AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2022: ತ್ರಿಕೋನ ಸರಣಿಯಲ್ಲಿ ಫ್ಲಾಪ್; ಟಿ20 ವಿಶ್ವಕಪ್‌ ತಂಡದಿಂದ ಇಬ್ಬರು ಆಟಗಾರರಿಗೆ ಗೇಟ್​ಪಾಸ್..!

T20 World Cup 2022: ಸೈಫುದ್ದೀನ್ ಮತ್ತು ಶಬ್ಬೀರ್ ಇಬ್ಬರನ್ನು ಕೈಬಿಟ್ಟಿರುವ ಆಯ್ಕೆ ಮಂಡಳಿ, ಈ ನಿರ್ಧಾರಕ್ಕೆ ಈ ಇಬ್ಬರ ಕಳಪೆ ಫಾರ್ಮ್ ಮತ್ತು ಫಿಟ್‌ನೆಸ್ಸೆ ಕಾರಣ ಎಂಬ ವಿವರಣೆ ನೀಡಿದ್ದಾರೆ.

T20 World Cup 2022: ತ್ರಿಕೋನ ಸರಣಿಯಲ್ಲಿ ಫ್ಲಾಪ್; ಟಿ20 ವಿಶ್ವಕಪ್‌ ತಂಡದಿಂದ ಇಬ್ಬರು ಆಟಗಾರರಿಗೆ ಗೇಟ್​ಪಾಸ್..!
T20 ವಿಶ್ವಕಪ್ 2022 ಪ್ರಾರಂಭವಾಗುವ ಮೊದಲು ಬಾಂಗ್ಲಾದೇಶ ತನ್ನ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಿದೆ. ಶಬ್ಬೀರ್ ರೆಹಮಾನ್- ಮೊಹಮ್ಮದ್ ಸೈಫುದ್ದೀನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಅವರ ಸ್ಥಾನಕ್ಕೆ ಸೌಮ್ಯ ಸರ್ಕಾರ್ ಹಾಗೂ ಶೋರಿಫುಲ್ ಇಸ್ಲಾಂ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.
TV9 Web
| Edited By: |

Updated on:Oct 15, 2022 | 11:50 AM

Share

ನ್ಯೂಜಿಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ (tri-series) ಬಾಂಗ್ಲಾದೇಶದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಟಿ20 ವಿಶ್ವಕಪ್‌ಗೆ ಮುನ್ನ ತಂಡಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ಟಿ20 ವಿಶ್ವಕಪ್ (T20 World Cup)​ ತಂಡದಲ್ಲಿ ಬದಲಾವಣೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮುಂದಾಗಿದೆ. ಅಕ್ಟೋಬರ್ 15 ರ ಒಳಗೆ ಎಲ್ಲಾ ಮಂಡಳಿಗಳು ತಮ್ಮ ತಮ್ಮ ತಂಡಗಳ ಆಟಗಾರರ ಅಂತಿಮ ಪಟ್ಟಿಯನ್ನು ಐಸಿಸಿಗೆ (ICC) ಸಲ್ಲಿಸಬೇಕಿದೆ. ಆದರೆ ಅದಕ್ಕೂ ಮೊದಲು ಬಾಂಗ್ಲಾದೇಶ ತನ್ನ 15 ಸದಸ್ಯರ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಇದರ ಪ್ರಯುಕ್ತ ಈ ಮುಂಚೆ ಪ್ರಕಟಿಸಿದ್ದ ತಂಡದಲ್ಲಿ ಇಬ್ಬರು ಆಟಗಾರರನ್ನು ಕೈಬಿಟ್ಟಿದ್ದು, ಅವರ ಸ್ಥಾನಕ್ಕೆ ಸೌಮ್ಯ ಸರ್ಕಾರ್ ಮತ್ತು ಶೋರಿಫುಲ್ ಇಸ್ಲಾಂ ಅವರನ್ನು ಆಯ್ಕೆ ಮಾಡಿದೆ.

