AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಹಲ್ಲು ತೋರಿಸುವುದನ್ನು ಬಿಟ್ಟು ಬೇಗ ಬೌಲಿಂಗ್ ಮಾಡು! ಚಹಲ್ ಕಾಲೆಳೆದ ರೋಹಿತ್; ವಿಡಿಯೋ

IND vs WI: ಅಹಮದಾಬಾದ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ರೋಹಿತ್ ಶರ್ಮಾ ಫಿಲ್ಡ್ ಸೆಟ್ ಮಾಡುತ್ತಿದ್ದರು. ಈ ವೇಳೆ ಯುಜ್ವೇಂದ್ರ ಚಹಾಲ್ ನಿಧಾನವಾಗಿ ತಮ್ಮ ಫೀಲ್ಡ್ ಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ರೋಹಿತ್, ಏನಾಗಿದೆ ನಿನಗೆ, ಬೇಗ ನಾನು ಹೇಳಿದ ಜಾಗಕ್ಕೆ ಹೋಕು ಎಂದು ಗದರಿದ್ದರು.

IND vs WI: ಹಲ್ಲು ತೋರಿಸುವುದನ್ನು ಬಿಟ್ಟು ಬೇಗ ಬೌಲಿಂಗ್ ಮಾಡು! ಚಹಲ್ ಕಾಲೆಳೆದ ರೋಹಿತ್; ವಿಡಿಯೋ
ರೋಹಿತ್, ಚಹಲ್
TV9 Web
| Updated By: ಪೃಥ್ವಿಶಂಕರ|

Updated on:Feb 17, 2022 | 3:53 PM

Share

ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾದ ನಾಯಕರಾದಾಗಿನಿಂದ ತಂಡದಲ್ಲಿ ವಿಭಿನ್ನ ಎನರ್ಜಿ ಗೋಚರಿಸುತ್ತಿದೆ. ಎಲ್ಲಾ ಆಟಗಾರರು ತುಂಬಾ ಕೂಲ್ ಆಗಿ ಕಾಣುತ್ತಿದ್ದಾರೆ. ಪಂದ್ಯದ ವೇಳೆಯೂ ಆಟಗಾರರು ತಮಾಷೆ ಮಾಡುತ್ತಲೇ ಇರುತ್ತಾರೆ. ನಾಯಕ ರೋಹಿತ್ ಶರ್ಮಾ ಅವರೇ ತಮ್ಮ ಸಹ ಆಟಗಾರರ ಕಾಲೆಳೆದು ಪಂದ್ಯದ ಹೆಡ್ ಲೈನ್ ಆಗುತ್ತಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ T20 ಪಂದ್ಯದಲ್ಲಿ (ಭಾರತ vs ವೆಸ್ಟ್ ಇಂಡೀಸ್, 1 ನೇ T20I) ಇದೇ ರೀತಿಯ ಘಟನೆ ಸಂಭವಿಸಿದೆ. ರೋಹಿತ್ ಶರ್ಮಾ ಮತ್ತೊಮ್ಮೆ ಲೈವ್ ಮ್ಯಾಚ್‌ನಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಕಾಲೆಳೆದಿದ್ದಾರೆ. ರೋಹಿತ್ ಶರ್ಮಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರನ್ನು ತುಂಬಾ ಇಷ್ಟಪಡುತ್ತಿದ್ದಾರೆ.

