ರೆಡ್ ಕಾರ್ಡ್​ ರೂಲ್ಸ್​: ಕ್ರಿಕೆಟ್ ಅಂಗಳದಲ್ಲಿ ಹೊಸ ನಿಯಮ

Red cards in cricket: ಈ ಹೊಸ ನಿಯಮ ಜಾರಿಯಾದರೆ ಪಂದ್ಯಗಳು ಮತ್ತಷ್ಟು ರೋಚಕವಾಗಿರಲಿದೆ. ಅದರಲ್ಲೂ ಪೆನಾಲ್ಟಿ ರನ್, ಫೀಲ್ಡರ್​ ಕಡಿತ...ಇಡೀ ಪಂದ್ಯದ ಗತಿಯನ್ನೇ ಬದಲಿಸಬಹುದು. ಹೀಗಾಗಿಯೇ ರೆಡ್ ಕಾರ್ಡ್ ನಿಯಮ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರೆಡ್ ಕಾರ್ಡ್​ ರೂಲ್ಸ್​: ಕ್ರಿಕೆಟ್ ಅಂಗಳದಲ್ಲಿ ಹೊಸ ನಿಯಮ
Red cards in cricket
Follow us
| Updated By: ಝಾಹಿರ್ ಯೂಸುಫ್

Updated on: Aug 13, 2023 | 4:09 PM

ಸಾಮಾನ್ಯವಾಗಿ ಫುಟ್​ಬಾಲ್ ಅಂಗಳದಲ್ಲಿ ಕಂಡು ಬರುವ ರೆಡ್ ಕಾರ್ಡ್​ ನಿಯಮವನ್ನು ಕ್ರಿಕೆಟ್​ನಲ್ಲಿ ಪರಿಚಯಿಸಲಾಗುತ್ತಿದೆ. ಮುಂಬರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ (CPL 2023) ರೆಡ್ ಕಾರ್ಡ್ ನಿಯಮ ಜಾರಿಗೆ ಬರಲಿದ್ದು, ಇದರಿಂದ ಪಂದ್ಯವು ಮತ್ತಷ್ಟು ರೋಚಕವಾಗಲಿದೆ. ಈ ನಿಯಮದ ಪ್ರಕಾರ ಸ್ಲೋ ಓವರ್​ ರೇಟ್​ಗಾಗಿ ಫೀಲ್ಡಿಂಗ್ ತಂಡ ಓರ್ವ ಫೀಲ್ಡರ್​ನನ್ನು ಕಳೆದುಕೊಳ್ಳಬಹುದು. ಹಾಗೆಯೇ ಬ್ಯಾಟಿಂಗ್ ತಂಡಕ್ಕೆ 5 ರನ್​ಗಳ ಪೆನಾಲ್ಟಿ ಕೂಡ ಬೀಳಬಹುದು. ಹಾಗಿದ್ರೆ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಂಡು ಬರಲಿರುವ ರೆಡ್ ಕಾರ್ಡ್​ ನಿಯಮಗಳೇನು ಎಂದು ನೋಡೋಣ…

  • ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಿಯಮದಂತೆ ಸಿಪಿಎಲ್​ನಲ್ಲೂ ಒಂದು ಇನಿಂಗ್ಸ್​ಗೆ 85 ನಿಮಿಷಗಳನ್ನು ನಿಗದಿ ಮಾಡಲಾಗಿದೆ.
  • ಇಲ್ಲಿ ಬೌಲಿಂಗ್ ತಂಡವು 17ನೇ ಓವರ್ ಅನ್ನು 72 ನಿಮಿಷ ಮತ್ತು 15 ಸೆಕೆಂಡುಗಳಲ್ಲಿ ಮುಗಿಸಬೇಕಾಗಿದೆ. ಈ ಸಮಯದೊಳಗೆ 17 ಓವರ್ ಮುಗಿಸಲು ವಿಫಲವಾದರೆ ಬೌಂಡರಿ ಲೈನ್​ನಿಂದ ಓರ್ವ ಫೀಲ್ಡರ್ ಅನ್ನು 30 ಯಾರ್ಡ್ ಸರ್ಕಲ್​ನಲ್ಲಿ ನಿಲ್ಲಿಸಬೇಕಾಗುತ್ತದೆ.
  • ಇನ್ನು 18ನೇ ಓವರ್ ಅನ್ನು 76 ನಿಮಿಷಗಳು ಮತ್ತು 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಈ ಸಮಯದೊಳಗೆ 18 ಓವರ್​ ಮುಗಿಸಲು ಸಾಧ್ಯವಾಗದಿದ್ದರೆ, ಬೌಂಡರಿ ಲೈನ್​ನಿಂದ ಇಬ್ಬರು ಫೀಲ್ಡರ್‌ಗಳನ್ನು ಕಡಿತಗೊಳಿಸಿ 30 ಯಾರ್ಡ್ ಸರ್ಕಲ್​ ಒಳಗೆ ನಿಲ್ಲಿಸಬೇಕಾಗುತ್ತದೆ.
  • 18ನೇ ಓವರ್‌ನ ಪ್ರಾರಂಭದಲ್ಲಿ ಅಗತ್ಯವಿರುವ ಓವರ್ ರೇಟ್ ಹಿಂದೆ ಇದ್ದರೆ, ಬೌಂಡರಿ ಲೈನ್​ನಿಂದ ಓರ್ವ ಆಟಗಾರ 30 ಯಾರ್ಡ್ ಸರ್ಕಲ್​ನಲ್ಲಿರಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್​ನಲ್ಲಿ ಒಟ್ಟು 5 ಫೀಲ್ಡರ್ ಇರಬೇಕಾಗುತ್ತದೆ.
  • 19ನೇ ಓವರ್‌ನ ಪ್ರಾರಂಭದಲ್ಲಿ ಓವರ್​ ರೇಟ್​ನಲ್ಲಿ ಹಿಂದೆ ಇದ್ದರೆ, ಬೌಂಡರಿ ಲೈನ್​ನಿಂದ ಇಬ್ಬರು ಫೀಲ್ಡರ್​ಗಳು 30 ಯಾರ್ಡ್ ಸರ್ಕಲ್​ನಲ್ಲಿ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್​ನಲ್ಲಿ ಒಟ್ಟು 6 ಫೀಲ್ಡರ್​ಗಳಿರಬೇಕಾಗುತ್ತದೆ.​
  • 20ನೇ ಓವರ್‌ನ ಆರಂಭದ ವೇಳೆ ಓವರ್​ ರೇಟ್​ನಲ್ಲಿ ಹಿಂದೆ ಉಳಿದಿದ್ದರೆ, ಓರ್ವ ಫೀಲ್ಡರ್ ಮೈದಾನ ತೊರೆಯಬೇಕಾಗುತ್ತದೆ. ಅಂದರೆ 10 ಮಂದಿಯೊಂದಿಗೆ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಇಲ್ಲಿ ಯಾರು ಮೈದಾನದಿಂದ ಹೊರಬೇಕು ಎಂಬುದನ್ನು ನಾಯಕ ನಿರ್ಧರಿಸಲಿದ್ದಾನೆ.
  • ಇನ್ನು ಬ್ಯಾಟಿಂಗ್​ ತಂಡವು ಪಂದ್ಯವನ್ನು ನಿಧಾನಗೊಳಿಸಿದರೆ ರನ್​ಗಳ ದಂಡ ವಿಧಿಸಲಾಗುತ್ತದೆ. ಅಂದರೆ ಬ್ಯಾಟಿಂಗ್​ಗೆ ನಿಲ್ಲಲು ಅಥವಾ ಗ್ಲೌಸ್ ಮತ್ತು ಬ್ಯಾಟ್​ಗಳನ್ನು ಬದಲಿಸುವ ಮೂಲಕ ಪಂದ್ಯದ ಸಮಯವನ್ನು ವ್ಯರ್ಥ ಮಾಡಿದರೆ 5 ರನ್​​ಗಳ ಪೆನಾಲ್ಟಿ ಬೀಳಲಿದೆ.

ಈ ಎಲ್ಲಾ ಶಿಕ್ಷೆಯನ್ನು ವಿಧಿಸುವ ಮುನ್ನ ಅಂಪೈರ್​ ರೆಡ್ ಕಾರ್ಡ್ ಎಚ್ಚರಿಕೆಯನ್ನು ನೀಡಲಿದ್ದಾರೆ. ಈ ಮೂಲಕ ಕ್ರಿಕೆಟ್ ಅಂಗಳದಲ್ಲಿ ರೆಡ್ ಕಾರ್ಡ್​ ಬಳಕೆಯನ್ನು ಮಾಡಲು ಕೆರಿಬಿಯನ್ ಪ್ರೀಮಿಯರ್ ಲೀಗ್ ಆಯೋಜಕರು ಮುಂದಾಗಿದ್ದಾರೆ.

