AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಂದ್ಯ ನಡೆಯುವಾಗ ಪಿಚ್​ಗೆ ಸ್ಕೂಟರ್​ನಲ್ಲಿ ಬಂದ ಯುವಕ..!

ವಿಶೇಷ ಎಂದರೆ ಈ ಹಿಂದೆ ಭಾರತದಲ್ಲೂ ಈ ಘಟನೆ ನಡೆದಿತ್ತು. ಕೆಲವು ವರ್ಷಗಳ ಹಿಂದೆ, 2017 ರಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶ ನಡುವಿನ ರಣಜಿ ಟ್ರೋಫಿ ಪಂದ್ಯದ ವೇಳೆ ವ್ಯಕ್ತಿಯೊಬ್ಬರು ಮೈದಾನದ ಮಧ್ಯದಲ್ಲಿ ತಮ್ಮ ಕಾರನ್ನು ಓಡಿಸಿದರು.

Viral Video: ಪಂದ್ಯ ನಡೆಯುವಾಗ ಪಿಚ್​ಗೆ ಸ್ಕೂಟರ್​ನಲ್ಲಿ ಬಂದ ಯುವಕ..!
man on scooter
TV9 Web
| Edited By: |

Updated on:May 10, 2022 | 6:05 PM

Share

ಕ್ರಿಕೆಟ್ ಮ್ಯಾಚ್ ನಡೆಯುವಾಗ ಮೈದಾನಕ್ಕೆ ಅಭಿಮಾನಿಗಳು ನುಗ್ಗಿರುವುದನ್ನು ನೀವು ನೋಡುತ್ತೀರಿ. ಇನ್ನು ಕೆಲವೊಮ್ಮೆ ನಾಯಿಗಳು, ಪಕ್ಷಿಗಳು ಕೂಡ ಮೈದಾನದಲ್ಲಿ ಕಾಣಿಸಿಕೊಂಡು ಪಂದ್ಯಕ್ಕೆ ಅಡಚಣೆ ಉಂಟು ಮಾಡಿರುವುದನ್ನು ನೀಡು ಕಂಡಿರುತ್ತೀರಿ. ಆದರೆ ಪಂದ್ಯ ನಡೆಯುವಾಗ ಪಿಚ್‌ನ ಮಧ್ಯದಲ್ಲಿ ಹೋವರ್ ಸ್ಕೂಟರ್ ಜೊತೆ ಬಂದರೆ ಹೇಗಿರಬಹುದು?..ಅಂತಹದೊಂದು ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಕ್ಲಬ್ ಕ್ರಿಕೆಟ್ ಪಂದ್ಯದ ವೇಳೆ ಹೋವರ್ ಸ್ಕೂಟರ್​ನಲ್ಲಿ ಯುವಕನೊಬ್ಬ ಮೈದಾನಕ್ಕೆ ಆಗಮಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅದು ಕೂಡ ಪಿಚ್​ ಮಧ್ಯೆದಲ್ಲೇ ಎಂಬುದು ವಿಶೇಷ.

ಸೋಟನ್ ಯೂನಿವರ್ಸಿಟಿ ಕ್ರಿಕೆಟ್‌ನ ಟ್ವಿಟರ್ ಹ್ಯಾಂಡಲ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದೀಗ ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ರಿಕೆಟ್​ನಲ್ಲಿ ಈ ಹಿಂದೆ ಹಲವು ರೀತಿಯ ಅಡಚಣೆಗಳಿಗೆ ಸಾಕ್ಷಿಯಾಗಿದೆ. ಮಳೆ, ದೃಶ್ಯ ಪರದೆ ಸಮಸ್ಯೆಗಳು, ಮೈದಾನಕ್ಕೆ ಓಡುವ ಪ್ರಾಣಿಗಳು ಮತ್ತು ಒದ್ದೆಯಾದ ಔಟ್‌ಫೀಲ್ಡ್ ಕೆಲವು ಹಂತದಲ್ಲಿ ಆಟವನ್ನು ನಿಲ್ಲಿಸಿವೆ. ಆದರೆ ಪಂದ್ಯ ನಡೆಯುವಾಗ ಇಂಗ್ಲೆಂಡ್​ನಲ್ಲಿ ಇಂತಹದೊಂದು ಅಡಚಣೆ ಕಂಡು ಬಂದಿರುವುದು ಇದೇ ಮೊದಲು ಎನ್ನಲಾಗಿದೆ.

ವಿಶೇಷ ಎಂದರೆ ಈ ಹಿಂದೆ ಭಾರತದಲ್ಲೂ ಈ ಘಟನೆ ನಡೆದಿತ್ತು. ಕೆಲವು ವರ್ಷಗಳ ಹಿಂದೆ, 2017 ರಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶ ನಡುವಿನ ರಣಜಿ ಟ್ರೋಫಿ ಪಂದ್ಯದ ವೇಳೆ ವ್ಯಕ್ತಿಯೊಬ್ಬರು ಮೈದಾನದ ಮಧ್ಯದಲ್ಲಿ ತಮ್ಮ ಕಾರನ್ನು ಓಡಿಸಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಗೌತಮ್ ಗಂಭೀರ್, ಸುರೇಶ್ ರೈನಾ ಮತ್ತು ಇಶಾಂತ್ ಶರ್ಮಾ ಪಾಲ್ಗೊಂಡಿದ್ದರು.

ರಣಜಿ ಟ್ರೋಫಿ ಪಂದ್ಯದ 3 ನೇ ದಿನದಂದು, ಒಬ್ಬ ವ್ಯಕ್ತಿ ತನ್ನ ವ್ಯಾಗನ್ ಆರ್ ಕಾರನ್ನು ಆಟದ ಮೈದಾನಕ್ಕೆ ತಂದು ನೇರವಾಗಿ ಪಿಚ್​ನತ್ತ ನುಗ್ಗಿಸಿದರು. ಈ ಘಟನೆಯ ನಂತರ, ಮ್ಯಾಚ್ ರೆಫರಿ ಪಿಚ್ ಮತ್ತು ಔಟ್‌ಫೀಲ್ಡ್ ಅನ್ನು ಪರಿಶೀಲಿಸಿ ಯಾವುದೇ ಹಾನಿಯಾಗದ ಕಾರಣ ಪಂದ್ಯವನ್ನು ಮುಂದುವರೆಸಿದ್ದರು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:00 pm, Tue, 10 May 22

Follow Us
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!