AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ‘ಮೊಟೆರಾ ಪಿಚ್​ ಟೆಸ್ಟ್ ಕ್ರಿಕೆಟ್​ಗೆ ಯೋಗ್ಯವಾಗಿರಲಿಲ್ಲ’ ಟ್ರೋಲ್​ ಆಯ್ತು ಯುವರಾಜ್​ ಸಿಂಗ್ ಹೇಳಿಕೆ

ತಾವಾಡುತ್ತಿದ್ದ ದಿನಗಳಲ್ಲಿ ಯುವರಾಜ್ ಸಿಂಗ್ ಕೇವಲ ಭಾರತ ಮಾತ್ರವಲ್ಲ, ಬೇರೆ ರಾಷ್ಟ್ರಗಳಲ್ಲೂ ಹೆಸರುವಾಸಿ ಆಟಗಾರನಾಗಿದ್ದರು. ಸ್ಫೋಟಕ ಬ್ಯಾಟಿಂಗ್ ಜೊತೆ ಉಪಯುಕ್ತ ಎಡಗೈ ಸ್ಪಿನ್ನರ್ ಆಗಿದ್ದ ಯುವಿಗೆ ಮೊಟೆರಾದ ಸ್ಟೇಡಿಯಂ ಸರಿಯೆನಿಸುತ್ತಿಲ್ಲ. ಹಾಗೆಯೇ ಅವರು ಮಾಡಿರುವ ಟೀಕೆ ಭಾರತದಲ್ಲಿನ ಕ್ರಿಕೆಟ್​ ಪ್ರೇಮಿಗಳಿಗೆ ಸರಿಯೆನಿಸುತ್ತ್ತಿಲ್ಲ.

India vs England Test Series: ‘ಮೊಟೆರಾ ಪಿಚ್​ ಟೆಸ್ಟ್ ಕ್ರಿಕೆಟ್​ಗೆ ಯೋಗ್ಯವಾಗಿರಲಿಲ್ಲ’ ಟ್ರೋಲ್​ ಆಯ್ತು ಯುವರಾಜ್​ ಸಿಂಗ್ ಹೇಳಿಕೆ
ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕೆಲ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ ಪಂಜಾಬ್ ಬಿಜೆಪಿ. ಅದರಂತೆ ಈಗಾಗಲೇ ಸೆಲೆಬ್ರಿಟಿಗಳ ಪಟ್ಟಿ ಸಿದ್ದವಾಗುತ್ತಿದ್ದು, ಆ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ಹೆಸರು ಮುಂಚೂಣಿಯಲ್ಲಿರುವುದು ವಿಶೇಷ.
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 26, 2021 | 10:39 PM

