AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ನಿದ್ದೆ ಬರಿಸುವ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾದ ನಿದ್ದೆಗೆಡಿಸುತ್ತಿರುವ ಆಂಗ್ಲ ಬ್ಯಾಟರ್ಸ್

India vs England: ಓವಲ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 224 ರನ್‌ಗಳಿಗೆ ಆಲೌಟ್ ಆಗಿದೆ. ಇತ್ತ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಟ ಪ್ರದರ್ಶಿಸಿ ಭಾರತದ ಬೌಲರ್‌ಗಳನ್ನು ಹೈರಾಣು ಮಾಡಿದರು. ಭಾರತದ ಆರಂಭಿಕ ಆಟಗಾರರಾದ ಜೈಸ್ವಾಲ್, ರಾಹುಲ್ ಮತ್ತು ಸುದರ್ಶನ್ ನಿರಾಶಾದಾಯಕ ಪ್ರದರ್ಶನ ನೀಡಿದರು. ಇದಕ್ಕೆ ತದ್ವಿರುದ್ಧವಾಗಿ ಇಂಗ್ಲೆಂಡ್ ಆರಂಭಿಕರು ಉತ್ತಮ ಬ್ಯಾಟಿಂಗ್ ಮಾಡಿ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದಾರೆ.

IND vs ENG: ನಿದ್ದೆ ಬರಿಸುವ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾದ ನಿದ್ದೆಗೆಡಿಸುತ್ತಿರುವ ಆಂಗ್ಲ ಬ್ಯಾಟರ್ಸ್
England Team
ಪೃಥ್ವಿಶಂಕರ
|

Updated on:Aug 01, 2025 | 5:40 PM

Share

ಓವಲ್​ ಟೆಸ್ಟ್​ನಲ್ಲಿ (Oval Test) ಟೀಂ ಇಂಡಿಯಾವನ್ನು 224 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್‌ ಆರಂಭಿಕರು ಭಾರತದ ಬೌಲರ್​ಗಳನ್ನು ಮೊದಲ 10 ಓವರ್​ಗಳಲ್ಲೇ ಹೈರಾಣಾಗಿಸಿದ್ದಾರೆ. ಮೊದಲ ಓವರ್​ನಿಂದಲೂ ಬೌಂಡರಿಗಳ ಮಳೆಗರೆಯುತ್ತಿರುವ ಇಂಗ್ಲೆಂಡ್‌ ಆರಂಭಿಕರು 7 ರನ್​ಗಳ ಸರಸಾರಿಯಲ್ಲಿ ರನ್ ಕಲೆಹಾಕುತ್ತಿದ್ದಾರೆ. ಇದು ನಾಯಕ ಶುಭ್​ಮನ್ ಗಿಲ್​ರನ್ನು (Shubman Gill) ಚಿಂತೆಗೀಡುಮಾಡಿದೆ. ವಾಸ್ತವವಾಗಿ ಪಂದ್ಯ ಆರಂಭಕ್ಕೆ ಮುನ್ನ ಓವಲ್​ನಲ್ಲಿ ರನ್ ಗಳಿಸುವುದು ಕಷ್ಟ ಎನ್ನಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಟೀಂ ಇಂಡಿಯಾ (Team India) ಬ್ಯಾಟರ್​ಗಳು ಕೂಡ ನಿದ್ದೆಬರಿಸುವಂತಹ ಬ್ಯಾಟಿಂಗ್ ಮಾಡಿದ್ದರು. ಆದರೆ ಬ್ಯಾಟಿಂಗ್‌ ಆರಂಭಿಸಿರುವ ಇಂಗ್ಲೆಂಡ್‌ ಆರಂಭಿಕರು ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ.

ಭಾರತಕ್ಕೆ ಕಳಪೆ ಆರಂಭ

ವಾಸ್ತವವಾಗಿ ಓವಲ್​ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಜೈಸ್ವಾಲ್ 4ನೇ ಓವರ್​ನಲ್ಲೇ ಔಟಾದರು. ಇಡೀ ಪ್ರವಾಸದಲ್ಲಿ ಜೈಸ್ವಾಲ್ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಕೊನೆಯ ಟೆಸ್ಟ್​ನಲ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಅದೆಲ್ಲವನ್ನು ಜೈಸ್ವಾಲ್ ಹುಸಿಗೊಳಿಸಿದರು. ಆರಂಭದಲ್ಲಿ ಹೊಡಿಬಡಿ ಆಟವಾಡುವ ಜೈಸ್ವಾಲ್ ಹೊದಬಳಿಕವಂತೂ ಭಾರತದ ಸ್ಕೋರ್ ಬೋರ್ಡ್​ ನಿಂತ ನೀರಾಯಿತು.

