AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಪರಿಪೂರ್ಣ ನಾಯಕನಾಗಿ ಚೊಚ್ಚಲ ಗೆಲುವಿನ ಬಳಿಕ ರೋಹಿತ್ ಶರ್ಮಾ ಏನು ಹೇಳಿದ್ರು ಕೇಳಿ

India vs New Zealand: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ತಂಡದ ಪ್ರದರ್ಶನದ ಬಗ್ಗೆ, ಬ್ಯಾಟಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Rohit Sharma: ಪರಿಪೂರ್ಣ ನಾಯಕನಾಗಿ ಚೊಚ್ಚಲ ಗೆಲುವಿನ ಬಳಿಕ ರೋಹಿತ್ ಶರ್ಮಾ ಏನು ಹೇಳಿದ್ರು ಕೇಳಿ
Rohit Sharma India vs New Zealand
TV9 Web
| Edited By: |

Updated on: Nov 18, 2021 | 8:41 AM

Share

ಟಿ20 ವಿಶ್ವಕಪ್​ನಿಂದ (T20 World Cup) ಹೊರಬಿದ್ದ ಕೆಲವೇ ದಿನಗಳ ಬಳಿಕ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬುಧವಾರ ಮೊದಲ ಪಂದ್ಯವನ್ನಾಡಿದ ಭಾರತ (India vs New Zealand) 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಗೆಲ್ಲಲು 165 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ (Team India) ಎದುರಾಳಿ ತಂಡದ ಶಿಸ್ತಿನ ಬೌಲಿಂಗ್‌ ಎದುರು ಒತ್ತಡಕ್ಕೆ ಸಿಲುಕಿದರೂ ಅಂತಿಮವಾಗಿ 19.4 ಓವರ್‌ಗಳಲ್ಲಿ ಗುರಿ ಮುಟ್ಟಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿತು. ಕ್ಯಾಪ್ಟನ್‌ ರೋಹಿತ್‌ ಶರ್ಮಾ (Rohit Sharma), ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತು ರಿಷಭ್ ಪಂತ್‌ (Rishabh Pant) ಸ್ಫೋಟಕ ಬ್ಯಾಟಿಂಗ್‌ ನಡೆಸಿ ಟೀಮ್‌ ಇಂಡಿಯಾ ಗೆಲುವಿನ ರೂವಾರಿಗಳಾದರು. ಈ ಮೂಲಕ ದಿಗ್ಗಜ ರಾಹುಲ್ ದ್ರಾವಿಡ್ (Rahul Dravid) ಹಾಗೂ ರೋಹಿತ್ ಶರ್ಮಾ ಅವರ ನೂತನ ಕೋಚ್-ನಾಯಕ ಜೋಡಿಯೂ ಗೆಲುವಿನ ಮೋಡಿ ಮಾಡಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಹಿಟ್​ಮ್ಯಾನ್ ನಾಯಕ ರೋಹಿತ್ ಶರ್ಮಾ ತಂಡದ ಪ್ರದರ್ಶನದ ಬಗ್ಗೆ, ಬ್ಯಾಟಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. “ನಾವು ಕಂಡಂತೆ ಈ ಪಂದ್ಯ ಸುಲಭದ್ದಾಗಿರಲಿಲ್ಲ. ಇದು ನಮ್ಮ ಆಟಗಾರರಿಗೆ ಒಂದು ಉತ್ತಮ ಕಲಿಕೆಯಾಗಿದೆ. ಯಾಕಂದ್ರೆ ಇದಕ್ಕೂ ಮುನ್ನ ಭಾರತ ಪರ ಇವರು ಈರೀತಿಯ ಸಂದರ್ಭದಲ್ಲಿ ಬ್ಯಾಟ್ ಬೀಸಿರಲಿಲ್ಲ. ಕಠಿಣ ಸಮಯದಲ್ಲಿ ಯಾವರೀತಿ ಬ್ಯಾಟ್ ಮಾಡಬೇಕು ಎಂಬುದು ಕಲಿಯಲು ಈ ಪಂದ್ಯ ನಮ್ಮ ಆಟಗಾರರಿಗೆ ನೆರವಾಯಿತು. ಎಲ್ಲ ಸಮಯದಲ್ಲಿ ಬಿರುಸಿನ ಆಟವಾಡುವುದು ಅಲ್ಲ, ಬದಲಾಗಿ ಮೈದಾನದ ಮೂಲೆಮೂಲೆಯಲ್ಲಿ ರನ್ ಕಲೆಹಾಕುವುದು ಒಂದು, ಎರಡು ರನ್, ಬೌಂಡರಿ ಬಾರಿಸುವ ಕಲೆ ಇರಬೇಕು. ತಂಡದ ಆಟಗಾರರ ಪ್ರದರ್ಶನ ಖುಷಿ ನೀಡಿದೆ. ಬ್ಯಾಟರ್​ಗಳು ಪಂದ್ಯವನ್ನು ಫಿನಿಶ್ ಮಾಡಿದ್ದು ಉತ್ತಮವಾಗಿತ್ತು” ಎಂದು ರೋಹಿತ್ ಹೇಳಿದ್ದಾರೆ.

