AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್.. 9 ಸಿಕ್ಸರ್, 12 ಎಸೆತಗಳಲ್ಲಿ 66 ರನ್ ಸಿಡಿಸಿದ ಜಿಂಬಾಬ್ವೆ ತಂಡದ ಬೌಲರ್ ಕಾರ್ಲ್ ಮುಂಬಾ!

40 ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ಮುಂಬಾ ಕ್ರೀಸ್​ಗೆ ಇಳಿದ ತಕ್ಷಣ ತಮ್ಮ ಬ್ಯಾಟ್​ನಿಂದ ಸುನಾಮಿ ಸೃಷ್ಟಿಸಿದರು. ಮುಂಬಾ ಕೇವಲ 33 ಎಸೆತಗಳಲ್ಲಿ 9 ಸಿಕ್ಸರ್‌ ಮತ್ತು 3 ಬೌಂಡರಿ ಹೊಡೆದರು.

8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್.. 9 ಸಿಕ್ಸರ್, 12 ಎಸೆತಗಳಲ್ಲಿ 66 ರನ್ ಸಿಡಿಸಿದ ಜಿಂಬಾಬ್ವೆ ತಂಡದ ಬೌಲರ್ ಕಾರ್ಲ್ ಮುಂಬಾ!
ಕಾರ್ಲ್ ಮುಂಬಾ
TV9 Web
| Edited By: |

Updated on: Aug 20, 2021 | 10:29 PM

Share

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ ಕೊನೆಯ ದಿನ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಉತ್ತಮ ಅರ್ಧ ಶತಕ ಗಳಿಸಿದರು. ಜೊತೆಗೆ ಜಸ್ಪ್ರೀತ್ ಬುಮ್ರಾ ಜೊತೆ ಕೂಡಿ ಪಂದ್ಯ ಬದಲಿಸುವ ಪಾಲುದಾರಿಕೆಯನ್ನು ರಚಿಸಿದರು. ಇದರಿಂದ ಭಾರತ 2ನೇ ಟೆಸ್ಟ್ ಗೆದ್ದುಬೀಗಿತು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಹೆಚ್ಚಾಗಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತದೆ ಮತ್ತು ಶಮಿ-ಬುಮ್ರಾ ಕೂಡ ಅದೇ ರೀತಿ ಮಾಡಿದರು. ಈತ್ತೀಚೆಗೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲು ಪ್ರಾರಂಭಿಸಿದ್ದಾರೆ ಎಂದು ತೋರುತ್ತದೆ. ಏಕೆಂದರೆ ಜಿಂಬಾಬ್ವೆ ತಂಡದ ಬೌಲರ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದು ಕ್ರಿಕೆಟ್ ಮೈದಾನದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದ್ದಾನೆ.

ಮುಂಬಾ 9 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು ಈ ದಿನಗಳಲ್ಲಿ ಉದಯೋನ್ಮುಖ ಆಟಗಾರರ ಸರಣಿಯು ಜಿಂಬಾಬ್ವೆ ಮತ್ತು ನಮೀಬಿಯಾ ನಡುವೆ ನಡೆಯುತ್ತಿದೆ. ಅಲ್ಲಿ ಉಭಯ ತಂಡಗಳ ಯುವ ಮತ್ತು ಕಡಿಮೆ ಅನುಭವಿ ಆಟಗಾರರು ಪರಸ್ಪರ ಎದುರಾಗುತ್ತಿದ್ದಾರೆ. ಸರಣಿಯ ಎರಡನೇ ಏಕದಿನ ಪಂದ್ಯವು ಶುಕ್ರವಾರ ಉಭಯ ತಂಡಗಳ ನಡುವೆ ನಡೆಯಿತು. ಇದರಲ್ಲಿ ಜಿಂಬಾಬ್ವೆ ಉದಯೋನ್ಮುಖ ಆಟಗಾರರ ತಂಡವು ನಮೀಬಿಯಾ ಈಗಲ್ಸ್ ವಿರುದ್ಧ 50 ಓವರ್‌ಗಳಲ್ಲಿ 304 ರನ್ ಗಳಿಸಿತು. ಜಿಂಬಾಬ್ವೆಗೆ, ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಕೊಡುಗೆ ನೀಡಿದರು. ಆದರೆ ನಿಜವಾದ ಪವಾಡ ನಡೆದಿದ್ದು ಎಂಟನೇ ಕ್ರಮಾಂಕದಲ್ಲಿ ಬಂದ ಕಾರ್ಲ್ ಮುಂಬಾ ಅವರಿಂದ.

40 ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ಮುಂಬಾ ಕ್ರೀಸ್​ಗೆ ಇಳಿದ ತಕ್ಷಣ ತಮ್ಮ ಬ್ಯಾಟ್​ನಿಂದ ಸುನಾಮಿ ಸೃಷ್ಟಿಸಿದರು. ಮುಂಬಾ ಕೇವಲ 33 ಎಸೆತಗಳಲ್ಲಿ 9 ಸಿಕ್ಸರ್‌ ಮತ್ತು 3 ಬೌಂಡರಿ ಹೊಡೆದರು. ಇದರ ಸಹಾಯದಿಂದ ಅವರು 242 ಸ್ಟ್ರೈಕ್ ರೇಟ್‌ನಲ್ಲಿ 80 ರನ್ ಗಳಿಸಿದರು. ಮುಂಬಾ ಕೇವಲ 7.5 ಓವರ್‌ಗಳಲ್ಲಿ ಕ್ರೀಸ್‌ನಲ್ಲಿದ್ದರು, ಆದರೆ ಈ ಸಮಯದಲ್ಲಿ ಜಿಂಬಾಬ್ವೆ 95 ರನ್ ಗಳಿಸಿತು. ಇದರಲ್ಲಿ 80 ರನ್ ಮುಂಬಾದಿಂದವರಿಂದ ಬಂದವು. ವೇಗದ ಬೌಲರ್ ಮುಂಬಾ ಜಿಂಬಾಬ್ವೆ ಹಿರಿಯ ತಂಡದ ಪರವಾಗಿ 12 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 12 ವಿಕೆಟ್ ಪಡೆದು ಒಟ್ಟು 83 ರನ್ ಗಳಿಸಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