TV9 Kannada Sports ಬೋಲ್ಟ್ ಪಾರ್ಟಿಯಲ್ಲಿ ಪಾಲ್ಗೊಂಡರೂ ಗೇಲ್ಗೆ ಕೊವಿಡ್ ಸೋಂಕು ತಗುಲಿಲ್ಲ
ಬೋಲ್ಟ್ ಪಾರ್ಟಿಯಲ್ಲಿ ಪಾಲ್ಗೊಂಡರೂ ಗೇಲ್ಗೆ ಕೊವಿಡ್ ಸೋಂಕು ತಗುಲಿಲ್ಲ
ಇಂಡಿಯನ್ ಪ್ರೀಮಿಯರ್ ಲೀಗ್–13ರ (ಐಪಿಎಲ್) ಆವೃತಿಯಲ್ಲಿ ಆಡಲು ಈಗಾಗಲೇ ಯು ಎ ಈ ತಲುಪಿರುವ ಕಿಂಗ್ಸ್ XI ಪಂಜಾಬ್ ತಂಡಕ್ಕೊಂದು ಭಾರಿ ಸಂತೋಷದ ಸುದ್ದಿಯನ್ನು ಅದರ ವಿಧ್ವಂಸಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ನೀಡಿದ್ದಾರೆ. ಆ ಸುದ್ದಿಯೇನು ಗೊತ್ತಾ? ಅವರಿಗೆ ಕೊವಿಡ್-19 ಸೋಂಕಿನಿಂದ ಬಚಾವಾಗಿದ್ದಾರೆ. ಅವರಿಗ್ಯಾಕೆ ಸೋಂಕು ತಗುಲೀತು ಅಂತ ನೀವು ಯೋಚಿಸುತ್ತಿರಬಹುದು. ಅಂಥ ಸಾಧ್ಯತೆ ಖಂಡಿತವಾಗಿಯೂ ಇತ್ತು. ಶತಮಾನದ ಶ್ರೇಷ್ಠ ಸ್ಪ್ರಿಂಟರ್ ಜಮೈಕಾದ ಉಸೇನ್ ಬೋಲ್ಟ್ ಯಾರಿಗೆ ಗೊತ್ತಿಲ್ಲ? 100 ಮತ್ತು 200 ಮೀಟರ್ಗಳ ಓಟದಲ್ಲಿ ವಿಶ್ವದಾಖಲೆ […]
ಇತ್ತ ಕ್ರಿಸ್ ಗೇಲ್ ನಾಳೆ ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ. ನನ್ನೊಂದಿಗೆ ಯಾರೆಲ್ಲಾ ಬರ್ತೀರಿ? ಎಂಬ ಕ್ರಿಸ್ ಗೇಲ್ ಟ್ವೀಟ್ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಪ್ರಶ್ನೆಗಳು ಸುರಿಮಳೆಗೈದಿದ್ದಾರೆ. ಏಕೆಂದರೆ ಪಂಜಾಬ್ ಕಿಂಗ್ಸ್ ಮಂಗಳವಾರ ಐಪಿಎಲ್ ದ್ವಿತಿಯಾರ್ಧ ಆರಂಭಿಸಲಿದೆ. ಗೇಲ್ ತಾನು ಪಾಕಿಸ್ತಾನಕ್ಕೆ ತೆರಳುವುದಾಗಿ ತಿಳಿಸಿದ್ದರಿಂದ ಅವರು ಐಪಿಎಲ್ಗೆ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದೆ.
ಅರುಣ್ ಕುಮಾರ್ ಬೆಳ್ಳಿ
Updated on:
Aug 25, 2020 | 7:52 PM
ಇಂಡಿಯನ್ ಪ್ರೀಮಿಯರ್ ಲೀಗ್–13ರ (ಐಪಿಎಲ್) ಆವೃತಿಯಲ್ಲಿ ಆಡಲು ಈಗಾಗಲೇ ಯು ಎ ಈ ತಲುಪಿರುವ ಕಿಂಗ್ಸ್ XI ಪಂಜಾಬ್ ತಂಡಕ್ಕೊಂದು ಭಾರಿ ಸಂತೋಷದ ಸುದ್ದಿಯನ್ನು ಅದರ ವಿಧ್ವಂಸಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ನೀಡಿದ್ದಾರೆ.
