AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ಪಿಂಕ್​ ಬಾಲ್​ನೊಂದಿಗೆ ಇಳಿಸಂಜೆಯಲ್ಲಿ ಬ್ಯಾಟ್​ ಮಾಡುವುದು ಕಷ್ಟ: ವಿರಾಟ್​ ಕೊಹ್ಲಿ

ಪಿಚ್ ಸ್ವರೂಪ ಹೇಗಾದರೂ ಇರಲಿ. ಹೊನಲು ಬೆಳಕಿನಲ್ಲಿ ಪಿಂಕ್ ಬಾಲ್ ಎದುರಿಸುವುದು ಬ್ಯಾಟ್ಸ್​ಮನ್​ಗಳಿಗೆ ದೊಡ್ಡ ಸವಾಲಿನ ಕೆಲಸವಾಗಲಿದೆ. ಸಾಯಂಕಾಲ ಸಮಯದಲ್ಲಿ ಬ್ಯಾಟ್​ ಮಾಡುವ ಸಂದರ್ಭ ಎದುರಾದರೆ ಮೊದಲಿನ ಒಂದೂವರೆ ಗಂಟೆ ಅವಧಿಯ ಆಟ ಭಾರೀ ಸವಾಲಿನದಾಗಿರುತ್ತದೆ ಅಂತ ವಿರಾಟ್ ಕೊಹ್ಲಿ ಹೇಳುತ್ತಾರೆ.

India vs England Test Series: ಪಿಂಕ್​ ಬಾಲ್​ನೊಂದಿಗೆ ಇಳಿಸಂಜೆಯಲ್ಲಿ ಬ್ಯಾಟ್​ ಮಾಡುವುದು ಕಷ್ಟ: ವಿರಾಟ್​ ಕೊಹ್ಲಿ
ವಿರಾಟ್ ಕೊಹ್ಲಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 23, 2021 | 10:33 PM

ಅಹಮದಾಬಾದ್​: ಭಾರತ ಮತ್ತು ಇಂಗ್ಲೆಂಡ್​ ನಡುವೆ ಪ್ರಸಕ್ತ ಸರಣಿಯ ಮೂರನೇ ಟೆಸ್ಟ್​ ಪಂದ್ಯ ನಾಳೆಯಿಂದ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದ ಮುನ್ನಾ ದಿನ ಅಹಮದಾಬಾದಿನಲ್ಲಿ ವರ್ಚ್ಯುವಲ್ ಸುದ್ದಿಗೋಷ್ಟಿಯೊಂದರಲ್ಲಿ ಮಾತಾಡಿದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಪಿಚ್​ನ ಸ್ವರೂಪ ಹೇಗಾದರೂ ಇರಲಿ, ಅದರೆ ಪಿಂಕ್​ ಬಾಲ್ ಕ್ರಿಕೆಟ್​ ಟೆಸ್ಟ್ ಅಡುವುದು ಸವಾಲಿನ ಕೆಲಸ ಅಂತ ಹೇಳಿದರು. ಎರಡೂ ತಂಡದ ಆಟಗಾರರರಿಗೆ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಪಿಚ್​ ಹೇಗೆ ವರ್ತಿಸಬಹುದೆನ್ನುವುದರ ಬಗ್ಗೆ ಮಾಹಿತಿಯಿಲ್ಲ, ಆದರೆ, ಸಾಮಾನ್ಯವಾಗಿ ಪಿಂಕ್ ಬಾಲ್ ವೇಗದ ಬೌಲರ್​ಗಳಿಗೆ ನೆರವಾಗುತ್ತದೆ. ಆದರೆ ಭಾರತದ ಬಲ ಸ್ಪಿನ್ ಬೌಲಿಂಗ್; ಅವರಿಗೂ ಪಿಚ್​ ಸಹಕಾರಿಯಾಗಬಲ್ಲದೇ?

ಸಾಯಂಕಾಲ ಆಗುತ್ತಿದ್ದಂತೆ ಮಾಸ್ಟ್ ಇಲ್ಲವೇ ಎಲ್​ಈಡಿ ಬಲ್ಬುಗಳ ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟ ಎಂದು ವರ್ಚ್ಯುವಲ್ ಪ್ರೆಸ್​ಮೀಟ್​​ನಲ್ಲಿ ಕೊಹ್ಲಿ ಹೇಳಿದರು.

