AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubhman Gill: ಸರಣಿಶ್ರೇಷ್ಠ ಸ್ವೀಕರಿಸುವಾಗ ಬೇಸರ ಹೊರಹಾಕಿದ ಶುಭ್ಮನ್ ಗಿಲ್: ಏನಂದ್ರು ಗೊತ್ತೇ?

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಶುಭ್ಮನ್ ಗಿಲ್ ಪಂದ್ಯಶ್ರೇಷ್ಠದ ಜೊತೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಜಿಕೊಂಡರು. ಆದರೆ, ಪಂದ್ಯ ಮುಗಿದ ಬಳಿಕ ಬೇಸರ ವ್ಯಕ್ತಪಡಿಸಿದ್ದಾರೆ.

Shubhman Gill: ಸರಣಿಶ್ರೇಷ್ಠ ಸ್ವೀಕರಿಸುವಾಗ ಬೇಸರ ಹೊರಹಾಕಿದ ಶುಭ್ಮನ್ ಗಿಲ್: ಏನಂದ್ರು ಗೊತ್ತೇ?
Shubhman Gill IND vs WI 3rd ODI
TV9 Web
| Updated By: Vinay Bhat|

Updated on:Jul 28, 2022 | 10:29 AM

Share

ಕೆರಿಬಿಯನ್ನರ ನಾಡಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಮೂರರಲ್ಲೂ ಗೆದ್ದು ಬೀಗಿರುವ ಭಾರತ (India vs West Indies) ತಂಡ ವಿಶೇಷ ಸಾಧನೆ ಮಾಡಿ ಮೆರೆದಿದೆ. ಮೊದಲ ಪಂದ್ಯದಲ್ಲಿ 3 ರನ್​ಗಳ ರೋಚಕ ಜಯ ಸಾಧಿಸಿದ್ದ ಟೀಮ್ ಇಂಡಿಯಾ (Team India) ದ್ವಿತೀಯ ಏಕದಿನದಲ್ಲಿ 2 ವಿಕೆಟ್​ಗಳಿಂದ ಗೆಲುವು ಪಡೆದುಕೊಂಡಿತ್ತು. ಅಂತಿಮ ತೃತೀಯ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೂ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 119 ರನ್​ಗಳಿಂದ ಗೆದ್ದು ಬೀಗಿದೆ. ಟೂರ್ನಿಯುದ್ದಕ್ಕೂ ಶುಭ್ಮನ್ ಗಿಲ್ (Shubhman Gill) ಅದ್ಭುತ ಪ್ರದರ್ಶನ ನೀಡಿದರು. ಸಿಕ್ಕ ಅವಕಾಶವನ್ನು ಎರಡೂ ಕೈಯಲ್ಲಿ ಬಾಜಿಕೊಂಡ ಇವರು ಮೊದಲ ಪಂದ್ಯದಲ್ಲಿ 64 ರನ್ ಬಾರಿಸಿದರೆ, ಎರಡನೇ ಪಂದ್ಯದಲ್ಲಿ 43 ರನ್ ಹಾಗೂ ಮೂರನೇ ಪಂದ್ಯದಲ್ಲಿ ಅಜೇಯ 98 ರನ್ ಸಿಡಿಸಿದರು. ಈ ಪ್ರದರ್ಶನಕ್ಕಾಗಿ ಗಿಲ್ ಪಂದ್ಯಶ್ರೇಷ್ಠದ ಜೊತೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಜಿಕೊಂಡರು. ಆದರೆ, ಪಂದ್ಯ ಮುಗಿದ ಬಳಿಕ ಮಾತನಾಡಿದ ಗಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿ ಗಿಲ್, “ಶತಕ ಗಳಿಸುವ ಆಸೆ ಇತ್ತು. ಆದರೆ, ಆಟಕ್ಕೆ ಮಳೆ ಅಡ್ಡಿಸಿತು, ಇದು ನನ್ನ ನಿಯಂತ್ರಣದಲ್ಲಿ ಇರಲಿಲ್ಲ ನಿಜ. ಇದರಿಂದ ತುಂಬಾ ಬೇಸರವಾಗಿದೆ. ಇನ್ನೊಂದು ಓವರ್ ಇರುತ್ತಿದ್ದರೆ ನಾನು ಶತಕ ಗಳಿಸುತ್ತಿದ್ದೆ. ಮೊದಲ ಎರಡು ಏಕದಿನ ಪಂದ್ಯದಲ್ಲೂ ಔಟಾಗಿದ್ದು ನನಗೆ ಸಮಾದಾನ ನೀಡಲಿಲ್ಲ. ನಾನು ಬಾಲ್​ಗೆ ತಕ್ಕಂತೆ ಬ್ಯಾಟ್ ಬೀಸಲು ಯತ್ನಿಸುತ್ತೇನೆ. ಮೂರು ಪಂದ್ಯಗಳಲ್ಲಿ ವಿಕೆಟ್ ಅದ್ಭುತವಾಗಿತ್ತು. ನನ್ನ ಪ್ರದರ್ಶನದ ಬಗೆಗ ನನಗೆ ಹೆಮ್ಮೆಯಿದೆ,” ಎಂದು ಗಿಲ್ ಹೇಳಿದ್ದಾರೆ.

ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಮಾತನಾಡಿ, “ನಮ್ಮ ತಂಡದಲ್ಲಿರುವವರು ಯುವ ಆಟಗಾರರು. ಆದರೆ, ಅವರು ಪ್ರಬುದ್ದರಾಗಿ ಆಡಿದ್ದಾರೆ. ಅವರು ಫೀಲ್ಡ್​ನಲ್ಲಿ ಅವರನ್ನು ತೊಡಗಿಸಿಕೊಂಡಿದ್ದು ನೋಡಿ ನನಗೆ ಹೆಮ್ಮೆಯಾಗುತ್ತಿದೆ. ಇದು ಭಾರತಕ್ಕೆ ಉತ್ತಮ ಸೂಚನೆ. ನಾನು ಈ ಫಾರ್ಮೆಟ್​ನಲ್ಲಿ ಸಾಕಷ್ಟು ಸಮಯದಿಂದ ಆಡುತ್ತಿದ್ದೇನೆ. ನನ್ನ ಪ್ರದರ್ಶನದಿಂದ ನನಗೆ ಸಂತಸವಾಗಿದೆ. ಗಿಲ್ ಗಳಿಸಿದ 98 ರನ್​ನ ಆಟವನ್ನು ನೋಡಲು ಉತ್ತಮವಾಗಿತ್ತು. ನಾವು ಇಲ್ಲಿಗೆ ಬಂದಿದ್ದು ಅದೃಷ್ಟ. ಇಲ್ಲಿನ ಅಭಿಮಾನಿಗಳಿಗೆ ಧನ್ಯವಾದ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
Suraj Vashisht: ಇತಿಹಾಸ ನಿರ್ಮಿಸಿದ ಸೂರಜ್ ವಸಿಷ್ಠ್: ಕುಸ್ತಿಯಲ್ಲಿ ಚಿನ್ನ ಗೆದ್ದ 16 ವರ್ಷದ ಬಾಲಕ
Image
IND vs WI: ಕೆರಿಬಿಯನ್ ನಾಡಲ್ಲಿ 39 ವರ್ಷಗಳ ನಂತರ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ
Image
India vs West Indies ODI: ಸರಣಿ ಕ್ಲೀನ್​ಸ್ವೀಪ್: ಭಾರತದ ಆಲ್ರೌಂಡ್ ಆಟಕ್ಕೆ ಧೂಳಿಪಟವಾದ ವೆಸ್ಟ್ ಇಂಡೀಸ್
Image
Rishabh Pant: 848 ಸಿಕ್ಸರ್ ಬಾರಿಸಿದ ಬ್ಯಾಟ್ಸ್​ಮನ್​ಗಳ ಫೋಟೋ ಹಂಚಿಕೊಂಡ ಪಂತ್

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಓಪನರ್​ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಬೊಂಬಾಟ್ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 113 ರನ್​​ಗಳ ಜೊತೆಯಾಟ ಆಡಿತು. ಧವನ್ 58 ರನ್ ಗಳಿಸಿದರು. ನಂತರ ಎರಡನೇ ವಿಕೆಟ್​ಗೆ ಶ್ರೇಯಸ್ ಅಯ್ಯರ್ ಜೊತೆಯಾದ ಗಿಲ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಅಯ್ಯರ್ 34 ಎಸೆತಗಳಲ್ಲಿ 44 ರನ್ ಸಿಡಿಸಿದರು. ಸೂರ್ಯಕುಮಾರ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 8 ರನ್​ಗೆ ಔಟಾದರು.

ಸಂಜು ಸ್ಯಾಮ್ಸನ್ ಅಜೇಯ 6 ರನ್ ಗಳಿಸಿದರು. ಆರ್ಭಟಿಸಿದ ಗಿಲ್ ಶತಕದ ಅಂಚಿನಲ್ಲಿ ಅಜೇಯರಾಗಿ ಉಳಿದರು. 98 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 98 ರನ್ ಚಚ್ಚಿದರು. ಅಂತಿಮವಾಗಿ ಭಾರತ 36 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು. ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ವಿಂಡೀಸ್ ಗೆಲುವಿಗೆ 35 ಓವರ್‌ಗಳಲ್ಲಿ 257 ರನ್ ಗುರಿ ಮರುನಿಗದಿಪಡಿಸಲಾಯಿತು. ಆದರೆ, ಭಾರತದ ಬೌಲಿಂಗ್ ದಾಳಿಗೆ ಕೆರಿಬಿಯನ್ ಬ್ಯಾಟರ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. 26 ಓವರ್​ಗಳಲ್ಲೇ 137 ರನ್​ಗೆ ಸರ್ವಪತನ ಕಂಡಿತು. ಯುಜ್ವೇಂದ್ರ ಚಹಲ್ 4 ವಿಕೆಟ್ ಕಿತ್ತು ಮಿಂಚಿದರು.

Published On - 10:29 am, Thu, 28 July 22

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