AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill: ಬರೋಬ್ಬರಿ 104 ಮೀಟರ್ ಸಿಕ್ಸ್: ಶುಭ್ಮನ್ ಗಿಲ್ ಸ್ಫೋಟಕ ಹೊಡೆತಕ್ಕೆ ಚೆಂಡು ಎಲ್ಲೋಯ್ತು ನೋಡಿ

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಎರಡು ರನ್​ಗಳ ಅಂತರದಿಂದ ಶತಕವನ್ನು ಮಿಸ್ ಮಾಡಿಕೊಂಡರು. ಇದರಲ್ಲಿ ಗಿಲ್ ಸಿಡಿಸಿದ ಒಂದು ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ.

Shubman Gill: ಬರೋಬ್ಬರಿ 104 ಮೀಟರ್ ಸಿಕ್ಸ್: ಶುಭ್ಮನ್ ಗಿಲ್ ಸ್ಫೋಟಕ ಹೊಡೆತಕ್ಕೆ ಚೆಂಡು ಎಲ್ಲೋಯ್ತು ನೋಡಿ
Shubman Gill Six IND vs WI 3rd ODI
TV9 Web
| Updated By: Vinay Bhat|

Updated on:Jul 28, 2022 | 11:19 AM

Share

ಸುಮಾರು ಒಂದವರೆ ವರ್ಷಗಳ ಬಳಿಕ ಭಾರತ ತಂಡದ ಪರ ಏಕದಿನ ಕ್ರಿಕೆಟ್​ನಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ (Shubman Gill) ಅಮೋಘ ಪ್ರದರ್ಶನ ನೀಡಿದ್ದಾರೆ. ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ (Shikhar Dhawan) ಜೊತೆ ಇನ್ನಿಂಗ್ಸ್​ ಆರಂಭಿಸಿದ ಗಿಲ್ ತಮ್ಮ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಆಡಿದ ಮೂರೂ ಪಂದ್ಯಗಳಲ್ಲಿ 64, 43, 98 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಅದರಲ್ಲೂ ಅಂತಿಮ ಪಂದ್ಯದಲ್ಲಿ 98 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 98 ರನ್ ಚಚ್ಚಿದರು. ಇದಕ್ಕಾಗಿ ಸರಣಿಶ್ರೇಷ್ಠ ಮತ್ತು ಪಂದ್ಯಶ್ರೇಷ್ಠ ಎರಡೂ ಪ್ರಶಸ್ತಿಯನ್ನು ಬಾಜಿಕೊಂಡಿದ್ದಾರೆ. ಈ ಪ್ರದರ್ಶನದಿಂದ ಗಿಲ್ ಮುಂದಿನ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗುವ ನಿರೀಕ್ಷೆಯಿದೆ. ಅಲ್ಲದೆ ಟೀಮ್ ಇಂಡಿಯಾದ (Team India) ಬ್ಯಾಕಪ್ ಓಪನರ್​ಗಳಾದ ಇಶಾನ್ ಕಿಶನ್ ಹಾಗೂ ರುತುರಾಜ್ ಗಾಯಕ್ವಾಡ್ ಸ್ಥಾನಕ್ಕೂ ಕುತ್ತು ಬಂದಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗಿಲ್ ಎರಡು ರನ್​ಗಳ ಅಂತರದಿಂದ ಶತಕವನ್ನು ಮಿಸ್ ಮಾಡಿಕೊಂಡರು. ಗಿಲ್ ಆಟದಲ್ಲಿ ಎರಡು ಮನಮೋಹಕ ಸಿಕ್ಸರ್​ಗಳಿದ್ದವು. ಅದರಲ್ಲೂ ಒಂದು ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ. 15ನೇ ಓವರ್​ನ ಹೇಡನ್ ವಾಲ್ಶ್ ಬೌಲಿಂಗ್​ನಲ್ಲಿ ಮುಂದೆ ಬಂದು ಲಾಂಗ್ ಆನ್​ನಲ್ಲಿ ಚೆಂಡನ್ನು ಸಿಕ್ಸರ್​ಗೆಂದು ಅಟ್ಟಿದರು. ಗಿಲ್ ಹೊಡೆದ ರಭಸಕ್ಕೆ ಚೆಂಡು ಬರೋಬ್ಬರಿ 104 ಮೀಟರ್ ಹೋಗಿದ್ದು ಮಾತ್ರಬಲ್ಲದೆ ಸ್ಟೇಡಿಯಂನಿಂದಲೇ ಹೊರಗಡೆ ಬಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Shubhman Gill: ಸರಣಿಶ್ರೇಷ್ಠ ಸ್ವೀಕರಿಸುವಾಗ ಬೇಸರ ಹೊರಹಾಕಿದ ಶುಭ್ಮನ್ ಗಿಲ್: ಏನಂದ್ರು ಗೊತ್ತೇ?
Image
Suraj Vashisht: ಇತಿಹಾಸ ನಿರ್ಮಿಸಿದ ಸೂರಜ್ ವಸಿಷ್ಠ್: ಕುಸ್ತಿಯಲ್ಲಿ ಚಿನ್ನ ಗೆದ್ದ 16 ವರ್ಷದ ಬಾಲಕ
Image
IND vs WI: ಕೆರಿಬಿಯನ್ ನಾಡಲ್ಲಿ 39 ವರ್ಷಗಳ ನಂತರ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ
Image
India vs West Indies ODI: ಸರಣಿ ಕ್ಲೀನ್​ಸ್ವೀಪ್: ಭಾರತದ ಆಲ್ರೌಂಡ್ ಆಟಕ್ಕೆ ಧೂಳಿಪಟವಾದ ವೆಸ್ಟ್ ಇಂಡೀಸ್

ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ಗಿಲ್, “ಶತಕ ಗಳಿಸುವ ಆಸೆ ಇತ್ತು. ಆದರೆ, ಆಟಕ್ಕೆ ಮಳೆ ಅಡ್ಡಿಸಿತು, ಇದು ನನ್ನ ನಿಯಂತ್ರಣದಲ್ಲಿ ಇರಲಿಲ್ಲ ನಿಜ. ಇದರಿಂದ ತುಂಬಾ ಬೇಸರವಾಗಿದೆ. ಇನ್ನೊಂದು ಓವರ್ ಇರುತ್ತಿದ್ದರೆ ನಾನು ಶತಕ ಗಳಿಸುತ್ತಿದ್ದೆ. ಮೊದಲ ಎರಡು ಏಕದಿನ ಪಂದ್ಯದಲ್ಲೂ ಔಟಾಗಿದ್ದು ನನಗೆ ಸಮಾದಾನ ನೀಡಲಿಲ್ಲ. ನಾನು ಬಾಲ್​ಗೆ ತಕ್ಕಂತೆ ಬ್ಯಾಟ್ ಬೀಸಲು ಯತ್ನಿಸುತ್ತೇನೆ. ಮೂರು ಪಂದ್ಯಗಳಲ್ಲಿ ವಿಕೆಟ್ ಅದ್ಭುತವಾಗಿತ್ತು. ನನ್ನ ಪ್ರದರ್ಶನದ ಬಗೆಗ ನನಗೆ ಹೆಮ್ಮೆಯಿದೆ,” ಎಂದು ಗಿಲ್ ಹೇಳಿದ್ದಾರೆ.

ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್​ ಓವಲ್ ಮೈದಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಅಂತಿಮ ತೃತೀಯ ಏಕದಿನ ಪಂದ್ಯದಲ್ಲೂ ಭಾರತ ಭರ್ಜರಿ ಪ್ರದರ್ಶನ ತೋರಿ ಗೆದ್ದು ಬೀಗಿತು. ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿದ ಟೀಮ್ ಇಂಡಿಯಾ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ ಬರೋಬ್ಬರಿ 119 ರನ್​ಗಳ ಅಮೋಘ ಜಯ ಸಾಧಿಸಿತು.

ಈ ಮೂಲಕ ಮೂರೂ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಧವನ್ ಪಡೆ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. ಶುಭ್ಮನ್ ಗಿಲ್, ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್​ನಲ್ಲಿ ಮಿಂಚಿದರೆ, ಬೌಲಿಂಗ್​ನಲ್ಲಿ ಯುಜ್ವೇಂದ್ರ ಚಹಲ್, ಸಿರಾಜ್ ಹಾಗೂ ಶಾರ್ದೂಲ್ ಮಾರಕ ದಾಳಿ ಸಂಘಟಿಸಿದರು. ಪಂದ್ಯದ ನಡುವೆ ಮಳೆಯರಾಯನ ಆಗಮನವಾದ ಕಾರಣ ಓವರ್ ಕಡಿತಗೊಳಿಸಿ ಆಡಿಸಲಾಯಿತು.

Published On - 11:19 am, Thu, 28 July 22

ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್