IND vs SA: ಟೀಂ ಇಂಡಿಯಾದಿಂದ ಪೂಜಾರ- ರಹಾನೆಗೆ ಗೇಟ್​ಪಾಸ್? ನಾಯಕ ಕೊಹ್ಲಿ ಹೇಳಿದ್ದೇನು ಗೊತ್ತಾ?

IND vs SA: ರಹಾನೆ ಮತ್ತು ಪೂಜಾರ ಅವರಿಗೆ ಸಂಬಂಧಿಸಿದಂತೆ, ನಾನು ಇದನ್ನು ಮೊದಲೇ ಹೇಳಿದ್ದೇನೆ. ಚೇತೇಶ್ವರ್ ಮತ್ತು ಅಜಿಂಕ್ಯಾ ಅವರು ಯಾವ ರೀತಿಯ ಬ್ಯಾಟ್ಸ್‌ಮನ್ ಮತ್ತು ಅವರು ಆಡಿದ ಇನ್ನಿಂಗ್ಸ್‌ನಿಂದಾಗಿ ನಾವು ಅವರನ್ನು ನಿರಂತರವಾಗಿ ಬೆಂಬಲಿಸಿದ್ದೇವೆ ಎಂದು ಹೇಳುತ್ತೇನೆ.

IND vs SA: ಟೀಂ ಇಂಡಿಯಾದಿಂದ ಪೂಜಾರ- ರಹಾನೆಗೆ ಗೇಟ್​ಪಾಸ್? ನಾಯಕ ಕೊಹ್ಲಿ ಹೇಳಿದ್ದೇನು ಗೊತ್ತಾ?
ಪೂಜಾರ, ಕೊಹ್ಲಿ, ರಹಾನೆ
Follow us
| Updated By: ಪೃಥ್ವಿಶಂಕರ

Updated on: Jan 14, 2022 | 9:10 PM

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲಲು ಭಾರತದ 29 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತಷ್ಟು ಹೆಚ್ಚಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಸತತ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತು. ದಕ್ಷಿಣ ಆಫ್ರಿಕಾವನ್ನು ತಲುಪುವ ಮೊದಲು, ಟೀಮ್ ಇಂಡಿಯಾವನ್ನು ಸರಣಿಯನ್ನು ಗೆಲ್ಲುವ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಸೆಂಚುರಿಯನ್ ಟೆಸ್ಟ್ ಅನ್ನು ಗೆಲ್ಲುವ ಮೂಲಕ ಭಾರತವು ಅದೇ ರೀತಿಯಲ್ಲಿ ಪ್ರಾರಂಭಿಸಿತು. ಆದರೆ ಮುಂದಿನ ಎರಡು ವಾರಗಳಲ್ಲಿ ಪರಿಸ್ಥಿತಿ ಬದಲಾಯಿತು ಮತ್ತು ಫಲಿತಾಂಶವು ನಿರಾಶೆಯಾಗಿತ್ತು. ಟೀಂ ಇಂಡಿಯಾದ ಕಳಪೆ ಬ್ಯಾಟಿಂಗ್ ಮತ್ತೊಮ್ಮೆ ಕೇಂದ್ರಬಿಂದುವಾಗಿತ್ತು. ಅದರಲ್ಲೂ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಈ ಬಾರಿಯೂ ನಿರಾಸೆ ಮೂಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸೋಲಿನ ನಂತರ, ನಾಯಕ ವಿರಾಟ್ ಕೊಹ್ಲಿಯಿಂದ ಇಬ್ಬರ ಸ್ಥಾನದ ಬಗ್ಗೆ ಪ್ರಶ್ನೆಗಳು ಕೇಳಿ ಬಂದವು. ಆದರೆ ಈ ಪ್ರಶ್ನೆಗಳಿಗೆ ನಯವಾಗಿ ಉತ್ತರಿಸಿದ ಕೊಹ್ಲಿ, ಈ ನಿರ್ಧಾರ ಆಯ್ಕೆದಾರರ ಬಿಟ್ಟಿದ್ದು ಎಂದಿದ್ದಾರೆ.

ತಂಡದ ಸೋಲಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ಸೋಲಿಗೆ ಬ್ಯಾಟಿಂಗ್ ಅನ್ನು ಬಹಿರಂಗವಾಗಿ ದೂಷಿಸಿದರು. ಆದರೆ ಮುಂಬರುವ ದಿನಗಳಲ್ಲಿ ಬದಲಾವಣೆಯ ಪ್ರಶ್ನೆಯ ಬಗ್ಗೆ ಏನನ್ನೂ ಹೇಳಲು ನಿರಾಕರಿಸಿದರು. ಬದಲಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಕೊಹ್ಲಿ, ನಮ್ಮ ಬ್ಯಾಟಿಂಗ್ ವಿಭಾಗ ಖಂಡಿತವಾಗಿಯೂ ನಮ್ಮನ್ನು ನಿರಾಸೆಗೊಳಿಸಿತು. ವಿಶೇಷವಾಗಿ ಕಳೆದ ಎರಡು ಪಂದ್ಯಗಳಲ್ಲಿ. ನಾನು ಇಲ್ಲಿ ಕುಳಿತು ಭವಿಷ್ಯದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಆಯ್ಕೆದಾರರು ನಿರ್ಧಾರವಾಗಿದೆ ಇದರಲ್ಲಿ ನನ್ನ ಕೈವಾಡವಿಲ್ಲ ಎಂದಿದ್ದಾರೆ.

