T20 World Cup 2024: ಸೂಪರ್ 8 ಸುತ್ತಿನಲ್ಲಿ ಮಳೆಯಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಯಾವ್ಯಾವ ಪಂದ್ಯಗಳಿಗೆ ಮೀಸಲು ದಿನ?

T20 World Cup 2024: ಗುಂಪು-ಹಂತದ ಪಂದ್ಯಗಳಂತಯೇ ಸೂಪರ್-8 ಪಂದ್ಯಗಳಿಗೂ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಿಲಾಗಿದೆ. ಅಂದರೆ, ಮಳೆ ಬಂದರೆ ಅದೇ ದಿನ ಪಂದ್ಯವನ್ನು ಹೇಗಾದರೂ ಪೂರ್ಣಗೊಳಿಸಲೇಬೇಕು. ಈ ಪರಿಸ್ಥಿತಿಯಲ್ಲಿ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ತಲಾ 5 ಓವರ್​ಗಳ ಪಂದ್ಯವನ್ನು ಆಡಿಸಲಾಗುತ್ತದೆ. ಇದರ ಹೊರತಾಗಿಯೂ ಪಂದ್ಯ ನಡೆಯದೇ ಇದ್ದರೆ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಿಕೆಯಾಗಲಿದೆ.

T20 World Cup 2024: ಸೂಪರ್ 8 ಸುತ್ತಿನಲ್ಲಿ ಮಳೆಯಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಯಾವ್ಯಾವ ಪಂದ್ಯಗಳಿಗೆ ಮೀಸಲು ದಿನ?
ಟೀಂ ಇಂಡಿಯಾ
Follow us
|

Updated on:Jun 15, 2024 | 11:35 PM

ಭಾರತ ಮತ್ತು ಕೆನಡಾ (IND vs CAN) ನಡುವೆ ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಪಂದ್ಯ (T20 World Cup 2024) ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದ ರದ್ದತಿಯಿಂದಾಗಿ ಎರಡು ತಂಡಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಏಕೆಂದರೆ ಟೀಂ ಇಂಡಿಯಾ ಈಗಾಗಲೇ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿದೆ. ಇತ್ತ ಕೆನಡಾ ಈಗಾಗಲೇ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಇದೀಗ ಭಾರತ ತಂಡ ತನ್ನ ಮೊದಲ ಸೂಪರ್-8 ಪಂದ್ಯವನ್ನು ಜೂನ್ 20 ರಂದು ಆಡಲಿದೆ. ಈ ಪಂದ್ಯವು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ (IND vs AFG)  ನಡೆಯಲಿದೆ. ಆದರೆ ಅದಕ್ಕೂ ಮುನ್ನ ಸೂಪರ್ 8 ಸುತ್ತಿನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ. ಈ ಸುತ್ತಿಗೆ ಮೀಸಲು ದಿನವಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.

ಸೂಪರ್-8 ಸುತ್ತಿಗೂ ಮೀಸಲು ದಿನವಿಲ್ಲ

ವರದಿಗಳ ಪ್ರಕಾರ, ಗುಂಪು-ಹಂತದ ಪಂದ್ಯಗಳಂತಯೇ ಸೂಪರ್-8 ಪಂದ್ಯಗಳಿಗೂ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಅಂದರೆ, ಮಳೆ ಬಂದರೆ ಅದೇ ದಿನ ಪಂದ್ಯವನ್ನು ಹೇಗಾದರೂ ಪೂರ್ಣಗೊಳಿಸಲೇಬೇಕು. ಈ ಪರಿಸ್ಥಿತಿಯಲ್ಲಿ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ತಲಾ 5 ಓವರ್​ಗಳ ಪಂದ್ಯವನ್ನು ಆಡಿಸಲಾಗುತ್ತದೆ. ಇದರ ಹೊರತಾಗಿಯೂ ಪಂದ್ಯ ನಡೆಯದೇ ಇದ್ದರೆ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಗುತ್ತದೆ.