ವರದಿಯ ಪ್ರಕಾರ, ಮೊದಲು ತಂಡದಲ್ಲಿದ್ದ ಶಬೀರ್ ರೆಹಮಾನ್ ಮತ್ತು ಮೊಹಮ್ಮದ್ ಸೈಫುದ್ದೀನ್ ತ್ರಿಕೋನ ಸರಣಿಯಲ್ಲಿ ತೀರಕ ಕಳಪೆ ಪ್ರದರ್ಶನ ನೀಡಿದ್ದರು. ಇದನ್ನು ಮನಗಂಡ ಬಾಂಗ್ಲಾದೇಶ ತಂಡದ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ. ಹೀಗಾಗಿ ಶಬ್ಬೀರ್ ಮತ್ತು ಸೈಫುದ್ದೀನ್ ಅವರನ್ನು ಕೈಬಿಟ್ಟು ಸೌಮ್ಯ ಮತ್ತು ಶೋರಿಫುಲ್ ಅವರನ್ನು ಬಾಂಗ್ಲಾದೇಶ ತಂಡಕ್ಕೆ ಸೇರಿಸಿಕೊಂಡಿದೆ.

ಕೊನೆಯ ಕ್ಷಣದಲ್ಲಿ ತಂಡದಲ್ಲಿ 2 ಬದಲಾವಣೆ

ಅಕ್ಟೋಬರ್ 14 ರಂದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತಮ್ಮ 15 ಸದಸ್ಯರ ಅಂತಿಮ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ ಎಂದು ಹೇಳಿಕೆಯನ್ನು ನೀಡಿದೆ. ಅಲ್ಲದೆ ತನ್ನ ಹೇಳಿಕೆಯಲ್ಲಿ, ತಂಡದ ಅಂತಿಮ ಪಟ್ಟಿಯಲ್ಲಿ 2 ಬದಲಾವಣೆಗಳನ್ನು ಸಹ ಮಾಡಲಾಗಿದೆ ಎಂದು ತಿಳಿಸಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ಹೇಳಿಕೆಯಲ್ಲಿ, ಈ ಮುಂಚೆ ಎಡಗೈ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್ ಮತ್ತು ಎಡಗೈ ವೇಗದ ಬೌಲರ್ ಶೋರಿಫುಲ್ ಇಸ್ಲಾಂ ಅವರನ್ನು ವಿಶ್ವಕಪ್ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಈಗ ಈ ಇಬ್ಬರನ್ನು ಮುಖ್ಯ ತಂಡದಲ್ಲಿ ಸ್ಥಾನ ಪಡೆದಿದ್ದ ಬ್ಯಾಟ್ಸ್‌ಮನ್ ಶಬ್ಬೀರ್ ರೆಹಮಾನ್ ಮತ್ತು ಆಲ್ ರೌಂಡರ್ ಸೈಫುದ್ದೀನ್ ಅವರ ಬದಲಿಗೆ ತಂಡದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಶಬ್ಬೀರ್- ಸೈಫುದ್ದೀನ್ ಕಳಪೆ ಫಾರ್ಮ್​

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬಳಿಕ ನ್ಯೂಜಿಲೆಂಡ್​ನಲ್ಲಿ ತ್ರಿಕೋನ ಸರಣಿ ಮುಗಿಸಿದ ಶಬ್ಬೀರ್ ಮತ್ತು ಸೈಫುದ್ದೀನ್, ಟಿ20 ವಿಶ್ವಕಪ್ ತಂಡದೊಂದಿಗೆ ಮೀಸಲು ಆಟಗಾರರಾಗಿ ಆಸ್ಟ್ರೇಲಿಯಾಕ್ಕೆ ಹೋಗದೆ, ಸೀದಾ ತವರಿಗೆ ಮರಳಿದ್ದಾರೆ. ಸೈಫುದ್ದೀನ್ ಮತ್ತು ಶಬ್ಬೀರ್ ಇಬ್ಬರನ್ನು ಕೈಬಿಟ್ಟಿರುವ ಆಯ್ಕೆ ಮಂಡಳಿ, ಈ ನಿರ್ಧಾರಕ್ಕೆ ಈ ಇಬ್ಬರ ಕಳಪೆ ಫಾರ್ಮ್ ಮತ್ತು ಫಿಟ್‌ನೆಸ್ಸೆ ಕಾರಣ ಎಂಬ ವಿವರಣೆ ನೀಡಿದ್ದಾರೆ.

Published On - 11:46 am, Sat, 15 October 22

Follow Us
Web contact
Web contact

TV9 Kannada

Read More
ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ
ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