“ಇದೊಂದು ಅತ್ಯುತ್ತಮ ಪಂದ್ಯವಾಗಿತ್ತು. ಕೆಲ ಆಟಗಾರರ ಅನುಪಸ್ಥಿತಿಯಲ್ಲಿ ಹೊಸ ಆಟಗಾರರಿಗೆ ತಮ್ಮ ಕೌಶಲ್ಯ ತೋರಲು ಇದೊಂದು ವೇದಿಕೆಯಾಯಿತು. ಕೊನೆಯ 3-4 ಓವರ್​ಗಳಲ್ಲಿ ಅದ್ಭುತ ಆಟವಾಡಿದರು. ಅಶ್ವಿನ್ ಮತ್ತು ಅಕ್ಷರ್ ಜೋಡಿ ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲಿಂಗ್ ಮಾಡಿದ್ದಾರೆ. ಇವರು ಪ್ರತಿಬಾರಿ ವಿಕೆಟ್​ಗಾಗಿ ಹೊಂಚು ಹಾಕುತ್ತಿರುತ್ತಾರೆ. ಇದು ಒಳ್ಳೆಯ ಗ್ಲೇಮ್ ಪ್ಲಾನ್. ಎದುರಾಳಿಗೆ ಪ್ರೆಶರ್ ನೀಡಲು ಇದು ಸಹಕಾರಿಯಾಗುತ್ತದೆ. ಸೂರ್ಯಕುಮಾರ್ ಬ್ಯಾಟಿಂಗ್ ಕೂಡ ಉತ್ತಮವಾಗಿತ್ತು. ಅವರ ಆಟದ ಶೈಲಿಯೇ ಹಾಗೆ, ಸ್ಪಿನ್ನರ್​ಗೆ ಅವರು ಚೆನ್ನಾಗಿ ಆಡುತ್ತಾರೆ.”

“ಟ್ರೆಂಟ್ ಬೌಲ್ಟ್ ಮತ್ತು ನಾನು ಜೊತೆಯಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ನನ್ನ ಮೈನಸ್ ಪಾಯಿಂಟ್ ಏನು ಎಂಬುದು ಅವರಿಗೆ ಗೊತ್ತು. ಅವರ ಸ್ಟ್ರೆಂತ್ ಏನು ಎಂಬುದು ನನಗೆ ಗೊತ್ತು. ಇದು ನಮ್ಮಿಬ್ಬರಲ್ಲಿ ಉತ್ತಮ ಪೈಟ್ ನೀಡಿತು. ನಾನು ಈ ಹಿಂದೆ ಅವರಿಗೆ ನಾಯಕನಾಗಿ ಹೇಗೆ ಬೌಲಿಂಗ್ ಮಾಡಿದೆಂದು ಹೇಳಿದ್ದೆನೋ ಅದೇರೀತಿ ಬೌಲಿಂಗ್ ಮಾಡಿದ್ದಾರೆ. ಮಿಡ್ ವಿಕೆಟ್ ಬ್ಯಾಕ್, ಬೌನ್ಸರ್ ಇದನ್ನೆ ಟಾರ್ಗೆಟ್ ಮಾಡಿದರು” ಎಂದು ರೋಹಿತ್ ಹೇಳಿದ್ದಾರೆ.

India vs New Zealand: ಜೈಪುರದಲ್ಲಿ ಬೆಳಗಿದ ಸೂರ್ಯ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಗೆದ್ದು ಬೀಗಿದ ಭಾರತ

(Rohit Sharma first words after India vs New Zealand Match as the full-time skipper)

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!