AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ನಿಮಗೆ ಊಟದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ! ಇಂಗ್ಲೆಂಡ್​ನ ಕರಾಳ ಮುಖ ಬಯಲು ಮಾಡಿದ ವಾಟ್ಸಪ್​ ಸಂದೇಶ

IND vs ENG: ನಾವು ನಿಮಗೆ ಉಪಹಾರವನ್ನು ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನೀವು ಉಪಾಹಾರ ಸೇವಿಸಲು ಬಯಸಿದರೆ ಅದಕ್ಕಾಗಿ ನೀವು ರೆಸ್ಟೋರೆಂಟ್‌ಗೆ ಹೋಗಬೇಕು ಎಂಬ ಸಂದೇಶವನ್ನು ಮ್ಯಾಂಚೆಸ್ಟರ್‌ ಆಡಳಿತ ಮಂಡಳಿ ಕಳುಹಿಸಿದೆ.

IND vs ENG: ನಿಮಗೆ ಊಟದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ! ಇಂಗ್ಲೆಂಡ್​ನ ಕರಾಳ ಮುಖ ಬಯಲು ಮಾಡಿದ ವಾಟ್ಸಪ್​ ಸಂದೇಶ
ಟೀಮ್ ಇಂಡಿಯಾ
TV9 Web
| Updated By: ಪೃಥ್ವಿಶಂಕರ|

Updated on: Sep 10, 2021 | 5:36 PM

Share

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಮತ್ತು ಐದನೇ ಟೆಸ್ಟ್ ಪಂದ್ಯ ಇಂದಿನಿಂದ ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿತ್ತು. ಆದರೆ ಟೀಂ ಇಂಡಿಯಾದಲ್ಲಿ ಕೊರೊನಾ ಪ್ರಕರಣಗಳ ಕಾರಣ ಈ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಬಿಸಿಸಿಐ ಈ ಪಂದ್ಯವನ್ನು ನಂತರ ಆಯೋಜಿಸುವ ಬಗ್ಗೆ ಇಸಿಬಿಯೊಂದಿಗೆ ಮಾತನಾಡುವುದಾಗಿ ಹೇಳಿದೆ. ಆದರೆ ಈಗ ಪಂದ್ಯ ರದ್ದಾದ ನಂತರದ ಘಟನೆಗಳು ಮುಂಚೂಣೆಗೆ ಬಂದಿವೆ. ವಾಟ್ಸ್‌ಆ್ಯಪ್‌ನಲ್ಲಿ ತಂಡದ ಮ್ಯಾನೇಜ್‌ಮೆಂಟ್ ಆಟಗಾರರಿಗೆ ಕಳುಹಿಸಿದ ಸಂದೇಶಗಳು ಈಗ ಸಖತ್ ಸದ್ದು ಮಾಡುತ್ತಿವೆ. ಮ್ಯಾಂಚೆಸ್ಟರ್‌ನಲ್ಲಿನ ದುರಾಡಳಿತದ ಸಂಪೂರ್ಣ ಕಥೆಯನ್ನು ಹೇಳುವ ಸಂದೇಶಗಳನ್ನು ಆಟಗಾರರಿಗೆ ಕಳುಹಿಸಲಾಗಿದೆ. ಈ ಸಂದೇಶಗಳನ್ನು ಟೀಮ್ ಇಂಡಿಯಾದ ವಾಟ್ಸಾಪ್ ಗುಂಪಿನಲ್ಲಿ ಕಳುಹಿಸಲಾಗಿದೆ. ವಾಟ್ಸಾಪ್‌ನಲ್ಲಿ ಆಟಗಾರರು ಸ್ವೀಕರಿಸಿದ ಈ ಸಂದೇಶಗಳ ಬಗ್ಗೆ ತಿಳಿದುಕೊಂಡರೆ, ನೀವು ಕೂಡ ಆಶ್ಚರ್ಯ ವ್ಯಕ್ತಪಡಿಸುತ್ತೀರಿ.