ಆಮೆಗತಿಯ ಬ್ಯಾಟಿಂಗ್

ವಿಕೆಟ್​ನಿಂದ ಹೊರಹೋಗುವ ಚೆಂಡುಗಳನ್ನು ಬಿಡುವುದನ್ನೇ ಕಾಯಕ ಮಾಡಿಕೊಂಡ ರಾಹುಲ್ ಹಾಗೂ ಸುದರ್ಶನ್ ರನ್ ಕಲೆಹಾಕುವುದನ್ನೇ ಮರೆತರು. ಇದಕ್ಕೆ ಪೂರಕವಾಗಿ ರಾಹುಲ್ ಬರೋಬ್ಬರಿ 40 ಎಸೆತಗಳನ್ನು ಎದುರಿಸಿ ಕೇವಲ 14 ರನ್ ಬಾರಿಸಿದರೆ, ಇತ್ತ ಸಾಯಿ ಸುದರ್ಶನ್ ಬರೋಬ್ಬರಿ 108 ಎಸೆತಗಳನ್ನು ಎದುರಿಸಿ 38 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ವೇಳೆ ಇವರಿಬ್ಬರ ಬ್ಯಾಟ್​ನಿಂದ ಕ್ರಮವಾಗಿ 1 ಮತ್ತು 6 ಬೌಂಡರಿಗಳಷ್ಟೇ ಸಿಡಿದವು. ಹೀಗಾಗಿ ಭಾರತ ತಂಡ ಮೊದಲ 10 ಓವರ್​ಗಳಲ್ಲಿ ಗಳಿಸಿದ್ದು ಕೇವಲ 33 ರನ್. ಇದರಲ್ಲಿ 9ನೇ ಓವರ್​ನಲ್ಲಿ ಜೋಶ್ ಟಂಗ್ ವೈಡ್ ಮೂಲಕ 11 ರನ್ ನೀಡದಿದ್ದರೆ ತಂಡದ ಮೊತ್ತ ಕೇವಲ 23 ರನ್​ಗಳಾಗಿರುತ್ತಿದ್ದವು.

ಕೇವಲ 224 ರನ್​ಗಳಿಗೆ ಆಲೌಟ್

ಇದು ರಾಹುಲ್ ಸುದರ್ಶನ್ ಕಥೆ ಮಾತ್ರವಲ್ಲ. ಇವರಿಬ್ಬರ ಬಳಿಕ ಬಂದ ಎಲ್ಲಾ ಬ್ಯಾಟ್ಸ್‌ಮನ್​ಗಳ ಕಥೆಯೂ ಇದೆ. ವಾಸ್ತವವಾಗಿ ಓವಲ್​ ಪಿಚ್​ನಲ್ಲಿ ಸಮಯ ಕಳೆದರೆ ದೀರ್ಘ ಇನ್ನಿಂಗ್ಸ್ ಆಡಬಹುದು ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಹೀಗಿರುವಾಗ ಬ್ಯಾಟರ್​ಗಳು ಚೆಂಡುಗಳನ್ನು ಬಿಡುವುದರ ಜೊತೆಗೆ ರನ್ ಕಲೆಹಾಕುವುದನ್ನು ಮುಂದುವರೆಸಬೇಕು. ಆದರೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್​ಗಳು ರನ್​ ಕಲೆಹಾಕುವುದರ ಕಡೆಗೆ ನೋಡಲೇ ಇಲ್ಲ. ಇದರ ಜೊತೆಗೆ ನಿಯಮಿತ ಅಂತರದಲ್ಲಿ ವಿಕೆಟ್ ಕೈಚೆಲ್ಲಿತು. ಹೀಗಾಗಿ ತಂಡ 4 ಸೆಷನ್ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದರೂ ಕಲೆಹಾಕಿದ್ದು ಮಾತ್ರ ಕೇವಲ 224 ರನ್.

