AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದ ಮೂವರು ಗೇಮ್ ಚೇಂಜರ್​ಗಳನ್ನ ಹೆಸರಿಸಿದ ಸೆಹ್ವಾಗ್

Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್​ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್​ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಟೀಮ್ ಇಂಡಿಯಾದ ಮೂವರು ಗೇಮ್ ಚೇಂಜರ್​ಗಳನ್ನ ಹೆಸರಿಸಿದ ಸೆಹ್ವಾಗ್
Virender Sehwag
ಝಾಹಿರ್ ಯೂಸುಫ್
|

Updated on: Aug 28, 2025 | 3:10 PM

Share

ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತ ತಂಡವು ಯುಎಇ, ಪಾಕಿಸ್ತಾನ್ ಹಾಗೂ ಒಮಾನ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಲಿದೆ. ಹೀಗೆ ಸೂಪರ್ ಫೋರ್ ಹಂತಕ್ಕೇರುವ ಮೂಲಕ ಭಾರತ ತಂಡಕ್ಕೆ ಕಪ್ ಗೆದ್ದುಕೊಡಬಲ್ಲ ಮೂವರು ಆಟಗಾರರನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್.

ಖಾಸಗಿ ಚಾನೆಲ್​ನ ಸಂದರ್ಶನದಲ್ಲಿ ಕಾಣಿಸಿಕೊಂಡ ವೀರೇಂದ್ರ ಸೆಹ್ವಾಗ್ ಅವರಿಗೆ ಏಷ್ಯಾಕಪ್​ನಲ್ಲಿ ಯಾರೆಲ್ಲಾ ಟೀಮ್ ಇಂಡಿಯಾ ಪರ ಗೇಮ್ ಚೇಂಜರ್ ಆಗಬಲ್ಲರು ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಸೆಹ್ವಾಗ್, ಮೂವರು ಆಟಗಾರರ ಹೆಸರನ್ನು ಹೆಸರಿಸಿದ್ದಾರೆ. ಅವರೆಂದರೆ…

  • ಅಭಿಷೇಕ್ ಶರ್ಮಾ
  • ಜಸ್​ಪ್ರೀತ್ ಬುಮ್ರಾ
  • ವರುಣ್ ಚಕ್ರವರ್ತಿ

ಅಗ್ರ ಕ್ರಮಾಂಕದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹೆಸರು ಮಾಡಿರುವ ಉದಯೋನ್ಮುಖ ತಾರೆ ಅಭಿಷೇಕ್ ಶರ್ಮಾ ಇಡೀ ಪಂದ್ಯದ ಚಿತ್ರಣ ಬದಲಿಸಬಲ್ಲ ಆಟಗಾರ. ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡುವ ಅಭಿಷೇಕ್ ಶರ್ಮಾ ಅವರ ಆಟದಿಂದ ಟೀಮ್ ಇಂಡಿಯಾ ಪಂದ್ಯವನ್ನು ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ.

ಹಾಗೆಯೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸ್ಪಿನ್ ಮೋಡಿಯೊಂದಿಗೆ ಸಂಚಲನ ಸೃಷ್ಟಿಸಿರುವ ವರುಣ್ ಚಕ್ರವರ್ತಿ ಕೂಡ ಪ್ರಮುಖ ಪಾತ್ರವಹಿಸಲಿದ್ದಾರೆ. ವರುಣ್ ಅವರ ಬೌಲಿಂಗ್ ಟಿ20 ಸ್ವರೂಪದಲ್ಲಿ ಬಹಳ ಪರಿಣಾಮಕಾರಿ. ಹೀಗಾಗಿ ಅವರು ಸಹ ಭಾರತದ ಗೆಲುವುಗಳಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ.

ಇನ್ನು ಜಸ್​ಪ್ರೀತ್ ಬುಮ್ರಾ ಬಗ್ಗೆ ಹೇಳಬೇಕಿಲ್ಲ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಏಷ್ಯಾಕಪ್​ನಲ್ಲೂ ಬುಮ್ರಾ ಕಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ  ಶಾಕಿಬ್ ಅಲ್ ಹಸನ್..!

ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ),  ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.