ಇದನ್ನೂ ಓದಿ: CPL 2023: ಕೆರಿಬಿಯನ್ ಪ್ರೀಮಿಯರ್ ಲೀಗ್ 6 ತಂಡಗಳು ಪ್ರಕಟ

ಈ ಹೊಸ ನಿಯಮ ಜಾರಿಯಾದರೆ ಪಂದ್ಯಗಳು ಮತ್ತಷ್ಟು ರೋಚಕವಾಗಿರಲಿದೆ. ಅದರಲ್ಲೂ ಪೆನಾಲ್ಟಿ ರನ್, ಫೀಲ್ಡರ್​ ಕಡಿತ…ಇಡೀ ಪಂದ್ಯದ ಗತಿಯನ್ನೇ ಬದಲಿಸಬಹುದು. ಹೀಗಾಗಿಯೇ ರೆಡ್ ಕಾರ್ಡ್ ನಿಯಮ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿ
ಕ್ರೀಡಾಕೂಟ ವೇಳೆ ಹೆಜ್ಜೇನು ದಾಳಿ: 40ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
ಕ್ರೀಡಾಕೂಟ ವೇಳೆ ಹೆಜ್ಜೇನು ದಾಳಿ: 40ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
ಬಡವರನ್ನು ಆರ್ಥಿಕವಾಗಿ ಬಲಪಡಿಸುತ್ತಿರುವುದರಿಂದ ವೈರಿಗಳಿಗೆ ಅಸೂಯೆ: ಸಿಎಂ
ಬಡವರನ್ನು ಆರ್ಥಿಕವಾಗಿ ಬಲಪಡಿಸುತ್ತಿರುವುದರಿಂದ ವೈರಿಗಳಿಗೆ ಅಸೂಯೆ: ಸಿಎಂ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಿಎಂ ಸಿದ್ದರಾಮಯ್ಯ ಮಾದರಿ ಅನುಸರಿಸಬೇಕು
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಿಎಂ ಸಿದ್ದರಾಮಯ್ಯ ಮಾದರಿ ಅನುಸರಿಸಬೇಕು
ಪರಮೇಶ್ವರ್​ಗೆ ಜೋಳದ ರೊಟ್ಟಿ ತಿನ್ನಲು ಸತೀಶ್ ಜಾರಕಿಹೊಳಿ ಮನೆಯೇ ಆಗಬೇಕೇ?
ಪರಮೇಶ್ವರ್​ಗೆ ಜೋಳದ ರೊಟ್ಟಿ ತಿನ್ನಲು ಸತೀಶ್ ಜಾರಕಿಹೊಳಿ ಮನೆಯೇ ಆಗಬೇಕೇ?
ಬಿಜೆಪಿ ಮತ್ತ ಜೆಡಿಎಸ್ ನಾಯಕರು ಏನೇ ಹೇಳಿದರೂ ಚನ್ನಪಟ್ಟಣ ಮಾತ್ರ ಕಗ್ಗಂಟು!
ಬಿಜೆಪಿ ಮತ್ತ ಜೆಡಿಎಸ್ ನಾಯಕರು ಏನೇ ಹೇಳಿದರೂ ಚನ್ನಪಟ್ಟಣ ಮಾತ್ರ ಕಗ್ಗಂಟು!
ದರ್ಶನ್ ಫೋಟೋ ಹೊರಬೀಳದಿದ್ದರೆ ಕೈದಿಗಳ ಐಷಾರಾಮಿ ಬದುಕು ಮುಂದುವರಿಯುತ್ತಿತ್ತು
ದರ್ಶನ್ ಫೋಟೋ ಹೊರಬೀಳದಿದ್ದರೆ ಕೈದಿಗಳ ಐಷಾರಾಮಿ ಬದುಕು ಮುಂದುವರಿಯುತ್ತಿತ್ತು
ಎಲ್ಲ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುತ್ತದೆ: ನಿಖಿಲ್
ಎಲ್ಲ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುತ್ತದೆ: ನಿಖಿಲ್
ಮುಂಬೈ ಸಮೀಪದ ವಾಧವನ್ ಪೋರ್ಟ್; ಕೋಟಿ ಜನರಿಗೆ ಉದ್ಯೋಗ ನಿರೀಕ್ಷೆ
ಮುಂಬೈ ಸಮೀಪದ ವಾಧವನ್ ಪೋರ್ಟ್; ಕೋಟಿ ಜನರಿಗೆ ಉದ್ಯೋಗ ನಿರೀಕ್ಷೆ
ಬಿಜೆಪಿ ಮುಖ್ಯಮಂತ್ರಿಗಳೆಲ್ಲ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು: ಶಾಸಕ
ಬಿಜೆಪಿ ಮುಖ್ಯಮಂತ್ರಿಗಳೆಲ್ಲ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು: ಶಾಸಕ
ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ: ಬಿ ದಯಾನಂದ್
ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ: ಬಿ ದಯಾನಂದ್