ವಾಸ್ತವವಾಗಿ, ವೆಸ್ಟ್ ಇಂಡೀಸ್ ಇನ್ನಿಂಗ್ಸ್ನ 15 ನೇ ಓವರ್ ಅನ್ನು ಯುಜ್ವೇಂದ್ರ ಚಹಾಲ್ ಮಾಡುತ್ತಿದ್ದರು. ಮೊದಲ ಎಸೆತದಲ್ಲಿಯೇ ಚಾಹಲ್ ತಮ್ಮ ಸ್ಪಿನ್‌ನಿಂದ ಪೊಲಾರ್ಡ್‌ಗೆ ತೊಂದರೆ ನೀಡಿದರು. ಪೊಲಾರ್ಡ್ ಒಂದು ರನ್ ಪಡೆಯುತ್ತಾನೆ ಮತ್ತು ಅವನು ನಾನ್-ಸ್ಟ್ರೈಕ್ ಕಡೆಗೆ ಬರುತ್ತಾನೆ. ಅಲ್ಲಿ ಯುಜ್ವೇಂದ್ರ ಚಹಾಲ್ ಅವರನ್ನು ನೋಡಿ ನಗಲು ಪ್ರಾರಂಭಿಸಿದರು. ಇದಾದ ನಂತರ ಸ್ಲಿಪ್‌ನಲ್ಲಿ ನಿಂತಿದ್ದ ನಾಯಕ ರೋಹಿತ್ ಶರ್ಮಾ ಯುಜ್ವೇಂದ್ರ ಚಹಾಲ್‌ಗೆ ಹಲ್ಲು ತೋರಿಸುವುದನ್ನು ಬಿಟ್ಟು ಬೇಗ ಬೇಗ ಬೌಲಿಂಗ್ ಮಾಡು ಎಂದಿದ್ದಾರೆ. ಸ್ಟಂಪ್ ಮೈಕ್‌ನಲ್ಲಿ ರೋಹಿತ್‌ ಅವರ ಈ ಮಾತು ರೆಕಾರ್ಡ್​ ಆಗಿದ್ದು, ಈಗ ಅದೇ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಹಿಂದೆಯೂ ಕಾಲೆಳೆದಿದ್ದ ರೋಹಿತ್

ODI ಸರಣಿಯ ಸಮಯದಲ್ಲಿ ರೋಹಿತ್ ಶರ್ಮಾ ಇದೇ ರೀತಿ ಮಾಡಿದ್ದರು. ಅಹಮದಾಬಾದ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ರೋಹಿತ್ ಶರ್ಮಾ ಫಿಲ್ಡ್ ಸೆಟ್ ಮಾಡುತ್ತಿದ್ದರು. ಈ ವೇಳೆ ಯುಜ್ವೇಂದ್ರ ಚಹಾಲ್ ನಿಧಾನವಾಗಿ ತಮ್ಮ ಫೀಲ್ಡ್ ಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ರೋಹಿತ್, ಏನಾಗಿದೆ ನಿನಗೆ, ಬೇಗ ನಾನು ಹೇಳಿದ ಜಾಗಕ್ಕೆ ಹೋಕು ಎಂದು ಗದರಿದ್ದರು. ರೋಹಿತ್ ಶರ್ಮಾ ಅವರ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಿ20 ಸರಣಿಯಲ್ಲಿ ಗೆಲುವಿನ ಆರಂಭ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಗೆದ್ದುಕೊಂಡಿರುವ ಭಾರತ ತಂಡ ಟಿ20 ಸರಣಿಯಲ್ಲೂ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಕೋಲ್ಕತ್ತಾದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 157 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಮೊದಲು 7 ಎಸೆತಗಳಲ್ಲಿ ಗುರಿ ಸಾಧಿಸಿತು. ನಾಯಕ ರೋಹಿತ್ ಶರ್ಮಾ ಕೇವಲ 19 ಎಸೆತಗಳಲ್ಲಿ 40 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾದರು. ಇಶಾನ್ ಕಿಶನ್ ಕೂಡ 35 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 18 ಎಸೆತಗಳಲ್ಲಿ ಔಟಾಗದೆ 34 ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ ಕೂಡ 13 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿದರು. ಟಿ20 ಸರಣಿಯ ಮುಂದಿನ ಪಂದ್ಯ ಶುಕ್ರವಾರ ನಡೆಯಲಿದೆ.

ಇದನ್ನೂ ಓದಿ:IND vs WI 1st T20, Highlight: ರೋಹಿತ್- ಸೂರ್ಯ ಬೊಂಬಾಟ್ ಬ್ಯಾಟಿಂಗ್; ಮೊದಲ ಟಿ20 ಗೆದ್ದ ಭಾರತ

Published On - 3:52 pm, Thu, 17 February 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