AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ರಾವಿಡ್​ಗೂ ಮೊದಲು ಈ ದಂತಕಥೆಗೆ ಟೀಂ ಇಂಡಿಯಾ ಕೋಚ್ ಆಗುವ ಆಸೆಯಿತ್ತು; ಗಂಗೂಲಿ ಅಚ್ಚರಿ ಹೇಳಿಕೆ

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಭಾರತದ ಮತ್ತೊಬ್ಬ ದಂತಕಥೆಯನ್ನು ಕರೆತರಬಹುದು ಎಂಬ ಊಹಾಪೋಹಾಗಳಿದ್ದವು. ಈಗ ಈ ವಿಷಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ.

ದ್ರಾವಿಡ್​ಗೂ ಮೊದಲು ಈ ದಂತಕಥೆಗೆ ಟೀಂ ಇಂಡಿಯಾ ಕೋಚ್ ಆಗುವ ಆಸೆಯಿತ್ತು; ಗಂಗೂಲಿ ಅಚ್ಚರಿ ಹೇಳಿಕೆ
ದ್ರಾವಿಡ್, ಗಂಗೂಲಿ
TV9 Web
| Edited By: |

Updated on: Dec 18, 2021 | 10:09 PM

Share

ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾದ ಪಯಣವೂ ಆರಂಭವಾಗಿದ್ದು, ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಇದೀಗ ದ್ರಾವಿಡ್ ತಂಡದೊಂದಿಗೆ ದಕ್ಷಿಣ ಆಫ್ರಿಕಾಗೆ ತೆರಳಿದ್ದು, ಅಲ್ಲಿ ಭಾರತ ತಂಡ ಚೊಚ್ಚಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲಲು ಪ್ರಯತ್ನಿಸಲಿದೆ. ಆದಾಗ್ಯೂ, ಸುಮಾರು ಎರಡು ತಿಂಗಳ ಹಿಂದಿನವರೆಗೂ, ದ್ರಾವಿಡ್ ಈ ಕೋಚ್ ಹುದ್ದೆಗೆ ಸಿದ್ಧರಿರಲಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಭಾರತದ ಮತ್ತೊಬ್ಬ ದಂತಕಥೆಯನ್ನು ಕರೆತರಬಹುದು ಎಂಬ ಊಹಾಪೋಹಾಗಳಿದ್ದವು. ಈಗ ಈ ವಿಷಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾದ ಕೋಚ್ ಆಗಲು ಉತ್ಸುಕರಾಗಿದ್ದರು ಎಂದು ಬಿಸಿಸಿಐ ಬಾಸ್ ಹೇಳಿದ್ದಾರೆ.

ನವೆಂಬರ್ 2021 ರಲ್ಲಿ ನಡೆದ T20 ವಿಶ್ವಕಪ್‌ನೊಂದಿಗೆ ರವಿಶಾಸ್ತ್ರಿ ಅವರ ಅಧಿಕಾರಾವಧಿಯು ಕೊನೆಗೊಂಡಿತು. ಅವರು 2017 ರಿಂದ ನಿರಂತರವಾಗಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದರು. ಶಾಸ್ತ್ರಿ ಅವರನ್ನು ಬದಲಿಸಲು, ಭಾರತೀಯ ಮಂಡಳಿಯು ಕೆಲವು ಅನುಭವಿಗಳೊಂದಿಗೆ ಮಾತುಕತೆ ನಡೆಸುತ್ತಿತ್ತು, ಅದರಲ್ಲಿ ದ್ರಾವಿಡ್ ಅವರ ಹೆಸರು ಅಗ್ರಸ್ಥಾನದಲ್ಲಿತ್ತು. ದ್ರಾವಿಡ್ ಆರಂಭದಲ್ಲಿ ಇದಕ್ಕೆ ಸಿದ್ಧರಿಲ್ಲದಿದ್ದರೂ, ಮಂಡಳಿಯ ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಮೊದಲ ಆಯ್ಕೆ ಒಂದೇ ಆಗಿತ್ತು. ಅಂತಿಮವಾಗಿ ಇಬ್ಬರೂ ದ್ರಾವಿಡ್ ಅವರನ್ನು ಈ ಕೆಲಸಕ್ಕೆ ಒಪ್ಪಿಸಿದರು. ದ್ರಾವಿಡ್ ಸಿದ್ಧವಾಗಿಲ್ಲದಿದ್ದರೆ, ಲಕ್ಷ್ಮಣ್ ಅವರಿಗೆ ಈ ಜವಬ್ದಾರಿ ನಿಭಾಯಿಸಲು ಇಷ್ಟವಿತ್ತು ಎಂಬ ಮಾಹಿತಿ ಈಗ ಹೊರಬಿದ್ದಿದೆ.

