AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U-19 Asia Cup: ಅಫ್ಘಾನಿಸ್ತಾನವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತದ ಯುವ ಪಡೆ..!

U-19 Asia Cup: ಅಂಡರ್-19 ಏಷ್ಯಾಕಪ್‌ನ ಸೆಮಿಫೈನಲ್‌ಗೆ ಭಾರತ ತಂಡ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಎ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಯಶ್ ಧುಲ್ ನೇತೃತ್ವದ ಭಾರತ ತಂಡವು ಅಫ್ಘಾನಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿತು.

U-19 Asia Cup: ಅಫ್ಘಾನಿಸ್ತಾನವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತದ ಯುವ ಪಡೆ..!
ಭಾರತದ ಯುವ ಪಡೆ
TV9 Web
| Updated By: ಪೃಥ್ವಿಶಂಕರ|

Updated on: Dec 27, 2021 | 8:05 PM

Share

ಅಂಡರ್-19 ಏಷ್ಯಾಕಪ್‌ನ ಸೆಮಿಫೈನಲ್‌ಗೆ ಭಾರತ ತಂಡ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಎ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಯಶ್ ಧುಲ್ ನೇತೃತ್ವದ ಭಾರತ ತಂಡವು ಅಫ್ಘಾನಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಟೂರ್ನಿಯಲ್ಲಿ ಎರಡನೇ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದೆ. ಮತ್ತೊಮ್ಮೆ ಈ ರೋಚಕ ಪಂದ್ಯದಲ್ಲಿ ಉತ್ತಮ ಅರ್ಧಶತಕ ಗಳಿಸಿ ಯಶಸ್ವಿ ರನ್ ಚೇಸ್‌ಗೆ ಅಡಿಪಾಯ ಹಾಕಿದ ಆರಂಭಿಕ ಆಟಗಾರ ಹರ್ನೂರ್ ಸಿಂಗ್ ಪನ್ನು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಯುಎಇಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಭಾರತ ತಂಡ ಈ ಹಿಂದೆ ಆತಿಥೇಯ ಯುಎಇಯನ್ನು ಸೋಲಿಸಿದ್ದರೆ, ಪಾಕಿಸ್ತಾನದ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು.

ದುಬೈನ ಐಸಿಸಿ ಅಕಾಡೆಮಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಡಿಸೆಂಬರ್ 27 ಸೋಮವಾರದಂದು ಭಾರತ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಿದ್ದವು. ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅಫ್ಘಾನಿಸ್ತಾನದ ಇನ್ನಿಂಗ್ಸ್‌ನಲ್ಲಿ ಭಾರತವು ಉತ್ತಮ ಆರಂಭವನ್ನು ಹೊಂದಿತ್ತು ಮತ್ತು ಬಹಿರಂಗವಾಗಿ ರನ್ ಗಳಿಸುವ ಅವಕಾಶವನ್ನು ನೀಡಲಿಲ್ಲ. 29ನೇ ಓವರ್‌ಗೆ ಅಫ್ಘಾನಿಸ್ತಾನ ಕೇವಲ 101 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ಅಫ್ಘಾನಿಸ್ತಾನದ ನಾಯಕ ಸುಲಿಮಾನ್ ಸಫಿ ಮತ್ತು ಇಜಾಜ್ ಅಹ್ಮದ್ ಅಹ್ಮದ್‌ಜಾಯ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇವರಿಬ್ಬರ ನಡುವೆ ನಾಲ್ಕನೇ ವಿಕೆಟ್‌ಗೆ 88 ರನ್‌ಗಳ ಜೊತೆಯಾಟವಿತ್ತು.

ಇಜಾಜ್ ಮತ್ತು ಸುಲಿಮಾನ್ ಭಾರತಕ್ಕೆ ಕಂಟಕವಾದರು ಸುಲಿಮಾನ್ 86 ಎಸೆತಗಳಲ್ಲಿ 73 ರನ್ ಗಳಿಸಿ ಔಟಾದರು. ಅದೇ ಸಮಯದಲ್ಲಿ, ಇಜಾಜ್ ಅಹ್ಮದ್ ಕೇವಲ 68 ಎಸೆತಗಳಲ್ಲಿ 86 ರನ್ ಗಳಿಸಿದರು. ಈ ವೇಳೆ ಅವರು 7 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಇಜಾಜ್ ಹೊರತಾಗಿ ಖೈಬರ್ ವಾಲಿ ಕೂಡ 12 ಎಸೆತಗಳಲ್ಲಿ 20 ರನ್ ಗಳಿಸಿದರು. ಅಫ್ಘಾನಿಸ್ತಾನದ ಇನ್ನಿಂಗ್ಸ್‌ನ ವಿಶೇಷವೆಂದರೆ ಕೊನೆಯ ಓವರ್‌ನಲ್ಲಿ ಇಜಾಜ್ ಮತ್ತು ಖೈಬರ್ 3 ಸಿಕ್ಸರ್ ಮತ್ತು 1 ಬೌಂಡರಿ ಸಹಾಯದಿಂದ 27 ರನ್ ಗಳಿಸಿದರು, ಅದರ ಆಧಾರದ ಮೇಲೆ 4 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿತು. ಭಾರತದ ಪರ ವಿಕ್ಕಿ ಓಸ್ತ್ವಾಲ್ (1/35) ಮತ್ತು ಕೌಶಲ್ ತಾಂಬೆ (1/28) ಭಾರತಕ್ಕೆ ಅತ್ಯಂತ ಪರಿಣಾಮಕಾರಿ ಬೌಲರ್‌ಗಳೆಂದು ಸಾಬೀತುಪಡಿಸಿದರು.