Share

ಮೊಟೆರಾದ ನರೆಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿರುವ ಪಿಚ್ ಬಗ್ಗೆ ಎದ್ದಿರುವ ವಾದ-ವಿವಾದಗಳು ಕೊನೆಗಾಣುವ ಲಕ್ಷಣಗಳು ಕಾಣುತ್ತಿಲ್ಲ. ಕೆಲವರು ಅದನ್ನು ವಹಿಸಿಕೊಂಡು ಮಾತಾಡಿದರೆ ಇನ್ನೂ ಕೆಲವರು ಅದು ಟೆಸ್ಟ್​ ಕ್ರಿಕೆಟ್​ಗೆ ಯೋಗ್ಯವಾದ ಪಿಚ್ ಅಗಿರಲಿಲ್ಲ ಅಂತ ಹೇಳುತ್ತಿದ್ದಾರೆ. ಇಂಗ್ಲೆಂಡ್​ನ ಮಾಜಿ ಮತ್ತು ಹಾಲಿ ಅಟಗಾರರು ಪಿಚ್​ ಸ್ವರೂಪವನ್ನು ಟೀಕಿಸಿದರೆ ಅದನ್ನು ಭಾರತೀಯರು ಒಪ್ಪಬಹುದು, ಅದರೆ ಭಾರತದ ಒಬ್ಬ ಮಾಜಿ ಆಟಗಾರ ಪಿಚ್​ ಅನ್ನು ಟೀಕಿಸಿ ಟ್ರೋಲ್​ಗಳಗಾಗಿದ್ದಾರೆ. ತಾವಾಡುತ್ತಿದ್ದ ದಿನಗಳಲ್ಲಿ ಯುವರಾಜ್ ಸಿಂಗ್ ಕೇವಲ ಭಾರತ ಮಾತ್ರವಲ್ಲ, ಬೇರೆ ರಾಷ್ಟ್ರಗಳಲ್ಲೂ ಹೆಸರುವಾಸಿ ಆಟಗಾರನಾಗಿದ್ದರು. ಸ್ಫೋಟಕ ಬ್ಯಾಟಿಂಗ್ ಜೊತೆ ಉಪಯುಕ್ತ ಎಡಗೈ ಸ್ಪಿನ್ನರ್ ಆಗಿದ್ದ ಯುವಿಗೆ ಮೊಟೆರಾದ ಸ್ಟೇಡಿಯಂ ಸರಿಯೆನಿಸುತ್ತಿಲ್ಲ. ಹಾಗೆಯೇ ಅವರು ಮಾಡಿರುವ ಟೀಕೆ ಭಾರತದಲ್ಲಿನ ಕ್ರಿಕೆಟ್​ ಪ್ರೇಮಿಗಳಿಗೆ ಸರಿಯೆನಿಸುತ್ತ್ತಿಲ್ಲ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊಟೆರಾದಲ್ಲಿ ನಡೆದ ಮೂರನೆ ಟೆಸ್ಟ್ ಎರಡನೇ ದಿನವೇ ಕೊನೆಗೊಂಡಿದ್ದು ಈಗ ಇತಿಹಾಸ. ಈ ಟೆಸ್ಟ್​ನಲ್ಲಿ ಅತಿಥೇಯರ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಸ್ಪಿನ್ ಜೋಡಿಯು ಪ್ರವಾಸಿಗರ 20 ವಿಕೆಟ್​ಗಳ ಪೈಕಿ 18 ಅನ್ನು ಹಂಚಿಕೊಂಡರು. ಇಂಗ್ಲೆಂಡ್​ ತಂಡದ ಬ್ಯಾಟ್ಸ್​ಮನ್​ಗಳು ಎರಡೂ ಇನ್ನಿಂಗ್ಸ್​ಗಳಲ್ಲಿ ಸೇರಿ 200 ರನ್ ಸಹ ಗಳಿಸಲು ವಿಫಲರಾದರು. ಮೊದಲ ಇನ್ನಿಂಗ್ಸ್​ನಲ್ಲಿ ಅವರು 112 ರನ್ ಗಳಿಸಿದರೆ ಎರಡನೆಯದರಲ್ಲಿ ಕೇವಲ 81 ರನ್​ಗಳಿಗೆ ಅಲೌಟ್​ ಆದರು. ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ನ 81 ರನ್​ಗಳ ಮೊತ್ತ ಭಾರತದ ವಿರುದ್ಧ ಇದುವರೆಗಿನ ಅತಿ ಕಡಿಮೆ ಸ್ಕೋರ್ ಅಗಿದೆ. ಅಲ್ಲದೆ ಅವರು ಎರಡನೇ ದಿನದಾಟದಲ್ಲಿ ಕೇವಲ ಒಂದು ಸೆಷನ್​ನಲ್ಲಿ ಎಲ್ಲ ವಿಕೆಟ್​ಗಳನ್ನು ಒಪ್ಪಿಸಿದರು.

ಈ ಟೆಸ್ಟ್​ನಲ್ಲಿ 11 ವಿಕೆಟ್​ಗಳನ್ನು ಪಡೆದ ಪಟೇಲ್ ಅಹರ್ನಿಶಿ ಪಂದ್ಯವೊಂದರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಖ್ಯಾತಿಗೆ ಪಾತ್ರರಾದರು. ಅಶ್ವಿನ್ 7 ವಿಕೆಟ್​ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಟೆಸ್ಟ್​ ಕರೀಯರ್​ನಲ್ಲಿ 400 ವಿಕೆಟ್ ಪಡೆಯುವ ಸಾಧನೆಯನ್ನು ಮಾಡಿದರು. ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆಗೆ ಮೊಟೆರಾದಂಥ ಪಿಚ್​ಗಳು ದೊರಕಿದ್ದರೆ ಅವರು ಕ್ರಮವಾಗಿ 800 ಮತ್ತು 1,000 ವಿಕೆಟ್​ಗಳನ್ನು ಪಡೆದು ರಿಟೈರಾಗುತ್ತಿದ್ದರು ಎಂದು ಯುವಿ ಹೇಳಿದ್ದಾರೆ.