ಆ ಸುದ್ದಿಯೇನು ಗೊತ್ತಾ? ಅವರಿಗೆ ಕೊವಿಡ್-19 ಸೋಂಕಿನಿಂದ ಬಚಾವಾಗಿದ್ದಾರೆ. ಅವರಿಗ್ಯಾಕೆ ಸೋಂಕು ತಗುಲೀತು ಅಂತ ನೀವು ಯೋಚಿಸುತ್ತಿರಬಹುದು. ಅಂಥ ಸಾಧ್ಯತೆ ಖಂಡಿತವಾಗಿಯೂ ಇತ್ತು. ಶತಮಾನದ ಶ್ರೇಷ್ಠ ಸ್ಪ್ರಿಂಟರ್ ಜಮೈಕಾದ ಉಸೇನ್ ಬೋಲ್ಟ್ ಯಾರಿಗೆ ಗೊತ್ತಿಲ್ಲ? 100 ಮತ್ತು 200 ಮೀಟರ್ಗಳ ಓಟದಲ್ಲಿ ವಿಶ್ವದಾಖಲೆ ಹಾಗೂ ಒಲಂಪಿಕ್ ದಾಖಲೆಗಳೆರಡನ್ನೂ ತನ್ನ ಹೆಸರು ಬರೆದುಕೊಡಿರುವ ಸರ್ವಶ್ರೇಷ್ಠ ಅಥ್ಲೀಟ್.
ಬೋಲ್ಟ್ ಮೊನ್ನೆ ತಮ್ಮ 34ನೇ ಹುಟ್ಟುಹಬ್ಬವನ್ನು ಹುಟ್ಟೂರಾದ ಜಮೈಕದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು. ಅವರ ಬರ್ತ್ಡೇ ಬ್ಯಾಷ್ನಲ್ಲಿ ಭಾಗವಹಿಸಿದ ಹಲವಾರು ಸೆಲೆಬ್ರಿಟಿಗಳಲ್ಲಿ ಗೇಲ್ ಕೂಡ ಒಬ್ಬರು. ಅದಕ್ಕೂ ಗೇಲ್ ಐಪಿಎಲ್ನಲ್ಲಿ ಆಡುವುದಕ್ಕೂ ಏನು ಸಂಬಂಧ ಅಂತೀರಾ?
ಅಸಲಿಗೆ ವಿಷಯವೇನೆಂದರೆ, ಹುಟ್ಟುಹಬ್ಬ ಆಚರಿಸಿಕೊಂಡ ಮರುದಿನವೇ ಬೋಲ್ಟ್ ಕೊವಿಡ್-19 ಸೋಂಕಿಗೊಳಗಾಗಿರುವುದು ಪತ್ತೆಯಾಯಿತು. ಕೂಡಲೇ ಗೇಲ್ ಕೂಡ ಪರೀಕ್ಷೆ ಮಾಡಿಸಿಕೊಂಡರು, ಅವರ ಮತ್ತು ಪಂಜಾಬ್ ಕ್ಲಬ್ನ ಅದೃಷ್ಟ ಚೆನ್ನಾಗಿತ್ತು. ಗೇಲ್ ಎರಡೆರಡು ಬಾರಿ ಟೆಸ್ಟ್ ಮಾಡಿಸಿಕೊಂಡರೂ ರಿಸಲ್ಟ್ ನೆಗೆಟಿವ್ ಬಂದಿದೆ.
ಈ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಗೇಲ್, ‘‘ಎರಡು ದಿನಗಳ ಹಿಂದೆ ಮೊದಲ ಟೆಸ್ಟ್ ಆಯಿತು, ಅದರೆ, ಪ್ರಯಾಣ ಬೆಳೆಸುವ ಮೊದಲು ಎರಡು ಬಾರಿ ಟೆಸ್ಟ್ ಅಗಬೇಕು….ಎರಡನೆ ಟೆಸ್ಟ್ನಲ್ಲಿ ಉಪಕರಣವನ್ನು ಮೂಗಿನಲ್ಲಿ ಜಾಸ್ತಿಯೇ ಒಳ ದೂಡಿದರು. ಅಬ್ಬಾ. ಈ ಟೆಸ್ಟ್ ಸಹ ನೆಗೆಟಿವ್,’’ ಎಂದು ಬರೆದುಕೊಂಡಿದ್ದಾರೆ
Arun Belly
ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.