ಹರ್ನೂರ್​ನಿಂದ ಮತ್ತೊಂದು ಅಮೋಘ ಇನ್ನಿಂಗ್ಸ್ ಇದಕ್ಕೆ ಪ್ರತಿಯಾಗಿ ಆರಂಭಿಕ ಜೋಡಿ ಹರ್ನೂರ್ ಸಿಂಗ್ ಮತ್ತು ಆಂಗ್ಕ್ರಿಶ್ ರಘುವಂಶಿ ಭಾರತಕ್ಕೆ ಬಲಿಷ್ಠ ಆರಂಭ ನೀಡಿದರು. ಇಬ್ಬರೂ 18 ಓವರ್‌ಗಳಲ್ಲಿ 104 ರನ್ ಸೇರಿಸುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಆಂಗ್‌ಕ್ರಿಶ್ (35) ವಿಕೆಟ್‌ನೊಂದಿಗೆ ಈ ಜೋಡಿ ಮುರಿದುಬಿತ್ತು. ಇದಾದ ಬೆನ್ನಲ್ಲೇ ಹರ್ನೂರ್ ಕೂಡ ಅರ್ಧಶತಕ ಪೂರೈಸಿ ಪೆವಿಲಿಯನ್​ಗೆ ಮರಳಿದರು. ಹರ್ನೂರ್ 74 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 65 ರನ್ ಗಳಿಸಿ ಪ್ರಬಲ ಇನಿಂಗ್ಸ್ ಕಟ್ಟಿದರು. ಹರ್ನೂರ್ ಈ ಹಿಂದೆ ಯುಎಇ ವಿರುದ್ಧ ಶತಕ ಬಾರಿಸಿದ್ದರು. ಪಾಕಿಸ್ತಾನ ವಿರುದ್ಧವೂ ಉತ್ತಮ ಸ್ಕೋರ್ ಗಳಿಸಿದ್ದರು. ಹರ್ನೂರ್ ಬಳಿಕ ಎಸ್.ರಶೀದ್ ಕೂಡ ಅಗ್ಗವಾಗಿ ಪೆವಿಲಿಯನ್​ಗೆ ಮರಳಿದರು.

ತಾಂಬೆ-ಬಾವಾ ಮ್ಯಾಚ್ ವಿನ್ನಿಂಗ್ ಜೊತೆಯಾಟ ತ್ವರಿತ ಹಿನ್ನಡೆಯ ನಂತರ, ತಂಡಕ್ಕೆ ಜೊತೆಯಾಟದ ಅಗತ್ಯವಿತ್ತು. ನಾಯಕ ಯಶ್ ನಿಶಾಂತ್ ಸಿಂಧು ಅವರೊಂದಿಗೆ 46 ರನ್ ಸೇರಿಸಿದರು. 36ನೇ ಓವರ್​ನಲ್ಲಿ ನಾಯಕ ಯಶ್ ವಿಕೆಟ್ ಕೂಡ ಪತನವಾಯಿತು. ಈ ವೇಳೆಗೆ ಭಾರತದ ಸ್ಕೋರ್ 183 ರನ್ ಆಗಿತ್ತು. ಎರಡು ಓವರ್‌ಗಳ ನಂತರ ಆರಾಧ್ಯ ಯಾದವ್ ಅವರ ಆಟವೂ 197 ಸ್ಕೋರ್‌ನಲ್ಲಿ ಕೊನೆಗೊಂಡಿತು. ಇಲ್ಲಿಂದ ರಾಜ್ ಬಾವಾ ಮತ್ತು ಕೌಶಲ್ ತಾಂಬೆ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ತಾಂಬೆ 49ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ನಾಲ್ಕು ಬೌಂಡರಿ ಗಳಿಸಿ ತಂಡಕ್ಕೆ 4 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ತಾಂಬೆ ಮತ್ತು ಬಾವಾ ನಡುವೆ 65 ರನ್‌ಗಳ ಅಜೇಯ ಜೊತೆಯಾಟವಿತ್ತು.

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