ಪೂಜಾರ-ರಹಾನೆಗೆ ಸದಾ ಬೆಂಬಲ ತಂಡದಲ್ಲಿ ಪೂಜಾರ ಮತ್ತು ರಹಾನೆ ಅವರ ಭವಿಷ್ಯದ ಪ್ರಶ್ನೆಗೆ ಕೊಹ್ಲಿ, ಇಬ್ಬರೂ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಅವರ ಕೊಡುಗೆಗಾಗಿ ತಂಡದಿಂದ ನಿರಂತರವಾಗಿ ಬೆಂಬಲಿತರಾಗಿದ್ದಾರೆ ಎಂದು ಹೇಳಿದರು. ರಹಾನೆ ಮತ್ತು ಪೂಜಾರ ಅವರಿಗೆ ಸಂಬಂಧಿಸಿದಂತೆ, ನಾನು ಇದನ್ನು ಮೊದಲೇ ಹೇಳಿದ್ದೇನೆ. ಚೇತೇಶ್ವರ್ ಮತ್ತು ಅಜಿಂಕ್ಯಾ ಅವರು ಯಾವ ರೀತಿಯ ಬ್ಯಾಟ್ಸ್‌ಮನ್ ಮತ್ತು ಅವರು ಆಡಿದ ಇನ್ನಿಂಗ್ಸ್‌ನಿಂದಾಗಿ ನಾವು ಅವರನ್ನು ನಿರಂತರವಾಗಿ ಬೆಂಬಲಿಸಿದ್ದೇವೆ ಎಂದು ಹೇಳುತ್ತೇನೆ. ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಇನ್ನಿಂಗ್ಸ್ ನಮ್ಮನ್ನು ಉತ್ತಮ ಸ್ಕೋರ್‌ಗೆ ಕೊಂಡೊಯ್ದಿತು. ಒಂದು ತಂಡವಾಗಿ, ನಾವು ಅಂತಹ ಇನ್ನಿಂಗ್ಸ್‌ಗಳನ್ನು ಗೌರವಿಸುತ್ತೇವೆ. ಆಯ್ಕೆದಾರರು ಏನು ಮಾಡುತ್ತಾರೆ ಮತ್ತು ಅವರ ಮನಸ್ಸಿನಲ್ಲಿ ಏನಿದೆ ಎಂಬುದರ ಕುರಿತು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಪೂಜಾರ-ರಹಾನೆ ಅವರ ಪ್ರದರ್ಶನ ಇಲ್ಲಿದೆ ಈ ಟೆಸ್ಟ್ ಸರಣಿಗೆ ಮುಂಚೆಯೇ, ರಹಾನೆ ಮತ್ತು ಪೂಜಾರ ಆಡುವ XI ನಲ್ಲಿ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅವರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಆಡುವ ಇಲೆವೆನ್‌ನಲ್ಲಿ ಸೇರಿಸಬೇಕೆಂಬ ಬೇಡಿಕೆ ಇತ್ತು, ಆದರೆ ಅದು ಆಗಲಿಲ್ಲ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಎಲ್ಲಾ ಮೂರು ಪಂದ್ಯಗಳನ್ನು ಆಡಿದರು ಮತ್ತು ತಲಾ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದರು. ರಹಾನೆ 6 ಇನ್ನಿಂಗ್ಸ್‌ಗಳಲ್ಲಿ 136 ರನ್ ಗಳಿಸಿದರೆ, ಅದೇ ಇನ್ನಿಂಗ್ಸ್‌ನಲ್ಲಿ ಪೂಜಾರ 124 ರನ್ ಗಳಿಸಿದರು. ಕೊಹ್ಲಿ ಗಾಯಗೊಂಡ ಕಾರಣ ವಿಹಾರಿ ಅವರು 60 ರನ್ ಗಳಿಸಿದ ಎರಡನೇ ಟೆಸ್ಟ್‌ನಲ್ಲಿ ಮಾತ್ರ ಅವಕಾಶ ಪಡೆದರು. ಆದರೆ ಕೊನೆಯ ಟೆಸ್ಟ್‌ನಲ್ಲಿ ಅವರು ತಮ್ಮ ಸ್ಥಾನವನ್ನು ಖಾಲಿ ಮಾಡಬೇಕಾಯಿತು.

ಇದನ್ನೂ ಓದಿ:IND vs SA: ದಕ್ಷಿಣ ಆಫ್ರಿಕಾದಲ್ಲಿ ಮತ್ತೆ ಎಡವಿದ ಟೀಂ ಇಂಡಿಯಾ; ಕೇಪ್ ಟೌನ್ ಟೆಸ್ಟ್ ಜೊತೆಗೆ ಸರಣಿ ಗೆದ್ದ ಹರಿಣಗಳು

ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಕಾಶ್ಮೀರವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ: ಫಾರೂಕ್ ಅಬ್ದುಲ್ಲಾ
ಕಾಶ್ಮೀರವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ: ಫಾರೂಕ್ ಅಬ್ದುಲ್ಲಾ
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಫರ್ ಬಗ್ಗೆ ಯೋಗೇಶ್ವರ್ ಮಾತು
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಫರ್ ಬಗ್ಗೆ ಯೋಗೇಶ್ವರ್ ಮಾತು
ಕಳೆದ ಸೀಸನ್ ಅವಾಂತರ ಮತ್ತೆ ರಿಪೀಟ್; ಟಾಸ್ಕ್​ ವೇಳೆ ಮಿತಿಮೀರಿತು ಕ್ರೌರ್ಯ
ಕಳೆದ ಸೀಸನ್ ಅವಾಂತರ ಮತ್ತೆ ರಿಪೀಟ್; ಟಾಸ್ಕ್​ ವೇಳೆ ಮಿತಿಮೀರಿತು ಕ್ರೌರ್ಯ
Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್