AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2022: 11 ವರ್ಷದ ಬಾಲಕನ ಬೌಲಿಂಗ್​ಗೆ ಟೀಂ ಇಂಡಿಯಾ ನಾಯಕ ಫುಲ್ ಫಿದಾ..!

T20 World Cup 2022: ನಾಯಕನ ಕರೆಯಿಂದ ಸಂತೋಷಗೊಂಡ ಈ ಬಾಲಕ ನೆಟ್ಸ್‌ನಲ್ಲಿ ರೋಹಿತ್​ಗೆ ಕೆಲವು ಎಸೆತಗಳನ್ನು ಬೌಲ್ ಮಾಡಿದ್ದಾನೆ. ಬಾಲಕನ ಬೌಲಿಂಗ್​ ಕಂಡು ರೋಹಿತ್​ ಕೂಡ ಆಶ್ಚರ್ಯಗೊಂಡಿದ್ದಾರೆ.

T20 World Cup 2022: 11 ವರ್ಷದ ಬಾಲಕನ ಬೌಲಿಂಗ್​ಗೆ ಟೀಂ ಇಂಡಿಯಾ ನಾಯಕ ಫುಲ್ ಫಿದಾ..!
ಬಾಲಕನೊಂದಿಗೆ ರೋಹಿತ್
TV9 Web
| Edited By: |

Updated on:Oct 17, 2022 | 11:45 AM

Share

ಟೀಂ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು ಟಿ20 ವಿಶ್ವಕಪ್‌ಗಾಗಿ (T20 World Cup 2022) ತಯಾರಿ ನಡೆಸುತ್ತಿದೆ. ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನಾಡಿದ ರೋಹಿತ್ (Rohit Sharma) ಬಳಗ ಒಂದರಲ್ಲಿ ಸೋತ್ತು, ಒಂದರಲ್ಲಿ ಗೆಲುವು ಸಾಧಿಸಿತ್ತು. ಆ ಬಳಿಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಇನ್ನೇರಡು ಅಭ್ಯಾಸ ಪಂದ್ಯಗಳನ್ನು ಆಡಲಿರುವ ಟೀಂ ಇಂಡಿಯಾ, ಈ ಅಭ್ಯಾಸ ಪಂದ್ಯಗಳ ತಯಾರಿಗಾಗಿ ಪರ್ತ್​ ಮೈದಾನದಲ್ಲಿ ಅಭ್ಯಾಸದಲ್ಲಿ ನಿರತವಾಗಿದೆ. ಈ ವೇಳೆ ಟೀಂ ಇಂಡಿಯಾ ನಾಯಕನ ಕಣ್ಣಿಗೆ 11 ವರ್ಷದ ಬಾಲಕ ಬಿದ್ದಿದ್ದು, ಆತನ ಬೌಲಿಂಗ್​ಗೆ ರೋಹಿತ್ ಶರ್ಮಾ ಫುಲ್ ಫಿದಾ ಆಗಿದ್ದಾರೆ. ಈತನ ಬೌಲಿಂಗ್​ ಕೌಶಲ್ಯಕ್ಕೆ ಮನಸೋತ ಹಿಟ್​ಮ್ಯಾನ್ ಆತನನ್ನು ನೆಟ್ಸ್​ಗೆ ಕರೆದು ಬೌಲಿಂಗ್ ಮಾಡುವಂತೆ ಕೇಳಿಕೊಂಡಿದ್ದಾರೆ. ನಾಯಕನ ಕರೆಗೆ ಫುಲ್ ಖುಷಿಯಾದ ಬಾಲಕ ನೆಟ್ಸ್​ಗೆ ಬಂದು ರೋಹಿತ್​ಗೆ ಬೌಲಿಂಗ್ ಹಾಕಿದ್ದಾರೆ. ನಾಯಕ ರೋಹಿತ್ ಕೂಡ ಈ ಬಾಲಕನ ಬೌಲಿಂಗ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ.

ವಾಸ್ತವವಾಗಿ, ಟೀಂ ಇಂಡಿಯಾ ಅಭ್ಯಾಸಕ್ಕೆಂದು ಪರ್ತ್​ ಮೈದಾನಕ್ಕೆ ಬಂದಿದೆ. ಈ ವೇಳೆ ಕೆಲ ಮಕ್ಕಳು ಕ್ರಿಕೆಟ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಈ 11 ವರ್ಷದ ಬಾಲಕನೂ ಇದ್ದು, ಈತನ ಬೌಲಿಂಗ್ ಆಕ್ಷನ್ ತುಂಬಾ ಇಷ್ಟವಾಗಿ ರೋಹಿತ್ ಆ ಬಾಲಕನನ್ನು ತಮ್ಮ ಬಳಿಗೆ ಕರೆದಿದ್ದಾರೆ. ಬಳಿಕ ಈ ಪೋರನನ್ನು ತನ್ನೊಂದಿಗೆಗ ಕರೆದುಕೊಂಡು ಹೋಗಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿಸಿ, ತಾನು ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ಪೋರನ ಕೈಚೆಳಕಕ್ಕೆ ಕ್ರೀಡಾ ಜಗತ್ತು ಶಹಬಾಸ್​ಗಿರಿ ಹೇಳಿದೆ.

