8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್.. 9 ಸಿಕ್ಸರ್, 12 ಎಸೆತಗಳಲ್ಲಿ 66 ರನ್ ಸಿಡಿಸಿದ ಜಿಂಬಾಬ್ವೆ ತಂಡದ ಬೌಲರ್ ಕಾರ್ಲ್ ಮುಂಬಾ!

40 ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ಮುಂಬಾ ಕ್ರೀಸ್​ಗೆ ಇಳಿದ ತಕ್ಷಣ ತಮ್ಮ ಬ್ಯಾಟ್​ನಿಂದ ಸುನಾಮಿ ಸೃಷ್ಟಿಸಿದರು. ಮುಂಬಾ ಕೇವಲ 33 ಎಸೆತಗಳಲ್ಲಿ 9 ಸಿಕ್ಸರ್‌ ಮತ್ತು 3 ಬೌಂಡರಿ ಹೊಡೆದರು.

8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್.. 9 ಸಿಕ್ಸರ್, 12 ಎಸೆತಗಳಲ್ಲಿ 66 ರನ್ ಸಿಡಿಸಿದ ಜಿಂಬಾಬ್ವೆ ತಂಡದ ಬೌಲರ್ ಕಾರ್ಲ್ ಮುಂಬಾ!
ಕಾರ್ಲ್ ಮುಂಬಾ
Follow us
| Updated By: ಪೃಥ್ವಿಶಂಕರ

Updated on: Aug 20, 2021 | 10:29 PM

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ ಕೊನೆಯ ದಿನ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಉತ್ತಮ ಅರ್ಧ ಶತಕ ಗಳಿಸಿದರು. ಜೊತೆಗೆ ಜಸ್ಪ್ರೀತ್ ಬುಮ್ರಾ ಜೊತೆ ಕೂಡಿ ಪಂದ್ಯ ಬದಲಿಸುವ ಪಾಲುದಾರಿಕೆಯನ್ನು ರಚಿಸಿದರು. ಇದರಿಂದ ಭಾರತ 2ನೇ ಟೆಸ್ಟ್ ಗೆದ್ದುಬೀಗಿತು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಹೆಚ್ಚಾಗಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತದೆ ಮತ್ತು ಶಮಿ-ಬುಮ್ರಾ ಕೂಡ ಅದೇ ರೀತಿ ಮಾಡಿದರು. ಈತ್ತೀಚೆಗೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲು ಪ್ರಾರಂಭಿಸಿದ್ದಾರೆ ಎಂದು ತೋರುತ್ತದೆ. ಏಕೆಂದರೆ ಜಿಂಬಾಬ್ವೆ ತಂಡದ ಬೌಲರ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದು ಕ್ರಿಕೆಟ್ ಮೈದಾನದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದ್ದಾನೆ.

ಮುಂಬಾ 9 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು ಈ ದಿನಗಳಲ್ಲಿ ಉದಯೋನ್ಮುಖ ಆಟಗಾರರ ಸರಣಿಯು ಜಿಂಬಾಬ್ವೆ ಮತ್ತು ನಮೀಬಿಯಾ ನಡುವೆ ನಡೆಯುತ್ತಿದೆ. ಅಲ್ಲಿ ಉಭಯ ತಂಡಗಳ ಯುವ ಮತ್ತು ಕಡಿಮೆ ಅನುಭವಿ ಆಟಗಾರರು ಪರಸ್ಪರ ಎದುರಾಗುತ್ತಿದ್ದಾರೆ. ಸರಣಿಯ ಎರಡನೇ ಏಕದಿನ ಪಂದ್ಯವು ಶುಕ್ರವಾರ ಉಭಯ ತಂಡಗಳ ನಡುವೆ ನಡೆಯಿತು. ಇದರಲ್ಲಿ ಜಿಂಬಾಬ್ವೆ ಉದಯೋನ್ಮುಖ ಆಟಗಾರರ ತಂಡವು ನಮೀಬಿಯಾ ಈಗಲ್ಸ್ ವಿರುದ್ಧ 50 ಓವರ್‌ಗಳಲ್ಲಿ 304 ರನ್ ಗಳಿಸಿತು. ಜಿಂಬಾಬ್ವೆಗೆ, ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಕೊಡುಗೆ ನೀಡಿದರು. ಆದರೆ ನಿಜವಾದ ಪವಾಡ ನಡೆದಿದ್ದು ಎಂಟನೇ ಕ್ರಮಾಂಕದಲ್ಲಿ ಬಂದ ಕಾರ್ಲ್ ಮುಂಬಾ ಅವರಿಂದ.

40 ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ಮುಂಬಾ ಕ್ರೀಸ್​ಗೆ ಇಳಿದ ತಕ್ಷಣ ತಮ್ಮ ಬ್ಯಾಟ್​ನಿಂದ ಸುನಾಮಿ ಸೃಷ್ಟಿಸಿದರು. ಮುಂಬಾ ಕೇವಲ 33 ಎಸೆತಗಳಲ್ಲಿ 9 ಸಿಕ್ಸರ್‌ ಮತ್ತು 3 ಬೌಂಡರಿ ಹೊಡೆದರು. ಇದರ ಸಹಾಯದಿಂದ ಅವರು 242 ಸ್ಟ್ರೈಕ್ ರೇಟ್‌ನಲ್ಲಿ 80 ರನ್ ಗಳಿಸಿದರು. ಮುಂಬಾ ಕೇವಲ 7.5 ಓವರ್‌ಗಳಲ್ಲಿ ಕ್ರೀಸ್‌ನಲ್ಲಿದ್ದರು, ಆದರೆ ಈ ಸಮಯದಲ್ಲಿ ಜಿಂಬಾಬ್ವೆ 95 ರನ್ ಗಳಿಸಿತು. ಇದರಲ್ಲಿ 80 ರನ್ ಮುಂಬಾದಿಂದವರಿಂದ ಬಂದವು. ವೇಗದ ಬೌಲರ್ ಮುಂಬಾ ಜಿಂಬಾಬ್ವೆ ಹಿರಿಯ ತಂಡದ ಪರವಾಗಿ 12 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 12 ವಿಕೆಟ್ ಪಡೆದು ಒಟ್ಟು 83 ರನ್ ಗಳಿಸಿದ್ದಾರೆ.

‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’