ಸೂಪರ್ -8 ಸುತ್ತಿನಲ್ಲಿ ಪ್ರತಿ ತಂಡವು ತಲಾ 3 ಪಂದ್ಯಗಳನ್ನು ಆಡಲಿದೆ. ಒಂದು ವೇಳೆ ಮಳೆಯಿಂದಾಗಿ ಒಂದು ಪಂದ್ಯ ರದ್ದಾದರೂ ತಂಡಗಳಿಗೆ ಭಾರಿ ನಷ್ಟ ಉಂಟಾಗಲಿದೆ. ಏಕೆಂದರೆ ಗುಂಪು ಹಂತಕ್ಕೆ ಹೋಲಿಸಿದರೆ ಸೂಪರ್ 8 ಸುತ್ತಿನಲ್ಲಿ ಎಲ್ಲಾ ತಂಡಗಳು ಒಂದೊಂದು ಕಡಿಮೆ ಪಂದ್ಯವನ್ನು ಆಡಬೇಕಾಗಿದೆ. ಇಂತಹ ಸಂದರ್ಭದಲ್ಲಿ 1 ಪಂದ್ಯ ಮಳೆಯಿಂದ ರದ್ದಾದರೆ ಮುಂದಿನ ಸುತ್ತಿಗೆ ಹೋಗಲು ತಂಡಗಳು ಸಂಕಷ್ಟ ಎದುರಿಸಬೇಕಾಗುತ್ತದೆ.

IND vs CAN: ಭಾರತ- ಕೆನಡಾ ಪಂದ್ಯ ಮಳೆಗಾಹುತಿ; ಸೂಪರ್ 8 ಸುತ್ತಿಗೆ ರೋಹಿತ್ ಪಡೆ

ಸೆಮಿಫೈನಲ್‌- ಫೈನಲ್ ಕಥೆ ಏನು?

ಮೊದಲ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ವೇಳೆ ಮಳೆ ಬಂದರೆ, ಅದೇ ದಿನ ಪಂದ್ಯದ ಫಲಿತಾಂಶ ಪಡೆಯಲು ಕನಿಷ್ಠ 10 ಓವರ್‌ಗಳ ಆಟ ನಡೆಯಬೇಕಾಗುತ್ತದೆ. ಇದು ಸಾಧ್ಯವಾಗದಿದ್ದರೆ ಪಂದ್ಯ ಮೀಸಲು ದಿನಕ್ಕೆ ಹೋಗಲಿದೆ. ಮೊದಲ ಸೆಮಿಫೈನಲ್ ಮತ್ತು ಫೈನಲ್‌ಪಂದ್ಯಗಳಿಗೆ 190 ನಿಮಿಷಗಳ ಅಧಿಕ ಸಮಯ ಮತ್ತು ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಆದರೆ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಮೀಸಲಿರಿಸಿಲ್ಲ. ಬದಲಿಗೆ ಎರಡನೇ ಸೆಮಿಫೈನಲ್‌ಗೆ ಹೆಚ್ಚುವರಿ 250 ನಿಮಿಷಗಳ ಹೆಚ್ಚಿನ ಸಮಯಾವಕಾಶವನ್ನು ನೀಡಲಾಗಿದೆ. ಇದರೊಳಗೆಯೇ ಪಂದ್ಯವನ್ನು ಮುಗಿಸಬೇಕಿದೆ.

ಒಂದು ವೇಳೆ ಪಂದ್ಯ ರದ್ದಾದರೆ, ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ವಿಶೇಷವೆಂದರೆ ಎರಡನೇ ಸೆಮಿಫೈನಲ್ ಮತ್ತು ಫೈನಲ್ ನಡುವೆ ಕೇವಲ ಒಂದು ದಿನದ ಅಂತರ ಮಾತ್ರವಿದೆ. ಎರಡನೇ ಸೆಮಿಫೈನಲ್ ಪಂದ್ಯ ಜೂನ್ 27 ರಂದು ನಡೆದರೆ ಫೈನಲ್ ಪಂದ್ಯ ಜೂನ್ 29 ರಂದು ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 pm, Sat, 15 June 24