IND vs ENG: ಕರುಣ್ ನಾಯರ್ ಅರ್ಧಶತಕ; 224 ರನ್​ಗಳಿಗೆ ಟೀಂ ಇಂಡಿಯಾ ಆಲೌಟ್

ಆಂಗ್ಲ ಆರಂಭಿಕರ ಆರ್ಭಟ

ಇದಕ್ಕೆ ತದ್ವಿರುದ್ಧವಾಗಿ ಓವಲ್ ಪಿಚ್​ನಲ್ಲಿ ಏನು ಮಾಡಬೇಕು ಎಂಬುದನ್ನು ಕಂಠಪಾಠ ಮಾಡಿಕೊಂಡು ಬಂದಂತೆ ಬ್ಯಾಟಿಂಗ್‌ ಮಾಡುತ್ತಿರುವ ಇಂಗ್ಲೆಂಡ್‌ ತಂಡದ ಆರಂಭಿಕರು ಮೊದಲ ಓವರ್​ನಿಂದಲೂ ರನ್​ ಕಲೆಹಾಕುವುದರ ಕಡೆಗೆ ಗಮನ ಹರಿಸಿದರು. ಇದಕ್ಕೆ ಉದಾಹರಣೆ ಎಂಬಂತೆ ಇಂಗ್ಲೆಂಡ್‌ ತನ್ನ ಮೊದಲ ವಿಕೆಟ್ ಅನ್ನು 13ನೇ ಓವರ್​ನಲ್ಲಿ ಕಳೆದುಕೊಂಡಿತು. ಈ ಓವರ್​ಗೂ ಮುನ್ನ ಮುಗಿದಿದ್ದ ಪ್ರತಿ ಓವರ್​ನಲ್ಲೂ ಇಂಗ್ಲೆಂಡ್‌ ತಂಡ ಬೌಂಡರಿ ಕಲೆಹಾಕಿತು. ಒಂದೆಡೆ ಭಾರತದ ಆಟಗಾರರು ವಿಕೆಟ್​ನಿಂದ ಹೊರಹೋಗುವ ಚೆಂಡುಗಳನ್ನು ಬಿಡುವ ಕೆಲಸ ಮಾಡಿದರೆ, ಇತ್ತ ಆಂಗ್ಲ ಆರಂಭಿಕರು ತಮ್ಮ ಆಕ್ರಮಣಕಾರಿ ಶೈಲಿಯಲ್ಲೇ ಬ್ಯಾಟ್ ಬೀಸಿದರು.

15 ಓವರ್​ಗಳಲ್ಲಿ 100 ರನ್ ಪೂರ್ಣ

ಹೀಗಾಗಿ ಮೊದಲ ವಿಕೆಟ್​ಗೆ 13 ಓವರ್​ಗಳಲ್ಲಿ 92 ರನ್​ಗಳ ಜೊತೆಯಾಟ ಬಂತು. ಇದರೊಂದಿಗೆ ತಂಡ 15ನೇ ಓವರ್​ನಲ್ಲೇ 100 ರನ್​ಗಳ ಗಡಿ ದಾಟಿತು. ಇತ್ತ ಟೀಂ ಇಂಡಿಯಾ 35 ಓವರ್​ಗಳಲ್ಲಿ ತನ್ನ 100 ರನ್​ಗಳ ಗಡಿ ದಾಟಿತು. ಈ ವೇಳೆಗೆ ಭಾರತ ತಂಡದ 3 ವಿಕೆಟ್​ಗಳು ಉರುಳಿದ್ದವು. ಸುದ್ದಿ ಬರೆಯುವ ಹೊತ್ತಿಗೆ ಬೆನ್ ಡಕೆಟ್ 38 ಎಸೆತಗಳಲ್ಲಿ 43 ರನ್ ಬಾರಿಸಿ ಔಟಾಗಿದ್ದರೆ, ಮತ್ತೊಬ್ಬ ಆರಂಭಿಕ ಕ್ರೌಲಿ 43 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ ಅರ್ಧಶತಕ ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಬಾಲ್ ಬಿಡುವುದನ್ನೇ ಕಲೆ ಎಂದುಕೊಂಡಿರುವ ಟೀಂ ಇಂಡಿಯಾ ಆಟಗಾರರು ಚೆಂಡಿನ ಮೆರಿಟ್​ಗೆ ತಕ್ಕಂತೆ ಬ್ಯಾಟ್ ಬೀಸುವುದನ್ನು ಕಲಿತರೆ ಫಲಿತಾಂಶ ಬೇರೆಯದ್ದೇ ಆಗಲಿದೆ. ಅಂದಹಾಗೆ ಓವಲ್​ನಲ್ಲಿ ಟೀಂ ಇಂಡಿಯಾದ ಬ್ಯಾಟರ್​ಗಳು ಮಾತ್ರ ತಪ್ಪು ಮಾಡಿಲ್ಲ. ಬೌಲರ್​ಗಳು ಕೂಡ ತಮ್ಮ ಕಳಪೆ ಬೌಲಿಂಗ್ ಮೂಲಕ ಆಂಗ್ಲರು ಸುಲಭವಾಗಿ ರನ್ ಕಲೆಹಾಕಲು ನೆರವಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Fri, 1 August 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