‘ಪಿಚ್ ಸ್ವರೂಪ ಹೇಗಾದರೂ ಇರಲಿ. ಆದರೆ ಹೊನಲು ಬೆಳಕಿನಲ್ಲಿ ಪಿಂಕ್ ಚೆಂಡನ್ನು ಎದುರಿಸಿ ಆಡುವುದು ಬ್ಯಾಟ್ಸ್​ಮನ್​ಗಳಿಗೆ ದೊಡ್ಡ ಸವಾಲಿನ ಕೆಲಸವಾಗಲಿದೆ. ಸಾಯಂಕಾಲದ ಸಮಯದಲ್ಲಿ ಬ್ಯಾಟ್​ ಮಾಡುವ ಸಂದರ್ಭ ಎದುರಾದರೆ ಮೊದಲಿನ ಒಂದೂವರೆ ಗಂಟೆ ಅವಧಿಯ ಆಟ ಭಾರೀ ಸವಾಲಿನದಾಗಿರುತ್ತದೆ. ಪಿಂಕ್​ ಚೆಂಡಿನಿಂದ ಸ್ಪಿನ್​ ಬೌಲರ್​ಗಳೂ ಪರಾಕ್ರಮ ಮೆರೆಯಬಹುದು. ಆದರೆ ವೇಗದ ಬೌಲರ್​ಗಳನ್ನು ಕಡೆಗಣಿಸುವಂತಿಲ್ಲ. ಪಿಂಕ್ ಚೆಂಡಿನ ಮೇಲೆ ಹೊಳಪು ಇರುವವರೆಗೂ ವೇಗದ ಬೌಲರ್​ಗಳು ಪರಿಣಾಮಕಾರಿಯಾಗಿರುತ್ತಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾವು ತಯಾರಿ ನಡೆಸಬೇಕು’ ಎಂದು ಕೊಹ್ಲಿ ಹೇಳಿದರು.

ಭಾರತ ಇದುವರೆಗೆ ಕೇವಲ 2 ಅಹರ್ನಿಶಿ ಪಂದ್ಯಗಳನ್ನು ಮಾತ್ರ ಅಡಿದೆ. 2019ರಲ್ಲಿ ಬಾಂಗ್ಲಾದೇಶದ ವಿರುದ್ದ ಸ್ವದೇಶದಲ್ಲಿ ಅಡಿದ ಮೊದಲ ಪಂದ್ಯದಲ್ಲಿ ಭಾರತ ಭಾರಿ ಅಂತರದ ಗೆಲುವು ಸಾಧಿಸಿತ್ತು. ಆದರೆ ಇತ್ತೀಚಿಗೆ ಆಸ್ಟ್ರೇಲಿಯಾ ವಿರುದ್ಧ ಆಡಿದ ತನ್ನ ಎರಡನೇ ಹಗಲು-ರಾತ್ರಿ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 36 ರನ್​ಗಳಿಗೆ ಆಲೌಟ್​ ಆಗಿ ಅವಹೇಳನಕಾರಿ ಸೋಲು ಅನುಭವಿಸಿತ್ತು.

ಈ ಎರಡು ಪಂದ್ಯಗಳಲ್ಲಿ ಭಾರತ ದೊರಕಿರುವ ಅನುಭವದ ಬಗ್ಗೆ ಮತಾಡಿದ ಕೊಹ್ಲಿ, ‘ದಿನದ ಮೊದಲ ಸೆಷನ್​ನಲ್ಲಿ ಅಂದರೆ ಶುಭ್ರವಾದ ಸೂರ್ಯನ ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರುತ್ತದೆ. ಪ್ರಖರವಾದ ಸೂರ್ಯನ ಬೆಳಕಿನಲ್ಲಿ ಜಾಸ್ತಿ ಹೊಯ್ದಾಡುವುದಿಲ್ಲ. ಅದರೆ ಸಾಯಂಕಾಲವಾಗುತ್ತಿದ್ದಂತೆ ಅಂದರೆ ಇಳಿಸಂಜೆಯಲ್ಲಿ ಬ್ಯಾಟ್ ಮಾಡುವುದು ತುಂಬಾ ಪ್ರಯಾಸಕರವಾಗಿರುತ್ತದೆ’ ಎಂದು ಕೊಹ್ಲಿ ಹೇಳಿದರು.

‘ಬೆಳಕು ಬದಲಾಗುತ್ತಿದ್ದಂತೆ, ಹೊನಲು ಬೆಳಕಿನಲ್ಲಿ ಚೆಂಡು ಗುರುತಿಸುವುದು ಕಷ್ಟವಾಗುತ್ತದೆ. ಮಾಮೂಲಿ ಟೆಸ್ಟ್​ ಪಂದ್ಯವೊಂದರ ಮೊದಲ ಸೆಷನ್​ನಲ್ಲಿ ಆಡುವಂತಿರುತ್ತದೆ. ಇಂಥ ಪಂದ್ಯಗಳಲ್ಲಿ ಬೆಳಗಿನ ಸಮಯದಲ್ಲಿ ಬಾಲು ಜಾಸ್ತಿ ಸ್ವಿಂಗ್​ ಆಗುತ್ತದೆ. ಈ ಪಂದ್ಯಗಳಲ್ಲಿನ ಬೆಳಗಿನ ಆಟ ಮತ್ತು ಅಹರ್ನಿಶಿ ಟೆಸ್ಟ್​ಗಳಲ್ಲಿ ಸಾಯಂಕಾಲದ ಅಟ ಒಂದೇ ತೆರನಾಗಿರುತ್ತದೆ. ಈ ಬದಲಾವಣೆಗೆ ನಾವು ಕೂಡಲೇ ಒಗ್ಗಿಕೊಳ್ಳಬೇಕಾಗುತ್ತದೆ,’ ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ: Motera Stadium: ಹಲವಾರು ವೈಶಿಷ್ಟ್ಯತೆಗಳ ಮೊಟೆರಾದ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ ವಿಶ್ವದಲ್ಲೇ ಅತಿ ದೊಡ್ಡದು!

Published On - 10:24 pm, Tue, 23 February 21

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