AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲ್ಡೀವ್ಸ್​ನಲ್ಲಿ ಆಸಿಸ್​ ಆಟಗಾರರ ರಂಪಾಟ; ಬಾರ್​ನಲ್ಲಿ ಪರಸ್ಪರ ಹೊಡೆದಾಡಿಕೊಂಡ ವಾರ್ನರ್-ಸ್ಲೆಟರ್?

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮತ್ತು ಐಪಿಎಲ್ನಲ್ಲಿ ಕಾಮಂಟೇಟರ್ ಆಗಿದ್ದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೆಟರ್ ಪರಸ್ಪರ ಜಗಳ ಮಾಡಿ ಕೊಂಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಆಸಿಸ್​ ಆಟಗಾರರ ರಂಪಾಟ; ಬಾರ್​ನಲ್ಲಿ ಪರಸ್ಪರ ಹೊಡೆದಾಡಿಕೊಂಡ ವಾರ್ನರ್-ಸ್ಲೆಟರ್?
ಡೇವಿಡ್ ವಾರ್ನರ್ , ಮೈಕಲ್ ಸ್ಲೆಟರ್
ಪೃಥ್ವಿಶಂಕರ
|

Updated on: May 10, 2021 | 4:29 PM

Share

ಆಸ್ಟ್ರೇಲಿಯಾ ಕ್ರಿಕೆಟಿಗರಿಬ್ಬರು ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಹಾಗಾದ್ರೆ ಅದ್ಯಾವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಐಪಿಎಲ್ ಅರ್ಧಕ್ಕೆ ಮೊಟಕುಗೊಂಡಿರೋದ್ರಿಂದ ವಿದೇಶಿ ಕ್ರಿಕೆಟಿಗರೆಲ್ಲಾ, ತಮ್ಮ ತಮ್ಮ ತವರಿಗೆ ವಾಪಸ್ ಆಗಿದ್ದಾರೆ. ಮೇ 15ರವರೆಗೆ ಆಸ್ಟ್ರೇಲಿಯಾ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದೆ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಮಾತ್ರ ತಮ್ಮ ತವರಿಗೆ ತೆರಳೋಕಾಗದೇ ಮಾಲ್ಡೀವ್ಸ್ನಲ್ಲಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟಿಗರು ಮಾಲ್ಡೀವ್ಸ್ನಲ್ಲಿದ್ರೆ ಸುದ್ದಿಯಾಗ್ತಾ ಇರಲಿಲ್ಲ. ಆದ್ರೆ ಮಾಲ್ಡೀವ್ಸ್ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರಿಬ್ಬರು ಹೊಡೆದಾಡಿಕೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮತ್ತು ಐಪಿಎಲ್ನಲ್ಲಿ ಕಾಮಂಟೇಟರ್ ಆಗಿದ್ದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೆಟರ್ ಪರಸ್ಪರ ಜಗಳ ಮಾಡಿ ಕೊಂಡಿದ್ದಾರೆ.

ಬಾರ್ನಲ್ಲಿ ಹೊಡೆದಾಡಿಕೊಂಡ ವಾರ್ನರ್-ಸ್ಲೆಟರ್? ಹೇಗೋ ತವರಿಗೆ ಹೋಗ್ತೀವಿ ಅನ್ನೋ ಖುಷಿಯಲ್ಲಿದ್ದ ಆಸಿಸ್ ಕ್ರಿಕೆಟಿಗರು ರಿಲ್ಯಾಕ್ಸ್ ಆಗೋಕೆ ಬಾರ್ಗೆ ತೆರಳಿದ್ದಾರೆ. ಈ ವೇಳೆ ವಾರ್ನರ್ ಮತ್ತು ಸ್ಲೆಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ಚಕಮಕಿ ಜೋರಾಗಿ ಇಬ್ಬರು ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ವಾಗ್ವಾದ ಉಂಟಾಗಿ, ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಇತರೆ ಆಟಗಾರರು ಇಬ್ಬರ ಜಗಳವನ್ನ ಬಿಡಿಸಿದ್ದಾರೆ.

ಇಬ್ಬರು ಈ ಸುದ್ದಿಯನ್ನ ನಿರಾಕರಿಸಿದ್ದಾರೆ ವಾರ್ನರ್ ಮತ್ತು ಸ್ಲೆಟರ್ ಮಾಲ್ಡೀವ್ಸ್ನ ಬಾರ್ನಲ್ಲಿ ಜಗಳ ಮಾಡಿಕೊಂಡಿರುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದ್ರೆ ಡೇವಿಡ್ ವಾರ್ನರ್ ಮತ್ತು ಮೈಕಲ್ ಸ್ಲೆಟರ್ ಇಬ್ಬರು ಈ ಸುದ್ದಿಯನ್ನ ನಿರಾಕರಿಸಿದ್ದಾರೆ. ನಾವಿಬ್ಬರು ದೀರ್ಘಕಾಲದ ಸ್ನೇಹಿತರು ನಮ್ಮಿಬ್ಬರ ನಡುವೆ ಯಾವುದೇ ಜಗಳವಾಗಿಲ್ಲ ಎಂದಿದ್ದಾರೆ.

ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ರು ಇಲ್ಲಿ ವಾರ್ನರ್ ಮಾತನ್ನ ನಂಬೋ ಹಾಗಿಲ್ಲ.. ಯಾಕಂದ್ರೆ 2013ರಲ್ಲಿ ವಾರ್ನರ್ ಕುಡಿದ ಮತ್ತಿನಲ್ಲಿ ಇಂಗ್ಲೆಂಡ್ ತಂಡದ ಜೋ ರೂಟ್ ಜೊತೆ ಜಗಳವಾಡಿ, ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ರು. ಹೀಗಾಗಿ ಕುಡಿದ ಮತ್ತಿನಲ್ಲಿ ಕಿರಿಕ್ ತಗೆಯೋ ವಾರ್ನರ್ ಸ್ಲೆಟರ್ ಜೊತೆ ಜಗಳವಾಡಿರೋ ವಿಚಾರವನ್ನ, ಸುಲಭವಾಗಿ ಅಲ್ಲಗೆಳೆಯುವಂತಿಲ್ಲ.

ಇದನ್ನೂ ಓದಿ:IPL 2021: ಪ್ಲೀಸ್ ಡ್ಯಾಡಿ, ಬೇಗ ಮನೆಗೆ ಬನ್ನಿ.. ಮಗಳ ಭಾವನಾತ್ಮಾಕ ಸಂದೇಶ ಹಂಚಿಕೊಂಡ ಡೇವಿಡ್ ವಾರ್ನರ್

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್