ಟೀಮ್ ಇಂಡಿಯಾದ ವಾಟ್ಸಾಪ್ ಗ್ರೂಪ್​ನಲ್ಲಿ ಕಳುಹಿಸಿದ ಎರಡು ಸಂದೇಶಗಳು ಮುನ್ನಲೆಗೆ ಬಂದಿವೆ. ಟಾಸ್‌ಗೆ ಸ್ವಲ್ಪ ಮೊದಲು ಈ ಎರಡೂ ಸಂದೇಶಗಳನ್ನು ಕಳುಹಿಸಲಾಗಿದೆ. ಮೊದಲ ಸಂದೇಶದಲ್ಲಿ ಪಂದ್ಯ ರದ್ದಾದ ಬಗ್ಗೆ ಆಟಗಾರರಿಗೆ ತಿಳಿಸಲಾಗಿದೆ. ಇದರೊಂದಿಗೆ, ಆಟಗಾರರು ತಮ್ಮ ಕೋಣೆಗಳಲ್ಲಿ ಉಳಿಯಲು ಸೂಚನೆಗಳನ್ನು ಸಹ ನೀಡಲಾಗಿದೆ. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು ಮತ್ತು ಸ್ಪಷ್ಟವಾಗಿತ್ತು. ಆದರೆ 10 ನಿಮಿಷಗಳ ನಂತರ ಗುಂಪಿನಲ್ಲಿ ಎರಡನೇ ಸಂದೇಶ ಬಂದ ತಕ್ಷಣ, ಇದು ಮ್ಯಾಂಚೆಸ್ಟರ್‌ನಲ್ಲಿನ ದುರಾಡಳಿತವನ್ನು ಬಹಿರಂಗಪಡಿಸಿತು.

ಉಪಹಾರ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ 10 ನಿಮಿಷಗಳ ನಂತರ ಬಂದ ಎರಡನೇ ಸಂದೇಶವು ಟೀಂ ಇಂಡಿಯಾ ಆಟಗಾರರಿಗೆ ಆಶ್ಚರ್ಯವನ್ನುಂಟು ಮಾಡಿತು. WhatsApp ನಲ್ಲಿ ಟೀಮ್ ಇಂಡಿಯಾ ಸ್ವೀಕರಿಸಿದ ಇನ್ನೊಂದು ಸಂದೇಶದಲ್ಲಿ, ನಾವು ನಿಮಗೆ ಉಪಹಾರವನ್ನು ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನೀವು ಉಪಾಹಾರ ಸೇವಿಸಲು ಬಯಸಿದರೆ ಅದಕ್ಕಾಗಿ ನೀವು ರೆಸ್ಟೋರೆಂಟ್‌ಗೆ ಹೋಗಬೇಕು ಎಂಬ ಸಂದೇಶವನ್ನು ಮ್ಯಾಂಚೆಸ್ಟರ್‌ ಆಡಳಿತ ಮಂಡಳಿ ಕಳುಹಿಸಿದೆ. ಈ ಸಂದೇಶವು ಕೊರೊನಾದ ನೆರಳಿನಲ್ಲಿ ವಾಸಿಸುತ್ತಿರುವ ಆಟಗಾರರನ್ನು ಅಚ್ಚರಿಗೊಳಿಸಲಿದೆ. ಒಂದು ಕಡೆ ಆಟಗಾರರಿಗೆ ರೂಂ ನಲ್ಲಿ ಉಳಿಯಲು ಹೇಳಲಾಗುತ್ತದೆ ಮತ್ತು ಮತ್ತೊಂದೆಡೆ ಉಪಾಹಾರಕ್ಕಾಗಿ ಕೊಠಡಿಯಿಂದ ಹೊರಗೆ ಬರುವಂತೆ ಹೇಳಲಾಗಿದೆ.

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ ಕೊರೊನಾದಿಂದಾಗಿ, ಟೀಮ್ ಇಂಡಿಯಾದ ಬಹುತೇಕ ಎಲ್ಲಾ ಸಹಾಯಕ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಭಾರತೀಯ ಆಟಗಾರರು ಕೂಡ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು, ಆದರೂ ಅವರೆಲ್ಲರೂ ನೆಗೆಟಿವ್ ಎಂದು ತಿಳಿದುಬಂದಿದೆ. ಸ್ವಲ್ಪ ಸಮಯದವರೆಗೆ ಕೊನೆಯ ಟೆಸ್ಟ್ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ನಂತರ, 5 ನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್