ತಾಜಾ ಸುದ್ದಿ
Daily Devotional: ಪಂಚಮುಖ ರುದ್ರಾಕ್ಷಿ ಧಾರಣೆಯ ಮಹತ್ವ ತಿಳಿಯಿರಿ
Daily Devotional: ಪಂಚಮುಖ ರುದ್ರಾಕ್ಷಿ ಧಾರಣೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯ ಅವಿವಾಹಿತರಿಗೆ ಇಂದು ವಿವಾಹ ನಿಶ್ಚಯವಾಗಲಿದೆ
Daily Horoscope: ಈ ರಾಶಿಯ ಅವಿವಾಹಿತರಿಗೆ ಇಂದು ವಿವಾಹ ನಿಶ್ಚಯವಾಗಲಿದೆ
International Yoga Day: ಶ್ರೀನಗರದ ದಾಲ್​ ಸರೋವರದ ತಟದಲ್ಲಿ ಮೋದಿ ಯೋಗ
International Yoga Day: ಶ್ರೀನಗರದ ದಾಲ್​ ಸರೋವರದ ತಟದಲ್ಲಿ ಮೋದಿ ಯೋಗ
ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ
ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ
ಮತ್ತೆ ದರ್ಶನ್​ ಹಾಗೂ ಗ್ಯಾಂಗ್ ಖಾಕಿ ಕಸ್ಟಡಿಗೆ! ಜಿ.ಪರಮೇಶ್ವರ್ ಹೇಳಿದ್ದೇನು
ಮತ್ತೆ ದರ್ಶನ್​ ಹಾಗೂ ಗ್ಯಾಂಗ್ ಖಾಕಿ ಕಸ್ಟಡಿಗೆ! ಜಿ.ಪರಮೇಶ್ವರ್ ಹೇಳಿದ್ದೇನು
ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ
ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ
ಜೈಲಿಗೆ ಹೋದ ಪವಿತ್ರಾ ಗೌಡ; ಅಮ್ಮನಿಗಾಗಿ ಪೊಲೀಸ್ ವ್ಯಾನ್ ಹೊರಗೆ ಕಾದ ಮಗಳು
ಜೈಲಿಗೆ ಹೋದ ಪವಿತ್ರಾ ಗೌಡ; ಅಮ್ಮನಿಗಾಗಿ ಪೊಲೀಸ್ ವ್ಯಾನ್ ಹೊರಗೆ ಕಾದ ಮಗಳು
ರೇಣುಕಾ ಸ್ವಾಮಿ ಪ್ರಕರಣ: ಪವಿತ್ರಾ ಗೌಡ ಪರ ವಕೀಲರ ಆಕ್ರೋಶದ ಪ್ರತಿಕ್ರಿಯೆ
ರೇಣುಕಾ ಸ್ವಾಮಿ ಪ್ರಕರಣ: ಪವಿತ್ರಾ ಗೌಡ ಪರ ವಕೀಲರ ಆಕ್ರೋಶದ ಪ್ರತಿಕ್ರಿಯೆ
ಕೋರ್ಟ್​ ಆವರಣದಲ್ಲೂ ದರ್ಶನ್​ಗೆ ಅಭಿಮಾನಿಗಳ ಜೈಕಾರ; ವಿಡಿಯೋ ನೋಡಿ..
ಕೋರ್ಟ್​ ಆವರಣದಲ್ಲೂ ದರ್ಶನ್​ಗೆ ಅಭಿಮಾನಿಗಳ ಜೈಕಾರ; ವಿಡಿಯೋ ನೋಡಿ..
ಕಟ್ಟಡ ದಿಢೀರ್ ಕುಸಿತ; ಅವಶೇಷಗಳಡಿ ಸಿಲುಕಿದ್ದ 8 ಕಾರ್ಮಿಕರ ಪೈಕಿ 2 ರಕ್ಷಣೆ
ಕಟ್ಟಡ ದಿಢೀರ್ ಕುಸಿತ; ಅವಶೇಷಗಳಡಿ ಸಿಲುಕಿದ್ದ 8 ಕಾರ್ಮಿಕರ ಪೈಕಿ 2 ರಕ್ಷಣೆ