Team India

3ನೇ ಟೆಸ್ಟ್ ಗೆದ್ದ ಟೀಮ್ ಇಂಡಿಯಾ​

‘ಎರಡೇ ದಿನಗಳಲ್ಲಿ ಪಂದ್ಯ ಮುಗಿದಿದೆ, ಈ ಪಿಚ್ ಟೆಸ್ಟ್ ಕ್ರಿಕೆಟ್​ಗೆ ಯೋಗ್ಯವಾಗಿತ್ತೆನ್ನುವ ಬಗ್ಗೆ ಸಂಶಯ ಹುಟ್ಟಿದೆ. ಅನಿಲ್ ಕುಂಬ್ಳೆ ಮತ್ತು ಹರ್ಭಜನ್​ ಸಿಂಗ್ ಇಂಥ ಪಿಚ್​ಗಳ ಮೇಲೆ ಬೌಲ್ ಮಾಡಿದ್ದರೆ, ಸಾವಿರ ಮತ್ತು 800 ವಿಕೆಟ್​ ಗಳಿಸಿರುತ್ತಿದ್ದರು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆದರೆ, ಈ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನಗಳನ್ನು ನೀಡಿದ ಅಕ್ಷರ್ ಮತ್ತು ಅಶ್ವಿನ್ ಅವರನ್ನು ಅಭಿನಂದಿಸುವುದನ್ನು ಯುವಿ ಮರೆತಿಲ್ಲ. ‘ಅಕ್ಷರ್​ಗೆ ಅಭಿನಂದನೆಗಳು, ಎಂಥ ಸ್ಪೆಲ್! ಅಶ್ವಿನ್​ ಅವರಿಗೂ ನನ್ನ ಅಭಿನಂದನೆಗಳು’ ಎಂದು ಯುವಿ ಟ್ವೀಟ್ ಮಾಡಿದ್ದಾರೆ,

ಆದರೆ, ಯುವಿಯ ಟ್ವೀಟ್ ಕ್ರಿಕೆಟ್​ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಅವರು ಸಹ ಟ್ವೀಟ್​ಗಳ ಮೂಲಕ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಆಯುಶ್ ಶುಕ್ಲಾ ಹೆಸರಿನ ಅಭಿಮಾನಿಯೊಬ್ಬರು, ’ಯುವಿ ಭಾಯ್, ಬಾರತ ಮತ್ತು ಅಸ್ಟ್ರೇಲಿಯಾ ಮಧ್ಯೆ 2004ರಲ್ಲಿ ಮುಂಬೈಯಲ್ಲಿ ನಡೆದ ಒಂದು ಟೆಸ್ಟ್ ಕೇವಲ ಎರಡೂವರೆ ದಿನಗಳಲ್ಲಿ ಮುಗಿದಿತ್ತು ಎನ್ನುವುದನ್ನು ಮರೆಯಬೇಡಿ. ಆ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಕೇವಲ 9 ರನ್ ನೀಡಿ 6 ವಿಕೆಟ್ ಪಡೆದ ಮೈಕೆಲ್ ಕ್ಲಾರ್ಕ್. ಆ ಪಂದ್ಯದಲ್ಲಿ ಕುಂಬ್ಳೆ ಮತ್ತು ಹರ್ಭಜನ್ ಸಹ ಆಡಿದ್ದರು’ ಅಂತ ಟ್ವೀಟ್ ಮಾಡಿದ್ದಾರೆ.

ವಾಸು ಮಿಶ್ರಾ ಹೆಸರಿನ ಮತ್ತೊಬ್ಬ ಅಭಿಮಾನಿ, ‘ಪಾಜಿ ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ. ಅದರೆ ನಿಮ್ಮ ಈ ಟ್ವೀಟ್​ನ ಅವಶ್ಯಕತೆಯಿರಲಿಲ್ಲ. ಮೊದಲು ವಿರಾಟ್-ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್-ಸೆಹ್ವಾಗ್ ಮಧ್ಯೆ ಹೋಲಿಕೆಗಳನ್ನು ಮಾಡಿದಾಗ ರಿಟೈರ್​ ಅಗಿರುವ ನಿಮ್ಮಂಥ ಆಟಗಾರರು ಹೋಲಿಕೆ ಮಾಡುವುದು ಸರಿಯಲ್ಲ ಅಂತ ಹೇಳುತ್ತೀರಿ ಮತ್ತು ಸಮಯ ಬಂದಾಗ ನೀವೇ ಹೋಲಿಕೆ ಮಾಡಲಾರಂಭಿಸುತ್ತೀರಿ’ ಎಂದು ಟ್ವೀಟ್ ಮಾಡಿದ್ದಾರೆ.

ಸುಮ್ಮನಿರದೆ ಏನೋ ಮಾಡಿಕೊಂಡರು ಅಂತ ಹೇಳುತ್ತಾರಲ್ಲ, ಹಾಗಾಗಿದೆ ಯುವಿಯ ಸ್ಥಿತಿ.

ಇದನ್ನೂ ಓದಿ: India vs England Test Series: ಪಿಂಕ್​ ಬಾಲ್​ನೊಂದಿಗೆ ಇಳಿಸಂಜೆಯಲ್ಲಿ ಬ್ಯಾಟ್​ ಮಾಡುವುದು ಕಷ್ಟ: ವಿರಾಟ್​ ಕೊಹ್ಲಿ

Published On - 7:56 pm, Fri, 26 February 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್