ಲಕ್ಷ್ಮಣ್‌ಗೆ ಕೋಚ್ ಆಗುವ ಆಸೆ ಇತ್ತು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಲು ಲಕ್ಷ್ಮಣ್ ಬಯಸಿದ್ದರು ಎಂದು ಭಾರತದ ಮಾಜಿ ನಾಯಕ ಗಂಗೂಲಿ ಯೂಟ್ಯೂಬ್ ಶೋನಲ್ಲಿ ಬಹಿರಂಗಪಡಿಸಿದರು. ಆದರೆ ಆ ಸಮಯದಲ್ಲಿ ಮಂಡಳಿಯ ಆಯ್ಕೆ ದ್ರಾವಿಡ್ ಆಗಿದ್ದರು, ಆದ್ದರಿಂದ ಲಕ್ಷ್ಮಣ್ ಇನ್ನೂ ಕಾಯಬೇಕಾಗಿತ್ತು. ‘ಬ್ಯಾಕ್‌ಸ್ಟೇಜ್ ವಿತ್ ಬೋರಿಯಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಗೂಲಿ, ಲಕ್ಷ್ಮಣ್ ರಾಷ್ಟ್ರೀಯ ತಂಡದ ಕೋಚ್ ಹುದ್ದೆಯ ಬಗ್ಗೆ ಉತ್ಸುಕರಾಗಿದ್ದರು, ಆದರೆ ಅದು ಅಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಮುಂಬರುವ ಸಮಯದಲ್ಲಿ, ಅವರು ಖಂಡಿತವಾಗಿಯೂ ಕೋಚ್ ಆಗುವ ಅವಕಾಶವನ್ನು ಪಡೆಯುತ್ತಾರೆ ಎಂದಿದ್ದಾರೆ.

ಎನ್‌ಸಿಎ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು ಗಂಗೂಲಿ ಮತ್ತು ಜಯ್ ಷಾ ಅವರು ಟೀಮ್ ಇಂಡಿಯಾದ ಕೋಚ್ ಆಗಲು ದ್ರಾವಿಡ್ ಮನವೊಲಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಭಾರತೀಯ ಕ್ರಿಕೆಟ್‌ನ ಮುಂದಿನ ಪೀಳಿಗೆಯನ್ನು ತಯಾರಿಸುವ ಜವಬ್ದಾರಿಯನ್ನು ಲಕ್ಷ್ಮಣ್ ಅವರಿಗೆ ವಹಿಸಿದರು. ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ದ್ರಾವಿಡ್ ಅವರ ನೇಮಕವು ತೆರವಿಗೆ ಕಾರಣವಾಯಿತು. ಗಂಗೂಲಿ ಲಕ್ಷ್ಮಣ್ ಅವರನ್ನು ಈ ಸ್ಥಾನಕ್ಕೆ ನೇಮಿಸಿದರು, ಅವರು ಇತ್ತೀಚೆಗೆ ಮುಖ್ಯಸ್ಥರಾಗಿ ಅಧಿಕಾರವನ್ನು ಪ್ರಾರಂಭಿಸಿದ್ದಾರೆ. ಎನ್‌ಸಿಎಯನ್ನು ನಿರ್ವಹಿಸುವುದರ ಜೊತೆಗೆ, ಅವರು ಭಾರತ-ಎ ಮತ್ತು ಅಂಡರ್-19 ತಂಡಗಳ ಕೋಚ್ ಪಾತ್ರವನ್ನು ಸಹ ನಿರ್ವಹಿಸಲಿದ್ದಾರೆ.

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