AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ಶ್ರೇಯಸ್ ಅಯ್ಯರ್​ಗಿಂತ ಸೂರ್ಯ ಕುಮಾರ್ ಯಾದವ್ ಬೆಸ್ಟ್; ಗೌತಮ್ ಗಂಭೀರ್

T20 World Cup: ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಅನ್ನು ಹೊಗಳುತ್ತಲೇ ಗಂಭೀರ್, ಸೂರ್ಯಕುಮಾರ್, ಅಯ್ಯರ್​ಗಿಂತ ಭಿನ್ನ ವರ್ಗದ ಆಟಗಾರ. ಅವರು ಬಹುಮುಖ ಪ್ರತಿಭೆ. ಜೊತೆಗೆ ಆತ ತುಂಬಾ ಅಸಾಂಪ್ರದಾಯಿಕ ಆಟಗಾರ.

T20 World Cup: ಶ್ರೇಯಸ್ ಅಯ್ಯರ್​ಗಿಂತ ಸೂರ್ಯ ಕುಮಾರ್ ಯಾದವ್ ಬೆಸ್ಟ್; ಗೌತಮ್ ಗಂಭೀರ್
ಗೌತಮ್ ಗಂಭೀರ್
TV9 Web
| Edited By: |

Updated on: Sep 10, 2021 | 7:02 PM

Share

ಮುಂದಿನ ತಿಂಗಳು ಯುಎಇಯಲ್ಲಿ ಆರಂಭವಾಗಲಿರುವ ಟಿ 20 ವಿಶ್ವಕಪ್‌ಗಾಗಿ ಬಿಸಿಸಿಐ ಬುಧವಾರ ತಂಡವನ್ನು ಪ್ರಕಟಿಸಿದೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಮತ್ತು ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಇಬ್ಬರೂ ಆಟಗಾರರು ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ತುಂಬಾ ಅನುಭವ ಹೊಂದಿಲ್ಲ. ಆದರೆ ಇದರ ಹೊರತಾಗಿಯೂ ಆಯ್ಕೆಗಾರರು ಅವರಲ್ಲಿ ತಮ್ಮ ನಂಬಿಕೆಯನ್ನು ತೋರಿಸಿದ್ದಾರೆ.

ಸೂರ್ಯ ಕುಮಾರ್ ಆಯ್ಕೆಯೊಂದಿಗೆ, ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಅಯ್ಯರ್ ಗಾಯಗೊಳ್ಳುವ ಮುನ್ನ ಸೀಮಿತ ಓವರ್ ತಂಡದ ನಿಯಮಿತ ಭಾಗವಾಗಿದ್ದರು. ಅನೇಕ ಅಭಿಮಾನಿಗಳು ಮತ್ತು ಅನುಭವಿಗಳು ಅಯ್ಯರ್ ಅವರ ಅನುಭವಕ್ಕೆ ಸೂರ್ಯ ಕುಮಾರ್ ಯಾದವ್ ಅವರಿಗಿಂತ ಆದ್ಯತೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಮಾಜಿ ಆರಂಭಿಕ ಗೌತಮ್ ಗಂಭೀರ್ ಬಿಸಿಸಿಐ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಆಯ್ಕೆ ಬೆಸ್ಟ್; ಗಂಭೀರ್ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಅನ್ನು ಹೊಗಳುತ್ತಲೇ ಗಂಭೀರ್, ಸೂರ್ಯಕುಮಾರ್, ಅಯ್ಯರ್​ಗಿಂತ ಭಿನ್ನ ವರ್ಗದ ಆಟಗಾರ. ಅವರು ಬಹುಮುಖ ಪ್ರತಿಭೆ. ಜೊತೆಗೆ ಆತ ತುಂಬಾ ಅಸಾಂಪ್ರದಾಯಿಕ ಆಟಗಾರ. ಟಿ 20 ಕ್ರಿಕೆಟ್​ನಲ್ಲಿ ನಿಮಗೆ ಅಸಾಂಪ್ರದಾಯಿಕ ವ್ಯಕ್ತಿಗಳು ಬೇಕು. ಸೂರ್ಯಕುಮಾರ್ ಎಲ್ಲಾ ಹೊಡೆತಗಳನ್ನು ಹೊಂದಿದ್ದಾರೆ, ವಿಶೇಷವಾಗಿ ನಂ. 4 ರಲ್ಲಿ. ಏಕೆಂದರೆ ಟಿ -20 ಕ್ರಿಕೆಟ್ ನಲ್ಲಿ ಬ್ಯಾಟ್ ಮಾಡಲು ನಂ .4 ಕೆಲವೊಮ್ಮೆ ಅತ್ಯಂತ ಕಠಿಣವಾದ ಸ್ಥಳವಾಗಿದೆ.

ಅಶ್ವಿನ್ ಆಯ್ಕೆಯಿಂದ ಗಂಭೀರ್ ಖುಷಿಯಾಗಿದ್ದಾರೆ ಇದಕ್ಕೂ ಮುನ್ನ ಗಂಭೀರ್ ಕೂಡ ಅನುಭವಿ ಬೌಲರ್ ಆರ್ ಅಶ್ವಿನ್ ಆಯ್ಕೆಯನ್ನು ಶ್ಲಾಘಿಸಿದ್ದರು. ಗುರುವಾರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಬ್ಲೂಸ್ ಪ್ರದರ್ಶನದಲ್ಲಿ ಗಂಭೀರ್, ಅಶ್ವಿನ್‌ ಆಯ್ಕೆಯಿಂದ ತುಂಬಾ ಸಂತೋಷವಾಗಿದೆ. ಅವರು ವೈಟ್ ಬಾಲ್ ಕ್ರಿಕೆಟ್ ನಿಂದ ಹೊರಬರಬಾರದಿತ್ತು, ಆದರೆ ಈಗ ಅವರು ಹಿಂತಿರುಗಿದ್ದಾರೆ. ನಾವು ಆಯ್ಕೆಗಾರರಿಗೆ ಕ್ರೆಡಿಟ್ ನೀಡಬೇಕು, ಅವರ ಆಗಮನವು ತಂಡವನ್ನು ಬಲಪಡಿಸುತ್ತದೆ. ಅಶ್ವಿನ್ ಹೊಸ ಚೆಂಡಿನ ಜೊತೆಗೆ ಮಧ್ಯಮ ಓವರ್‌ಗಳಲ್ಲಿ ಬೌಲಿಂಗ್ ಮಾಡಬಹುದು. ನೀವು ಅವರನ್ನು ಡೆತ್​ ಓವರ್​ಗಳಲ್ಲೂ ಬೌಲ್ ಮಾಡಿಸಬಹುದು ಎಂದಿದ್ದಾರೆ.

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