ಏಷ್ಯಾಕಪ್ ವೇಳಾಪಟ್ಟಿ:

ಗ್ರೂಪ್- A ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ ಸಮಯ (IST)
ಸೆಪ್ಟೆಂಬರ್ 10 ಭಾರತ vs ಯುಎಇ ದುಬೈ ಸಂಜೆ 7:30
ಸೆಪ್ಟೆಂಬರ್ 12 ಪಾಕಿಸ್ತಾನ್ vs ಒಮಾನ್ ಅಬುಧಾಬಿ ಸಂಜೆ 7:30
ಸೆಪ್ಟೆಂಬರ್ 14 ಭಾರತ vs ಪಾಕಿಸ್ತಾನ್ ದುಬೈ ಸಂಜೆ 7:30
15ನೇ ಸೆಪ್ಟೆಂಬರ್ ಯುಎಇ vs ಒಮಾನ್ ಅಬುಧಾಬಿ ಸಂಜೆ 7:30
17ನೇ ಸೆಪ್ಟೆಂಬರ್ ಪಾಕಿಸ್ತಾನ್ vs ಯುಎಇ ದುಬೈ ಸಂಜೆ 7:30
19ನೇ ಸೆಪ್ಟೆಂಬರ್ ಭಾರತ vs ಒಮಾನ್ ಅಬುಧಾಬಿ ಸಂಜೆ 7:30

ಗ್ರೂಪ್-B ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ ಸಮಯ (IST)
ಸೆಪ್ಟೆಂಬರ್ 9 ಅಫ್ಘಾನಿಸ್ತಾನ್ vs ಹಾಂಗ್ ಕಾಂಗ್ ಅಬುಧಾಬಿ ಸಂಜೆ 7:30
ಸೆಪ್ಟೆಂಬರ್ 11 ಬಾಂಗ್ಲಾದೇಶ್ vs ಹಾಂಗ್ ಕಾಂಗ್ ದುಬೈ ಸಂಜೆ 7:30
ಸೆಪ್ಟೆಂಬರ್ 13 ಶ್ರೀಲಂಕಾ vs ಬಾಂಗ್ಲಾದೇಶ್ ಅಬುಧಾಬಿ ಸಂಜೆ 7:30
15ನೇ ಸೆಪ್ಟೆಂಬರ್ ಶ್ರೀಲಂಕಾ vs ಹಾಂಗ್ ಕಾಂಗ್ ದುಬೈ ಸಂಜೆ 7:30
ಸೆಪ್ಟೆಂಬರ್ 16 ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ ಅಬುಧಾಬಿ ಸಂಜೆ 7:30
18ನೇ ಸೆಪ್ಟೆಂಬರ್ ಶ್ರೀಲಂಕಾ vs ಅಫ್ಘಾನಿಸ್ತಾನ್ ದುಬೈ ಸಂಜೆ 7:30

ಸೂಪರ್-4 ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ ಸಮಯ (IST)
ಸೆಪ್ಟೆಂಬರ್ 20 ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ B ಕ್ವಾಲಿಫೈಯರ್ 2 ದುಬೈ ಸಂಜೆ 7:30
ಸೆಪ್ಟೆಂಬರ್ 21 ಗ್ರೂಪ್ A ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2 ದುಬೈ ಸಂಜೆ 7:30
23ನೇ ಸೆಪ್ಟೆಂಬರ್ ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 2 ದುಬೈ ಸಂಜೆ 7:30
24ನೇ ಸೆಪ್ಟೆಂಬರ್ ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2 ದುಬೈ ಸಂಜೆ 7:30
25ನೇ ಸೆಪ್ಟೆಂಬರ್ ಗ್ರೂಪ್ A ಕ್ವಾಲಿಫೈಯರ್ 2 vs ಗ್ರೂಪ್ B ಕ್ವಾಲಿಫೈಯರ್ 2 ದುಬೈ ಸಂಜೆ 7:30
ಸೆಪ್ಟೆಂಬರ್ 26 ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 1 ದುಬೈ ಸಂಜೆ 7:30
ಸೆಪ್ಟೆಂಬರ್ 28 ಫೈನಲ್ ದುಬೈ ಸಂಜೆ 7:30

Follow Us
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