ರೋಹಿತ್​ ಫಿದಾ

ಬಿಸಿಸಿಐ ಅಪ್‌ಲೋಡ್ ಮಾಡಿರುವ ಈ ವೀಡಿಯೊದಲ್ಲಿ, ತಂಡದ ವಿಶ್ಲೇಷಕ ಹರಿ ಪ್ರಸಾದ್ ಮೋಹನ್ ಮಾತನಾಡಿದ್ದು, ಅಂದಿನ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಇದರಲ್ಲಿ ಅವರು, “ನಾವು (ಟೀಂ ಇಂಡಿಯಾ) ಮಧ್ಯಾಹ್ನದ ಸೆಷನ್‌ಗಾಗಿ ಪರ್ತ್​ ಮೈದಾನಕ್ಕೆ ತೆರಳಿದೆವು. ಆ ವೇಳೆಯಲ್ಲಿ ಅಲ್ಲಿ ಸುಮಾರು 100 ಮಕ್ಕಳು ತಮ್ಮ ಬೆಳಗಿನ ಸೆಷನ್​ನಲ್ಲಿ ನಿರತರಾಗಿದ್ದರು. ಆ ನೂರು ಮಕ್ಕಳಲ್ಲಿ ಒಬ್ಬ ಬಾಲಕ ಮಾತ್ರ ತನ್ನ ಅದ್ಭುತ ಬೌಲಿಂಗ್​ನಿಂದ ಎಲ್ಲರ ಗಮನ ಸೆಳೆಯುತ್ತಿದ್ದ.ಆತನ ಬೌಲಿಂಗ್ ಆ್ಯಕ್ಷನ್ ನೋಡಿ ಎಲ್ಲರೂ ಆಶ್ಚರ್ಯ ಚಕಿತರಾದರು. ಇದನ್ನು ಗಮನಿಸಿದ ರೋಹಿತ್, ಕೂಡಲೇ ಡ್ರೆಸಿಂಗ್ ರೂಮ್​ನಿಂದ ತೆರಳಿ, ಆ ಬಾಲಕನನ್ನು ಕರೆದು ನೆಟ್ಸ್​ನಲ್ಲಿ ನನಗೆ ಬೌಲಿಂಗ್ ಮಾಡುವಂತೆ ಕೇಳಿಕೊಂಡರು. ನಾಯಕನ ಈ ಕರೆಗೆ ಫುಲ್ ಖುಷಿಯಾದ ಆ ಬಾಲಕ ನೆಟ್ಸ್​ನಲ್ಲಿ ಬೌಲಿಂಗ್ ಹಾಕಿದರು ಎಂದಿದ್ದಾರೆ.

ಈ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಬಾಲಕನಿಗೂ ಆಶ್ಚರ್ಯ

ಭಾರತೀಯ ಮೂಲದವನಾದ ಈ ಬಾಲಕನ ಹೆಸರು ದೃಶಿಲ್ ಚೌಹಾಣ್ ಆಗಿದ್ದು, ತನ್ನ ಪಾಡಿಗೆ ತಾನು ಬೌಲಿಂಗ್ ಅಭ್ಯಾಸ ಮಾಡುತ್ತಿದ್ದ ದೃಶಿಲ್​ಗೆ ರೋಹಿತ್​ ಶರ್ಮಾ ಅವರ ಕೋರಿಕೆ ಫುಲ್ ಶಾಕ್ ನೀಡಿದೆ. ನಾಯಕನ ಕರೆಯಿಂದ ಸಂತೋಷಗೊಂಡ ಈ ಬಾಲಕ ನೆಟ್ಸ್‌ನಲ್ಲಿ ರೋಹಿತ್​ಗೆ ಕೆಲವು ಎಸೆತಗಳನ್ನು ಬೌಲ್ ಮಾಡಿದ್ದಾನೆ. ಬಾಲಕನ ಬೌಲಿಂಗ್​ ಕಂಡು ರೋಹಿತ್​ ಕೂಡ ಆಶ್ಚರ್ಯಗೊಂಡಿದ್ದಾರೆ. ಅಭ್ಯಾಸದ ನಂತರ ಈ ಬಾಲಕನನ್ನು ರೋಹಿತ್, ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್​ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಂಡದ ಉಳಿದ ಆಟಗಾರನನ್ನು ಬೇಟಿಯಾದ ಬಾಲಕ ಅವರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾನೆ. ಆ ಬಳಿಕ ರೋಹಿತ್ ಈ ಮಗುವಿಗೆ ಆಟೋಗ್ರಾಫ್ ನೀಡಿ ಅಲ್ಲಿಂದ ಬೀಳ್ಕೊಟ್ಟಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:42 am, Mon, 17 October 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