಾಮವನ್ನು ತಂದುಕೊಟ್ಟಿದ್ದಾರೆ. ಹರ್ಷಲ್​​ ವಿಕೆಟ್​​ ಬೇಟೆ ನೆಮ್ಮದಿ ತಂದಿದೆ. ಆದರೆ, ಮೊಹಮ್ಮದ್ ಸಿರಾಜ್ ಈ ಆವೃತ್ತಿಯಲ್ಲಿ ಸಾಕಷ್ಟು ದುಬಾರಿಯಾಗಿದ್ದಾರೆ. ಪ್ರಮುಖವಾಗಿ ಲೈನ್-ಲೆಂತ್​ನಲ್ಲಿ ಎಡವುತ್ತಿರುವ ಸಿರಾಜ್ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ 8 ವಿಕೆಟ್ ಮಾತ್ರ ಗಳಿಸಿದ್ದಾರೆ. ಹಸರಂಗ ಪರ್ಪಲ್​ ಕ್ಯಾಪ್​ ರೇಸ್​​ನಲ್ಲಿದ್ದಾರೆ. ಮ್ಯಾಕ್ಸ್​ ವೆಲ್​​, ಶಹಬಾಸ್​​ ಮತ್ತು ಲೊಮ್ರೊರ್​​ ಕೂಡ ಬೌಲಿಂಗ್​​ ಮಾಡಬಲ್ಲರು.

ಪಂಜಾಬ್ ತಂಡ ಹೇಗಿದೆ?:

ಪಂಜಾಬ್ ಕಿಂಗ್ಸ್ ತಂಡ ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ತೀವ್ರ ಒತ್ತಡದಲ್ಲಿದೆ. ಹೀಗಾಗಿ ಮಯಾಂಕ್ ಪಡೆ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಜಾನಿ ಬೇರ್​​ ಸ್ಟೋವ್​​​ ಆರಂಭಿಕರಾಗಿ ತಂಡಕ್ಕೆ ನೆರವಾಗಿದ್ದಾರೆ. ಶಿಖರ್​​​ ಧವನ್ ದೊಡ್ಡ ಇನ್ನಿಂಗ್ಸ್​​ ಕಟ್ಟುವುದರಲ್ಲಿ ನಿಸ್ಸೀಮ. ಭಾನುಕಾ ರಾಜಪಕ್ಸ ಮತ್ತು ಲಿಯಂ ಲಿವಿಂಗ್​​ ಸ್ಟೋನ್​​ ಹೆಚ್ಚು ಹೊತ್ತು ಕ್ರೀಸ್​ ನಲ್ಲಿದ್ದರೆ ಡೇಂಜರಸ್​ ಆಗುತ್ತಾರೆ. ​ ಅಗರ್ವಾಲ್​​ ಮತ್ತು ಜಿತೇಶ್​ ಶರ್ಮಾ ಕೂಡ ಬಿಗ್​ ಹಿಟ್ಟರ್​ ಗಳೇ. ಹೀಗಾಗಿ ಉಭಯ ತಂಡ ಕೂಡ ಬಲಷ್ಠವಾಗಿದ್ದು ಇದು ಹೈವೋಲ್ಟೇಜ್ ಪಂದ್ಯ ಆಗುವುದರಲ್ಲಿ ಅನುಮಾನವಿಲ್ಲ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?